ಎಲಿಸೆ ಪೆರ್ರಿ ವರ್ಷದ ಶ್ರೇಷ್ಠ ಏಕದಿನ ಆಟಗಾರ್ತಿ


Team Udayavani, Dec 17, 2019, 11:58 PM IST

elise-perri

ದುಬಾೖ: ಈ ಋತುವಿನಲ್ಲಿ ಸ್ಮರಣೀಯ ನಿರ್ವಹಣೆ ನೀಡಿರುವ ಭಾರತ ತಂಡದ ಆರಂಭಿಕ ಆಟಗಾರ್ತಿ ಸ್ಮತಿ ಮಂದನಾ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ)ನ ವರ್ಷದ ಏಕದಿನ ಮತ್ತು ಟಿ20 ತಂಡಗಳಲ್ಲಿ ಹೆಸರಿಸಲಾಗಿದೆ.

ವರ್ಷದ ಏಕದಿನ ತಂಡದಲ್ಲಿ ಮಂದನಾ ಅವರಲ್ಲದೇ ಜೂಲನ್‌ ಗೋಸ್ವಾಮಿ, ಪೂನಂ ಯಾದವ್‌ ಮತ್ತು ಶಿಖಾ ಪಾಂಡೆ ಇದ್ದರೆ ಟಿ20 ತಂಡದಲ್ಲಿ ಆಲ್‌ರೌಂಡರ್‌ ದೀಪ್ತಿ ಶರ್ಮ ಅವರಿದ್ದಾರೆ. ಈ ಎರಡೂ ತಂಡಗಳ ನಾಯಕಿಯಾಗಿ ಮೆಗ್‌ ಲ್ಯಾನ್ನಿಂಗ್‌ ಅವರನ್ನು ಆಯ್ಕೆ ಮಾಡಲಾಗಿದೆ.

23ರ ಹರೆಯದ ಮಂದನಾ ಇಷ್ಟರವರೆಗೆ ಭಾರತ ಪರ 51 ಏಕದಿನ ಮತ್ತು 66 ಟಿ20 ಪಂದ್ಯಗಳನ್ನಾಡಿದ್ದಾರೆ. ಏಕದಿನ ಮತ್ತು ಟಿ20ಯಲ್ಲಿ ಒಟ್ಟಾರೆ 3,476 ರನ್‌ ಪೇರಿಸಿದ್ದಾರೆ.

ಈ ವರ್ಷದಲ್ಲಿ ಶ್ರೀಲಂಕಾ ವಿರುದ್ಧ 148 ರನ್‌ ಪೇರಿಸಿ ದಾಖಲೆ ಮುರಿದ ಸಾಧನೆಗೈದ ಆಸ್ಟ್ರೇಲಿಯದ ಅಲಿಸ್ಸಾ ಹೀಲೆ ಅವರು ವರ್ಷದ ಟಿ20 ಆಟಗಾರ್ತಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ವರ್ಷದ ಏಕದಿನ ಆಟಗಾರ್ತಿ ಪ್ರಶಸ್ತಿಯು ಆಸ್ಟ್ರೇಲಿಯದ ಎಲಿಸೆ ಪೆರ್ರಿ ಪಾಲಾಗಿದೆ. ಪೆರ್ರಿ ಈ ವರ್ಷ 73.50 ಸರಾಸರಿಯಲ್ಲಿ 441 ರನ್‌ ಮತ್ತು 13.52 ಸರಾಸರಿಯಲ್ಲಿ 21 ವಿಕೆಟ್‌ ಕಿತ್ತ ಸಾಧನೆ ಮಾಡಿದ್ದಾರೆ.

ಪೆರ್ರಿ ಇದರ ಜತೆ ಎಲ್ಲ ಮಾದರಿಯ ಕ್ರಿಕೆಟಿಗೆ ಇರುವ ವರ್ಷದ ಆಟಗಾರ್ತಿ ಪ್ರಶಸ್ತಿಗೂ ಪಾತ್ರ ರಾಗಿದ್ದಾರೆ. ಇದನ್ನು ರಚೀಲ್‌ ಹೆಹೋಯಿ ಫ್ಲಿಂಟ್‌ ಹೆಸರಲ್ಲಿ ನೀಡಲಾಗುತ್ತದೆ. ಪೆರ್ರಿ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಅಮೋಘ ನಿರ್ವಹಣೆ ನೀಡಿದ್ದಾರೆ. ವನಿತಾ ಆ್ಯಶಸ್‌ ಟೆಸ್ಟ್‌ನಲ್ಲಿ ಒಂದು ಶತಕ ಸಹಿತ ಒಟ್ಟಾರೆ ಮೂರು ಶತಕ ಸಿಡಿಸಿದ ಅವರು ಟಿ20 ಕ್ರಿಕೆಟ್‌ನಲ್ಲಿ ಒಂದು ಸಾವಿರ ರನ್‌ ಮತ್ತು 100 ವಿಕೆಟ್‌ ಪೂರ್ತಿಗೊಳಿಸಿದ ಮೊದಲ ವನಿತೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ವರ್ಷದ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಥಾçಲಂಡಿನ ಚನಿಡಾ ಸುತ್ತಿರಾಂಗ್‌ ಅವರನ್ನು ಆಯ್ಕೆ ಮಾಡಲಾಗಿದೆ. 26ರ ಹರೆಯದ ಅವರು ಈ ವರ್ಷದ ಐಸಿಸಿ ವನಿತಾ ಟಿ20 ಅರ್ಹತಾ ವಿಶ್ವಕಪ್‌ ಕೂಟದಲ್ಲಿ 12 ವಿಕೆಟ್‌ ಉರುಳಿಸಿದ್ದಾರೆ.

