IPL: ಆರ್‌ಸಿಬಿಯ “ಕಪ್‌’ ಕನಸು ಕೈಜಾರಿದ್ದೆಲ್ಲಿ?


Team Udayavani, May 24, 2024, 7:02 AM IST

IPL: ಆರ್‌ಸಿಬಿಯ “ಕಪ್‌’ ಕನಸು ಕೈಜಾರಿದ್ದೆಲ್ಲಿ?

ಬೆಂಗಳೂರು: ಈ ಐಪಿಎಲ್‌ನ ದ್ವಿತೀಯಾರ್ಧದಲ್ಲಿ ಅಸಾಮಾನ್ಯ ಕಮ್‌ಬ್ಯಾಕ್‌ ಮಾಡಿದ್ದ ಆರ್‌ಸಿಬಿ, ಪ್ಲೇಆಫ್ಗೇರಿ ಹುರುಪು ಹೆಚ್ಚಿಸಿತ್ತು. ಆದರೆ ಬುಧವಾರ, ರಾಜಸ್ಥಾನ್‌ ವಿರುದ್ಧ ಎಲಿಮಿನೇಟರ್‌ನಲ್ಲಿ ಸೋತ ಬಳಿಕ ತಂಡ, ಅಭಿಮಾನಿಗಳನ್ನಾವರಿಸಿದ್ದ ಸಂಭ್ರಮ ಒಮ್ಮೆಗೆ ಕರಗಿದೆ. 16 ವರ್ಷಗಳಿಂದ ಕಾಣುತ್ತಿರುವ “ಕಪ್‌’ ಕನಸು ಈ ಬಾರಿಯೂ ಕೈಜಾರಿದೆ. ಇದು ಇಡೀ ಆರ್‌ಸಿಬಿ ಬಳಗವನ್ನು ಬೇಸರಗೊಳಿಸಿದೆ.

ಅಸಲಿಗೆ ಪ್ಲೇಆಫ್ ಅರ್ಹತೆಯೇ ದೂರದ ಮಾತಾಗಿದ್ದ ಆರ್‌ಸಿಬಿ ಪವಾಡ ರೀತಿಯಲ್ಲಿ ನಾಕೌಟ್‌ ಹಂತಕ್ಕೇರಿತ್ತು. ಎ.25ರಿಂದ ಹೈದರಾಬಾದ್‌, ಗುಜರಾತ್‌ (2 ಬಾರಿ), ಪಂಜಾಬ್‌, ಡೆಲ್ಲಿ ಮತ್ತು ಚೆನ್ನೈ ವಿರುದ್ಧ ಗೆದ್ದು ಸತತ 6 ಗೆಲುವಿನೊಂದಿಗೆ ಪ್ಲೇಆಪ್‌ಗೆ ಪ್ರವೇಶಿಸಿತ್ತು. ಅದರಲ್ಲೂ ಚೆನ್ನೈ ವಿರುದ್ಧ ಎಲ್ಲ ಲೆಕ್ಕಾಚಾರಗಳನ್ನು ದಾಟಿ ಗೆದ್ದಿದ್ದು ಪವಾಡವೇ ಸರಿ. ಋತುವಿನ ಆರಂಭದಲ್ಲಿ ಶುರುವಾಗಿದ್ದ “ಆರ್‌ಸಿಬಿಯ ಹೊಸ ಅಧ್ಯಾಯ’ ಎಲಿಮಿನೇಟರ್‌ನಲ್ಲೇ ಅಂತ್ಯವಾಗಿದೆ.

ಎಲ್ಲಿದೆ ವೈಫ‌ಲ್ಯ?:

