ಮಗುವನ್ನು ಬೆನ್ನಲ್ಲಿ ಹೊತ್ತೊಯ್ಯುತ್ತಿದ್ದ ತಾಯಿಯ ಬಂಧನ ; ಇಲ್ಲಿದೆ ಕಾರಣ!
Team Udayavani, Jan 10, 2020, 9:40 PM IST
ಆಫ್ರಿಕಾದ ದೇಶ ಉಗಾಂಡದಲ್ಲಿ ಬೆನ್ನ ಮೇಲೆ ಮಗುವನ್ನು ಹೊತ್ತುಕೊಂಡಿದ್ದ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಶ್ಚರ್ಯವಾಯಿತೇ? ಆದರೆ ಮಹಿಳೆ ತನ್ನ ಬೆನ್ನ ಮೇಲೆ ಹೊತ್ತುಕೊಂಡಿದ್ದಿದ್ದು ಜೀವಂತ ಮಗುವನ್ನಲ್ಲ ಬದಲಾಗಿ ಮಗುವಿನ ರೂಪದಲ್ಲಿದ್ದ ಗೊಂಬೆಯನ್ನು ಮತ್ತು ಆ ಗೊಂಬೆಯಲ್ಲಿ ನಿಷೇಧಿತ ಕಾಸ್ಮೆಟಿಕ್ಸ್ ಅನ್ನು ಸಾಗಿಸಲಾಗುತ್ತಿತ್ತು.
On face value, it’s a mother carrying a child on her back.
In reality,it’s a smuggler bringing in carefully concealed banned cosmetics from DRC.
Intel had been gathered about this smuggling mode.Mpondwe enforcement nabbed her as she crossed via a shallow point of River Rubiiha. pic.twitter.com/I3gQVO6e4k
— Uganda Revenue Authority (@URAuganda) January 8, 2020
ತಮಗೆ ಸಿಕ್ಕಿದ ಖಚಿತ ಮಾಹಿತಿ ಮೇರೆಗೆ ಕಾಂಗೋ ಗಣರಾಜ್ಯದ ಗಡಿ ಭಾಗದಲ್ಲಿ ಸಂಚರಿಸುತ್ತಿದ್ದ ಬಸ್ಸೊಂದನ್ನು ನಿಲ್ಲಿಸಿ ಪೊಲೀಸರು ಅದರಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬೆನ್ನಲ್ಲಿದ್ದ ಮಗುವಿನ ರೂಪದ ಗೊಂಬೆಯನ್ನು ತಪಾಸಣೆ ನಡೆಸಿದಾಗ ಅದರಲ್ಲಿ ಈ ನಿಷೇಧಿತ ಕಾಸ್ಮೆಟಿಕ್ಸ್ ಸಾಗಿಸುತ್ತಿದ್ದ ವಿಷಯ ಬಯಲಾಗಿದೆ ಎಂದು ಪೊಲೀಸ್ ಅಧಿಕಾರಿ ಇಯಾನ್ ರುಮಾನ್ಯಿಕ ಅವರು ಸ್ಥಳೀಯ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ಚರ್ಮಕ್ಕೆ ಹೊಳಪನ್ನು ನೀಡುವ ಸೌಂದರ್ಯವರ್ಧಕಗಳನ್ನು ಉಗಾಂಡಕ್ಕೆ ಭಾರೀ ಪ್ರಮಾಣದಲ್ಲಿ ಕಳ್ಳಸಾಗಾಣಿಕೆ ಮಾಡಲಾಗುತ್ತದೆ. ಈ ರೀತಿಯ ಸೌಂದರ್ಯವರ್ಧಕಗಳಲ್ಲಿ ಪಾದರಸ ಹಾಗೂ ಹೈಡ್ರೋಕ್ವಿನೈನ್ ಎಂಬ ವಿಷಕಾರಿ ಅಂಶಗಳಿರುವುದರಿಂದ ಉಗಾಂಡ ಆಡಳಿತವು ಈ ಸೌಂದರ್ಯವರ್ಧಕಗಳ ಮಾರಾಟಕ್ಕೆ ನಿಷೇಧವನ್ನು ಹೇರಿದೆ ಎಂದು ಬಿಬಿಸಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್