ಭಾರತದ ಚುನಾವಣೆಯಲ್ಲಿ ಮತ್ತೆ; ಮೂಗು ತೂರಿಸಿದ ಪಾಕ್ ನಾಯಕ!
ಚುನಾವಣೆ ನಮ್ಮ ಆಂತರಿಕ ವಿಚಾರ: ಪಾಕಿಸ್ಥಾನಕ್ಕೆ ಕೇಜ್ರಿ ತಿರುಗೇಟು
Team Udayavani, May 26, 2024, 6:30 AM IST
ಹೊಸದಿಲ್ಲಿ: ಭಾರತದ ಚುನಾವಣ ವಿಚಾರದಲ್ಲಿ ಪಾಕ್ ಮಾಜಿ ಸಚಿವ ಚೌಧರಿ ಫವಾದ್ ಹುಸೇನ್ ಮತ್ತೆ ಮೂಗು ತೂರಿಸಿದ್ದಾರೆ. ಜತೆಗೆ ಅದಕ್ಕೆ ತಕ್ಕಂತೆ ಛೀಮಾರಿಯನ್ನೂ ಎದುರಿಸಿದ್ದಾರೆ.
ಶನಿವಾರ ಮತದಾನ ಮಾಡಿದ ಬಳಿಕ, ಕುಟುಂಬದೊಂದಿಗೆ ಫೋಟೊ ತೆಗೆಸಿಕೊಂಡ ದಿಲ್ಲಿ ಸಿಎಂ ಕೇಜ್ರಿವಾಲ್, ಆ ಫೋಟೋಟ್ವೀಟ್ ಮಾಡಿದ್ದರು. ಇದಕ್ಕೆ ಪಾಕಿಸ್ಥಾನ ಮಾಜಿ ಸಚಿವ ಹುಸೇನ್ ಪ್ರತಿಕ್ರಿಯಿಸಿ, “ದ್ವೇಷ ಹಾಗೂ ತೀವ್ರವಾದದ ವಿರುದ್ಧ ಶಾಂತಿ ಹಾಗೂ ಸಾಮರಸ್ಯ ಜಯಗಳಿಸಲಿ’ ಎಂದು ಬರೆದಿದ್ದಾರೆ. ಹುಸೇನ್ ಟ್ವೀಟ್ಗೆ ಕೂಡಲೇ ಸರಣಿ ಟ್ವೀಟ್ ಮೂಲಕ ತಿರುಗೇಟು ಕೊಟ್ಟ ಕೇಜ್ರಿವಾಲ್, “ನಮ್ಮ ದೇಶದ ಸಮಸ್ಯೆ ನಿಭಾಯಿಸಲು ನಾವು ಸಮರ್ಥರಿದ್ದೇವೆ. ನಿಮ್ಮ ಟ್ವೀಟ್ನ ಆವಶ್ಯಕತೆಯಿಲ್ಲ. ಪಾಕಿಸ್ಥಾನದಲ್ಲಿ ಈಗ ಪರಿಸ್ಥಿತಿ ಸರಿಯಿಲ್ಲ. ಈ ಚುನಾವಣೆ ನಮ್ಮ ಆಂತರಿಕ ವಿಚಾರ. ಇದರಲ್ಲಿ ಭಯೋತ್ಪಾದನೆಯ ಪ್ರಾಯೋಜಕರ ಹಸ್ತಕ್ಷೇಪವನ್ನು ಭಾರತ ಸಹಿಸುವುದಿಲ್ಲ’ ಎಂದು ಬರೆದುಕೊಂಡಿದ್ದಾರೆ.
ಇದೇ ವಿಚಾರವೆತ್ತಿ ವಿಪಕ್ಷಗಳ ವಿರುದ್ಧ ವಾಗ್ಧಾಳಿ ಆರಂಭಿಸಿದ ಬಿಜೆಪಿ, “ರಾಹುಲ್, ಕೇಜ್ರಿವಾಲ್ಗೆ ಪಾಕ್ ಭರಪೂರ ಬೆಂಬಲ ಏಕೆ ಸಿಗುತ್ತಿದೆ? ಇದು ಗಂಭೀರ ಸಮಸ್ಯೆ’ ಎಂದಿದೆ. ಇತ್ತೀಚೆಗೆ ರಾಹುಲ್ ಟ್ವೀಟ್ಗೂ ಫವಾದ್ ಹುಸೇನ್ ಪ್ರತಿಕ್ರಿಯಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ಪಕ್ಷ ಅವಕಾಶ ನೀಡಿದರೆ ಸ್ಥಳೀಯ ರಾಜಕಾರಣಕ್ಕೆ ಬರಲು ಸಿದ್ಧ: ಶ್ರೀಪಾದ್ ನಾಯ್ಕ್
PM Modi- Pope ಭೇಟಿ ಫೋಟೋ: ಕ್ಷಮೆಯಾಚಿಸಿದ ಕೇರಳ ಕಾಂಗ್ರೆಸ್- ಏನಿದು ವಿವಾದ?
Bihar: ವಿದ್ಯಾರ್ಥಿಗಳು ಸೇವಿಸಿದ್ದ ಆಹಾರದಲ್ಲಿ ಸತ್ತ ಹಾವು! 11 ಮಂದಿ ಆಸ್ಪತ್ರೆಗೆ ದಾಖಲು
Panaji: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಹೆಸರಲ್ಲಿ ವಂಚನೆ; ದೂರು ದಾಖಲು
ಕಾಂಚನ್ಜುಂಗಾ ಎಕ್ಸ್ಪ್ರೆಸ್ ರೈಲು ದುರಂತ: ಮೃತರ ಸಂಖ್ಯೆ 15ಕ್ಕೆ ಏರಿಕೆ, 60 ಜನರಿಗೆ ಗಾಯ
MUST WATCH
ಹೊಸ ಸೇರ್ಪಡೆ
Panaji: ಪಕ್ಷ ಅವಕಾಶ ನೀಡಿದರೆ ಸ್ಥಳೀಯ ರಾಜಕಾರಣಕ್ಕೆ ಬರಲು ಸಿದ್ಧ: ಶ್ರೀಪಾದ್ ನಾಯ್ಕ್
Vihan- Amar; ಜೂ.21ಕ್ಕೆ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದ ಮೊದಲ ಹಾಡು
Dhruva Sarja; 10 ವರ್ಷಗಳ ನಂತರ ‘ಬಹದ್ದೂರ್’ ಮತ್ತೆ ರಿಲೀಸ್
PM Modi- Pope ಭೇಟಿ ಫೋಟೋ: ಕ್ಷಮೆಯಾಚಿಸಿದ ಕೇರಳ ಕಾಂಗ್ರೆಸ್- ಏನಿದು ವಿವಾದ?
ZAP-X Radiosurgery; ಬ್ರೈನ್ ಟ್ಯೂಮರ್ ನೋವುರಹಿತ ಚಿಕಿತ್ಸೆಗೆ ಝ್ಯಾಪ್- ಎಕ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.