ಟೀಮ್‌ ಇಂಡಿಯಾ-ಆಸೀಸ್‌ ಟಿ20 ಟೈಮ್‌


Team Udayavani, Oct 7, 2017, 11:17 AM IST

07-23.jpg

ರಾಂಚಿ: ಭಾರತದ ಕ್ರೀಡಾ ಪ್ರೇಮಿಗಳಿಗೆ ಪ್ರೊ ಕಬಡ್ಡಿ, ಅಂಡರ್‌-17 ವಿಶ್ವಕಪ್‌ ಫ‌ುಟ್‌ಬಾಲ್‌, ರಣಜಿ ಹಾಗೂ ಚುಟುಕು ಕ್ರಿಕೆಟ್‌ ಸಮರವನ್ನು ಏಕಕಾಲದಲ್ಲಿ ವೀಕ್ಷಿಸುವ ಅಪೂರ್ವ ಅವಕಾಶ! ಈ “ಫ‌ುಲ್‌ ನ್ಪೋರ್ಟ್ಸ್ ಪ್ಯಾಕೇಜ್‌’ಗೆ ಅ. 7ರ ಶನಿವಾರ ಸಾಕ್ಷಿಯಾಗಲಿದೆ. ಭಾರತ-ಆಸ್ಟ್ರೇಲಿಯ ತಂಡಗಳು 3 ಪಂದ್ಯಗಳ ಸರಣಿಯ ಮೊದಲ ಟಿ-20 ಪಂದ್ಯದಲ್ಲಿ ಸೆಣಸಲಿವೆ. ತಾಣ, ಧೋನಿ ಊರಾದ ರಾಂಚಿ. 

ಏಕದಿನದಲ್ಲಿ ವಿಶ್ವ ಚಾಂಪಿಯನ್‌ ಆಸ್ಟ್ರೇ ಲಿಯಕ್ಕೆ 4-1 ಸೋಲಿನೇಟು ನೀಡಿದ ಭಾರತವೀಗ ಇದೇ ಆತ್ಮವಿಶ್ವಾಸದಲ್ಲಿ ಚುಟುಕು ಕ್ರಿಕೆಟ್‌ ಸರಣಿಯಲ್ಲೂ ಕಾಂಗರೂ ಪಡೆಯನ್ನು ಉರುಳಿಸುವ ಯೋಜನೆಯಲ್ಲಿದೆ. ಏಕದಿನದ ಸರಣಿ ಗೆಲುವು ಭಾರತವನ್ನು ಐಸಿಸಿ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿಸಿತ್ತು. ಟಿ-20 ಯಶಸ್ಸು ಟೀಮ್‌ ಇಂಡಿಯಾವನ್ನು ಗರಿಷ್ಠ ದ್ವಿತೀಯ ಸ್ಥಾನಕ್ಕೆ ಕೊಂಡೊಯ್ಯಲಿದೆ. ಆದರೆ ಇದಕ್ಕೆ 3-0 ಕ್ಲೀನ್‌ಸ್ವೀಪ್‌ ಸಾಹಸ ಅಗತ್ಯ.

ಭಾರತದ್ದೇ ಮೇಲುಗೈ: ಸದ್ಯ ರ್‍ಯಾಂಕಿಂಗ್‌ ಲೆಕ್ಕಾಚಾರದಲ್ಲಿ ಈ ಎರಡೂ ತಂಡಗಳು ಬಹಳ ಕೆಳಗಿವೆ. ಭಾರತ 5ನೇ ಸ್ಥಾನದಲ್ಲಿದ್ದರೆ (115 ಅಂಕ), ಆಸ್ಟ್ರೇಲಿಯ ಏಳರಲ್ಲಿದೆ (110). ಆಸೀಸ್‌ ಎದುರಿನ ಸಾಧನೆಯ ಲೆಕ್ಕಾಚಾರದಲ್ಲಿ ಭಾರತದ್ದೇ  ಮೇಲುಗೈ. 9-3 ಗೆಲುವಿನ ದಾಖಲೆ ಟೀಮ್‌ ಇಂಡಿಯಾ ಪರವಾಗಿದೆ. ಆಸ್ಟ್ರೇಲಿಯದಲ್ಲಿ ಆಡಲಾದ ಕಳೆದ ವರ್ಷಾರಂಭದ ಸರಣಿಯಲ್ಲಿ 3-0 ಕ್ಲೀನ್‌ಸ್ವೀಪ್‌ ಸಾಧಿಸಿದ್ದು “ಮೆನ್‌ ಇನ್‌ ಬ್ಲೂ’ ಪರಾಕ್ರಮಕ್ಕೆ ಸಾಕ್ಷಿ. ಭಾರತ-ಆಸ್ಟ್ರೇಲಿಯ ನಡುವೆ 5 ದ್ವಿಪಕ್ಷೀಯ ಟಿ-20 ಸರಣಿಗಳನ್ನು ಆಡಲಾಗಿದ್ದು, ಭಾರತ ಮೂರನ್ನು ತನ್ನದಾಗಿಸಿಕೊಂಡಿದೆ. ಒಂದರಲ್ಲಷ್ಟೇ ಸೋತಿದೆ. ಇನ್ನೊಂದು ಸರಣಿ 1-1 ಸಮಬಲಗೊಂಡಿದೆ.

