ಪುಣೆ: ದುರ್ಗಾಕಾಳಿ ಮಂದಿರದ ವಾರ್ಷಿಕೋತ್ಸವ
Team Udayavani, Feb 8, 2017, 4:30 PM IST
ಪುಣೆ: ಜನವಾಡಿ ಗೋಖಲೆ ನಗರದ ಶ್ರೀ ದುರ್ಗಾಕಾಳಿ ಮಂದಿರದ 31ನೇ ವಾರ್ಷಿಕೋತ್ಸವ ಸಮಾರಂಭವು ಫೆ. 4ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು .
ಲಿಂಗಪ್ಪ ಪೂಜಾರಿ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮವಾಗಿ ಭಕ್ತಾದಿಗಳಿಂದ ಭಜನ ಕಾರ್ಯಕ್ರಮ, ದೇವಿ ದರ್ಶನ, ಮಹಾಪೂಜೆ, ಮಹಾ ಆರತಿ, ತೀರ್ಥಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಗಣೇಶ್ ಹೆಗ್ಡೆ ಅಗತ್ಯ, ಪ್ರವೀಣ್ ಶೆಟ್ಟಿ ಪುತ್ತೂರು, ಸತೀಶ್ ಕೋಟ್ಯಾನ್ ಗುರುದತ್ತ, ಶ್ರೀಧರ್ ಶೆಟ್ಟಿ ಕಲ್ಲಾಡಿ, ಪಾಂಡುರಂಗ ಪೂಜಾರಿ ಶಿವಸಾಗರ್, ಶಂಕರ್ ಶೆಟ್ಟಿ ಜಲ್ಸಾ, ವಿನೋಧ್ ಶೆಟ್ಟಿ ಶಿವಾನಂದ್, ಸಂತೋಷ್ ಶೆಟ್ಟಿ ಎಣ್ಣೆಹೊಳೆ, ಸದಾಶಿವ ಸಾಲ್ಯಾನ್, ವಿಶ್ವನಾಥ್ ಪೂಜಾರಿ ಕಪಿಲ, ಚೇತನ್ ಶೆಟ್ಟಿ ದುರ್ಗಾ ಕ್ಯಾಟರರ್ಸ್, ಅರುಣ್ ಪೂಜಾರಿ, ಬಾಳಾಸಾಹೇಬ್ ಹುಕ್ಕೇರಿ, ಶ್ರೀಧರ ಪೂಜಾರಿ, ಯಾಧವ ಶೆಟ್ಟಿ ಬಂಜಾರ, ಉದಯ್ ಶೆಟ್ಟಿ ಪಿಂಪ್ರಿ, ನಾರಾಯಣ ಪೂಜಾರಿ ನಾಗಮಣಿ, ಸಂಜೀವ ಶೆಟ್ಟಿ, ಪ್ರಭಾಕರ, ಶ್ರೀಧರ, ಹರೀಶ್, ಸುಧಾಕರ್, ಆನಂದ್, ರಮೇಶ್ ಶೆಟ್ಟಿ, ವಸಂತ್ ಪೂಜಾರಿ, ಸಂಜೀವ ಪೂಜಾರಿ ಮತ್ತಿತರರು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.