ಕ್ರೀಡಾಲೋಕ ಸ್ತಬ್ಧ; ಕೋಟ್ಯಂತರ ರೂ. ನಷ್ಟ!
Team Udayavani, Mar 16, 2020, 7:15 AM IST
ಕೊರೊನಾ ವೈರಸ್ನಿಂದಾಗಿ ವಿಶ್ವದ ಆರ್ಥಿಕತೆಗೆ ಭಾರೀ ಹೊಡೆತ ಬಿದ್ದಿದೆ. ಇದಕ್ಕೆ ಕ್ರೀಡಾಲೋಕ ಕೂಡ ಹೊರತಾಗಿಲ್ಲ. ಭಾರತ ಸೇರಿದಂತೆ ವಿಶ್ವ ಮಟ್ಟದಲ್ಲಿ ಅದೆಷ್ಟೋ ಕ್ರೀಡೆಗಳು ಕೊರೊನಾದಿಂದಾಗಿ ನಿಂತು ಹೋಗಿವೆೆ. ವಿಶ್ವದಲ್ಲಿ ಸದ್ಯ ಯಾವುದೇ ಕ್ರೀಡಾಕೂಟಗಳು ನಡೆಯುತ್ತಿಲ್ಲ. ಬಹುಶಃ ಮಹಾಯುದ್ಧಗಳ ಕಾಲಾವಧಿ ಹೊರತುಪಡಿಸಿ ಕ್ರೀಡಾಲೋಕ ಸಂಪೂರ್ಣ ಸ್ತಬ್ಧಗೊಂಡದ್ದು ಇದೇ ಇರಬೇಕು. ಇದರಿಂದ ಕೋಟ್ಯಂತರ ರೂ. ನಷ್ಟವಾಗಿದೆ. ನಿಂತು ಹೋದ, ಮುಂದೂಡಲ್ಪಟ್ಟ ಪ್ರಮುಖ ಕ್ರೀಡಾಕೂಟಗಳ ವಿವರ ಇಲ್ಲಿದೆ.
ಕ್ರಿಕೆಟ್
– ಮಾ. 29ರಿಂದ ಆರಂಭವಾಗಬೇಕಿದ್ದ ಐಪಿಎಲ್ ಸೇರಿದಂತೆ ಭಾರತದ ವಿವಿಧ ಕ್ರಿಕೆಟ್ ಕೂಟಗಳು ಮುಂದೂಡಿಕೆ. ಐಪಿಎಲ್ ಪೂರ್ಣ ರದ್ದಾದರೆ 3,500 ಕೋಟಿ ರೂ.ನಷ್ಟವಾಗುವ ಆತಂಕ.
– ಪಿಎಸ್ಎಲ್ ಹೊರತುಪಡಿಸಿ ಐಸಿಸಿ ಆಯೋಜನೆಯ ಅಂತಾರಾಷ್ಟ್ರೀಯ ಕ್ರಿಕೆಟ್ ಕೂಟಗಳು ರದ್ದು.
ಟೆನಿಸ್
– ಮಾ. 3ರಿಂದ 7ರ ತನಕ ದುಬಾೖನಲ್ಲಿ ಆಯೋಜಿಸಲಾಗಿದ್ದ ಏಶ್ಯ-ಒಶಿಯಾನಿಯಾ ಗ್ರೂಪ್ ಟೆನಿಸ್ ಕೂಟ ಮುಂದೂಡಿಕೆ.
ಆ್ಯತ್ಲೆಟಿಕ್ಸ್
– ಮಾ. 13ರಿಂದ 15ರ ತನಕ ಚೀನದ ನಾಜಿಂಗ್ನಲ್ಲಿ ನಡೆಯಬೇಕಿದ್ದ ಆ್ಯತ್ಲೆಟಿಕ್ಸ್ ಮುಂದಿನ ವರ್ಷದ ವರೆಗೆ ಮುಂದೂಡಿಕೆ.
– ಫೆ. 12ರಿಂದ 13ರ ತನಕ ಹ್ಯಾಂಗ್ಝುನಲ್ಲಿ ನಡೆಯಬೇಕಿದ್ದ ಏಶ್ಯನ್ ಆ್ಯತ್ಲೆಟಿಕ್ಸ್ ಕೂಟ ಕೂಡ ರದ್ದು.
