ನಿಮಗೆ ಮಳೆಯ ಕನಸು ಬಿತ್ತೇ?


Team Udayavani, Oct 3, 2018, 12:51 PM IST

566.jpg

  ಕನಸಿನಲ್ಲಿ ಮಳೆಯನ್ನು ಕಾಣುವುದು ಧನಾತ್ಮಕ ಸನ್ನಿವೇಶ ಆಗಮನದ ಪ್ರತೀಕ. ಮಳೆಗಿಂತಲೂ ಅಧಿಕ ಮಿಂಚು, ಗುಡುಗುಗಳ ಕನಸು ಕಂಡಿತೆಂದರೆ ಮನಸ್ಸಿನಲ್ಲಿ ಕೋಪಕ್ಕೆ ಕಾರಣವಾಗಿರುವ ಸನ್ನಿವೇಶದ ಪ್ರಭಾವವನ್ನು ಅಂಥ ಕನಸು ಸೂಚಿಸುತ್ತದೆ...

ಕನಸಿನ ಸಾಮ್ರಾಜ್ಯದಲ್ಲಿ ಮಳೆಗೆ ವಿಶಿಷ್ಟ ಸ್ಥಾನವಿದೆ. ಕನಸಿನಲ್ಲಿ ಮಳೆಯನ್ನು ಕಂಡರೆ ಅದು ಕಾರ್ಯಸಿದ್ಧಿಯ ಸೂಚಕವಂತೆ. ಈ ಕುರಿತು ಕಾರ್ಲ್ ಯೂಂಗ್‌ ಅವರು ಅಧ್ಯಯನ ಹಾಗೂ ಸಂಶೋಧನೆ ನಡೆಸಿ ಕುತೂಹಲಕಾರಿ ಅಂಶಗಳನ್ನು ಶ್ರುತಪಡಿಸಿ¨ªಾರೆ. ಮಳೆ ಬುವಿಗೆ ಶುದ್ಧ ನೀರನ್ನು ನೀಡುವ ಒಂದು ಮುಖ್ಯ ಜಲದ ಮೂಲ. ನೀರಿಲ್ಲದೆ ಜೀವನವಿಲ್ಲ. ಮಳೆಯ ನೀರು ಅಮೃತೋಪಮ. ಅಂತೆಯೇ ಇದು ಇಳೆಯ ಕೊಳೆಯನ್ನೆಲ್ಲ ತೊಳೆಯುವುದೂ ದಿಟ!
  ಕನಸಿನಲ್ಲಿ ಮಳೆಯನ್ನು ಕಾಣುವುದು ಧನಾತ್ಮಕ ಸನ್ನಿವೇಶ ಆಗಮನದ ಪ್ರತೀಕ. ಅಲ್ಲದೆ ಚಿಂತೆಯ, ಸಮಸ್ಯೆಗಳ ನಿವಾರಣೆಯ ಸೂಚಕ. ಮಳೆ ಬಂದು ಹೇಗೆ ಬಿಸಿಲಿನ ಧಗೆಯಲ್ಲಿ ಬೆಂದ ಬುವಿಯಲ್ಲಿ ತಂಪು, ತಂಗಾಳಿ ತರುವಂತೆ, ಮರಗಿಡ ಗಳಲ್ಲಿ ಹಸಿರೊಡೆಯುವಂತೆ, ಇಡೀ ಪ್ರಕೃತಿ ಲವಲವಿಕೆಯಿಂದ ಕೂಡಿರುವಂತೆ ಮಾಡುತ್ತದೋ ಅದೇ ರೀತಿಯಲ್ಲಿ ಕನಸಿನಲ್ಲಿ ಮಳೆಯನ್ನು ಕಂಡಾಗ ಅದು ಋಣಾತ್ಮಕ ಸಂಗತಿಯ ನಿವಾರಣೆಯನ್ನೂ, ಸಮಸ್ಯೆಗೆ ಚಿಂತೆಗೆ ಪರಿಹಾರವನ್ನೂ ಸೂಚಿಸುವಂಥ¨ªಾಗಿದೆ.