ಟಿ-20 ಕ್ರಿಕೆಟ್‌ನಲ್ಲಿ ಫೇವರಿಟ್‌ ತಂಡಗಳನ್ನು ಗುರುತಿಸಬಾರದು ಎಂಬ ಮಾತಿದೆ. ಕಾರಣ, ಇಲ್ಲಿ ಏನೂ ಸಂಭವಿಸಬಹುದು. ಕೇವಲ ಒಂದು ಓವರ್‌, ಒಬ್ಬ ಆಟಗಾರನಿಂದ ಇಡೀ ಪಂದ್ಯದ ದಿಕ್ಕೇ ಬದಲಾಗಬಲ್ಲದು. ಆದರೂ ಆಸ್ಟ್ರೇಲಿಯ ವಿರುದ್ಧ ಭಾರತ ಮೇಲುಗೈ ಸಾಧಿಸಬಹುದು ಎಂಬುದು ಅನೇಕರ ಲೆಕ್ಕಾಚಾರ.

ಭಾರತದ ಬೌಲಿಂಗ್‌ ವೈವಿಧ್ಯ: ಏಕದಿನದಲ್ಲಿ ಭಾರತ ಪ್ರತಿಯೊಂದು ವಿಭಾಗದಲ್ಲೂ ಪ್ರಭುತ್ವ ಸಾಧಿಸಿತ್ತು. ಬ್ಯಾಟಿಂಗ್‌, ಬೌಲಿಂಗ್‌ ವೆರೈಟಿ ಟೀಮ್‌ ಇಂಡಿಯಾದ ಹೆಚ್ಚುಗಾರಿಕೆಯಾಗಿತ್ತು. ಇನ್ನೊಂದೆಡೆ ಚಾಂಪಿ ಯನ್ನರಿಗೆ ತಕ್ಕ ಆಟವನ್ನು ಪ್ರದರ್ಶಿಸಲು ವಿಫ‌ಲವಾದ ಆಸ್ಟ್ರೇಲಿಯ ಬಹುತೇಕ ಎಲ್ಲ ವಿಭಾಗಗಳಲ್ಲೂ ಹಿಂದುಳಿದಿತ್ತು. 20 ಓವರ್‌ಗಳ ಕ್ರಿಕೆಟ್‌ನಲ್ಲಿ ಈವರೆಗೆ ಗಮನಾರ್ಹ ನಿರ್ವಹಣೆ ತೋರದ ಆಸೀಸ್‌, ಏಕದಿನ ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳಲಿದೆ ಎಂದು ಭಾವಿಸುವುದು ತಪ್ಪಾಗಬಹುದು.

ಅವಳಿ ಸ್ಪಿನ್ನರ್‌ಗಳಾದ ಅಶ್ವಿ‌ನ್‌, ಜಡೇಜ ಗೈರಲ್ಲೂ ಭಾರತ ಚುಟುಕು ಕ್ರಿಕೆಟಿಗೆ ಅಗತ್ಯವಿರುವ ಸಮರ್ಥ ಪಡೆಯನ್ನೇ ಹೊಂದಿದೆ. 38ರ ಹರೆಯದ ಆಶಿಷ್‌ ನೆಹ್ರಾ ಆಯ್ಕೆ ಅಚ್ಚರಿಯಾಗಿ ಕಂಡರೂ ಅವರ ಡೆತ್‌ ಓವರ್‌ ಸಾಮರ್ಥ್ಯದ ಬಗ್ಗೆ ಈಗಲೂ ವಿಶ್ವಾಸ ಇಡಬಹುದಾಗಿದೆ. ಇವರಿಗೆ ಭುವನೇಶ್ವರ್‌, ಬುಮ್ರಾ ತಕ್ಕ ಜತೆಗಾರರಾಗಿ ಗೋಚರಿಸುತ್ತಾರೆ. ಸ್ಪಿನ್ನಿಗೆ ಕುಲದೀಪ್‌, ಚಾಹಲ್‌, ಪಟೇಲ್‌, ಜಾಧವ್‌ ಇದ್ದಾರೆ. ಏಕದಿನ ಸರಣಿಶ್ರೇಷ್ಠ ಪಾಂಡ್ಯ ಇಲ್ಲಿಯೂ ಸುಂಟರಗಾಳಿಯಾಗುವುದು ಖಂಡಿತ.

