ರಸ್ತೆ ಮಧ್ಯೆ ಉದ್ಯಾನವನ ನಿರ್ಮಾಣವಾಗಲಿ
Team Udayavani, Feb 24, 2019, 7:53 AM IST
ನಗರೀಕರಣದತ್ತ ಒಲವು ಹೆಚ್ಚುತ್ತಿದ್ದಂತೆ ಹಸುರೀಕರಣವನ್ನು ಮರೆತು ಬಿಟ್ಟಿದ್ದೇವೆ. ಒಂದು ಕಾಲದಲ್ಲಿ ದಟ್ಟವಾಗಿದ್ದ ಮರ ಕಾಡುಗಳ ಜಾಗದಲ್ಲಿ ಈಗ ರಸ್ತೆ, ಕಟ್ಟಡಗಳದ್ದೇ ಹವಾ. ಇದೇ ಮುಂದುವರಿದಂತೆ ಆಮ್ಲಜನಕದ ಕೊರತೆಯಾಗಿ ಜೀವವಾಯುವಿಗೂ ಹಾಹಾಕಾರ ಪಡಬೇಕಾದ ದಿನಗಳು ಬರಲಿವೆ. ಹೀಗಿರುವಾಗ ಹಸುರು ಬೆಳೆಸಲು ಮುನ್ನೆಚ್ಚರಿಕೆ ವಹಿಸುವುದು ಅಷ್ಟೇ ಅಗತ್ಯ.
ಗೋವಾ ಒಂದು ಪುಟ್ಟ ರಾಜ್ಯ. ಆದರೆ ಆ ರಾಜ್ಯ ಅಭಿವೃದ್ಧಿಯ ಜತೆಗೆ ಹಸುರು ಬೆಳೆಸಲು ಮರೆತಿಲ್ಲ. ಅದಕ್ಕೆ ಸಾಕ್ಷಿ ಎಂಬಂತೆ ರಾಜ್ಯದ ಅಗಲವಾದ ಮತ್ತು ವಾಹನ ದಟ್ಟನೆ ಇಲ್ಲದ ಕೆಲವು ಮುಖ್ಯ ರಸ್ತೆಗಳ ಮಧ್ಯದಲ್ಲೇ ಸಣ್ಣ ಸಣ್ಣ ಹಸುರು ಪಾರ್ಕ್ಗಳನ್ನು ನಿರ್ಮಿಸಲಾಗಿದೆ. ಚತುಷ್ಪಥ ರಸ್ತೆಗಳಿಗೆ ಡಿವೈಡರ್ ಇರುತ್ತದೆ. ಆ ಡಿವೈಡರ್ನ ಎರಡೂ ಬದಿಗಿರುವ ರಸ್ತೆಯ ಮಧ್ಯದಲ್ಲಿ ಅಲ್ಲಲ್ಲಿ ಹೀಗೆ ಹಸುರು ಪಾರ್ಕ್ ನಿರ್ಮಿಸಲಾಗಿದೆ. ಗಿಡಗಳ ಗುತ್ಛವನ್ನೇ ನೆಡಲಾಗಿದೆ. ಇದು ನಗರದ ಅಂದಕ್ಕೆ ಕಲಶವಿಟ್ಟಂತೆ ಕಾಣುತ್ತಿದೆ. ವಿಶ್ರಾಂತಿಗಾಗಿ ಮರದ ಸೋಫಾಗಳನ್ನೂ ಪ್ರತಿ ಹಸುರು ಪಾರ್ಕ್ ಬಳಿ ಇಡಲಾಗಿದೆ. ರಸ್ತೆಯ ಇಕ್ಕೆಲಗಳಲ್ಲಿಯೂ ಯಥೇತ್ಛವಾಗಿರುವ ಮರಗಿಡಗಳ ನೆರಳು ಈ ಪಾರ್ಕ್ ಮೇಲೆ ಬೀಳುತ್ತದೆ. ವಿಶ್ರಾಂತಿಯ ಜತೆಗೆ ಹಸುರು ಗಿಡಗಳನ್ನು ಬೆಳೆಸಿದಂತೆಯೂ ಆಗುವುದರಿಂದ ಮಂಗಳೂರಿನಲ್ಲಿಯೂ ಇಂತಹ ಡಿವೈಡರ್ನಲ್ಲೇ ಪುಟ್ಟ ಪಾರ್ಕ್ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಇದರಿಂದ ಸಂಜೆ ಮತ್ತು ಬೆಳಗ್ಗಿನ ಹೊತ್ತಿನ ವಿರಾಮದ ತಾಣಕ್ಕಾಗಿ ಉದ್ಯಾನವನಗಳಿಗೆ ಅಲೆದಾಡಬೇಕಿಲ್ಲ. ಸ್ಮಾರ್ಟ್ ಸಿಟಿ ಮಂಗಳೂರು ನಗರದ ಅಂದವನ್ನೂ ಈ ಡಿವೈಡರ್ ಮೇಲಿನ ಹಸಿರು ಪಾರ್ಕ್ಗಳು ಹೆಚ್ಚಿಸಬಹುದು.
ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