  1. ಆರಂಭದಿಂದಲೂ ಆರ್‌ಸಿಬಿಗೆ ಬೌಲರ್‌ಗಳ ವೈಫ‌ಲ್ಯ ಪ್ರಬಲವಾಗಿ ಕಾಡಿತ್ತು. ರಾಜಸ್ಥಾನ್‌ ವಿರುದ್ಧದ ಎಲಿಮಿನೇಟರ್‌ನಲ್ಲೂ ಇದು ಪ್ರತಿಬಿಂಬಿತವಾಯಿತು.
  2. ಕೂಟದಲ್ಲಿ ತಂಡದ ಬ್ಯಾಟಿಂಗ್‌ ಬಹುತೇಕ ವಿರಾಟ್‌ ಕೊಹ್ಲಿ ಮೇಲೆ ಅವಲಂಬಿತವಾಗಿತ್ತು. ಕಡೆಕಡೆಗೆ ರಜತ್‌ ಪಾಟೀದಾರ್‌, ದಿನೇಶ್‌ ಕಾರ್ತಿಕ್‌, ವಿಲ್‌ ಜ್ಯಾಕ್ಸ್‌ ನೆರವಿಗೆ ನಿಂತರು.
  3. ತಂಡದಲ್ಲಿ ಧೋನಿ ರೀತಿಯ ಫಿನಿಶರ್‌ಗಳ, 4,5,6ನೇ ಕ್ರಮಾಂಕದಲ್ಲಿ ಸ್ಫೋಟಕವಾಗಿ ಆಟವಾಡಬಲ್ಲ ಬ್ಯಾಟರ್‌ಗಳ ಕೊರತೆಯಿದೆ.
  4. ತಂಡದ ಕ್ಷೇತ್ರರಕ್ಷಣೆ ನಿರೀಕ್ಷಿತ ಮಟ್ಟದಲ್ಲಿಲ್ಲ. ಇದರಿಂದ ರನ್‌ ಸೋರಿಹೋಗಿದೆ.
  5. ತಂಡದ ಪ್ರಮುಖರಾದ ಗ್ಲೆನ್‌ ಮ್ಯಾಕ್ಸ್‌ವೆಲ್‌, ನಾಯಕ ಫಾ ಡು ಪ್ಲೆಸಿಸ್‌, ವೇಗಿಗಳಾದ ಮೊಹಮ್ಮದ್‌ ಸಿರಾಜ್‌, ಅಲ್ಜಾರಿ ಜೋಸೆಫ್, ಸ್ಪಿನ್ನರ್‌ ಮಾಯಾಂಕ್‌ ದಾಗರ್‌ ವೈಫ‌ಲ್ಯ ಕಂಡಿದ್ದಾರೆ.

ಡ್ರೆಸ್ಸಿಂಗ್‌ ಕೊಠಡಿಯಲ್ಲಿ ಮಡುಗಟ್ಟಿದ ನೋವು:

ರಾಜಸ್ಥಾನ್‌ ವಿರುದ್ಧದ ಪಂದ್ಯದ ಬಳಿಕ ಆರ್‌ಸಿಬಿ ಡ್ರೆಸ್ಸಿಂಗ್‌ ರೂಮ್‌ ಮಂಕಾಗಿತ್ತು. ಆರ್‌ಸಿಬಿ ಬಳಗದಲ್ಲಿ ನೋವೇ ಮಡುಗಟ್ಟಿತ್ತು. ಸೋಲಿನ ಬಳಿಕ ಡ್ರೆಸ್ಸಿಂಗ್‌ ರೂಮ್‌ನಲ್ಲಿ ಆರ್‌ಸಿಬಿ ಆಟಗಾರರು ಬೇಸರದಲ್ಲಿರುವ ವಿಡಿಯೋ ಜಾಲತಾಣದಲ್ಲಿ ವೈರಲ್‌ ಆಗಿದೆ.

 

 

ಟಾಪ್ ನ್ಯೂಸ್

ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮ ಚುರುಕು: ಸಚಿವ ಎಚ್‌.ಕೆ. ಪಾಟೀಲ್‌

ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮ ಚುರುಕು: ಸಚಿವ ಎಚ್‌.ಕೆ. ಪಾಟೀಲ್‌

ಎಚ್‌ಡಿಕೆ ಕಾಲದಲ್ಲೂ ತೈಲ ದರ ಏರಿಸಿದ್ದರು: ಸಿದ್ಧರಾಮಯ್ಯ

ಎಚ್‌ಡಿಕೆ ಕಾಲದಲ್ಲೂ ತೈಲ ದರ ಏರಿಸಿದ್ದರು: ಸಿದ್ಧರಾಮಯ್ಯ

1-wewwqewq

T20 World Cup; ಐರ್ಲೆಂಡ್ ಎದುರು ಪಾಕ್ ಗೆ ಗೆಲುವಿನ ಸಮಾಧಾನ

Missing Case ಉಪ್ಪಿನಂಗಡಿ: ತಾಯಿ, ಮಗ ನಾಪತ್ತೆMissing Case ಉಪ್ಪಿನಂಗಡಿ: ತಾಯಿ, ಮಗ ನಾಪತ್ತೆ

