ಮೆಸ್ಕಾಂ ಬಿಲ್ಲಿಂಗ್‌ ಸಾಫ್ಟ್ ವೇರ್‌ ಬದಲಾವಣೆ: ಗ್ರಾಹಕರಿಗೆ ಶುಲ್ಕದ ಶಾಕ್‌!


Team Udayavani, Mar 30, 2019, 2:17 PM IST

30-March-4
ಬೆಳ್ತಂಗಡಿ : ಸಾಮಾನ್ಯವಾಗಿ ಮನೆಗೆ ಮೆಸ್ಕಾಂನ ವಿದ್ಯುತ್‌ ಶುಲ್ಕ ಬರುವ ಸಂದರ್ಭ ಇಂತಿಷ್ಟೇ ಮೊತ್ತ ಇರುತ್ತದೆ ಎಂಬ ನಿರೀಕ್ಷೆ ಇರುತ್ತದೆ. ಕೆಲವೊಮ್ಮೆ ಅದು ಕೊಂಚ ಹೆಚ್ಚಾಗುವ ಸಾಧ್ಯತೆಯೂ ಇರುತ್ತದೆ. ಆದರೆ ಅದನ್ನೆಲ್ಲ ಮೀರಿ ಲಕ್ಷಾಂತರ ರೂ. ಬಿಲ್‌ ಬಂದರೆ ಆ ಗ್ರಾಹಕನ ಸ್ಥಿತಿ ಹೇಗಾಗಿರಬೇಡ !
ಮೆಸ್ಕಾಂ ಕಳೆದ ಕೆಲವು ತಿಂಗಳ ಹಿಂದೆ ಬಿಲ್ಲಿಂಗ್‌ ಸಾಫ್ಟ್‌ವೇರ್‌ ಬದಲಿಸಿದ ಹಿನ್ನೆಲೆಯಲ್ಲಿ ಕೆಲವು ಗ್ರಾಹಕರಿಗೆ ಈ ರೀತಿ ಲಕ್ಷಾಂತರ ರೂ. ಬಿಲ್‌ ನೀಡಿ ಶಾಕ್‌ ನೀಡುತ್ತಿದೆ. ಬಳಿಕ ಹತ್ತಿರದ ಮೆಸ್ಕಾಂ ಕಚೇರಿಗೆ ಹೋಗಿ ವಿಚಾರಿಸಿದರೆ ನಿಟ್ಟುಸಿರುವ ಬಿಡುವ ಪರಿಸ್ಥಿತಿ ಇದೆ. ಸಾಫ್ಟ್‌ ವೇರ್‌ ಬದಲಿಸಿದ ಬಳಿಕ ಹಂತ ಹಂತವಾಗಿ ಮೆಸ್ಕಾಂ ಇಂತಹ ತೊಂದರೆಗಳನ್ನು ಸರಿ ಮಾಡುತ್ತಿದ್ದು, ಕೆಲವೆಡೆ ಈಗಲೂ ಅಂತಹ ವಿಚಿತ್ರ ಬಿಲ್‌ಗ‌ಳು ಗ್ರಾಹಕರ ಕೈ ಸೇರುತ್ತಿವೆ.
ಕಳೆದ ತಿಂಗಳು 35 ರೂ.;  ಈ ಬಾರಿ 6 ಲಕ್ಷ ರೂ. !
ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಉಜಿರಂಡಿಪಲ್ಕೆ ನಿವಾಸಿ ಸುಂದರ ಬಂಗೇರ ಅವರ ಕಟ್ಟಡವೊಂದಕ್ಕೆ ಪ್ರತಿ ತಿಂಗಳು ನಿಗದಿತ 35 ರೂ.ನಿಂದ 70 ರೂ.ವರೆಗೆ ಶುಲ್ಕ ಬರುತ್ತಿತ್ತು. ಆದರೆ ಮಾ.26ರಂದು ಬಂದ ವಿದ್ಯುತ್‌ ಬಿಲ್ಲಿನಲ್ಲಿ ಶುಲ್ಕ 6 ಲಕ್ಷ ರೂ. ದಾಟಿದೆ. ಈ ಬಾರಿಯ ಬಿಲ್‌ನಲ್ಲಿ 87,454 ಬಳಸಿದ ಯೂನಿಟ್‌ಗಳು, ಅದಕ್ಕೆ 6,16,186 ರೂ. ಶುಲ್ಕ, 55,456 ತೆರಿಗೆ ಸಹಿತ ಇತರ ಶುಲ್ಕಗಳು ಸೇರಿ ಒಟ್ಟು 6,71,679 ರೂ. ಬಿಲ್‌ ಬಂದಿದೆ.
ಅಸಹಜ ಬಿಲ್‌ ನೀಡದಂತೆ ಸೂಚನೆ
