ಸಾವಿನ ಮನೆ ಹೊಕ್ಕ ಸ್ಪೇನ್‌ : ಈಗ ನಿರುದ್ಯೋಗದ ತೂಗುಗತ್ತಿ


Team Udayavani, Apr 3, 2020, 12:15 PM IST

ಸಾವಿನ ಮನೆ ಹೊಕ್ಕ ಸ್ಪೇನ್‌ : ಈಗ ನಿರುದ್ಯೋಗದ ತೂಗುಗತ್ತಿ

ಸ್ಪೇನ್‌: ಜಗತ್ತಿನ ಮತ್ತೂಂದು ಆರ್ಥಿಕ ಸಂಕಷ್ಟಕ್ಕೆ ಕೋವಿಡ್ 19 ವೈರಸ್‌ ಕಾರಣವಾಗಿದೆ.

ಯುರೋಪಿನ ಎರಡನೇ ಅತಿ ಹೆಚ್ಚು ಕೋವಿಡ್ 19 ಪ್ರಕರಣ ದಾಖಲಾದ ಸ್ಪೇನ್‌ ಸೋಂಕಿನ ವಿರುದ್ಧ ಹೋರಾಡಲು ಕಟ್ಟುನಿಟ್ಟಿನ ಕ್ರಮಗಳನ್ನು ಹೇರಿದೆ. ಇದರಿಂದ ಸುಮಾರು 9 ಲಕ್ಷ ಉದ್ಯೋಗ ನಷ್ಟವಾಗಿದೆ.

ಮಾರ್ಚ್‌ ನ ವರದಿಯಂತೆ ದೇಶದಲ್ಲಿ ನಿರುದ್ಯೋಗ ಗರಿಷ್ಠ ಮಟ್ಟದಲ್ಲಿ ಏರಿಕೆಯಾಗಿದೆ. ಇದರಿಂದ ಯುರೋಪ್‌ ವಲಯದಲ್ಲಿ ಹೆಚ್ಚು ನಿರುದ್ಯೋಗ ಹೊಂದಿದ ರಾಷ್ಟ್ರ ಸ್ಪೇನ್‌ ಎಂಬಂತಾಗಿದೆ.

ಮಾರ್ಚ್‌ ನಲ್ಲಿ ಕೋವಿಡ್ 19 ದೇಶ ಪೂರ್ತಿ ಹಬ್ಬಿದ ಪರಿಣಾಮ ಎಲ್ಲಾ ಉದ್ಯೋಗ ವಲಯಗಳನ್ನು ಮುಚ್ಚಿತ್ತು. ಇದೇ ಉದ್ಯೋಗ ನಷ್ಟವಾಗಲು ಪ್ರಮುಖ ಕಾರಣವಾಗಿದೆ.

ಲಾಕ್‌ ಡೌನ್‌ ಪ್ರಾರಂಭವಾದಾಗಿನಿಂದ ಸುಮಾರು 5.50 ಲಕ್ಷ ಅಸಂಘಟಿತ ನೌಕರರು ಸೇರಿದಂತೆ 8,98,822 ಮಂದಿ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ. ಸ್ಪೇನ್‌ನ ಅಧಿಕೃತ ನಿರುದ್ಯೋಗ ಅಂಕಿ-ಅಂಶವು 3.5 ದಶಲಕ್ಷಕ್ಕೆ ಏರಿದೆ. ಇದು ಏಪ್ರಿಲ್‌ 2017 ರ ಅನಂತರದ ಗರಿಷ್ಠ ಮಟ್ಟ. ಮುಖ್ಯವಾಗಿ ಪ್ರವಾಸೋದ್ಯಮ ಮತ್ತು ನಿರ್ಮಾಣ ಕ್ಷೇತ್ರಗಳಲ್ಲಿ ಹೆಚ್ಚು ಉದ್ಯೋಗ ನಷ್ಟ ಸಂಭವಿಸಿದೆ.

ವೈರಸ್‌ ವಿರುದ್ಧ ಹೋರಾಡಲು ವಿಧಿಸಲಾದ ಕ್ರಮಗಳ ಆರ್ಥಿಕ ಪರಿಣಾಮದ ಬಗ್ಗೆ ಹಲವು ಸಂಸ್ಥೆಗಳು ವರದಿಯನ್ನು ನೀಡಿವೆ. ವಿಶ್ವದಾದ್ಯಂತ 25 ದಶಲಕ್ಷ ಉದ್ಯೋಗಗಳು ನಷ್ಟವಾಗಬಹುದು ಎಂದು ಯುಎನ್‌ ವರದಿ ಅಂದಾಜಿಸಿದೆ.
ಈ ಮಧ್ಯೆ ಸ್ಪೇನ್‌ನಲ್ಲಿ 10,003 ಜನರು ಕೋವಿಡ್‌ -19 ನಿಂದ ಸಾವನ್ನಪ್ಪಿದ್ದಾರೆ. ದೃಢಪಡಿಸಿದ ಪ್ರಕರಣಗಳ ಸಂಖ್ಯೆ ಬುಧವಾರ 102,136 ರಿಂದ 110,238ಕ್ಕೆ ಏರಿದೆ. ವಿಶ್ವದ ಅತಿ ಹೆಚ್ಚು ಸಾವಿನ ಸಂಖ್ಯೆ 13,155 ಮತ್ತು 110,000ಕ್ಕೂ ಹೆಚ್ಚು ಪ್ರಕರಣಗಳು ಇಟಲಿಯಲ್ಲಿ ದಾಖಲಾಗಿವೆ.

ಆರ್ಥಿಕ ಮಹಾ ಕುಸಿತ
ಗುರುವಾರ, ಇಟಲಿಯ ಪ್ರಮುಖ ವ್ಯಾಪಾರ ಸಂಘವು ವರ್ಷದ ಎರಡನೇ ತ್ರೆ„ಮಾಸಿಕದಲ್ಲಿ ಕೈಗಾರಿಕಾ ಉತ್ಪಾದನೆಯು ಶೇ. 15ರ ವರೆಗೆ ಇಳಿಯಬಹುದು ಎಂದು ಹೇಳಿದೆ.

ಜರ್ಮನಿಯ ಆರ್ಥಿಕ ಸಚಿವ ಪೀಟರ್‌ಆಲ್ಟ್ ಮೇಯರ್‌ ದೇಶದ ಒಟ್ಟು ದೇಶೀಯ ಉತ್ಪನ್ನದ ನಷ್ಟವನ್ನು ಅಂದಾಜಿಸಿದ್ದಾರೆ. 2009 ರ ಆರ್ಥಿಕ ಬಿಕ್ಕಟ್ಟಿನ ಅವಧಿಗಿಂತ ಈ ವರ್ಷ ದೊಡ್ಡ ಕುಸಿತವನ್ನು ಕಾಣಬಹುದು ಎಂದಿದ್ದಾರೆ.

ಟಾಪ್ ನ್ಯೂಸ್

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.