ಬಿಹಾರ ವಿಧಾನಸಭಾ ಚುನಾವಣೆಗೆ ಲಾಲು ಹೊಸ ಸ್ಲೋಗನ್
Team Udayavani, Jan 6, 2020, 2:05 AM IST
ಹೊಸದಿಲ್ಲಿ: ಈ ವರ್ಷ ಬಿಹಾರ ವಿಧಾನಸಭಾ ಚುನಾವಣೆ ನಡೆಯಲಿದ್ದು, ‘ನಿತೀಶ್ ತೊಲಗಿಸಿ’ ಘೋಷವಾಕ್ಯದೊಂದಿಗೆ ಕಾರ್ಯಕರ್ತರು ಚುನಾವಣೆ ಎದುರಿಸುವಂತೆ ಆರ್ಜೆಡಿ ನೇತಾರ ಲಾಲು ಪ್ರಸಾದ್ ಯಾದವ್ ಜೈಲಿನಿಂದಲೇ ಕರೆ ನೀಡಿದ್ದಾರೆ.
ನೀತಿ ಆಯೋಗದ ಅಂಕಿ ಅಂಶದ ಪ್ರಕಾರ, ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಆಡಳಿತ ಅತ್ಯಂತ ಕೆಟ್ಟದ್ದಾಗಿದೆ ಎಂದು ಟ್ವಿಟರ್ನಲ್ಲಿ ಲಾಲು ತಿಳಿಸಿದ್ದಾರೆ. ಲಾಲು ಪ್ರಸಾದ್ ಸದ್ಯ ಮೇವು ಹಗರಣದಲ್ಲಿ ಶಿಕ್ಷೆಗೆ ಗುರಿಯಾಗಿ ರಾಂಚಿ ಜೈಲಿನಲ್ಲಿದ್ದಾರೆ. ಲಾಲು ಟ್ವೀಟ್ ಖಾತೆಯನ್ನು ಅವರ ಕುಟುಂಬದವರು ನಿರ್ವಹಿಸುತ್ತಿದ್ದಾರೆ.