ಸಂಗೀತದ ಹೊಸ ಅಲೆ ಸೃಷ್ಟಿಸಿ


Team Udayavani, Dec 19, 2018, 1:53 PM IST

19-december-10.gif

ಹಿಪ್‌-ಅಪ್‌ ಸಾಂಗ್‌ ಎನ್ನುವುದು ಈ ಜಮಾನದ ಹೊಸ ಸಂಗೀತ. ಇದರ ಅಭಿಮಾನಿಗಳು ತುಂಬಾ ಮಂದಿ ಇದ್ದಾರೆ. ಇದರಿಂದ ಈ ಹಿಪ್‌ ಅಪ್‌ ಮಾಡರ್ನ್ ರೂಪ ಪಡೆದು ರ್ಯಾಪ್‌ ಎಂದಾಗಿದೆ. ಹೌದು ವೆಸ್ಟರ್ನ್ ಮ್ಯೂಸಿಕ್‌ ನ ಹೊಸ ಅಲೆ ‘ರ್ಯಾಪ್‌’ ಈಗ ಎಲ್ಲಡೆ ಪಸರಿಸುತ್ತಿದೆ. ಇದರಿಂದ ಹಲವು ಭಾಷೆಗಳಲ್ಲಿ ಈ ರ್ಯಾಪ್‌ ಸಾಂಗ್‌ ಸದ್ದು ಮಾಡುತ್ತಿದೆ. ಹೊಸ ಹಾಡುಗಾರರರು ಹಾಗೂ ವಿಭಿನ್ನ ಸಂಗೀತದ ಪ್ರಭೇದಕ್ಕೆ ಇದು ನಾಂದಿ ಹಾಡಿದೆ.

ಸ್ನೂಪ್‌ ಡಾಗ್‌, ಲಿಲ್‌ ವಾಯಿನೇ, ಓಶಿಯಾ ಜಾಕ್ಸೆನ್‌, ಎಮಿನೆಮ್‌ ಮುಂತಾದವರು ಇಂಗ್ಲಿಷ್‌ ಪಾಪ್ಯುಲರ್‌ ಸಿಂಗರ್‌ಗಳಾದರೆ, ಹನಿಸಿಂಗ್‌, ಜಾಜ್‌, ಜೆ ಸ್ಟಾರ್‌ ಹಿಂದಿ ಫೇಮಸ್‌ ರ್ಯಾಪರ್. ಅದರಂತೆ ಇದು ಕನ್ನಡ ಭಾಷೆಗೂ ಕಾಲಿಟ್ಟಿದ್ದು ಚಂದನ್‌ ಶೆಟ್ಟಿ, ಆಲ್‌ಒಕೆ, ಎಂ.ಸಿ. ಬಿಜ್ಜು, ರಾಹುಲ್‌ ಡಿಟ್ಟು ಮೊದಲಾದವರು ಹೊಸ ಅಲೆ  ಸೃಷ್ಟಿಸುತ್ತಿದ್ದಾರೆ.

ಏನಿದು ರ್ಯಾಪ್‌
ಪ್ರಾಸ ಪದಗಳ ಜೋಡಣೆ ಮೂಲಕ ಸಂಗೀತ ರಚಿಸಿ ಅದನ್ನು ಅತ್ಯಂತ ವೇಗವಾಗಿ ಹಾಗೂ ಸ್ಪಷ್ಟವಾಗಿ ಹಾಡುವ ಒಂದು ವಿಧಾನವೇ ರ್ಯಾಪ್‌. ಗದ್ಯವನ್ನು ಪದ್ಯದ ದಾಟಿಯಲ್ಲಿ ನಿರೂಪಿಸುವುದು ಇಲ್ಲಿನ ವಿಶೇಷ. ಬ್ಯಾಕ್‌ಗ್ರೌಂಡ್‌ ಮ್ಯೂಸಿಕ್‌ ಕಂಪೋಸಿಶನ್‌ ಜತೆಗೆ ಪದ ಪುಂಜಗಳನ್ನು ರಾಗ, ತಾಳಕ್ಕೆ ತಕ್ಕಂತೆ ಹಾಡುವುದು ಇದರ ವಿಶೇಷತೆ.

ಥೀಮ್‌ ಹೊಂದಿರುವ ರ್ಯಾಪ್‌
ರ್ಯಾಪ್‌ ಸಾಂಗ್‌ಗಳು ಪ್ರಾರಂಭವಾದದ್ದು ಬಡವರ ಅಥವಾ ಶೋಷಣೆಗೊಳಗಾದವರ ಪರವಾಗಿ. ಹೊಸ ಮಾದರಿಯಲ್ಲಿ ಅವರಿಗೆ ನ್ಯಾಯ ದಕ್ಕಿಸಿಕೊಡುವ ಉದ್ದೇಶದಿಂದ ಪಾಶ್ಚಾತ್ಯ ದೇಶಗಳಲ್ಲಿ ಇದು ಆರಂಭವಾಯಿತು. ಬಳಿಕ ಥೀಮ್‌ ಗಳನ್ನಿಟ್ಟು ಜಾಗೃತಿ ಅಥವಾ ಇನ್ಯಾವುದೇ ಉದ್ದೇಶದಿಂದ ರಚಿಸಲ್ಪಡುತ್ತಿವೆ. ಒಟ್ಟಿನಲ್ಲಿ ಪ್ರತಿಯೊಂದು ರ್ಯಾಪ್‌ ಸಾಂಗ್‌ ಒಂದು ಥೀಮ್‌ ಹೊಂದಿರುತ್ತದೆ.