ಮೆಸ್ಕಾಂನ ವಿದ್ಯುತ್‌ ಶುಲ್ಕದ ಬಿಲ್‌ ನೀಡುವ ಕಾರ್ಯವನ್ನು ಹೊರಗುತ್ತಿಗೆ ಆಧಾರದಲ್ಲಿ ಮೀಟರ್‌ ರೀಡರ್‌ ಗಳು ನಿರ್ವಹಿಸುತ್ತಿದ್ದಾರೆ. ಅಸಹಜ (ಅಬ್‌ನಾರ್ಮಲ್‌) ಬಿಲ್‌ಗ‌ಳು ಬಂದರೆ ಅಂತಹ ಬಿಲ್‌ಗ‌ಳನ್ನು ಗ್ರಾಹಕರಿಗೆ ನೀಡದೆ ಬದಲಾಗಿ ಅದನ್ನು ಮೆಸ್ಕಾಂ ಗಮನಕ್ಕೆ ತರುವಂತೆ ಸೂಚನೆ ನೀಡಲಾಗಿದೆ. ಆದರೆ ಕೆಲವು ಮೀಟರ್‌ ರೀಡರ್‌ಗಳು ಅಸಹಜ ಬಿಲ್‌ಗ‌ಳು ಬಂದರೂ ಗ್ರಾಹಕರಿಗೆ ನೀಡುತ್ತಾರೆ. ಹೆಚ್ಚಿನ ಸಂದರ್ಭ ರೀಡರ್‌ ಗಳು ಬಿಲ್ಲಿನ ಮೊತ್ತ ನೋಡುವುದಿಲ್ಲ. ಹೀಗಾಗಿ ಗ್ರಾಹಕರು ಗೊಂದಲಕ್ಕೊಳಗಾಗುವ ಸಾಧ್ಯತೆ ಇದೆ ಎಂದು ಮೆಸ್ಕಾಂ ಅಧಿಕಾರಿಗಳು ಹೇಳುತ್ತಾರೆ.
ಮೀಟರ್‌ ಚೇಂಜ್‌ ತೊಂದರೆ?
ಹೊಸ ಸಾಫ್ಟ್‌ವೇರ್‌ ಅಳವಡಿಕೆ ಬಳಿಕ ಬದಲಾವಣೆಗೊಂಡ ಮೀಟರ್‌ಗಳಲ್ಲಿ ಇಂತಹ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದ್ದು, ಅದು ಹಿಂದಿನ ರೀಡಿಂಗ್‌ ತೋರಿಸಿದಾಗ ಹೆಚ್ಚಿನ ಶುಲ್ಕ ಬರುತ್ತದೆ. ಅಂತಹ ಪ್ರಕರಣಗಳನ್ನು ಅಧ್ಯಯನ ಮಾಡಿ ಸಮಸ್ಯೆ ಪರಿಹರಿಸುವ ಕೆಲಸ ಮಾಡಲಾಗುತ್ತಿದೆ  ಎಂದು ಎಂಜಿನಿಯರ್‌ಗಳು ತಿಳಿಸಿದ್ದಾರೆ.
ಸಾಫ್ಟ್‌ ವೇರ್‌ ಸಮಸ್ಯೆ
ಸಾಫ್ಟ್‌ವೇರ್‌ ಬದಲಿಸಿದ ಹಿನ್ನೆಲೆಯಲ್ಲಿ ಅಸಹಜ ಬಿಲ್‌ ಸಮಸ್ಯೆ ಕಂಡು ಬರುತ್ತಿದೆ. ಅಸಹಜ ಶುಲ್ಕಗಳಿದ್ದಲ್ಲಿ ಗ್ರಾಹಕರಿಗೆ ನೀಡದಂತೆ ಮೀಟರ್‌ ರೀಡರ್‌ಗಳಿಗೆ ತಿಳಿಸಲಾಗಿದೆ. ಗ್ರಾಹಕರು ಮೆಸ್ಕಾಂ ಕಚೇರಿಯನ್ನು ಸಂಪರ್ಕಿಸಿದರೆ ಸಮಸ್ಯೆ ಪರಿಹಾರವಾಗುತ್ತದೆ.
ರಾಮಚಂದ್ರ, ಎಕ್ಸಿಕ್ಯೂಟಿವ್‌
  ಎಂಜಿನಿಯರ್‌, ಮೆಸ್ಕಾಂ ಬಂಟ್ವಾಳ
  ಉಪವಿಭಾಗ
ಜೆಇ ಗಮನಕ್ಕೆ ತಂದಿದ್ದೆ
ನಮ್ಮ ಒಂದು ಸಣ್ಣ ಬಾಡಿಗೆ ರೂಮಿನ ವಿದ್ಯುತ್‌ ಶುಲ್ಕ ಗರಿಷ್ಠ ಅಂದರೆ 70 ರೂ. ಬರುತ್ತಿತ್ತು. ಆದರೆ ಈ ಬಾರಿ 6 ಲಕ್ಷ ರೂ.ಗಳಿಗೂ ಅಧಿಕ ಬಿಲ್‌ ಬಂದಾಗ ಗೊಂದಲವಾಯಿತು. ಬಳಿಕ ಮೆಸ್ಕಾಂ ಜೆಇ ಅವರ ಗಮನಕ್ಕೆ ತಂದಾಗ ಮೀಟರ್‌ ರೀಡರ್‌ ಅವರ ಬಳಿ ವಿಚಾರಿಸಿದ್ದಾರೆ.
ಸುಂದರ ಬಂಗೇರ
ಮೆಸ್ಕಾಂ ಗ್ರಾಹಕ
ಕಿರಣ್‌ ಸರಪಾಡಿ

ಟಾಪ್ ನ್ಯೂಸ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.