ಎಫ್.ಎಟಿ.ಎಫ್. ಗ್ರೇ ಲಿಸ್ಟ್: ಗುರಿ ಮುಟ್ಟುವ ವಿಶ್ವಾಸ ವ್ಯಕ್ತಪಡಿಸಿದ ಪಾಕ್ ಸಚಿವ ಖುರೇಶಿ
Team Udayavani, Oct 20, 2019, 10:25 PM IST
ಇಸ್ಲಾಮಾಬಾದ್: ಉಗ್ರರಿಗೆ ಆರ್ಥಿಕ ನೆರವು ನೀಡುವುದನ್ನು ತಡೆಗಟ್ಟುವಲ್ಲಿ ಹಾಗೂ ಹಣ ಅಕ್ರಮ ವರ್ಗಾವಣೆ ನಿಯಂತ್ರಿಸುವಲ್ಲಿ ವಿಫಲವಾಗಿರುವ ಪಾಕಿಸ್ಥಾನವನ್ನು ಹಣಕಾಸು ಕಾರ್ಯಪಡೆ (ಎಫ್.ಎಟಿ.ಎಫ್.) ಗ್ರೇ ಪಟ್ಟಿಯಲ್ಲೇ ಉಳಿಸಿಕೊಂಡಿದ್ದು, ಇದರಿಂದ ಹೊರ ಬರಲು ಪಾಕ್ ಕಠಿನ ಕ್ರಮಗಳನ್ನು ಪಾಲಿಸಲಿದೆ ಎಂದು ಪಾಕ್ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಶಿ ಹೇಳಿದ್ದಾರೆ.
ಇದಕ್ಕಾಗಿ ತಮಗೆ ನೀಡಿರುವ ಗಡುವಿನೊಳಗೆ ಕಠಿನ ಕ್ರಮಗಳ ಮೂಲಕ ಗ್ರೇ ಲಿಸ್ಟ್ ನಿಂದ ಹೊರ ಬರಲು ಪ್ರಯತ್ನಿಸುವುದಾಗಿ ಸಚಿವ ಖುರೇಶಿ ಹೇಳಿದ್ದಾರೆ. ತಮ್ಮ ಗುರಿಯನ್ನು 2020ರ ಸುಮಾರಿಗೆ ನಾವು ತಲುಪಲಿದ್ದೇವೆ ಎಂಬ ವಿಶ್ವಾಸವನ್ನು ಖುರೇಶಿ ವ್ಯಕ್ತಪಡಿಸಿದ್ದಾರೆ. 2020ರ ಫೆಬ್ರವರಿ ಒಳಗೆ ಪಾಕ್ ಇದನ್ನು ಕೈಗೊಳ್ಳುವಲ್ಲಿ ವಿಫಲವಾದರೆ ಕಪ್ಪು ಪಟ್ಟಿಗೆ ಬೀಳಲಿದೆ. ಭಯೋತ್ಪಾದಕರ ನಿಗ್ರಹಕ್ಕಾಗಿ ರೂಪಿಸಿರುವ ಕಾರ್ಯಯೋಜನೆಯನ್ನು ಪಾಕಿಸ್ಥಾನ ಪೂರ್ಣಗೊಳಿಸದಿದ್ದರೆ ಸೂಕ್ತ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ಸಭೆಯಲ್ಲಿ ನೀಡಲಾಗಿತ್ತು.
ಭಾರತದಲ್ಲಿ ಸರಣಿ ದಾಳಿ ನಡೆಸಿರುವ ಲಷ್ಕರ್ ಎ ತೊಯ್ಬಾ ಮತ್ತು ಜೈಷ್ ಎ ಮೊಹಮ್ಮದ್ ಮೊದಲಾದ ಉಗ್ರ ಸಂಘಟನೆಗಳಿಗೆ ವಿವಿಧ ಮೂಲಗಳಿಂದ ಲಭಿಸುವ ಹಣಕಾಸಿನ ನೆರವನ್ನು ನಿಯಂತ್ರಿಸುವುದು ಸೇರಿದಂತೆ 27 ಕಾರ್ಯಯೋಜನೆಗಳನ್ನು ಪಾಕ್ ಗೆ ನೀಡಲಾಗಿತ್ತು. ಆದರೆ ಅವುಗಳ ಪೈಕಿ ಕೇವಲ ಐದನ್ನು ಮಾತ್ರ ನಿರ್ವಹಿಸಿದೆ ಎಂದು ಎಫ್.ಎಟಿ.ಎಫ್. ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