Panaji: ಪರವಾನಿಗೆ ಇಲ್ಲದೆ ದೋಣಿ ವಿಹಾರ… ಮಾಲೀಕ, ನಿರ್ವಾಹಕನ ವಿರುದ್ಧ ಪ್ರಕರಣ


Team Udayavani, May 24, 2024, 10:31 AM IST

Panaji: ಪರವಾನಿಗೆ ಇಲ್ಲದೆ ದೋಣಿ ವಿಹಾರ… ಮಾಲೀಕ, ನಿರ್ವಾಹಕನ ವಿರುದ್ಧ ಪ್ರಕರಣ

ಪಣಜಿ: ಪ್ರಯಾಣಿಕರ ಸಾಗಣೆಗೆ ಪರವಾನಿಗೆ ಇಲ್ಲದೇ ದೋಣಿ ವಿಹಾರ ನಡೆಸಿ 24 ಪ್ರವಾಸಿಗರ ಜೀವಕ್ಕೆ ಅಪಾಯ ತಂದೊಡ್ಡಿದ ಆರೋಪದ ಮೇಲೆ ನೆರೂಲ್ ಪ್ಯಾರಡೈಸ್ ಬೋಟ್ ನ ಮಾಲೀಕ ವಾಸುದೇವ್ ಕಲಂಗುಟ್ಕರ್ ಜತೆ ನಿರ್ವಾಹಕ ಅಭಿಷೇಕ್ ರಾಥೋಡ್ (20) ವಿರುದ್ಧ ಹಾರ್ಬರ್ ಕರಾವಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ಬಂದರು ಕರಾವಳಿ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಪ್ರೀತೇಶ್ ಗೋವೇಕರ ಮುಂದಿನ ತನಿಖೆ ನಡೆಸುತ್ತಿದ್ದಾರೆ.

ನೆರೂಲ್ ಪ್ಯಾರಡೈಸ್ ಜಲಸಫರ್ ಬೋಟ್ ಮೇ 19 ರಂದು ಸಂಜೆ 24 ಪ್ರವಾಸಿಗರು ಮತ್ತು ಇಬ್ಬರು ಸಿಬ್ಬಂದಿಗಳೊಂದಿಗೆ ಪಣಜಿಯಿಂದ ಜಲಸಫರ್‍ಗೆ ಬಂದಿತು. ಸಂಜೆ ನಂತರ ಪಣಜಿಗೆ ಹಿಂತಿರುಗುತ್ತಿದ್ದಾಗ ಬೋಟ್‍ನಲ್ಲಿ ಇಂಧನ ಖಾಲಿಯಾದ ಕಾರಣ ನಿರ್ವಾಹಕರು ಬೋಟ್‍ನ ನಿಯಂತ್ರಣ ಕಳೆದುಕೊಂಡಿದ್ದಾರೆ. ಇದರಿಂದಾಗಿ ಮುಗಾರ್ಂವ್ ಕರಾವಳಿ ಪ್ರದೇಶದಲ್ಲಿ ದೋಣಿ ದಾರಿ ತಪ್ಪಿತು. ಪ್ರತಿಕೂಲ ಹವಾಮಾನ ಮತ್ತು ಇಂಧನ ಖಾಲಿಯಾಗಿರುವುದು ಕಾರಣ, ಬೋಟ್ ಸುಮಾರು ಮೂರು ಮೀಟರ್ ಎತ್ತರದ ಅಲೆಯಲ್ಲಿ ಕಂಡುಬಂದಿದೆ. ಬೋಟ್ ಅಲೆಯುತ್ತಿದ್ದಂತೆ ದೋಣಿಯಲ್ಲಿದ್ದ ಪ್ರವಾಸಿಗರಲ್ಲಿ ಗೊಂದಲ ಉಂಟಾಯಿತು. ಅವರು ಕಿರುಚಲು ಪ್ರಾರಂಭಿಸಿದರು. ಆ ಸಮಯದಲ್ಲಿ ಗಸ್ತು ತಿರುಗುತ್ತಿದ್ದ ಭಾರತೀಯ ಕೋಸ್ಟ್ ಗಾರ್ಡ್ ಗಸ್ತು ನೌಕೆಯು ಬೋಟ್ ದುರಂತದಲ್ಲಿ ಸಿಲುಕಿರುವುದನ್ನು ಕಂಡ ಕೂಡಲೆ ಗಸ್ತು ನೌಕೆಯನ್ನು ತಕ್ಷಣವೇ ಬೋಟ್ ಬಳಿ ತಿರುಗಿಸಲಾಯಿತು. ಬಳಿಕ ಬೋಟಿನಲ್ಲಿದ್ದ ಎಲ್ಲರನ್ನೂ ಸಮಾಧಾನಪಡಿಸಿ ಬೋಟ್ ಅನ್ನು ಮುರಗಾಂವ್ ಬಂದರಿಗೆ ತರಲಾಯಿತು. ಡೊನಾಪಾವುಲ್‍ದಿಂದ ಆಳ ಸಮುದ್ರದಲ್ಲಿ ಬೋಟ್ ತೊಂದರೆಗೆ ಸಿಲುಕಿದೆ.

