ಪಿಆರ್‌ಒ ಕ್ರಿಯಾಶೀಲ ವ್ಯಕ್ತಿತ್ವಕ್ಕೆ ಆದ್ಯತೆ


Team Udayavani, Nov 13, 2019, 5:26 AM IST

qq-24

ಸಂಸ್ಥೆಯ ಸೇವೆಗಳ ಬಗ್ಗೆ ಗ್ರಾಹಕರ ಮನಮುಟ್ಟಿಸುವಲ್ಲಿ ಪಿಆರ್‌ಒ ಮಹತ್ವದ ಪಾತ್ರ ವಹಿಸುತ್ತಾನೆ. ಇಂದು ಜಾಗತಿಕ ಮಟ್ಟದಲ್ಲಿ ಕೂಡ ಪಿಆರ್‌ಒಗಳಿಗೆ ಹೆಚ್ಚಿನ ಬೇಡಿಕೆಯಿದ್ದು ಇದಕ್ಕೆ ಕೆಲವೊಂದಿಷ್ಟು ಅರ್ಹತೆಗಳಿದ್ದರೆ ಉದ್ಯೋಗಗಳಿಸಬಹುದಾಗಿದೆ. ಪಿಆರ್‌ಒಗಳಿಗೆ ಬೇಕಾದ ಅರ್ಹತೆ, ಬೇಡಿಕೆ ಮತ್ತು ಇನ್ನಿತರ ಮಾಹಿತಿಯ ಕುರಿತು ಈ ಲೇಖನ ತಿಳಿಸುತ್ತದೆ.

ಜಾಗತಿಕ ಯುಗದಲ್ಲಿ ಪ್ರತಿ ರಂಗದಲ್ಲಿಯೂ ಉದ್ಯೋಗಾವಕಾಶ ಲಭ್ಯವಿದೆ. ಆ ಉದ್ಯೋಗಕ್ಕೆ ತಕ್ಕಂತ ಕೌಶಲ, ಮಾತುಗಾರಿಕೆ, ಸಂವಹನ ಕಲೆ ಇದ್ದರಾಯಿತಷ್ಟೇ. ಚತುರ, ಚುರುಕು ಸ್ವಭಾವದ ವ್ಯಕ್ತಿ ಎಲ್ಲಿಯೂ ಸಲ್ಲುತ್ತಾನೆ ಎಂಬುದಕ್ಕೆ ಬೇರೆ ಮಾತು ಬೇಕಿಲ್ಲ. ಅಂತಹ ಔದ್ಯೋಗಿಕ ಕ್ಷೇತ್ರಗಳ ಪೈಕಿ ಬಹು ಬೇಡಿಕೆಯ ಕ್ಷೇತ್ರವೆಂದರೆ ಸಾರ್ವಜನಿಕ ಸಂಪರ್ಕಾಧಿಕಾರಿಗಳಾಗಿ ವಿವಿಧ ಕಂಪೆನಿಗಳಲ್ಲಿ ಕೆಲಸ ಮಾಡುವುದು.

ಸಾರ್ವಜನಿಕ ಸಂಪರ್ಕಾಧಿಕಾರಿ ಅಥವಾ ಪಿಆರ್‌ಒ ಎಂದು ಕರೆಸಿಕೊಳ್ಳುವ ಈ ಉದ್ಯೋಗವು ಯುವ ಸಮುದಾಯಕ್ಕೆ ಹಲವಾರು ಅವಕಾಶಗಳನ್ನು ಸೃಷ್ಟಿಸಿಕೊಟ್ಟಿದೆ. ಉದ್ಯಮ ರಂಗ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಆ ಉದ್ಯಮ, ಮ್ಯಾನೇಜ್‌ಮೆಂಟ್‌ ಮತ್ತು ಗ್ರಾಹಕರ ನಡುವಿನ ಕೊಂಡಿಯಾಗಿ ಕೆಲಸ ಮಾಡಲು ಸಂಸ್ಥೆಗಳು ಪಿಆರ್‌ಒಗಳನ್ನು ನೇಮಕ ಮಾಡುತ್ತವೆ. ಸಂಸ್ಥೆಯ ಕುರಿತು ಪ್ರಚಾರ ನೀಡುವುದು, ಕಂಪೆನಿಯ ಉತ್ಪನ್ನ, ಸೇವೆಗಳ ಕುರಿತು ಮಾಹಿತಿ ನೀಡುವುದು, ಉದ್ಯೋಗಿ, ಗ್ರಾಹಕರ ನಡುವೆ ಧನಾತ್ಮಕ ಸಂಬಂಧ ಏರ್ಪಡಿಸುವುದು ಸಾರ್ವಜನಿಕ ಸಂಪರ್ಕಾಧಿಕಾರಿಗಳ ಕೆಲಸವಾಗಿರುತ್ತದೆ.