ಕಲಿಕೆ ಹೇಗೆ?
ಇದು ಸಾಮಾನ್ಯ ಸಂಗೀತಕ್ಕಿಂತ ವಿಭಿನ್ನವಾದ ಕಾರಣ ಇದನ್ನು ಕಲಿಯಲು ಆಸಕ್ತಿ ಇರುವುದು ಮುಖ್ಯ. ಅನಂತರ ಯಾವುದೇ ಭಾಷೆಯ ಉಚ್ಚಾರ ಹಾಗೂ ನಿರರ್ಗಳ ಮಾತುಗಾರಿಕೆಗೆ ಇಲ್ಲಿ ಪ್ರಾಶಸ್ತ್ಯ. ಇಷ್ಟಿದ್ದರೆ ಮ್ಯೂಸಿಕ್‌ ಸ್ಕೂಲ್‌ ಗಳು ರ್ಯಾಪ್‌ ಗಳಿಗೆ ತರಬೇತಿಯನ್ನು ನೀಡುತ್ತಾರೆ. ಇದರಲ್ಲಿ ಈಗ ಇಂಗ್ಲಿಷ್‌, ಹಿಂದಿ ಭಾಷೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ. ಡಿಸ್ಕ್ ಜಾಕಿಗಳು ಇವುಗಳನ್ನು ಹೆಚ್ಚು ಕಲಿತು ಹೊಸ ಟ್ರೆಂಡ್‌ ಸೃಷ್ಟಿಸುತ್ತಿದ್ದಾರೆ. ಇದಕ್ಕಾಗಿ ಡಿಪ್ಲೋಮಾ ಕೋರ್ಸ್‌ಗಳು ಇವೆ.

ಶಾಲೆ, ಕಾಲೇಜು ಜೀವನದಲ್ಲೇ ಪದ ಬಳಕೆಗಳ ಬಗ್ಗೆ ಆಸಕ್ತಿ ತೋರಿಸಿ ಸ್ವಲ್ಪ ಸಂಗೀತ ಕಲಿತರೆ ನೀವೂ ರ್ಯಾಪ್‌ ಸಂಗೀತಗಾರರು ಆಗಬಹುದು. ಇದರಲ್ಲೇ ಫ‌ುಲ್‌ ಟೈಮ್‌ ಕೆಲಸ ಮಾಡಬೇಕೆಂದಿಲ್ಲ. ಹವ್ಯಾಸವಾಗಿಯೂ ಮುಂದುವರಿಸಬಹುದು. ಈಗ ಸಾಮಾಜಿಕ ಜಾಲತಾಣಗಳು ಒಂದು ವೇದಿಕೆ ಆಗಿರುವುದರಿಂದ ನೀವು ರಚಿಸಿದ, ಹಾಡಿ ಹಾಡುಗಳನ್ನು ಇಲ್ಲಿ ಅಪ್ಲೋಡ್‌ ಮಾಡಿ ಜನಪ್ರಿಯರಾಗಬಹುದು.

ಅವಕಾಶಗಳು ಸಾವಿರಾರು
ರ್ಯಾಪರ್ ಒಮ್ಮೆ ಹಿಟ್ಟಾದರೆ ಅವಕಾಶಗಳು ಹುಡಿಕೊಂಡು ಬರುತ್ತವೆ. ಏಕೆಂದರೆ ಸ್ವರಚಿತ ಸಂಗೀತ ಹಾಗೂ ಹಾಡುಗಾರಿಕೆ ಎರಡನ್ನೂ ಒಬ್ಬರೆ ನಿರ್ವಹಿಸಿದರೆ ಮುಂದೆ ಆಲ್ಬಾಂ  ಸಾಂಗ್‌ ಗಳು ಮಾಡಬಹುದು ಅಥವಾ ಸಿನೆಮಾಗಳಿಗೆ ಸಂಗೀತ ರಚನೆ, ಹಾಡುಗಾರಿಕೆ ಎಲ್ಲದಕ್ಕೂ ಅವಕಾಶಗಳಿವೆ. ಸ್ಟೇಜ್‌ ಪ್ರೊಗ್ರಾಂಗಳನ್ನು ನೀಡಬಹುದು. ಉತ್ತಮ ಸಂಭಾವನೆಗೊಂದು ಇದು ದಾರಿಯಾಗುತ್ತದೆ.

 ಭರತ್‌ ರಾಜ್‌ ಕರ್ತಡ್ಕ 

ಟಾಪ್ ನ್ಯೂಸ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.