  ಸುಪ್ತಪ್ರಜ್ಞೆಯಲ್ಲಿ ಅಡಗಿರುವ ಭಾವನೆಗಳು, ಭೀತಿ, ಆತಂಕ, ಅಸಂತೋಷ ಮೊದಲಾದ ಭಾವಗಳ ಅಭಿವ್ಯಕ್ತಿಯಾಗಿಯೂ ಕನಸು ಕಾಣಿಸಿಕೊಳ್ಳುತ್ತದೆ. ಮಳೆಯ ಕನಸು ಅಥವಾ ಕನಸಿನಲ್ಲಿ ಮಳೆಯನ್ನು ಕಾಣುವುದೆಂದರೆ ಋಣಾತ್ಮಕವಾದ ಇಂತಹ ಋಣಾತ್ಮಕ ಭಾವಗಳನ್ನು ಮೀರಿ, ಸುಪ್ತಪ್ರಜ್ಞೆಯಲ್ಲಿ ಧನಾತ್ಮಕ ಯೋಚನೆ, ಯೋಜನೆ, ಆನಂದ ಲಹರಿ ಕಾಣಿಸಿಕೊಳ್ಳುವುದೇ ಆಗಿದೆ. ಮಳೆಯಂಥ ಹಲವು ಧನಾತ್ಮಕ ಅಂಶಗಳುಳ್ಳ ಕನಸುಗಳು ಪ್ರಜ್ಞೆಯು ವಿಕಸಿತವಾದುದನ್ನು ಸೂಚಿಸುವ ಸಾಂಕೇತಿಕ ತಣಿ¤àಗಳನ್ನು ಹೊಂದಿವೆ.

  ಹೀಗೆ ಮಳೆ, ಮಳೆ ಮತ್ತು ಗುಡುಗು ಮಿಂಚು, ಮಳೆ ಮತ್ತು ರಭಸದ ಗಾಳಿ ಇವೇ ಮೊದಲಾದವುಗಳ ಕನಸಿನ ಅಭಿವ್ಯಕ್ತತೆಯ ಕುರಿತು ಕಾರ್ಲ್ ಯೂಂಗ್‌ ಅಧ್ಯಯನ ಮಾಡಿದಂತೆ, ತದನಂತರ ಕ್ರಿಶ್ಚಿಯಾನಾ ಸ್ಪಾನಿಯಸ್‌ ಅಧ್ಯಯನ ಮಾಡಿ ಈ ಕುರಿತು ಮಾನವನ ಮನಸ್ಸಿಗೆ ಚಿಕಿತ್ಸಕವಾದ ತಣಿ¤àಗಳನ್ನು, ಪ್ರಯೋಗಗಳನ್ನು ಮಾಡಿದರು. ಮಳೆ ಮತ್ತು ಮೋಡ ಮುಸುಕಿದ ಕಗ್ಗತ್ತಲೆಯ ವಾತಾವರಣ ಹೊಂದಿರುವ ಕನಸು ಮನೋವಸಾದ ಅಥವಾ ಬೇಸರ, ಖನ್ನತೆ ರೋಗ ಚಿಹ್ನೆ ಅಥವಾ ಸನ್ನಿವೇಶಗಳನ್ನು ಸೂಚಿಸುವುದು.

  ಮಳೆಗಿಂತಲೂ ಅಧಿಕ ಮಿಂಚು, ಗುಡುಗುಗಳ ಕನಸು ಕಂಡಿತೆಂದರೆ ಮನಸ್ಸಿನಲ್ಲಿ ಕೋಪಕ್ಕೆ ಕಾರಣವಾಗಿರುವ ಸನ್ನಿವೇಶದ ಪ್ರಭಾವವನ್ನು ಅಂಥ ಕನಸು ಸೂಚಿಸುತ್ತದೆ. ಮಳೆಯೊಂದಿಗೆ, ಮಳೆಬಿಲ್ಲು ಅಥವಾ ಕಾಮನಬಿಲ್ಲಿನ ಕನಸು ಸಂತಸದ ಸನ್ನಿವೇಶದ ಸೂಚಕ. ಮಳೆಯಲ್ಲಿ ಛತ್ರಿ ಅಥವಾ ಕೊಡೆ ಹಿಡಿದಿರುವ ಕನಸು ಮನಸ್ಸಿನ ಅಭದ್ರತೆಯ ನಿವಾರಣೆಯನ್ನು ಸಾಂಕೇತಿಕವಾಗಿ ಸೂಚಿಸುತ್ತದೆ.