ಅತ್ಯದ್ಭುತ ಗೌರವ
ಇದೊಂದು ಅತ್ಯದ್ಭುತ ಗೌರವ ಸ್ವಲ್ಪಮಟ್ಟಿಗೆ ಆಘಾತವೂ ಆಗಿದೆ. ಈ ವರ್ಷದುದ್ದಕ್ಕೂ ನೀಡಿರುವ ಅದ್ಭುತ ನಿರ್ವಹಣೆ ಆಧಾರದಲ್ಲಿ ಈ ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಮೆಚ್ಚುಗೆ ಸೂಚಿಸುತ್ತೇನೆ. ವೈಯಕ್ತಿಕ ಸಾಧನೆಯೊಂದಿಗೆ ವರ್ಷವನ್ನು ಅಂತ್ಯಗೊಳಿಸಿರು ವುದು ಖುಷಿ ನೀಡಿದೆ ಎಂದು ಪೆರ್ರಿ ಹೇಳಿದ್ದಾರೆ.

ಟಾಪ್ ನ್ಯೂಸ್

25

Bramavara: ಕ್ಯಾಬ್‌ ಚಾಲಕ ಸಾವು

24

Surathkal: ಗುತ್ತಿಗೆ ಕಾರ್ಮಿಕ ಬಿದ್ದು ಸಾವು

22

Gurupura: ಖಾಸಗಿ ಬಸ್ಸು, ಬೈಕ್‌ ಢಿಕ್ಕಿ ,ಸವಾರ ಸ್ಥಿತಿ ಗಂಭೀರ

B. Nagendra ರಾಜೀನಾಮೆ ನೀಡಲಿ: ಸಚಿವ ಪ್ರಹ್ಲಾದ ಜೋಶಿ

B. Nagendra ರಾಜೀನಾಮೆ ನೀಡಲಿ: ಸಚಿವ ಪ್ರಹ್ಲಾದ ಜೋಶಿ

ಬಿತ್ತನೆ ಬೀಜ ದರ ಏರಿಕೆ ಸರ್ಕಾರದ ಘನ ಕಾರ್ಯ: ಎಚ್‌ಡಿಕೆ ಟೀಕೆ

ಬಿತ್ತನೆ ಬೀಜ ದರ ಏರಿಕೆ ಸರ್ಕಾರದ ಘನ ಕಾರ್ಯ: ಎಚ್‌ಡಿಕೆ ಟೀಕೆ

Result; ಕೆ-ಸೆಟ್‌ ಪರೀಕ್ಷೆ ಫ‌ಲಿತಾಂಶ ಪ್ರಕಟ: 6,675 ಮಂದಿ ಅರ್ಹ

Result; ಕೆ-ಸೆಟ್‌ ಪರೀಕ್ಷೆ ಫ‌ಲಿತಾಂಶ ಪ್ರಕಟ: 6,675 ಮಂದಿ ಅರ್ಹ

21-

Crime News: ಕಾಸರಗೋಡು ವಿಭಾಗದ ಅಪರಾಧ ಸುದ್ದಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wwewewqe

Singapore Open; ವಿಶ್ವದ ನಂ.1 ಜೋಡಿ ಸಾತ್ವಿಕ್‌ -ಚಿರಾಗ್ ಗೆ ಆಘಾತಕಾರಿ ಸೋಲು

5

Riyan Parag ಯೂಟ್ಯೂಬ್‌ ಹಿಸ್ಟರಿ ಲೀಕ್:‌ ʼಸಾರಾ ಆಲಿ, ಅನನ್ಯಾ ಪಾಂಡೆ ಹಾಟ್‌ʼ ಎಂದು ಸರ್ಚ್

1-qweewqewqe

Coach;ಕುತೂಹಲ ಮೂಡಿಸಿದ ಗೌತಮ್‌ ಗಂಭೀರ್‌-ಜಯ್‌ ಶಾ ಭೇಟಿ

1-qewqwewq

IPL 2024; ಮೈದಾನದ ಸಿಬಂದಿಗೆ ಬಹುಮಾನ

badminton

Badminton;ಸಿಂಗಾಪುರ್‌ ಓಪನ್‌  ಇಂದಿನಿಂದ :ಒಲಿಂಪಿಕ್ಸ್‌ ಅಭ್ಯಾಸಕ್ಕೆ ಮಹತ್ವದ ಕೂಟ

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

25

Bramavara: ಕ್ಯಾಬ್‌ ಚಾಲಕ ಸಾವು

24

Surathkal: ಗುತ್ತಿಗೆ ಕಾರ್ಮಿಕ ಬಿದ್ದು ಸಾವು

23-

Mangaluru: ರೈಲು ನಿಲ್ದಾಣದ ಬಳಿ ವೈದ್ಯರ ಮೊಬೈಲ್‌ ಕಸಿದು ಪರಾರಿ 

22

Gurupura: ಖಾಸಗಿ ಬಸ್ಸು, ಬೈಕ್‌ ಢಿಕ್ಕಿ ,ಸವಾರ ಸ್ಥಿತಿ ಗಂಭೀರ

B. Nagendra ರಾಜೀನಾಮೆ ನೀಡಲಿ: ಸಚಿವ ಪ್ರಹ್ಲಾದ ಜೋಶಿ

B. Nagendra ರಾಜೀನಾಮೆ ನೀಡಲಿ: ಸಚಿವ ಪ್ರಹ್ಲಾದ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.