ಪ್ರೀತಿ, ಶಾಂತಿಯ ಸಂದೇಶ ಹೊತ್ತು ಸಾಗಿದ ಯಾತ್ರಿಕರು
Team Udayavani, Nov 6, 2019, 7:20 AM IST
ಅಟ್ಟಾರಿ ವಾಘಾ ಗಡಿ ದಾಟುತ್ತಾ ತಮ್ಮವರಿಗೆ ಕೈಬೀಸಿದ ಸಿಕ್ಖ್ ಯಾತ್ರಿಕರು.
ಲಾಹೋರ್: ಸಿಕ್ಖ್ ಧರ್ಮದ ಸ್ಥಾಪಕ ಗುರು ನಾನಕ್ ದೇವ್ ಅವರ 550ನೇ ಜನ್ಮದಿನದ ಆಚರಣೆ ಹಿನ್ನೆಲೆಯಲ್ಲಿ ಸುಮಾರು 2 ಸಾವಿರ ಭಾರತೀಯ ಸಿಕ್ಖ್ ಯಾತ್ರಿಕರು ಮಂಗಳವಾರ ಪಾಕಿಸ್ಥಾನದ ಗುರುದ್ವಾರ ನನ್ಕಾನಾ ಸಾಹಿಬ್ ತಲುಪಿದ್ದಾರೆ. ಇದೇ ತಿಂಗಳ 9ರಂದು ಐತಿಹಾಸಿಕ ಕರ್ತಾರ್ಪುರ ಕಾರಿಡಾರ್ ಲೋಕಾರ್ಪಣೆಗೊಳ್ಳುತ್ತಿರುವುದು ಇವರ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ನಾವು ಪ್ರೀತಿ ಮತ್ತು ಶಾಂತಿಯ ಸಂದೇಶ ಹೊತ್ತು ತಂದಿದ್ದೇವೆ ಎಂದು ಯಾತ್ರಿಕರು ತಿಳಿಸಿದ್ದಾರೆ.
ವಾಘಾ ಗಡಿಯ ಮೂಲಕ 2,200 ಯಾತ್ರಿಕರು ಪಾಕಿಸ್ಥಾನ ಪ್ರವೇಶಿಸಿದ್ದು, ಅವರನ್ನು ಇವಾಕ್ವೀ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ನ ಹಿರಿಯ ಅಧಿಕಾರಿಗಳು ಬರಮಾಡಿಕೊಂಡಿದ್ದಾರೆ. ಬಳಿಕ ಯಾತ್ರಿಕರು ಗುರುದ್ವಾರ ನನ್ಕಾನಾ ಸಾಹಿಬ್ಗೆ ತೆರಳಿದ್ದಾರೆ. ವಾಸದ ಅವಧಿಯಲ್ಲಿ ಅವರು ಪಂಜಾಬ್ ಪ್ರಾಂತ್ಯದ ಇತರೆ ಗುರುದ್ವಾರಗಳಿಗೂ ಭೇಟಿ ನೀಡಲಿದ್ದಾರೆ.
9ರಂದು ನಡೆಯುವ ಕರ್ತಾರ್ಪುರ ಕಾರಿಡಾರ್ ಉದ್ಘಾಟನೆಗೆ ಹಾಗೂ 12ರಂದು ಗುರುನಾನಕ್ ದೇವ್ರ ಜನ್ಮದಿನದ ಕಾರ್ಯಕ್ರಮಕ್ಕೆ ಅವರು ಸಾಕ್ಷಿಯಾಗಲಿದ್ದಾರೆ. ನ.14ರಂದು ಸ್ವದೇಶಕ್ಕೆ ಮರಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚಿಕಿತ್ಸೆ ವೆಚ್ಚ ಭರಿಸಲಾಗದೆ ಹೆಂಡತಿಯನ್ನೇ ಕೊಂದ!
Sunita williams ಬಾಹ್ಯಾಕಾಶ ಯಾನ 90 ನಿಮಿಷಗಳಿದ್ದಾಗ ರದ್ದು!
Met Gala 2024: ಇವೆಂಟ್ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್ ಫೇಕ್ ಫೋಟೋ ವೈರಲ್
India-born ಸುನೀತಾ ವಿಲಿಯಮ್ಸ್ ಇಂದು 3ನೇ ಬಾರಿ ನಭಕ್ಕೆ!: ಗಣೇಶನ ವಿಗ್ರಹ ಬಾಹ್ಯಾಕಾಶಕ್ಕೆ!
China; ಶಕ್ತಿಶಾಲಿ ನೌಕೆ ಕಾರ್ಯಾಚರಣೆ ಆರಂಭ: ವಿಶೇಷತೆಯೇನು?