Missing Case ಉಪ್ಪಿನಂಗಡಿ: ತಾಯಿ, ಮಗ ನಾಪತ್ತೆ

Subramanya: ವಿದ್ಯುತ್‌ ಕಂಬಕ್ಕೆ ಕಾರು ಢಿಕ್ಕಿ

Subramanya: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು

Road Mishap ಕಡಪಾಲ: ಕಾರುಗಳ ಮುಖಾಮುಖಿ ಢಿಕ್ಕಿ

Road Mishap ಕಡಪಾಲ: ಕಾರುಗಳ ಮುಖಾಮುಖಿ ಢಿಕ್ಕಿ

Kapu ಎಟಿಎಂಗೆ ಹಣ ಡ್ರಾ ಮಾಡಲು ಬಂದವರು ಕುಸಿದು ಬಿದ್ದು ವ್ಯಕ್ತಿ ಸಾವು

Kapu ಎಟಿಎಂಗೆ ಹಣ ಡ್ರಾ ಮಾಡಲು ಬಂದವರು ಕುಸಿದು ಬಿದ್ದು ವ್ಯಕ್ತಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewwqewq

T20 World Cup; ಐರ್ಲೆಂಡ್ ಎದುರು ಪಾಕ್ ಗೆ ಗೆಲುವಿನ ಸಮಾಧಾನ

1-asddasdsa

ODI ಸ್ಮೃತಿ ಮಂಧನಾ ಅಮೋಘ ಶತಕ; ಮಂಕಾದ ದಕ್ಷಿಣ ಆಫ್ರಿಕಾ

Team India; ಅಶಿಸ್ತಿನ ಕಾರಣದಿಂದ ತಂಡದಿಂದ ಹೊರಬಿದ್ದರೇ ಗಿಲ್; ಸ್ಪಷ್ಟನೆ ನೀಡಿದ ಕೋಚ್

Team India; ಅಶಿಸ್ತಿನ ಕಾರಣದಿಂದ ತಂಡದಿಂದ ಹೊರಬಿದ್ದರೇ ಗಿಲ್; ಸ್ಪಷ್ಟನೆ ನೀಡಿದ ಕೋಚ್

T20 WC: ಹೋರಾಡಿ ಸೋತು ಹೊರಬಿದ್ದ ಸ್ಕಾಟ್ಲೆಂಡ್; ಆಸೀಸ್ ಗೆಲುವಿನಿಂದ ಸೂಪರ್8 ಗೆ ಆಂಗ್ಲರು

T20 WC: ಹೋರಾಡಿ ಸೋತು ಹೊರಬಿದ್ದ ಸ್ಕಾಟ್ಲೆಂಡ್; ಆಸೀಸ್ ಗೆಲುವಿನಿಂದ ಸೂಪರ್8 ಗೆ ಆಂಗ್ಲರು

David Wiese: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಡೇವಿಡ್ ವೀಸ

David Wiese: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಡೇವಿಡ್ ವೀಸ

MUST WATCH

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

udayavani youtube

ಇಡ್ಲಿ, ವಡೆ, ಚಟ್ನಿ ಗೆ ತುಂಬಾ ಫೇಮಸ್ ಈ ಹೋಟೆಲ್

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಹೊಸ ಸೇರ್ಪಡೆ

ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮ ಚುರುಕು: ಸಚಿವ ಎಚ್‌.ಕೆ. ಪಾಟೀಲ್‌

ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮ ಚುರುಕು: ಸಚಿವ ಎಚ್‌.ಕೆ. ಪಾಟೀಲ್‌

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

ಎಚ್‌ಡಿಕೆ ಕಾಲದಲ್ಲೂ ತೈಲ ದರ ಏರಿಸಿದ್ದರು: ಸಿದ್ಧರಾಮಯ್ಯ

ಎಚ್‌ಡಿಕೆ ಕಾಲದಲ್ಲೂ ತೈಲ ದರ ಏರಿಸಿದ್ದರು: ಸಿದ್ಧರಾಮಯ್ಯ

1-wewwqewq

T20 World Cup; ಐರ್ಲೆಂಡ್ ಎದುರು ಪಾಕ್ ಗೆ ಗೆಲುವಿನ ಸಮಾಧಾನ

Missing Case ಉಪ್ಪಿನಂಗಡಿ: ತಾಯಿ, ಮಗ ನಾಪತ್ತೆMissing Case ಉಪ್ಪಿನಂಗಡಿ: ತಾಯಿ, ಮಗ ನಾಪತ್ತೆ

Missing Case ಉಪ್ಪಿನಂಗಡಿ: ತಾಯಿ, ಮಗ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.