- Saturday 14 Dec 2019
ಅನುಭವ ಬಿಚ್ಚಿಡುವ “ಗೂಢಚರ್ಯೆಯ ಆ ದಿನಗಳು’
Team Udayavani, Jun 26, 2019, 5:00 AM IST
ಗೂಢಚರ್ಯೆಯ ಆ ದಿನಗಳು ಡಾ| ಡಿ.ವಿ. ಗುರುಪ್ರಸಾದ್ ಅವರ ಅನುಭವ ಕಥನ. ಇದರ ಇಂಗ್ಲಿಷ್ ಅವತರಣಿಕೆ ದಿ ಕಾರಿಡಾರ್ ಆಫ್ ಇಂಟೆಲಿಜೆನ್ಸ್ ಪ್ರಕಟಗೊಂಡಿದೆ. ಲೇಖಕರು ರಾಜ್ಯ ಗುಪ್ತಚರ ಇಲಾಖೆ ಮುಖ್ಯಸ್ಥನಾಗಿ ನೇಮಕವಾದಾಗಿನಿಂದ ವಿದಾಯ ಹೇಳುವವರೆಗಿನ ಅನುಭವಗಳನ್ನು ಚಿತ್ರಿಸುತ್ತಾ ಹೋಗುತ್ತಾರೆ. ಇದರಲ್ಲಿ ಒಟ್ಟು 17 ಅಧ್ಯಾಯಗಳಿದ್ದು, ತಮ್ಮ 3 ವರ್ಷದ ಅನುಭವಗಳ ಕುರಿತು ಬಿಡಿಬಿಡಿಯಾಗಿ ವಿವರಿಸುತ್ತಾರೆ.
ಘಟನೆ: 1
ಇವರು ಎಸ್.ಎಂ.ಕೃಷ್ಣ ಅವರ ಕುರಿತು ಒಂದು ಕಡೆಯಲ್ಲಿ ಅನಿರೀಕ್ಷಿತ ಕೆಲಸ ಕಾರ್ಯಗಳನ್ನು ಮಾಡುವುದರಲ್ಲಿ ಕೃಷ್ಣಾಜೀ ಸಿದ್ಧ ಹಸ್ತರೆಂದು ಬಣ್ಣಿಸುತ್ತಾ ಹೇಗೆ ರಾಜ್ಯವಿಧಾನ ಸಭೆಯನ್ನು ವಿಸರ್ಜಿಸುವ ತೀರ್ಮಾನ ಕೈಗೊಂಡರು ಎಂಬ ತಮ್ಮ ಪ್ರತ್ಯಕ್ಷ ಅನುಭವವನ್ನು ತಿಳಿಸುತ್ತಾರೆ.
ಘಟನೆ: 2
3 ಮುಖ್ಯಮಂತ್ರಿಗಳ ಅಧೀನದಲ್ಲಿ ಕೆಲಸ ಮತ್ತು ರಾಜಕೀಯವನ್ನು ಅತ್ಯಂತ ಹತ್ತಿರದಿಂದ ಕಂಡ ಲೇಖಕರು ತಮ್ಮ ವಿಶಿಷ್ಟ ಅನುಭವಗಳ ಕುರಿತು ಹೆಮ್ಮೆಯಿಂದ ಬರೆಯುತ್ತಾರೆ. ರಾಜ್ಕುಮಾರ್ ಅಪಹರಣ ಸಂದರ್ಭ, ಖೊಟ್ಟಿ ಛಾಪಾಕಾಗದ ಹಗರಣದ ಸ್ಫೋಟ, ನಕ್ಸಲ್ ನಾಯಕ ಸಾಕೇತ್ರಾಜನ್ ಎನ್ಕೌಂಟರ್, ವೆಂಕಟಮ್ಮಹಳ್ಳಿಯಲ್ಲಿ ನಡೆದ ಪೊಲೀಸರ ಮಾರಣಹೋಮ ಸಂದರ್ಭದಲ್ಲಿ ಆಡಳಿತಗಾರರು, ಮಂತ್ರಿಗಳು ಸ್ಪಂದಿಸಿದ ರೀತಿಯ ಕುರಿತು ವಿವರಿಸುತ್ತಾರೆ.
