ವಿಕ್ರಂ ಲ್ಯಾಂಡರ್ ಕುರಿತು ಹೊಸ ಮಾಹಿತಿ ನೀಡಲಿದೆಯೇ ನಾಸಾದ ತಪಾಸಣಾ ನೌಕೆ?
Team Udayavani, Sep 16, 2019, 9:26 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಇಸ್ರೋದ ಐತಿಹಾಸಿಕ ಚಂದ್ರಯಾನ-2ರ ಅಂತಿಮ ಹಂತ ‘ವಿಕ್ರಂ ಲ್ಯಾಂಡರ್’ನ ಸಾಫ್ಟ್ ಲ್ಯಾಂಡಿಂಗ್ ವಿಫಲಗೊಂಡ ಬಳಿಕ ಚಂದ್ರನ ನೆಲದಲ್ಲಿ ಬಿದ್ದಿರುವ ಆ ನೌಕೆಯೊಂದಿಗೆ ಸಂವಹನ ನಡೆಸಲು ಇಸ್ರೋ ಪ್ರಯತ್ನಗಳನ್ನು ಮಾಡುತ್ತಲೇ ಇದೆ. ಇದೇ ಸಂದರ್ಭದಲ್ಲಿ ಇಸ್ರೋ ಸಹಾಯಕ್ಕೆ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಬರುವ ಮೂಲಕ ಭಾರತದ ಚಂದ್ರಯಾನ -2ರ ಯಶಸ್ಸಿನ ಆಸೆಗೆ ಜೀವ ತುಂಬಿತ್ತು.
ವಿಕ್ರಂ ಲ್ಯಾಂಡರ್ ನಲ್ಲಿರುವ ಬ್ಯಾಟರಿಯ ಕಾರ್ಯನಿರ್ವಹಣಾ ಅವಧಿಯು 14 ದಿನಗಳದ್ದಾಗಿದ್ದು ಅಷ್ಟರೊಳಗೆ ಈ ನೌಕೆಯೊಂದಿಗೆ ಸಂಪರ್ಕ ಸಾಧಿಸಿ ಅದರೊಳಗಿರುವ ಪ್ರಗ್ಯಾನ್ ರೋವರ್ ಅನ್ನು ಚಂದ್ರನ ನೆಲದಲ್ಲಿ ಇಳಿಸಬೇಕಾಗಿರುವ ಮಹತ್ವದ ಜವಾಬ್ದಾರಿ ಇಸ್ರೋ ವಿಜ್ಞಾನಿಗಳ ಮೇಲಿದೆ. ಆದರೆ ಈ ಕಾರ್ಯಕ್ಕೆ ಇನ್ನು ಉಳಿದಿರುವುದು ಕೇವಲ 7 ದಿನಗಳು ಮಾತ್ರ. ಈ ನಡುವೆ ನಾಸಾ ಅಂಗಳದಿಂದ ಆಶಾದಾಯಕ ಸುದ್ದಿಯೊಂದು ಹೊರಬಿದ್ದಿದೆ.
ನಾಸಾ ಈಗಾಗಲೇ ಹಾರಿಬಿಟ್ಟಿರುವ ಚಂದ್ರ ಅಧ್ಯಯನ ನೌಕೆಯೊಂದು ಮಂಗಳವಾರದಂದು ವಿಕ್ರಂ ಲ್ಯಾಂಡರ್ ಬಿದ್ದಿರುವ ಪ್ರದೇಶದ ಸಮೀಪದಲ್ಲಿ ಹಾರಿಹೋಗಲಿದೆ. ಇದರಿಂದಾಗಿ ಸದ್ಯ ಸಂವಹನ ಕಳೆದುಕೊಂಡಿರುವ ವಿಕ್ರಂ ಕುರಿತಾಗಿ ಯಾವುದಾದರೂ ಹೊಸ ಮಾಹಿತಿಗಳು ಸಿಗಬಹುದೇ ಎಂಬ ವಿಶ್ವಾಸ ಇಸ್ರೋ ವಿಜ್ಞಾನಿಗಳದ್ದಾಗಿದೆ.
ಇದೇ ಸಂದರ್ಭದಲ್ಲಿ ನಾಸಾದ ಈ ನೌಕೆ ವಿಕ್ರಂ ಲ್ಯಾಂಡರ್ ನ ಸದ್ಯದ ಪರಿಸ್ಥಿತಿಯ ಚಿತ್ರಗಳನ್ನೂ ಸಹ ತೆಗೆದು ಅದನ್ನು ನಾಸಾ ಕೇಂದ್ರಕ್ಕೆ ಕಳುಹಿಸಿಕೊಡುವ ನಿರೀಕ್ಷೆ ಇದೆ. ಇದರಿಂದ ಇಸ್ರೋ ವಿಜ್ಞಾನಿಗಳಿಗೆ ಇನ್ನ ಉಳಿದಿರುವ ಕೆಲವೇ ಕೆಲವು ದಿನಗಳಲ್ಲಿ ವಿಕ್ರಂ ಜೊತೆ ಸಂವಹನ ಸಾಧಿಸಲು ಸಾಧ್ಯವಾಗುವಂತಹ ಮಹತ್ವದ ಮಾಹಿತಿಗಳು ಲಭ್ಯವಾಗಲಿದಯೇ ಎಂಬ ಕುತೂಹಲ ಸದ್ಯಕ್ಕಂತೂ ಎಲ್ಲರಲ್ಲೂ ಮೂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್