Mantralayam; 35 ಕೋಟಿ ವೆಚ್ಚದ ರಾಮ ಕಥಾ ಥೀಮ್ ಪಾರ್ಕ್ ಆರು ತಿಂಗಳಲ್ಲಿ ಉದ್ಘಾಟನೆ


Team Udayavani, Aug 31, 2023, 11:49 PM IST

1—-dsad

ರಾಯಚೂರು: ಮಂತ್ರಾಲಯದಲ್ಲಿ ಶ್ರೀರಾಘಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸ ಪ್ರಯುಕ್ತ ಬುಧವಾರ ಸಂಜೆ ಮಂಚಾಲಮ್ಮ ದೇವಸ್ಥಾನ ಪಕ್ಕದ ನದಿಗೆ ತೆರಳುವ ದಾರಿಯಲ್ಲಿ ಕಾರಿಡಾರ್‌ (ತುಂಗಾ ಮಾರ್ಗ), ಹರಿಕತಾಮೃತ ಮ್ಯೂಸಿಯಂ ಹಾಗೂ ರಾಯರ ಭಾವಚಿತ್ರದ ಅಂಚೆ ಲಕೋಟೆಯನ್ನು ಶ್ರೀಮಠದ ಸುಬುಧೇಂದ್ರ ತೀರ್ಥರು ಬಿಡುಗಡೆ ಮಾಡಿದರು.

ಶ್ರೀಮಠದ ಯೋಗೀಂದ್ರ ತೀರ್ಥರ ಸಭಾಮಂಟಪದಲ್ಲಿ ಕಾರ್ಯಕ್ರಮ ನಡೆದವು. ಈ ವೇಳೆ ಅನುಗ್ರಹ ಸಂದೇಶ ನೀಡಿದ ಶ್ರೀಗಳು, ಧಾರ್ಮಿಕವಾಗಿ ನದಿಗಳು ಬಹಳ ಅತ್ಯಂತ ಪವಿತ್ರವಾಗಿದ್ದು, ಅವುಗಳ ಮಹತ್ವ ಸಾರುವ ಕೆಲಸಕ್ಕೆ ಶ್ರೀಮಠ ಮುಂದಾಗಿದೆ. ತುಂಗಾ ಮಾರ್ಗ ಉದ್ಘಾಟಿಸುವ ಮೂಲಕ ನದಿಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ. ಬಾಕಿ ಇರುವ ಕಾಮಗಾರಿ ಆರಾಧನೆ ನಂತರ ಕೈಗೊಳ್ಳಲಾಗುವುದು. ನದಿಗಳ ಉಗಮ, ಅವುಗಳ ಪಾವಿತ್ರತೆ, ಸ್ಮರಣೆ, ಸಂಕಲ್ಪ ಸೇರಿದಂತೆ ಪುಣ್ಯ ಸ್ನಾನದ ಮಹತ್ವವನ್ನು ಭಕ್ತರಿಗೆ ಸಾರುವ ಉದ್ದೇಶ ತುಂಗಾ ನದಿ ಕಾರಿಡಾರ್‌ ಹೊಂದಲಾಗಿದೆ ಎಂದರು.

ದಾಸ ಸಾಹಿತ್ಯದ ಜಗನ್ನಾಥ ದಾಸರು ರಚಿಸಿರುವ ಹರಿಕಥಾಮೃತ ಸಾರ ಬಹಳ ಮಹತ್ವದಾಗಿದ್ದು, ಅವರ ಜೀವನ, ಕೃತಿಗಳ ಪರಿಚಯಿಸುವ ಈ ಸಂಗ್ರಹಾಲಯ ಮಾರ್ಗದರ್ಶಕವಾಗಿದ್ದು, ಇಲ್ಲಿ ಹರಿಕಥಾಮೃತಸಾರದ 32 ಸುಳಾ ಗಳ ಸಂಪೂರ್ಣವಾಗಿ ಚಿತ್ರದೊಂದಿಗೆ ಅದ್ಭುತವಾಗಿ ಮೂಡಿಬಂದಿದೆ. ಇದರ ಜತೆಗೆ ರಾಘವೇಂದ್ರ ಸ್ವಾಮಿಗಳ ಜೀವನ ಚರಿತ್ರೆ ಸಾರುವ ಸಂಗ್ರಹಾಲಯ (ಮ್ಯೂಸಿಯಂ) ಕಾರ್ಯ ಪ್ರಗತಿಯಲ್ಲಿದೆ. ಸುಮಾರು 35 ಕೋಟಿ ರೂ. ವೆಚ್ಚದಲ್ಲಿ ಮೂರು ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿರುವ ರಾಮ ಕಥಾ ಥೀಮ್ ಪಾರ್ಕ್ ಮುಂದಿನ ಆರು ತಿಂಗಳಲ್ಲಿ ಉದ್ಘಾಟನೆ ಆಗಲಿದೆ ಎಂದರು.