ಧವನ್‌ ಮರಳಿದ್ದರಿಂದ ಬ್ಯಾಟಿಂಗ್‌ ವಿಭಾಗ ಹೆಚ್ಚು ಬಲಿಷ್ಠವಾಗಿದೆ. ರೋಹಿತ್‌, ಕೊಹ್ಲಿ, ಪಾಂಡೆ, ಧೋನಿ, ಜಾಧವ್‌, ಕಾರ್ತಿಕ್‌ ಅವರಿಂದ ಉತ್ತಮ ಆಟವನ್ನು ನಿರೀಕ್ಷಿಸಲಾಗಿದೆ. ಅಂದಹಾಗೆ ಭಾರತ ಕೊನೆಯ ಸಲ ಟಿ-20 ಪಂದ್ಯದಲ್ಲಿ ಆಸ್ಟ್ರೇಲಿಯಕ್ಕೆ ಸೋತದ್ದು 2012ರ ವಿಶ್ವಕಪ್‌ನಲ್ಲಿ!

ಆಸೀಸ್‌ ಹೋರಾಟ ನಿರೀಕ್ಷೆ: ವಾರ್ನರ್‌, ಫಿಂಚ್‌, ಸ್ಮಿತ್‌, ಹೆಡ್‌ ಆಸ್ಟ್ರೇಲಿಯದ ಬ್ಯಾಟಿಂಗ್‌ ಹೀರೋಗಳು. ಏಕದಿನದಲ್ಲಿ ಮಿಂಚಿದ ಸ್ಟೊಯಿನಿಸ್‌ ಇಲ್ಲಿಲ್ಲ. ಫಾಕ್ನರ್‌ ಅವರನ್ನೂ ಮನೆಗೆ ಕಳಿಸಲಾಗಿದೆ. ಬದಲು ಆಲ್‌ರೌಂಡರ್‌ಗಳಾದ ಹೆನ್ರಿಕ್ಸ್‌, ಕ್ರಿಸ್ಟಿಯನ್‌ ಸೇರ್ಪಡೆಗೊಂಡಿದ್ದಾರೆ. ಗ್ಲೆನ್‌ ಮ್ಯಾಕ್ಸ್‌ವೆಲ್‌ ಫಾರ್ಮ್ ಬಗ್ಗೆ ಅನುಮಾನವಿದೆ. ಎಡಗೈ ವೇಗಿ ಬೆಹೆಡಾಫ್ì ಪಾದಾರ್ಪಣೆಯ ಕ್ಷಣಗಣನೆಯಲ್ಲಿದ್ದಾರೆ. ಕೋಲ್ಟರ್‌ ನೈಲ್‌, ಕಮಿನ್ಸ್‌, ಝಂಪ, ರಿಚರ್ಡ್‌ಸನ್‌ ಬೌಲಿಂಗ್‌ ಕೈಚಳಕ ತೋರಬೇಕಾದ ಅಗತ್ಯವಿದೆ. ಆಗಷ್ಟೇ ನಿಜವಾದ ಟಿ-20 ಜೋಶ್‌ ನಿರೀಕ್ಷಿಸಲು ಸಾಧ್ಯ.

ಟಾಪ್ ನ್ಯೂಸ್

D. K. Shivakumar-ಎಚ್‌ಡಿಕೆ ಜಗಳದಲ್ಲಿ ಬಿಜೆಪಿ ತಲೆಹಾಕಲ್ಲ: ಆರ್‌.ಅಶೋಕ್‌

D. K. Shivakumar-ಎಚ್‌ಡಿಕೆ ಜಗಳದಲ್ಲಿ ಬಿಜೆಪಿ ತಲೆಹಾಕಲ್ಲ: ಆರ್‌.ಅಶೋಕ್‌

JDS ಜತೆ ಮೈತ್ರಿ, ಅವಲೋಕನ ಸಭೆಯಲ್ಲಿ ನಿರ್ಧಾರ: ಮಹೇಶ ಟೆಂಗಿನಕಾಯಿ

JDS ಜತೆ ಮೈತ್ರಿ, ಅವಲೋಕನ ಸಭೆಯಲ್ಲಿ ನಿರ್ಧಾರ: ಮಹೇಶ ಟೆಂಗಿನಕಾಯಿ

ಮೇಲ್ಮನೆ ಚುನಾವಣೆ: ಬಲಗೈ ತೋರು ಬೆರಳಿಗೆ ಶಾಯಿ

Election Commission ಮೇಲ್ಮನೆ ಚುನಾವಣೆ: ಬಲಗೈ ತೋರು ಬೆರಳಿಗೆ ಶಾಯಿ

Gundlupete ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳ ಸಾವು

Gundlupete ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳ ಸಾವು

ಖರ್ಗೆ

ECI; ಮತದಾನದ ಅಂಕಿಅಂಶಗಳ ಆರೋಪ ಮಾಡಿದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಆಯೋಗದ ಕಿಡಿ