ಪಿಆರ್‌ಒಗಳು ಕಂಪೆನಿಯನ್ನು ಲಾಭದತ್ತ ಕೊಂಡೊಯ್ಯಲು ಮಧ್ಯವರ್ತಿಯಾಗಿಯೂ ಕೆಲಸ ಮಾಡುತ್ತಾರೆ. ತಾನು ಕೆಲಸ ಮಾಡುವ ಸಂಸ್ಥೆಯ ಉತ್ಪನ್ನಗಳನ್ನು ಸಾರ್ವಜನಿಕರಿಗೆ ವಿವರಿಸಿ, ಸಂಸ್ಥೆಯ ಸೇವೆಗಳ ಬಗ್ಗೆ ಗ್ರಾಹಕರ ಮನಮುಟ್ಟಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾನೆ. ಸಂಸ್ಥೆಗೆ ಸಂಬಂಧಿಸಿದಂತೆ ಬೇರೆ ಸಂಸ್ಥೆಗಳೊಂದಿಗೆ ಇಮೇಲ್‌, ದೂರವಾಣಿ ಸಂಪರ್ಕ, ಮಾಧ್ಯಮ ಪ್ರಚಾರ, ದಾಖಲೀಕರಣ, ಕೈಪಿಡಿ, ಕರಪತ್ರ, ಚಿತ್ರ, ಛಾಯಾಚಿತ್ರಗಳನ್ನು ತಯಾರು ಮಾಡುವುದು ಹೀಗೆ ನಾನಾ ಕೆಲಸದ ಹೊಣೆ ಪಿಆರ್‌ಒಗಳದ್ದಾಗಿರುತ್ತದೆ.

ಆದ್ಯತೆಯ ಶಿಕ್ಷಣ
ಸಾರ್ವಜನಿಕ ಸಂಪರ್ಕಾಧಿಕಾರಿಯಾಗಲು ಯಾವುದೇ ನಿರ್ದಿಷ್ಟವಾದ ವೃತ್ತಿಪರ ಕೋರ್ಸ್‌ಗಳು ಇಲ್ಲ. ಯಾವುದೇ ಪದವಿ, ಸ್ನಾತಕೋತ್ತರ ಪದವಿ ಓದಿದ ಯುವ ಸಮುದಾಯ ಪಿಆರ್‌ಒಗಳಾಗಿ ಕೆಲಸ ಮಾಡಬಹುದು. ಆದರೆ, ಮನಃಶಾಸ್ತ್ರ, ಅರ್ಥಶಾಸ್ತ್ರ, ಮಾರ್ಕೆಟಿಂಗ್‌, ಸಮಾಜಶಾಸ್ತ್ರ, ಬ್ಯುಸಿನೆಸ್‌ ಸ್ಟಡೀಸ್‌, ಜಾಹೀರಾತು, ಪತ್ರಿಕೋದ್ಯಮದಲ್ಲಿ ಪದವಿ ಪೂರೈಸಿದವರಿಗೆ ಹೆಚ್ಚು ಆದ್ಯತೆ. ಜಾಹೀರಾತು ಟ್ರೆಂಡ್‌, ಮೀಡಿಯಾ ಟೆಕ್ನಿಕ್ಸ್‌, ಎಡಿಟಿಂಗ್‌, ಭಾಷಣ ಬರೆಯುವುದು, ಸಂಶೋಧನಾ ವಿಧಾನ ತಿಳಿದಿರುವವರು ಪಬ್ಲಿಕ್‌ ರಿಲೇಶನ್‌ ಕ್ಷೇತ್ರದಲ್ಲಿ ಉದ್ಯೋಗ ಕಂಡುಕೊಳ್ಳಬಹುದು.

