ಇಂದು ಜಪಾನ್ ತಲುಪಲಿದೆ ಒಲಿಂಪಿಕ್ಸ್ ಕ್ರೀಡಾಜ್ಯೋತಿ
Team Udayavani, Mar 20, 2020, 7:50 AM IST
ಟೋಕಿಯೊ : ಕೋವಿಡ್ 19 ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಟೋಕಿಯೊ ಒಲಿಂಪಿಕ್ಸ್ ನಡೆಯುವ ಬಗ್ಗೆ ಅನುಮಾನವಿದ್ದರೂ ಗ್ರೀಕ್ನಿಂದ ಹೊರಟಿರುವ ಒಲಿಂಪಿಕ್ಸ್ ಜ್ಯೋತಿ ನಿಗದಿಯಾಗಿರುವಂತೆ ಶುಕ್ರವಾರ ಜಪಾನ್ ತಲುಪಲಿದೆ.
ಒಲಿಂಪಿಕ್ಸ್ ಜ್ಯೋತಿಯನ್ನು ತರುವ ಸಲುವಾಗಿಯೇ ವಿಶೇಷ ವಿಮಾನವೊಂದನ್ನು ಸಿದ್ಧಪಡಿಸಲಾಗಿದೆ. ಇದರ ಒಂದು ಬದಿಯಲ್ಲಿ “ಟೋಕಿಯೊ 2020 ಒಲಿಂಪಿಕ್ ಟಾರ್ಚ್ ರಿಲೇ’ ಎಂದೂ ಬಾಲದ ಒಂದು ಬದಿಯಲ್ಲಿ “ಹೋಪ್ ಲೈಟ್ಸ್ ಅವರ್ ವೇ’ ಎಂದು ಇಂಗ್ಲಿಷ್ನಲ್ಲಿ
ಬರೆಯಲಾಗಿದೆ. ಈ ವಿಮಾನ ಶುಕ್ರವಾರ ಜ್ಯೋತಿಯೊಂದಿಗೆ ಜಪಾನಿಗೆ ಆಗಮಿಸಲಿದೆ.
ಅತ್ಯಂತ ಸರಳ ಕಾರ್ಯಕ್ರಮ
ಜಪಾನ್ನ ಉತ್ತರಕ್ಕಿರುವ ಮಟ್ಸುಶಿಮ ವಿಮಾನ ನಿಲ್ದಾಣದಲ್ಲಿ ಜ್ಯೋತಿಯನ್ನು ಸ್ವಾಗತಿಸುವ ಕಾರ್ಯಕ್ರಮ ನಡೆಯಲಿದೆ. ಮಾಮೂಲಿಯಾಗಿ ಬಹಳ ಅದ್ದೂರಿಯಾಗಿ ನಡೆಯುವ ಕಾರ್ಯಕ್ರಮವನ್ನು ಕೋವಿಡ್ 19 ಕಾರಣಕ್ಕೆ ಅತ್ಯಂತ ಸರಳಗೊಳಿಸಲಾಗಿದೆ. ಕೆಲವೇ ಗಣ್ಯರು ವಿಮಾನ ನಿಲ್ದಾಣದ ಫ್ಲೈಓವರ್ನಲ್ಲಿ ನಿಂತು ಜ್ಯೋತಿಗೆ ಸೆಲ್ಯೂಟ್ ಹೊಡೆಯಲಿದ್ದಾರೆ. ಹವಾಮಾನ ಸಹಕರಿಸಿದರೆ ಅಗ್ಗಿಷ್ಟಿಕೆಯನ್ನು (ಲೋಹದ ಕಡಾಯಿಯಲ್ಲಿ ಬೆಂಕಿ ಹಾಕುವುದು) ಬೆಳಗಿಸುವ ಕಾರ್ಯಕ್ರಮ ನಡೆಯಲಿದೆ.
ಮಾ. 26ರಿಂದ ರಿಲೇ…
ಈ ರಿಲೇ ಮಾ. 26ರಂದು ಪ್ರಾರಂಭವಾಗಲಿದೆ. ಇದಕ್ಕೂ ಮೊದಲು 9 ವರ್ಷದ ಹಿಂದೆ ಭೂಕಂಪ, ಸುನಾಮಿ ಮತ್ತು ಅಣುಸ್ಥಾವರ ಸ್ಫೋಟದಿಂದ ನಲುಗಿರುವ ಫುಕುಶಿಮದ ಮೂರು ಕಡೆಗಳಲ್ಲಿ ಇದನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗುವುದು.
ಕೋವಿಡ್ 19 ಕಾಟದಿಂದಾಗಿ ಈ ವರ್ಷ ಟೋಕಿಯೊದಲ್ಲಿ ಒಲಿಂಪಿಕ್ಸ್ ನಡೆಯುವುದೇ ಅನುಮಾನವಾಗಿದ್ದರೂ ಜಪಾನ್ ಮಾತ್ರ ಹಠಕ್ಕೆ ಬಿದ್ದು ನಡೆಸಲು ಮುಂದಾಗಿದೆ. ಕ್ರೀಡಾಕೂಟವನ್ನು ರದ್ದು ಪಡಿಸಲು ಇಲ್ಲವೇ ಮುಂದೂಡಲು ಜಾಗತಿಕವಾಗಿ ಬಹಳ ಒತ್ತಡವಿದೆ. ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಕೆಲವು ಸದಸ್ಯರೇ ಕ್ರೀಡಾಕೂಟ ನಡೆಸುವುದರ ವಿರುದ್ಧ ಅಪಸ್ವರ ಎತ್ತಿದ್ದಾರೆ. ಅನೇಕ ಕ್ರೀಡಾಪಟುಗಳು ಕೂಡ ಪ್ರಾಣವನ್ನು ಪಣಕ್ಕಿಟ್ಟು ಒಲಿಂಪಿಕ್ಸ್ನಲ್ಲಿ ಭಾಗವಹಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಒಲಿಂಪಿಕ್ಸ್ ಸಮಿತಿ ಮತ್ತು ಜಪಾನ್ ಸರಕಾರ ಮಾತ್ರ ಒಲಿಂಪಿಕ್ಸ್ ಕಾರ್ಯಕ್ರಮಗಳನ್ನು ಪೂರ್ವ ನಿಗದಿಯಂತೆ ನಡೆಸುತ್ತಿದೆ.
ಜಪಾನ್ಗೆ ಈ ಒಲಿಂಪಿಕ್ಸ್ ಕೂಟವನ್ನು ನಡೆಸುವುದರಲ್ಲಿ ಅದರ ರಾಜಕೀಯ ಹಿತಾಸಕ್ತಿಯೂ ಅಡಗಿದೆ. ಪ್ರಧಾನಿ ಶಿಂಜೊ ಅಬೆಗೆ ಅತೀ ದೀರ್ಘಾವಧಿಗೆ ಆಡಳಿತ ನಡೆಸಿದ ಪ್ರಧಾನಿ ಎಂಬ ತನ್ನ ಹಿರಿಮೆಯನ್ನು ಜಗತ್ತಿಗೆ ಸಾರಲು ಸಿಕ್ಕಿರುವ ಅವಕಾಶ ಇದು. ಈ ಮೂಲಕ ಜನರ ವಿಶ್ವಾಸ ಗೆಲ್ಲುವ ಹಂಚಿಕೆ ಅವರದ್ದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