ಎಫ್1
– ಎ. 19ರಿಂದ ಶಾಂಘೈನಲ್ಲಿ ಆಯೋಜಿಸಲಾಗಿದ್ದ ಫಾರ್ಮುಲ 1 ಗ್ರ್ಯಾನ್ಪ್ರಿ ಕೂಟವನ್ನು ರದ್ದು ಮಾಡಲಾಗಿದೆ. ಮಾ. 21ರ ಫಾರ್ಮುಲ ಇ ಮೋಟಾರ್ ರೇಸ್ ಕೂಡ ರದ್ದಾಗಿದೆ.
ಬ್ಯಾಡ್ಮಿಂಟನ್
– ಫೆ. 1ರಿಂದ ಮಾ.2 5ರ ತನಕ ಚೀನದಲ್ಲಿ ನಡೆಯಬೇಕಿದ್ದ ಮಾಸ್ಟರ್ಸ್ ಬ್ಯಾಡ್ಮಿಂಟನ್ ಕೂಟ ಮುಂದೂಡಿಕೆ.
– ಎ. 21ರಿಂದ ಎ. 26 ತನಕ ಚೀನದ ವುಹಾನ್ನಲ್ಲಿ ನಡೆಯಲಿರುವ ವಿಶ್ವ ಬ್ಯಾಡ್ಮಿಂಟನ್ ಕೂಟ ರದ್ದುಗೊಂಡಿಲ್ಲವಾದರೂ ಕೂಟ ನಡೆಯುವುದು ಅನುಮಾನ.
ಬಾಕ್ಸಿಂಗ್
– ಮಾ. 3ರಿಂದ 11ರ ವರೆಗೆ ಚೀನದಲ್ಲಿ ನಡೆಯಬೇಕಿದ್ದ ಟೋಕೊÂ ಒಲಿಂಪಿಕ್ಸ್ ಅರ್ಹತಾ ಬಾಕ್ಸಿಂಗ್ ಕೂಟಗಳು ಚೀನದಿಂದ ಒಮಾನ್ಗೆ ವರ್ಗಾವಣೆಯಾಗಿದ್ದವು.
ಹಾಕಿ
– ಮಾ. 14, 15ರಂದು ಚೀನ, ಆಸ್ಟ್ರೇಲಿಯ ಆತಿಥ್ಯದಲ್ಲಿ ನಡೆಯಬೇಕಿದ್ದ ಪ್ರೊ ಹಾಕಿ ಲೀಗ್ ರದ್ದು. ಎಲ್ಲ ಒಲಿಂಪಿಕ್ಸ್ ಅರ್ಹತಾ ಕೂಟಗಳು ರದ್ದು.
ಬಾಸ್ಕೆಟ್ಬಾಲ್
– ಫೆ. 6ರಿಂದ 9ರ ವರೆಗೆ ಟೋಕಿಯೊ ಒಲಿಂಪಿಕ್ಸ್ ಅರ್ಹತಾ ಬಾಸ್ಕೆಟ್ಬಾಲ್ ಕೂಟ ಸರ್ಬಿಯಾಕ್ಕೆ ವರ್ಗಾವಣೆ. ನೂತನ ದಿನಾಂಕ ನಿಗದಿಯಾಗಿಲ್ಲ.
ಫುಟ್ಬಾಲ್
– ವಿಶ್ವಾದ್ಯಂತ ನಡೆಯಲಿದ್ದ ಎಲ್ಲ ಫುಟ್ಬಾಲ್ ಕೂಟಗಳನ್ನು ಫಿಫಾ ತಾತ್ಕಾಲಿಕ ರದ್ದು ಮಾಡಿದೆ.
ಗಾಲ್ಫ್
– ಮಾ. 5ರಿಂದ 8ರ ತನಕ ಚೀನದಲ್ಲಿ ಆಯೋಜನೆಗೊಂಡಿದ್ದ ಎಲ್ಪಿಜಿಎ ಗಾಲ್ಫ್ ಕೂಟಗಳು ಸಂಪೂರ್ಣ ರದ್ದು. ಕೆಲವು ಗಾಲ್ಫ್ ಕೂಟಗಳು ಚೀನದಿಂದ ಇಂಡೋನೇಶ್ಯಕ್ಕೆ ಸ್ಥಳಾಂತರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