ಮಳೆಯ ಕನಸಿನ ಆಧ್ಯಾತ್ಮಿಕ ಮೋಹ
– ಮಳೆಯನ್ನು ಕನಸಲ್ಲಿ ಕಂಡರೆ ಅಥವಾ ಮಳೆಸದ್ದು ಕೇಳಿಸಿಕೊಂಡರೆ ಅದು ಕ್ಷಮಾಸೂಚಕ, ಆಶೀರ್ವಾದದ ಪ್ರತೀಕವಾಗಿದೆ.
– ಅಂತೆಯೇ ಮಳೆಹನಿಗಳಲ್ಲಿ ಮೀಯುವ ಕನಸು, ದುಃಖ ಅಥವಾ ಕಣ್ಣೀರು ಹರಿದು, ಮನಸ್ಸು ಶುಭ್ರ ಹಾಗೂ ಸಂತಸ ಭರಿತವಾಗುವ ಸೂಚಕ.
– ಬುವಿಗೆ ತಂಪನ್ನೀಯಲು ಮಳೆ ನೀಡುವಂತೆ ಋಗ್ವೇದದಲ್ಲಿ ಯಂತ್ರಗಳು (ಪರ್ಜನ್ಯ ಮಂತ್ರಗಳು) ಹಲವಾರು ಇವೆ. ಅಂತೆಯೇ ಅಧಿಕ ಮಳೆಯಿಂದ ಅತಿವೃಷ್ಟಿಯಿಂದ ಆಗುವ ಅನಾಹುತವನ್ನು ತಪ್ಪಿಸುವಂತೆಯೂ ಪ್ರಾರ್ಥಿಸುವ ಮಂತ್ರಗಳಿವೆ.
– ಇಸ್ಲಾಂನಲ್ಲಿ ಮಳೆಯ ಕನಸು, ಉತ್ತಮ ಬೆಳೆ, ಇಳೆಯ ಸಂತೃಪ್ತಿ, ಜನಜೀವನ ಸುಗಮತೆ ಮತ್ತು ಸಂತೋಷವನ್ನು ಸೂಚಿಸುತ್ತದೆ.
– ಆಯುರ್ವೇದ ಶಾಸ್ತ್ರದಲ್ಲೂ ಬತ್ತಿದ ಜಲಾಶಯ, ನೀರಿಲ್ಲದ ಕೆರೆ- ಬಾವಿ ತಟಾಕಗಳ ಕನಸು ದೇಹವನ್ನು ಕ್ಷೀಣಿಸುವಂಥ ಕಾಯಿಲೆ (ಕ್ಷಯರೋಗವೇ) ಮುಂತಾದವುಗಳ ಸೂಚಕ ಎಂದು ತಿಳಿಸಲಾಗಿದೆ. “ಕಾಲೇ ವರ್ಷತು ಪರ್ಜನ್ಯಃ ಪೃಥಿವೀಂ ಸಸ್ಯ ಶಾಲಿನೀಂ’ ಎಂದು ಶಾಂತಿಮಂತ್ರದಲ್ಲಿ ತಿಳಿಸಿರುವಂತೆ ಕಾಲಕಾಲಕ್ಕೆ ಮಳೆಯಾಗಲಿ.

 ಡಾ.ಅನುರಾಧಾ ಕಾಮತ್‌

ಟಾಪ್ ನ್ಯೂಸ್

Terror Attack On IAF Convoy In poonch

Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ

2-vitla

Vitla: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು

ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ

ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ

PM ಮೋದಿ ಹೋದಲ್ಲೆಲ್ಲ ಕಾಂಗ್ರೆಸ್‌ ಗೆದ್ದಿದೆ: ಸಿಎಂ ಸಿದ್ದರಾಮಯ್ಯ

PM ಮೋದಿ ಹೋದಲ್ಲೆಲ್ಲ ಕಾಂಗ್ರೆಸ್‌ ಗೆದ್ದಿದೆ: ಸಿಎಂ ಸಿದ್ದರಾಮಯ್ಯ

1-24-sunday

Daily Horoscope: ಕೆಲವರಿಗೆ ಅನಿರೀಕ್ಷಿತ ಧನಾಗಮ ಸಂಭವ, ಅವಿವಾಹಿತರಿಗೆ ವಿವಾಹ ಯೋಗ

ಮತದಾನ ಜಾಗೃತಿಗೆ ಪ್ರತೀ ರಾಜ್ಯಕ್ಕೆ 15 ಕೋ.ರೂ. ವೆಚ್ಚ

ಮತದಾನ ಜಾಗೃತಿಗೆ ಪ್ರತೀ ರಾಜ್ಯಕ್ಕೆ 15 ಕೋ.ರೂ. ವೆಚ್ಚ

Agumbe Ghat; ಘನವಾಹನಗಳ ಸಂಚಾರದಿಂದ ಘಾಟಿ ಬಂದ್‌ ಆಗುವ ಭೀತಿ

Agumbe Ghat; ಘನವಾಹನಗಳ ಸಂಚಾರದಿಂದ ಘಾಟಿ ಬಂದ್‌ ಆಗುವ ಭೀತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Terror Attack On IAF Convoy In poonch

Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ

2-vitla

Vitla: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು

ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ

ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ

PM ಮೋದಿ ಹೋದಲ್ಲೆಲ್ಲ ಕಾಂಗ್ರೆಸ್‌ ಗೆದ್ದಿದೆ: ಸಿಎಂ ಸಿದ್ದರಾಮಯ್ಯ

PM ಮೋದಿ ಹೋದಲ್ಲೆಲ್ಲ ಕಾಂಗ್ರೆಸ್‌ ಗೆದ್ದಿದೆ: ಸಿಎಂ ಸಿದ್ದರಾಮಯ್ಯ

1-24-sunday

Daily Horoscope: ಕೆಲವರಿಗೆ ಅನಿರೀಕ್ಷಿತ ಧನಾಗಮ ಸಂಭವ, ಅವಿವಾಹಿತರಿಗೆ ವಿವಾಹ ಯೋಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.