ಕೇಂದ್ರ ಸರ್ಕಾರ ಹಾಗೂ ಅಂಚೆ ಇಲಾಖೆ ಸಹಯೋಗದಲ್ಲಿ ರಾಘವೇಂದ್ರ ಸ್ವಾಮಿಗಳ ಭಾವಚಿತ್ರವನ್ನು ಹೊಂದಿರುವ ವಿಶೇಷ ಲಕೋಟೆ ಬಿಡುಗಡೆ ಮಾಡಲಾಗಿದೆ. ದೇಶದಲ್ಲಿ ನೆಲೆಸಿರುವ ರಾಯರ ಭಕ್ತರಿಗೆ ಅಂಚೆ ಲಕೋಟೆ ಮೂಲಕ ರಾಯರು ಮನೆಗೆ ಬರುವರು ಎಂದರು.

ಕರ್ನಾಟಕ ಅಂಚೆ ಇಲಾಖೆ ಮುಖ್ಯಸ್ಥ ರಾಜೇಂದ್ರ ಕುಮಾರ್‌, ಮೈಸೂರಿನ ಡಿ.ಪಿ ಮಧುಸೂದನ್‌, ವೆಂಕಟ ನರಸಿಂಹ ಆಚಾರ್ಯ ರಾಜಪುರೋಹಿತ್‌, ಆಂಧ್ರ ಪ್ರದೇಶದ ಧಾರ್ಮಿಕ ಪರಿಷತ್‌ ಸದಸ್ಯ ಎಸ್‌.ಗೋವಿಂದ ಹರಿ, ಲಕ್ಷಿ$¾à ಮಾಧವಿ, ರಾಜೇಶ, ಶಂಕರ್‌, ದಾಸಸಾಹಿತ್ಯ ಪ್ರಾಜೆಕ್ಟ್ ನಿರ್ದೇಶಕ ಅಪ್ಪಣ್ಣ ಆಚಾರ್ಯ, ಸೇರಿ ಇತರರು ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