ಶಿಕ್ಷಣದ ಹಂತದಲ್ಲಿಯೇ ಶಿಕ್ಷಣ ಸಂಸ್ಥೆಗಳಲ್ಲಿ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಪಬ್ಲಿಕ್‌ ರಿಲೇಶನ್ಸ್‌ ಕ್ಷೇತ್ರಕ್ಕೆ ಕಾಲಿಡಲು ಬೇಕಾದ ಅರ್ಹತೆಗಳನ್ನು ಗಿಟ್ಟಿಸಿಕೊಂಡರೆ ಉದ್ಯೋಗ ಕಂಡು ಕೊಳ್ಳುವುದು ಕಷ್ಟವೇನಲ್ಲ. ವ್ಯವಹಾರ ಜ್ಞಾನದ ಶಿಕ್ಷಣವನ್ನು ಕಾಲೇಜು ಹಂತದಲ್ಲಿಯೇ ಪಡೆದುಕೊಳ್ಳಬೇಕು. ಇದು ಔದ್ಯೋಗಿಕ ರಂಗದಲ್ಲಿ ಸಾಕಷ್ಟು ನೆರವಿಗೆ ಬರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ಅವಕಾಶಗಳಿವೆ
ಶಾಲಾ ಕಾಲೇಜು, ಖಾಸಗಿ ಆಸ್ಪತ್ರೆ, ವಿಶ್ವವಿದ್ಯಾನಿಲಯಗಳು, ಬಹುರಾಷ್ಟ್ರೀಯ ಕಂಪೆನಿಗಳು, ಪ್ರಸಿದ್ಧ ಸಂಸ್ಥೆಗಳು ಸಹಿತ ವಿವಿಧ ಉದ್ಯಮಗಳಲ್ಲಿ ಪ್ರಸ್ತುತ ಪೈಪೋಟಿ ಹೆಚ್ಚಿರುತ್ತದೆ. ಹಾಗಾಗಿ ಇಂತಹ ಕ್ಷೇತ್ರಗಳಲ್ಲಿ ಪಿಆರ್‌ಒಗಳಿಗೂ ಬೇಡಿಕೆ ಅಧಿಕ. ಖಾಸಗಿ ವಲಯದ ಇತರ ದೊಡ್ಡ ದೊಡ್ಡ ಕಂಪೆನಿಗಳಲ್ಲಿ ಆ ಕಂಪೆನಿಗಳ ಸೇವೆಯನ್ನು ಜನಮಾನಸಕ್ಕೆ ತಲುಪಿಸಲು ಪಿಆರ್‌ಒ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ.

ಕೌಶಲ ಅಗತ್ಯ
ಯಾವುದೇ ಕಂಪೆನಿಗಳಲ್ಲಿ ಪಿಆರ್‌ಒಗಳಾಗಿ ಕೆಲಸ ಮಾಡಿದರೆ ಕೈತುಂಬ ಸಂಬಳ ಪಡೆಯುವ ಅವಕಾಶವಿರುತ್ತದೆ. ಆದರೆ, ಅದಕ್ಕೆ ನಿರ್ದಿಷ್ಟವಾದ ಅರ್ಹತೆ ಬೇಕೇ ಬೇಕು. ಪ್ರಮುಖ ಭಾಷೆಗಳಾದ ಹಿಂದಿ, ಇಂಗ್ಲಿಷ್‌, ಕನ್ನಡದಲ್ಲಿ ವ್ಯವಹರಿಸುವ ಸಂವಹನ ಕೌಶಲ, ಭಾಷಾ ಪರಿಶುದ್ಧತೆ, ಇನ್ನೊಬ್ಬರನ್ನು ಆಕರ್ಷಿಸುವಂತಹ ಮಾತುಗಾರಿಕೆ ಮತ್ತು ವ್ಯಕ್ತಿತ್ವ, ಸ್ನೇಹಪರ, ಸೌಜನ್ಯಯುತ ವ್ಯಕ್ತಿತ್ವ,ಕೆಲಸದಲ್ಲಿ ಬದ್ಧತೆ, ಪ್ರಾಮಾಣಿಕತೆಯ ವ್ಯವಹಾರ ಇವಿಷ್ಟಿದ್ದರೆ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕೆಲಸ ಮಾಡಲು ಅರ್ಹತೆ ಸಿಗುತ್ತದೆ. ಇದರೊಂದಿಗೆ ಕ್ರಿಯಾಶೀಲತೆ, ಜನರೊಂದಿಗೆ ಬೆರೆಯುವ ಗುಣ, ಸಂಶೋಧನಾತ್ಮಕ ಮತ್ತು ವಿಶ್ಲೇಷಣಾತ್ಮಕ ಗುಣ ಇರಲೇಬೇಕು.

- ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ

ಈಶ್ವರ ಖಂಡ್ರೆ

ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ

ಈಶ್ವರ ಖಂಡ್ರೆ

ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.