ಘಟನೆ: 3
ಲೇಖಕರು ತಾವು ಹತ್ತಿರದಿಂದ ಕಂಡ ವಿ.ಐ.ಪಿ.ಗಳ ಕುರಿತು ವಿವರಿಸುತ್ತಾ ಹೋಗುತ್ತಾರೆ. ತಮ್ಮ ಸೇವಾವಧಿಯ ಸಂದರ್ಭದಲ್ಲಿ ಭೇಟಿಯಾದ ಇಂದಿರಾ ಗಾಂಧಿ, ಕತಾರ್ ದೇಶದ ದೊರೆ, ರಾಜೀವ್ ಗಾಂಧಿ, ಪ್ರದಾನಿ ಚಂದ್ರಶೇಖರ್ ಮೊದಲಾದವರ ಜತೆಗಿದ್ದ ಅನುಭವಗಳ ಕುರಿತು 14ನೇ ಅಧ್ಯಾಯದಲ್ಲಿ ವಿವರಿಸುತ್ತಾರೆ.
ಗೂಢಚಾರಿಕೆ ಎಂದರೇನು? ಅವರು ಯಾವ ರೀತಿ ಕಾರ್ಯ ನಿರ್ವಹಿಸುತ್ತಾರೆ, ಅವರಿಗೆ ಉಂಟಾಗುವ ತೊಂದರೆಗಳೇನು ಎನ್ನುವುದನ್ನು ತಿಳಿಸುವುದಕ್ಕೋಸ್ಕರ ಲೇಖಕರು ತಮ್ಮ ಅನುಭವಗಳನ್ನು ಪುಸ್ತಕ ರೂಪಕ್ಕೆ ತರುತ್ತಾರೆ. ಪೊಲೀಸ್ ಮಹಾನಿದೇರ್ಶಕರಾಗಿ 2011ರಲ್ಲಿ ನಿವೃತ್ತಿ ಹೊಂದಿದ ನಂತರ ಲೇಖಕರು ತಮ್ಮ ಸಮಯವನ್ನು ಬರವಣಿಗೆಗೆ ಮೀಸಲಿಡುತ್ತಾರೆ. ಇವರು ಸುಮಾರು 60 ಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ.
- ರಂಜಿನಿ ಮಿತ್ತಡ್ಕ
ಈ ವಿಭಾಗದಿಂದ ಇನ್ನಷ್ಟು
-
ಇಂದು ವೈದ್ಯಕೀಯ ಕ್ಷೇತ್ರವು ವಿಪುಲ ಅವಕಾಶ, ಉದ್ಯೋಗವನ್ನು ತಂದುಕೊಡುವ ಕ್ಷೇತ್ರವಾಗಿದೆ. ಹಾಗಾಗಿ ಶೈಕ್ಷಣಿಕವಾಗಿ ಕೂಡ ವೈದೈಕೀಯ ಕೋರ್ಸ್ಗಳಿಗೆ ಹೆಚ್ಚಿನ...
-
ಇಂದಿನ ಸ್ಪರ್ಧಾತ್ಮಕ ಮತ್ತು ವಾಣಿಜ್ಯ ಕೇಂದ್ರೀಕೃತ ಯುಗದಲ್ಲಿ ವಿಭಿನ್ನವಾದ ಕೌಶಲ ನಿಮ್ಮಲ್ಲಿದ್ದರೆ ಉದ್ಯೋಗ ಪಡೆಯಲು ಯಾವುದೇ ತೊಡಕಿಲ್ಲ. ಅಂತಹ ವಿಭಿನ್ನ...
