ನೆಲಹಾಸು ಉದ್ಯೋಗಕ್ಕಿದೆ ಅವಕಾಶ


Team Udayavani, Jun 26, 2019, 5:00 AM IST

11

ಕಲೆ ಎಂಬುದು ಹಲವು ವಿಧದಲ್ಲಿದೆ. ಕ್ರಿಯಾತ್ಮಕವಾಗಿ ತಯಾರಿಸುವ ಎಲ್ಲ ವಸ್ತುಗಳೂ ಕಲೆಯಲ್ಲಿ ಒಳಗೊಳ್ಳುತ್ತವೆ. ಇದಕ್ಕೆ ಒಂದಷ್ಟು ಪ್ರತಿಭೆ ಇದ್ದರೆ ಸಾಕು. ಒಬ್ಬ ಕಲೆಗಾರ ಕ್ರಿಯಾತ್ಮಕ ಚಿಂತನೆಗಳ ಜತೆ ತನ್ನ ಭಾವನೆಗಳನ್ನು ಬೆರೆಸಿ ಒಂದು ವಸ್ತುವಿಗೆ ರೂಪು ನೀಡಿದಾಗ ಅವು ಕಲಾತ್ಮಕ ಆಕೃತಿಗಳಾಗುತ್ತವೆ. ನೆಲಹಾಸು ತಯಾರಿಕೆಯೂ ಒಂದು ಕಲಾತ್ಮಕ ಉದ್ಯೋಗ. ಕಲೆಯಲ್ಲಿ ಆಸಕ್ತಿ ಇರುವ ಎಲ್ಲರೂ ಇದನ್ನು ಆಯ್ದುಕೊಳ್ಳಬಹುದು.ಆದರೆ ಇದನ್ನು ಒಂದು ಕಲೆಯೆಂದು ಒಪ್ಪಿಕೊಳ್ಳಲು ಅನೇಕರು ತಯಾರಿಲ್ಲ. ಕಲಾತ್ಮಕ‌ ಡಿಸೈನ್‌ಗಳ ಮೂಲಕ ವಿವಿಧ ವಿನ್ಯಾಸಗಳ ನೆಲಹಾಸನ್ನು ತಯಾರಿಸುವುದೇ ಕಾರ್ಪೆಟ್‌ ಟೆಕ್ನಾಲಜಿ ಅಥವಾ ನೆಲಹಾಸು ತಂತ್ರಜ್ಞಾನ.

ನೆಲವನ್ನು ಕವರ್‌ ಮಾಡಲು ಅಥವಾ ನೆಲದ ಅಂದವನ್ನು ಹೆಚ್ಚಿಸುವಂತೆ ಮಾಡಲು ಕಾರ್ಪೆಟ್‌ನ್ನು ಬಳಸುತ್ತಾರೆ. ಯಾವ ಶೈಲಿಯ ನೆಲಕ್ಕೆ ಯಾವ ರೀತಿಯ ನೆಲಹಾಸು ಉತ್ತಮ ಎಂಬುದನ್ನು ತಿಳಿದು ಅದಕ್ಕೆ ತಕ್ಕಂತೆ ಕಾಪೆìಟ್‌ನ್ನು ತಯಾರಿಸುವುದು ಈ ಉದ್ಯೋಗವಾಗಿದೆ. ಹೊಸ ಹೊಸ ವಿನ್ಯಾಸಗಳನ್ನು ಮಾರುಕಟ್ಟೆಗೆ ನಿರಂತರವಾಗಿ ಪರಿಚಯಿಸುತ್ತಿರ ಬೇಕಾಗುತ್ತದೆ. ಈಗಾಗಲೇ ಇದೊಂದು ಉದ್ಯಮವಾಗಿ ಬೆಲೆಯುತ್ತಿದ್ದು ವಿಪುಲ ಅವಕಾಶಗಳು ಯುವ ಜನರಿಗಾಗಿ ಕಾಯುತ್ತಿವೆ.