Road Mishap ದಾಂಡೇಲಿ; ಕಾರು-ದ್ವಿಚಕ್ರ ವಾಹನ ಅಪಘಾತ: ಸವಾರ ಗಂಭೀರ

Road Mishap ದಾಂಡೇಲಿ; ಕಾರು-ದ್ವಿಚಕ್ರ ವಾಹನ ಅಪಘಾತ: ಸವಾರ ಗಂಭೀರ

Jay Shah said that canceling the contract of Ishaan and Iyer was not his decision

BCCI: ಇಶಾನ್, ಅಯ್ಯರ್ ಗುತ್ತಿಗೆ ರದ್ದು ಮಾಡುವುದು ನನ್ನ ನಿರ್ಧಾರವಾಗಿರಲಿಲ್ಲ ಎಂದ ಜಯ್ ಶಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jay Shah said that canceling the contract of Ishaan and Iyer was not his decision

BCCI: ಇಶಾನ್, ಅಯ್ಯರ್ ಗುತ್ತಿಗೆ ರದ್ದು ಮಾಡುವುದು ನನ್ನ ನಿರ್ಧಾರವಾಗಿರಲಿಲ್ಲ ಎಂದ ಜಯ್ ಶಾ

BCCI will call applications for head coach role

Head Coach: ಟೀಂ ಇಂಡಿಯಾಗೆ ಹೊಸ ಕೋಚ್; ಹುಡುಕಾಟ ಆರಂಭಿಸಿದ ಬಿಸಿಸಿಐ

Colin Munro Announced International Retirement

Retired; ಟಿ20 ವಿಶ್ವಕಪ್ ನಲ್ಲಿ ಸಿಗದ ಸ್ಥಾನ; ವೃತ್ತಿಜೀವನಕ್ಕೆ ತೆರೆಎಳೆದ ಕಿವೀಸ್ ಬ್ಯಾಟರ್

34

GT Vs CSK: ನಿರ್ಗಮನ ಬಾಗಿಲಲ್ಲಿ ಗುಜರಾತ್‌ ಪ್ಲೇ ಆಫ್‌ ಜಪದಲ್ಲಿ ಚೆನ್ನೈ

1-qwewqwqe

IPL;ಪಂಜಾಬ್ ವಿರುದ್ಧ 60 ರನ್ ಗಳ ಗೆಲುವು ಸಾಧಿಸಿದ ಆರ್ ಸಿಬಿ: ಪ್ಲೇ ಆಫ್ ಆಸೆ ಜೀವಂತ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

D. K. Shivakumar-ಎಚ್‌ಡಿಕೆ ಜಗಳದಲ್ಲಿ ಬಿಜೆಪಿ ತಲೆಹಾಕಲ್ಲ: ಆರ್‌.ಅಶೋಕ್‌

D. K. Shivakumar-ಎಚ್‌ಡಿಕೆ ಜಗಳದಲ್ಲಿ ಬಿಜೆಪಿ ತಲೆಹಾಕಲ್ಲ: ಆರ್‌.ಅಶೋಕ್‌

JDS ಜತೆ ಮೈತ್ರಿ, ಅವಲೋಕನ ಸಭೆಯಲ್ಲಿ ನಿರ್ಧಾರ: ಮಹೇಶ ಟೆಂಗಿನಕಾಯಿ

JDS ಜತೆ ಮೈತ್ರಿ, ಅವಲೋಕನ ಸಭೆಯಲ್ಲಿ ನಿರ್ಧಾರ: ಮಹೇಶ ಟೆಂಗಿನಕಾಯಿ

ಮೇಲ್ಮನೆ ಚುನಾವಣೆ: ಬಲಗೈ ತೋರು ಬೆರಳಿಗೆ ಶಾಯಿ

Election Commission ಮೇಲ್ಮನೆ ಚುನಾವಣೆ: ಬಲಗೈ ತೋರು ಬೆರಳಿಗೆ ಶಾಯಿ

Gundlupete ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳ ಸಾವು

Gundlupete ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳ ಸಾವು

ಖರ್ಗೆ

ECI; ಮತದಾನದ ಅಂಕಿಅಂಶಗಳ ಆರೋಪ ಮಾಡಿದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಆಯೋಗದ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.