-
ವಿದ್ಯಾರ್ಥಿಗಳಿಗೆ ಪದವಿ ಅಂತಿಮ ವರ್ಷದಲ್ಲಿ ಇರುವಾಗಲೇ ಭವಿಷ್ಯದ ಬಗ್ಗೆ ಯೋಚನೆ ಶುರುವಾಗುತ್ತದೆ. ಕೈಯಲ್ಲಿ ಒಂದು ನೌಕರಿ ಇಟ್ಟುಕೊಂಡೆ ಕಾಲೇಜಿನಿಂದ ಹೊರಬೀಳಬೇಕು...
-
ಈಗ ಮಾನವ ಸಂಪನ್ಮೂಲ (ಎಚ್ಆರ್) ಪದವಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದು ಯುವ ಜನತೆಯ ನೆಚ್ಚಿನ ಉದ್ಯೋಗಗಳಲ್ಲಿ ಒಂದಾಗಿದೆ. ಕಚೇರಿಯಲ್ಲಿ ಕಂಪ್ಯೂಟರ್ ಮುಂದೆ...
-
ನಮ್ಮಲ್ಲಿರುವ ಪ್ರತಿಭೆಯನ್ನು ಬಳಸಿಕೊಂಡು ಓದಿನೊಂದಿಗೆ ಉದ್ಯೋಗ ಪಡೆಯುವುದೆಂದರೆ ಭವಿಷ್ಯದ ಉದ್ಯೋಗಕ್ಕೆ ಮೊದಲೇ ಸಿದ್ಧತೆ ನಡೆಸಿದಂತೆ. ಅಂತಹ ಉದ್ಯೋಗಗಳಲ್ಲಿ...
ಹೊಸ ಸೇರ್ಪಡೆ
-
ಬೆಂಗಳೂರು: ಸರ್ಕಾರದ ಆಡಳಿತ ಯಂತ್ರವನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳ ಲಾಗುತ್ತಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ವಿಧಾನಸೌಧದಲ್ಲಿ...
-
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಠ ಹಿಡಿದು ಸರ್ಕಾರ ರಚಿಸಿ, ಬಹುಮತಕ್ಕೆ ಅಗತ್ಯವಿರುವ ಶಾಸಕರನ್ನು ಗೆಲ್ಲಿಸಿಕೊಂಡು ನೆಮ್ಮದಿಯ ನಿಟ್ಟುಸಿರು...
-
ಬೆಂಗಳೂರು: ವಿದ್ಯಾರ್ಥಿಗಳಿಗೆ ಪರೀಕ್ಷಾ ಕೊಠಡಿ ಆಟದ ಮೈದಾನಗಳಿದ್ದಂತೆ ವಾತಾವರಣ ಸೃಷ್ಟಿಸಿ, ಭಯ, ಖನ್ನತೆ, ಹಿಂಜರಿಕೆಗಳಿಲ್ಲದೇ ಆತ್ಮವಿಶ್ವಾಸದಿಂದ ಪರೀಕ್ಷೆ...
-
ಬೆಳಗಾವಿ: ಕಡೋಲಿ ಗ್ರಾಮದಲ್ಲಿ ಬುಧ ವಾರ ನಡೆದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿಗೆ ಕಠಿಣ (ಗಲ್ಲು) ಶಿಕ್ಷೆ ವಿ ಧಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು...
-
ಬೆಂಗಳೂರು: ಹೊಸ ಶಾಸಕರ ಬೆಂಬಲಿ ಗರಿಗೆ ಕ್ಷೇತ್ರವ್ಯಾಪ್ತಿಯಲ್ಲಿ ಪಕ್ಷದ ಪ್ರಮುಖ ಜವಾಬ್ದಾರಿ ವಹಿಸಲು ಬಿಜೆಪಿ ಗಂಭೀರ ಚಿಂತನೆ ನಡೆಸಿದೆ. ಉಪಚುನಾವಣೆ ಕಾರ್ಯ...