ವಿಷಯ ತಿಳಿದು ಬಂದರು ಕರಾವಳಿ ಪೊಲೀಸರು ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ದೋಣಿಯಲ್ಲಿ ಪ್ರವಾಸಿಗರು ಮತ್ತು ಪ್ರಯಾಣಿಕರನ್ನು ಸಾಗಿಸಲು ಸಂಬಂಧಪಟ್ಟವರು ಯಾವುದೇ ಪರವಾನಗಿ ಅಥವಾ ದಾಖಲೆಗಳನ್ನು ಹೊಂದಿಲ್ಲ. ಅವರು ಪ್ರಯಾಣಿಕರನ್ನು ಸಾಗಿಸಲು ಯಾವುದೇ ಪತ್ರವ್ಯವಹಾರವನ್ನು ಮಾಡಿರಲಿಲ್ಲ. ಈ ಬೋಟ್ ಓಡಿಸುತ್ತಿದ್ದ ಅಭಿಷೇಕ್ ರಾಥೋಡ್ ಬೋಟ್ ಚಲಾಯಿಸಲು ಯಾವುದೇ ಪರವಾನಗಿ ಹೊಂದಿರಲಿಲ್ಲ. ಪರವಾನಿಗೆ ಇಲ್ಲದೆ ಸಮುದ್ರದಲ್ಲಿ ಬೋಟ್ ನಿರ್ಲಕ್ಷದಿಂದ ನಡೆಸಿದ್ದರಿಂದ ಪ್ರವಾಸಿಗರು ಹಾಗೂ ಸಿಬ್ಬಂದಿಯ ಜೀವಕ್ಕೆ ಅಪಾಯ ತಂದೊಡ್ಡಿದೆ. ಅದೃಷ್ಟವಶಾತ್ ಭಾರತೀಯ ಕೋಸ್ಟ್ ಗಾರ್ಡ್ ಗಸ್ತು ಬೋಟ್ ಅಲ್ಲಿಗೆ ಆಗಮಿಸಿ ಪ್ರವಾಸಿಗರನ್ನು ರಕ್ಷಿಸಿದೆ.

ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ‘ರಾಜಕೀಯ ಸಾವಿರ ಪಟ್ಟು ಹೆಚ್ಚು’; ಲ್ಯಾಂಗರ್ ಬಳಿ ರಾಹುಲ್ ಹೇಳಿದ್ದೇನು?

ಟಾಪ್ ನ್ಯೂಸ್

Nalin Kumar Kateel ವಿರುದ್ಧ ಸುಳ್ಳು ಸಂದೇಶ: ಕ್ರಮಕ್ಕೆ ಬಿಜೆಪಿ ಒತ್ತಾಯ

Nalin Kumar Kateel ವಿರುದ್ಧ ಸುಳ್ಳು ಸಂದೇಶ: ಕ್ರಮಕ್ಕೆ ಬಿಜೆಪಿ ಒತ್ತಾಯ

ಕರಾವಳಿಯ ದೇಗುಲಗಳಲ್ಲಿ ಭಾರೀ ಭಕ್ತ ಸಂದಣಿ

ಕರಾವಳಿಯ ದೇಗುಲಗಳಲ್ಲಿ ಭಾರೀ ಭಕ್ತ ಸಂದಣಿ

ಹೊಳೆ ಜಾಗ ಒತ್ತುವರಿ ವಿರುದ್ಧ ಕ್ರಮಕ್ಕೆ ಶಾಸಕ ಪೊನ್ನಣ್ಣ ಸೂಚನೆ

ಹೊಳೆ ಜಾಗ ಒತ್ತುವರಿ ವಿರುದ್ಧ ಕ್ರಮಕ್ಕೆ ಶಾಸಕ ಪೊನ್ನಣ್ಣ ಸೂಚನೆ

Madikeri: ಖಾಸಗಿ ಬಸ್‌-ಸ್ಕೂಟರ್‌ ಢಿಕ್ಕಿ; ಸವಾರ ಸಾವುMadikeri: ಖಾಸಗಿ ಬಸ್‌-ಸ್ಕೂಟರ್‌ ಢಿಕ್ಕಿ; ಸವಾರ ಸಾವು

