ಕಾಂಗ್ರೆಸ್ ಆಡಳಿತ ಬಗೆಗಿನ ಬಿಜೆಪಿ ಜಾಹೀರಾತಿಗೆ ವಾರ್ತಾ ಇಲಾಖೆ ತಡೆ
Team Udayavani, Apr 27, 2018, 3:49 PM IST
ಬೆಂಗಳೂರು:ಕಾಂಗ್ರೆಸ್ ಆಡಳಿತಾವಧಿ ಕುರಿತ ಬಿಜೆಪಿ ಜಾಹೀರಾತು ಪ್ರಸಾರ ಮಾಡದಂತೆ ವಾರ್ತಾ ಇಲಾಖೆ ಶುಕ್ರವಾರ ತಡೆ ನೀಡಿದೆ.
ಆಕ್ಷೇಪಾರ್ಹ ಅಂಶಗಳನ್ನು ಒಳಗೊಂಡಿರುವ ಬಿಜೆಪಿ ಜಾಹೀರಾತಿಗೆ ತಡೆ ನೀಡಬೇಕೆಂದು ಕೋರಿ ಕಾಂಗ್ರೆಸ್ ಮುಖಂಡರು ಗುರುವಾರ ಬಿಜೆಪಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.
ಮಾಧ್ಯಮಗಳಲ್ಲಿ ಪ್ರಸಾರವಾಗುವ ಜಾಹೀರಾತನ್ನು ಪರಿಶೀಲಿಸಿದ ಬಳಿಕ ವಾರ್ತಾ ಇಲಾಖೆ ಬಿಜೆಪಿ ಜಾಹೀರಾತು ಪ್ರಸಾರಕ್ಕೆ ತಡೆ ನೀಡಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಬಿಜೆಪಿ ನೀಡಿರುವ ಜಾಹೀರಾತು ನೀತಿ ಸಂಹಿತೆ ಉಲ್ಲಂಘನೆ ಆಗಿದ್ದು, ಜೊತೆಗೆ ವೈಯಕ್ತಿಕ ತೇಜೋವಧೆ ಮಾಡುವ ಅಂಶಗಳನ್ನು ಒಳಗೊಂಡಿದೆ ಎಂದು ಕಾಂಗ್ರೆಸ್ ದೂರು ದಾಖಲಿಸಿತ್ತು.