ಸುಮಧುರ‌ ಧ್ವನಿಗೆ ಉತ್ತಮ ಅವಕಾಶ


Team Udayavani, Dec 18, 2019, 4:15 AM IST

cv-31

ಇದು ಸ್ಪರ್ಧಾತ್ಮಕ ಯುಗ. ಈ ಯುಗದಲ್ಲಿ ಶಿಕ್ಷಣದ ಜತೆ ಜತೆಗೆ ನಾವು ಉದ್ಯೋಗದ ಕೌಶಲವನ್ನೂ ರೂಢಿಸಿಕೊಳ್ಳುವುದು ಉತ್ತಮ. ಏಕೆಂದರೆ ಈ ಕಾಲದಲ್ಲಿ ನಾವು ಓದಿರುವ ಕೋರ್ಸ್‌ಗೆ ಸಂಬಂಧಿಸಿದಂತೆ ಉದ್ಯೋಗ ಸಿಗುತ್ತದೆ ಎಂಬ ಭರವಸೆ ಇಟ್ಟುಕೊಳ್ಳುವುದು ಕೂಡ ಅಸಾಧ್ಯವಾದ ಮಾತಾಗಿದೆ. ಈ ಹಿನ್ನೆಲೆಯಲ್ಲಿ ಇಂದು ನಾವು ಕಾಲೇಜು ದಿನಗಳಲ್ಲಿ ಓದುವ ಸಮಯದಲ್ಲಿ ಉದ್ಯೋಗದ ದುಡಿಮೆ ಮಾಡುವ ಮತ್ತು ಅದರಲ್ಲಿ ಕೌಶಲ ರೂಢಿಸಿಕೊಳ್ಳುವ ಅನೇಕ ಉದ್ಯೋಗಗಳನ್ನು ಕಾಣಬಹುದಾಗಿದೆ.

ಆಧುನಿಕ ಕಾಲದಲ್ಲಿ ತಂತ್ರಜ್ಞಾನಗಳು ಹೆಚ್ಚಾದಂತೆ ಉದ್ಯೋಗಗಳಲ್ಲಿ ಆಯ್ಕೆಗಳು ಹೆಚ್ಚಾಗಿವೆ. ಉತ್ತಮ ಕೌಶಲವಿದ್ದರೆ ಸುಲಭವಾಗಿ ಕೆಲಸ ಗಿಟ್ಟಿಸಿಕೊಳ್ಳಬಹುದು. ಕಾಲೇಜು ಓದುತ್ತಿರುವಾಗಲೇ, ಬೇರೆ ಉದ್ಯೋಗದಲ್ಲಿದ್ದುಕೊಂಡು ಅರೆಕಾಲಿಕವಾಗಿ ಅಥವಾ ಸಂಪೂರ್ಣವಾಗಿ ಹಿನ್ನೆಲೆ ಧ್ವನಿ ನೀಡುವವರಾಗಿ ಕೆಲಸ ಮಾಡಬಹುದು. ಧ್ವನಿ ಸುಮಧುರ‌ವಾಗಿದ್ದರೆ, ಸ್ಪಷ್ಟವಾಗಿದ್ದರೆ ಅಂತಹವರಿಗೆ ಹಿನ್ನೆಲೆ ಧ್ವನಿ( ವಾಯಿಸ್‌ ಓವರ್‌) ನೀಡಬಹುದು. ಇದಕ್ಕಾಗಿ ಯಾವುದೇ ಕೋರ್ಸ್‌ಗಳ ಅಗತ್ಯವಿಲ್ಲದಿದ್ದರೂ ಈಗ ಹೊಸ ಕೋರ್ಸ್‌ಗಳು ಆರಂಭವಾಗಿವೆ.

1.ಸ್ಪಷ್ಟ ಮತ್ತು ಸುಂದರ ಧ್ವನಿ
ಸ್ಪಷ್ಟ ಧ್ವನಿಯಿದ್ದರೆ ಅಂತಹವರಿಗೆ ಹಿನ್ನೆಲೆ ಧ್ವನಿ ನೀಡಬಹುದು. ಯಾವುದೇ ಭಾಷೆಯ ಸರಿಯಾದ ಉಚ್ಚಾರ ಇದ್ದರೆ ಸುಲಭವಾಗಿ ಹಿನ್ನೆಲೆ ಧ್ವನಿ ನೀಡುವವರಾಗಿ ಕೆಲಸ ಮಾಡಬಹುದು. ಜತೆಗೆ ಧ್ವನಿ ಸುಂದವಾಗಿದ್ದರೆ ಕೇಳುಗರಿಗೂ ಇಂಪಾಗಿ ಕೇಳುತ್ತದೆ.