Madikeri: ಖಾಸಗಿ ಬಸ್‌-ಸ್ಕೂಟರ್‌ ಢಿಕ್ಕಿ; ಸವಾರ ಸಾವು

Kollur ಹಾಲ್ಕಲ್‌: ಬಸ್‌ ಢಿಕ್ಕಿ; ಕಾರಿಗೆ ಹಾನಿ

Kollur ಹಾಲ್ಕಲ್‌: ಬಸ್‌ ಢಿಕ್ಕಿ; ಕಾರಿಗೆ ಹಾನಿ

Mangaluru ಗಾಂಜಾ ಸೇವನೆ: ಯುವಕನ ಬಂಧನ

Mangaluru ಗಾಂಜಾ ಸೇವನೆ: ಯುವಕನ ಬಂಧನ

ಸಿವಿಲ್‌ ಏವಿಯೇಶನ್‌ ಸೆಕ್ಯೂರಿಟಿ ಜಂಟಿ ನಿರ್ದೇಶಕರಾಗಿ ಕ್ಯಾ| ಅಯ್ಯಪ್ಪ ನೇಮಕ

ಸಿವಿಲ್‌ ಏವಿಯೇಶನ್‌ ಸೆಕ್ಯೂರಿಟಿ ಜಂಟಿ ನಿರ್ದೇಶಕರಾಗಿ ಕ್ಯಾ| ಅಯ್ಯಪ್ಪ ನೇಮಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sadsdad

Delhi ನೀರಿಗಾಗಿ ಕೋಲಾಹಲ: ಮಡಕೆಗಳಿಂದಲೇ ಜಲಮಂಡಳಿ ಕಚೇರಿ ಧ್ವಂಸ

police crime

Thane; ವಧೆಗಾಗಿ ತಂದ ಮೇಕೆಯ ಮೇಲೆ ದೇವರ ಹೆಸರು: ಆಕ್ರೋಶ

Amit Shah

Jammu ಪ್ರದೇಶ ಪ್ರಾಬಲ್ಯ ಶೂನ್ಯ-ಉಗ್ರ ಯೋಜನೆ ಜಾರಿಗೆ ತರಲು ಶಾ ಆದೇಶ

Rahul Gandhi (3)

EVM ವಿಚಾರ; ಮಸ್ಕ್ ಹೇಳಿಕೆಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ : ಬಿಜೆಪಿ ಆಕ್ರೋಶ

1-aaaa

Bihar:ಗಂಗಾ ನದಿಯಲ್ಲಿ ಮುಳುಗಿದ 17 ಭಕ್ತರಿದ್ದ ದೋಣಿ,6 ಮಂದಿ ನಾಪತ್ತೆ

MUST WATCH

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

udayavani youtube

ಇಡ್ಲಿ, ವಡೆ, ಚಟ್ನಿ ಗೆ ತುಂಬಾ ಫೇಮಸ್ ಈ ಹೋಟೆಲ್

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಹೊಸ ಸೇರ್ಪಡೆ

Nalin Kumar Kateel ವಿರುದ್ಧ ಸುಳ್ಳು ಸಂದೇಶ: ಕ್ರಮಕ್ಕೆ ಬಿಜೆಪಿ ಒತ್ತಾಯ

Nalin Kumar Kateel ವಿರುದ್ಧ ಸುಳ್ಳು ಸಂದೇಶ: ಕ್ರಮಕ್ಕೆ ಬಿಜೆಪಿ ಒತ್ತಾಯ

ಕರಾವಳಿಯ ದೇಗುಲಗಳಲ್ಲಿ ಭಾರೀ ಭಕ್ತ ಸಂದಣಿ

ಕರಾವಳಿಯ ದೇಗುಲಗಳಲ್ಲಿ ಭಾರೀ ಭಕ್ತ ಸಂದಣಿ

ಹೊಳೆ ಜಾಗ ಒತ್ತುವರಿ ವಿರುದ್ಧ ಕ್ರಮಕ್ಕೆ ಶಾಸಕ ಪೊನ್ನಣ್ಣ ಸೂಚನೆ

ಹೊಳೆ ಜಾಗ ಒತ್ತುವರಿ ವಿರುದ್ಧ ಕ್ರಮಕ್ಕೆ ಶಾಸಕ ಪೊನ್ನಣ್ಣ ಸೂಚನೆ

Madikeri: ಖಾಸಗಿ ಬಸ್‌-ಸ್ಕೂಟರ್‌ ಢಿಕ್ಕಿ; ಸವಾರ ಸಾವುMadikeri: ಖಾಸಗಿ ಬಸ್‌-ಸ್ಕೂಟರ್‌ ಢಿಕ್ಕಿ; ಸವಾರ ಸಾವು

Madikeri: ಖಾಸಗಿ ಬಸ್‌-ಸ್ಕೂಟರ್‌ ಢಿಕ್ಕಿ; ಸವಾರ ಸಾವು

Kollur ಹಾಲ್ಕಲ್‌: ಬಸ್‌ ಢಿಕ್ಕಿ; ಕಾರಿಗೆ ಹಾನಿ

Kollur ಹಾಲ್ಕಲ್‌: ಬಸ್‌ ಢಿಕ್ಕಿ; ಕಾರಿಗೆ ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.