Udupi ಗ್ಯಾಂಗ್‌ವಾರ್‌ ಪ್ರಕರಣ: ಮತ್ತಿಬ್ಬರ ಪತ್ತೆಗೆ ಮುಂದುವರಿದ ಶೋಧ

Udupi ಗ್ಯಾಂಗ್‌ವಾರ್‌ ಪ್ರಕರಣ: ಮತ್ತಿಬ್ಬರ ಪತ್ತೆಗೆ ಮುಂದುವರಿದ ಶೋಧ

Udupi ಪ್ರತ್ಯೇಕ ಪ್ರಕರಣ: ಆನ್‌ಲೈನ್‌ ಮೂಲಕ ಲಕ್ಷಾಂತರ ರೂ.ವಂಚನೆ

Udupi ಪ್ರತ್ಯೇಕ ಪ್ರಕರಣ: ಆನ್‌ಲೈನ್‌ ಮೂಲಕ ಲಕ್ಷಾಂತರ ರೂ.ವಂಚನೆ

Kunigal: ಲಕ್ಷ್ಮಿಪುರ ಅರಣ್ಯದಲ್ಲಿ ವ್ಯಕ್ತಿ ಅನುಮಾಸ್ಪದ ಸಾವು…

Kunigal: ಲಕ್ಷ್ಮಿಪುರ ಅರಣ್ಯದಲ್ಲಿ ವ್ಯಕ್ತಿ ಅನುಮಾಸ್ಪದ ಸಾವು…

Bonus ಬಂದಿದೆ ಎಂಬ ಸಂದೇಶ ನಂಬಿ ಒಟಿಪಿ ನೀಡಿ ಲಕ್ಷಾಂತರ ರೂ. ಕಳೆದುಕೊಂಡರು

Bonus ಬಂದಿದೆ ಎಂಬ ಸಂದೇಶ ನಂಬಿ ಒಟಿಪಿ ನೀಡಿ ಲಕ್ಷಾಂತರ ರೂ. ಕಳೆದುಕೊಂಡರು

ಈ ಭಾರಿ ಡಿಗ್ರಿ ಕೋರ್ಸ್ ಪ್ರವೇಶ ಆಫ್ ಲೈನಾ ಅಥವಾ ಆನ್‌ ಲೈನಾ? ಗೊಂದಲದಲ್ಲಿ ವಿದ್ಯಾರ್ಥಿಗಳು

ಈ ಭಾರಿ ಡಿಗ್ರಿ ಕೋರ್ಸ್ ಪ್ರವೇಶ ಆಫ್ ಲೈನಾ ಅಥವಾ ಆನ್‌ ಲೈನಾ? ಗೊಂದಲದಲ್ಲಿ ವಿದ್ಯಾರ್ಥಿಗಳು

Road Mishap ಕಾಡಬೆಟ್ಟು ಕ್ರಾಸ್‌: ಲಾರಿ ಪಲ್ಟಿಯಾಗಿ ಬಸ್‌ಗೆ ಢಿಕ್ಕಿ, ಪ್ರಯಾಣಿಕರಿಗೆ ಗಾಯ

Road Mishap ಕಾಡಬೆಟ್ಟು ಕ್ರಾಸ್‌: ಲಾರಿ ಪಲ್ಟಿಯಾಗಿ ಬಸ್‌ಗೆ ಢಿಕ್ಕಿ, ಪ್ರಯಾಣಿಕರಿಗೆ ಗಾಯ

Mangaluru: ಆಸ್ಪತ್ರೆಯಲ್ಲೇ ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ! ಜಿಮ್ ಟ್ರೈನರ್‌ ಬಂಧನ

Mangaluru: ಆಸ್ಪತ್ರೆಯಲ್ಲೇ ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ! ಜಿಮ್ ಟ್ರೈನರ್‌ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಈ ಭಾರಿ ಡಿಗ್ರಿ ಕೋರ್ಸ್ ಪ್ರವೇಶ ಆಫ್ ಲೈನಾ ಅಥವಾ ಆನ್‌ ಲೈನಾ? ಗೊಂದಲದಲ್ಲಿ ವಿದ್ಯಾರ್ಥಿಗಳು

ಈ ಭಾರಿ ಡಿಗ್ರಿ ಕೋರ್ಸ್ ಪ್ರವೇಶ ಆಫ್ ಲೈನಾ ಅಥವಾ ಆನ್‌ ಲೈನಾ? ಗೊಂದಲದಲ್ಲಿ ವಿದ್ಯಾರ್ಥಿಗಳು

2015 ರಲ್ಲಿ ಮಹಿಳೆ ಮೇಲೆ ನಡೆದ ಹಲ್ಲೆ ಪ್ರಕರಣ: ಅಪರಾಧಿಗೆ 6 ವರ್ಷ ಜೈಲು, 15 ಸಾವಿರ ದಂಡ

2015 ರಲ್ಲಿ ಮಹಿಳೆ ಮೇಲೆ ನಡೆದ ಹಲ್ಲೆ ಪ್ರಕರಣ: ಅಪರಾಧಿಗೆ 6 ವರ್ಷ ಜೈಲು, 15 ಸಾವಿರ ದಂಡ

Mysore: ಲಂಚಕ್ಕೆ ಬೇಡಿಕೆ ಇಟ್ಟ ಆಸ್ಪತ್ರೆ ವೈದ್ಯನಿಗೆ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ

Mysore: ಲಂಚಕ್ಕೆ ಬೇಡಿಕೆ ಇಟ್ಟ ಆಸ್ಪತ್ರೆ ವೈದ್ಯನಿಗೆ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ

Chikkaballapura: ಹುಲ್ಲು ಮೇಯಿಸುವಾಗ ಹೊಟ್ಟೆ ಸಿಡಿದು ಕುರಿಗಳ ಸಾವು! ಕಂಗಾಲಾದ ಮಾಲೀಕ

Chikkaballapura: ಹುಲ್ಲು ಮೇಯಿಸುವಾಗ ಹೊಟ್ಟೆ ಸಿಡಿದು ಕುರಿಗಳ ಸಾವು! ಕಂಗಾಲಾದ ಮಾಲೀಕ

Bidar: ಕಾಲೇಜು ಫೆಸ್ಟ್ ಕಾರ್ಯಕ್ರಮದ ವೇಳೆ ಗುಂಪು ಘರ್ಷಣೆ… ಪೊಲೀಸರು ದೌಡು

College Fest: ಕಾಲೇಜು ಫೆಸ್ಟ್ ಕಾರ್ಯಕ್ರಮದ ವೇಳೆ ಗುಂಪು ಘರ್ಷಣೆ… ಪೊಲೀಸರು ದೌಡು

MUST WATCH

udayavani youtube

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕನ ಆತ್ಮಹ*ತ್ಯೆ ಪ್ರಕರಣ,ಅಧಿಕಾರಿಗಳ ಭೇಟಿ

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

ಹೊಸ ಸೇರ್ಪಡೆ

Udupi ಗ್ಯಾಂಗ್‌ವಾರ್‌ ಪ್ರಕರಣ: ಮತ್ತಿಬ್ಬರ ಪತ್ತೆಗೆ ಮುಂದುವರಿದ ಶೋಧ

Udupi ಗ್ಯಾಂಗ್‌ವಾರ್‌ ಪ್ರಕರಣ: ಮತ್ತಿಬ್ಬರ ಪತ್ತೆಗೆ ಮುಂದುವರಿದ ಶೋಧ

Kadaba ನ್ಯಾಯಾಲಯದಲ್ಲಿ ಖಾಸಗಿ ದೂರು: ಕೊಂಬಾರಿನ ಐವರ ವಿರುದ್ಧ ಪ್ರಕರಣ ದಾಖಲು

Kadaba ನ್ಯಾಯಾಲಯದಲ್ಲಿ ಖಾಸಗಿ ದೂರು: ಕೊಂಬಾರಿನ ಐವರ ವಿರುದ್ಧ ಪ್ರಕರಣ ದಾಖಲು

Udupi ಪ್ರತ್ಯೇಕ ಪ್ರಕರಣ: ಆನ್‌ಲೈನ್‌ ಮೂಲಕ ಲಕ್ಷಾಂತರ ರೂ.ವಂಚನೆ

Udupi ಪ್ರತ್ಯೇಕ ಪ್ರಕರಣ: ಆನ್‌ಲೈನ್‌ ಮೂಲಕ ಲಕ್ಷಾಂತರ ರೂ.ವಂಚನೆ

Kunigal: ಲಕ್ಷ್ಮಿಪುರ ಅರಣ್ಯದಲ್ಲಿ ವ್ಯಕ್ತಿ ಅನುಮಾಸ್ಪದ ಸಾವು…

Kunigal: ಲಕ್ಷ್ಮಿಪುರ ಅರಣ್ಯದಲ್ಲಿ ವ್ಯಕ್ತಿ ಅನುಮಾಸ್ಪದ ಸಾವು…

Bonus ಬಂದಿದೆ ಎಂಬ ಸಂದೇಶ ನಂಬಿ ಒಟಿಪಿ ನೀಡಿ ಲಕ್ಷಾಂತರ ರೂ. ಕಳೆದುಕೊಂಡರು

Bonus ಬಂದಿದೆ ಎಂಬ ಸಂದೇಶ ನಂಬಿ ಒಟಿಪಿ ನೀಡಿ ಲಕ್ಷಾಂತರ ರೂ. ಕಳೆದುಕೊಂಡರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.