2. ಭಾಷಾ ಜ್ಞಾನ
ಭಾಷೆಯ ಸರಿಯಾದ ಬಳಕೆ ಮತ್ತು ಜ್ಞಾನವಿರಬೇಕು. ಯಾವ ಪದ ಯಾವ ಅರ್ಥ ನೀಡುತ್ತದೆ ಎಂಬುದನ್ನು ತಿಳಿದಿರಬೇಕು. ಮಾತನಾಡುವಾಗ ಸರಿಯಾದ ವ್ಯಾಕ್ಯ ಪ್ರಯೋಗ ಮಾಡಬೇಕು. ಸಂಭಾಷಣೆಗಳಿಗೆ ಹಿನ್ನೆಲೆ ಧ್ವನಿ ನೀಡುವಾಗ ನಾವು ಸನ್ನಿವೇಶಗಳಿಗೆ ತಕ್ಕಂತೆ ಧ್ವನಿಯನ್ನು ನೀಡಬೇಕಾಗುತ್ತದೆ. ಭಾಷಾ ಶುದ್ಧತೆ ಈ ಹಿನ್ನೆಲೆಯಲ್ಲಿ ಮುಖ್ಯವಾಗುತ್ತದೆ.

3. ಸಾಮಾನ್ಯ ಜ್ಞಾನ
ಸಾಮಾನ್ಯ ಜ್ಞಾನ ಎಲ್ಲದಕ್ಕೂ ಅಗತ್ಯವಾಗಿದ್ದು, ಹಿನ್ನೆಲೆ ಧ್ವನಿ ನೀಡಬೇಕಾದರೂ ಸಾಮಾನ್ಯ ಜ್ಞಾನದ ಆವಶ್ಯಕತೆಯಿದೆ. ತಾವು ಯಾವುದಕ್ಕೆ ಧ್ವನಿ ನೀಡುತ್ತಿದ್ದೇವೆ. ಶಬ್ದಗಳು ಸರಿಯಾಗಿವೇ ಎಂಬುದನ್ನು ತಿಳಿದಿರಬೇಕು.

4. ಧ್ವನಿಯಲ್ಲಿ ಜೀವಂತಿಕೆ
ಧ್ವನಿಯಲ್ಲಿ ಜೀವಂತಿಕೆ ಅಗತ್ಯವಿದೆ. ಧ್ವನಿ ಚೆನ್ನಾಗಿದ್ದು ಓದುತ್ತಾ ಹೋದರೆ ಅದು ಹಿನ್ನೆಲೆ ಧ್ವನಿಯಾಗುವುದಿಲ್ಲ. ಬದಲಾಗಿ ಧ್ವನಿಯಲ್ಲಿ ಭಾವನೆಯಿದ್ದರೆ ಹಿನ್ನಲೆ ಧ್ವನಿ ಸುಂದರವಾಗಿರುತ್ತದೆ.

ಪ್ರತ್ಯೇಕವಾಗಿ ವಾಯಿಸ್‌ ಓವರ್‌ ಕೋರ್ಸ್‌ಗಳು ಇಲ್ಲದಿದ್ದರೂ ಕೆಲವೊಂದು ಸ್ಟುಡಿಯೋಗಳು, ಕಾಲೇಜುಗಳಲ್ಲಿ ಇದರ ಮಾಹಿತಿ ನೀಡುತ್ತಾರೆ. ಜತೆಗೆ ಇದಕ್ಕೆ ಪ್ರತ್ಯೇಕ ತರಗತಿಯ ಆವಶ್ಯಕತೆಯಿಲ್ಲ. ಬದಲಾಗಿ ಆಸಕ್ತಿ ಮತ್ತು ಸ್ವಲ್ಪ ಕೌಶಲವಿದ್ದರೆ ಉತ್ತಮ ಹಿನ್ನೆಲೆ ಧ್ವನಿ ನೀಡಬಹುದು.

ವ್ಯಾಪ್ತಿ
ಟಿವಿ, ರೇಡಿಯೋ ಮತ್ತು ಇತರೆ ಹಲವಾರು ಕ್ಷೇತ್ರಗಳಿಗೆ ಹಿನ್ನಲೆ ಧ್ವನಿ ನೀಡುವವರ ಆವಶ್ಯಕತೆಯಿದ್ದು ಉತ್ತಮ ಧ್ವನಿಯಿದ್ದವರೂ ಉತ್ತಮ ಸಾಧನೆ ಮಾಡಬಹುದು. ಹಲವಾರು ಕ್ಷೇತ್ರಗಳಲ್ಲಿ ಇಂದು ಹಿನ್ನೆ°ಲೆ ಧ್ವನಿ ನೀಡು ವವರ ಆವಶ್ಯಕತೆಯಿದ್ದು, ಇವರಿಗೆ ಹೆಚ್ಚಿನ ಅವಕಾಶ ವಿದೆ. ಡಾಕ್ಯುಮೆಂಟರಿಗಳಿಗೆ, ಜಾಹೀರಾತು ಕ್ಷೇತ್ರಗಳಲ್ಲಿ, ಗ್ರಾಹಕರ ಸಂಪರ್ಕ ಕೊಂಡಿ ಯಾಗಿ ಹೀಗೆ ಹಲ ವಾರು ಅವಕಾಶಗಳು ಇದರಲ್ಲಿವೆ.

-   ರಂಜಿನಿ ಮಿತ್ತಡ್ಕ

ಟಾಪ್ ನ್ಯೂಸ್

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.