ಇದನ್ನು ಉದ್ಯೋಗ ಕ್ಷೇತ್ರವನ್ನಾಗಿ ಆಯ್ದುಕೊಂಡವರಿಗೆ ವಾರ್ಷಿಕವಾಗಿ 1ಲಕ್ಷಕ್ಕಿಂತ ಅಧಿಕ ವೇತನ ದೊರೆಯುತ್ತವೆ. ಕೆಲಸದಲ್ಲಿ ಅನುಭವ ಹೆಚ್ಚಾದಂತೆ ಉದ್ಯೋಗದಲ್ಲಿ ಅವಕಾಶಗಳೂ ಹೆಚ್ಚುತ್ತಾ ಹೋಗುತ್ತವೆ. ಫ್ಯಾಶನ್‌ ಡಿಸೈನಿಂಗ್‌ಗೆ ಸಂಬಂಧಿಸಿದ ಕಂಪೆನಿಗಳಲ್ಲಿ ಉದ್ಯೋಗ ಲಭಿಸುತ್ತದೆ. ಪ್ರತಿ ದಿನದ ತರಗತಿ ಅಥವಾ ದೂರ ಶಿಕ್ಷಣದ ಮೂಲಕ ಈ ಕೋರ್ಸ್‌ನ್ನು ಆಯ್ಕೆ ಮಾಡಬಹುದಾಗಿದೆ. ಈ ಕೋರ್ಸ್‌ ಆಯ್ದುಕೊಳ್ಳುವವರಿಗೆ ಮುಖ್ಯವಾಗಿ ಮ್ಯಾಥ್ಸ್ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಪ್ರೌಢಿಮೆ ಇರಬೇಕಾಗಿದೆ. ಕಂಪ್ಯೂಟರ್‌ ಜ್ಞಾನವೂ ಅಗತ್ಯ. ಹೊಸತನವನ್ನು ಇಷ್ಟಪಡುವವರು, ಕಲೆಯಲ್ಲಿ ಆಸಕ್ತಿ ಇರುವ ಎಲ್ಲರೂ ಇದರಲ್ಲಿ ತರಬೇತಿ ಪಡೆಯಬಹುದು.

ಎಲ್ಲಿ ಕಲಿಯಬಹುದು
ಕಾರ್ಪೆಟ್‌ ಟೆಕ್ನಾಲಜಿ ಎಂಬ ಕೋರ್ಸ್‌ ಇಂದು ಹಲವು ವಿಶ್ವವಿದ್ಯಾನಿಲಯಗಳಲ್ಲಿವೆ. ಉತ್ತರ ಪ್ರದೇಶದಲ್ಲಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಕಾರ್ಪೆಟ್‌ ಟೆಕ್ನಾಲಜಿ ಎಂಬ ವಿಭಾಗವಿದ್ದು ಇದರಲ್ಲಿ ನೆಲಹಾಸು ತರಬೇತಿ ನೀಡಲಾಗುತ್ತದೆ. ಡಿಗ್ರಿ ಹಾಗೂ ಡಿಪ್ಲೊಮಾ ಕೋರ್ಸ್‌ನ ಮೂಲಕ ಇದನ್ನು ಕಲಿಯಬಹುದಾಗಿದೆ. ಪಿಯುಸಿಯಲ್ಲಿ ರಸಾಯನ ಶಾಸ್ತ್ರ, ಭೌತ ಶಾಸ್ತ್ರ, ಗಣಿತ ವಿಷಯಗಳನ್ನು ಆಯ್ದುಕೊಂಡಿರುವವರು ನೆಲಹಾಸು ತರಬೇತಿಯನ್ನು ಉನ್ನತ ಶಿಕ್ಷಣಕ್ಕೆ ಆಯ್ದುಕೊಳ್ಳಬಹುದು.

-  ಸುಶ್ಮಿತಾ ಶೆಟ್ಟಿ ಸಿರಿಬಾಗಿಲು

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.