ಈ ವರ್ಷ ರಸ್ತೆಗಿಳಿಯಲಿವೆ ಆಕರ್ಷಕ ಕಾರುಗಳು

ದಿಲ್ಲಿ ಅಟೋ ಎಕ್ಸ್‌ಪೋಗೆ ತೆರೆ

Team Udayavani, Feb 14, 2020, 6:30 AM IST

car

ಕಾರುಗಳನ್ನು ಕೊಂಡುಕೊಳ್ಳಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಅದರಲ್ಲೂ ಈ ವರ್ಷದ ಮಾರುಕಟ್ಟೆಗೆ ಬರುವ ಅತ್ಯಾಕರ್ಷಕ ಕಾರುಗಳೇ ನಮ್ಮ ಮನೆಯ ಅಂಗಳದಲ್ಲಿ ನಿಲ್ಲಬೇಕು ಎಂಬ ಕನಸುಗಳು ಸರ್ವೇ ಸಾಮಾನ್ಯ.ಇಂತಹ ಕಾರುಗಳನ್ನು ಒಂದೆಡೆ ಸೇರಿಸುವ ಕಾರ್ಯಕ್ರಮ ರಾಷ್ಟ್ರ ರಾಜಧಾನಿಯಲ್ಲಿ ಅದ್ದೂರಿಯಾಗಿ ನಡೆದಿದೆ. ಇಲ್ಲಿ ಅತ್ಯಾಕರ್ಷಕ ದುಬಾರಿ ಹಾಗೂ ಐಷಾರಾಮಿ ಕಾರುಗಳ ಪ್ರದರ್ಶನವಾಗಿತ್ತು.

ಪ್ರತಿ ಎರಡು ವರ್ಷಗಳಿಗೆ ಒಮ್ಮೆ ನಡೆಯುವ ದೇಶದ ಅತಿ ದೊಡ್ಡ ಆಟೋ ಪ್ರದರ್ಶನಕ್ಕೆ ರಾಷ್ಟ್ರ ರಾಜಧಾನಿ ಸಾಕ್ಷಿಯಾಗಿತ್ತು. ಫೆಬ್ರವರಿ 7ರಿಂದ 12ರ ವರೆಗೆ ನಡೆದ ಅಟೋ ಎಕ್ಸ್‌ಪೋ ಹಲವು ವಿಶೇಷತೆಗಳಿಗೆ ಕಾರಣವಾಗಿದೆ. ವಾಹನ ಉತ್ಪಾದನಾ ಸಂಸ್ಥೆಗಳಿಗೆ ತಮ್ಮ ಭವಿಷ್ಯದ ವಾಹನ ಮಾದರಿಗಳನ್ನು ಸಾರ್ವಜನಿಕವಾಗಿ ಪ್ರದರ್ಶನಗೊಳಿಸುವ ಪ್ರಮುಖ ವೇದಿಕೆ ಇದು. ವಿವಿಧ ಮಾದರಿಯ ಕಾರುಗಳು, ಬೈಕ್‌ಗಳು, ವಾಣಿಜ್ಯ ವಾಹನಗಳು, ಎಲೆಕ್ಟ್ರಿಕ್‌ ವಾಹನಗಳು ಮತ್ತು ಪರಿಕಲ್ಪನೆಯ ವಾಹನ ಮಾದರಿಗಳು ಜನರನ್ನು ಆಕರ್ಷಿಸಿದ್ದವು.

ಎಕ್ಸ್‌ಪೋದಲ್ಲಿ ಈ ಬಾರಿ ಎಲೆಕ್ಟ್ರಿಕ್‌ ವಾಹನ ಮಾದರಿಗಳು ಮತ್ತು ಕಾನ್ಸೆಫ್ಟ್ ಕಾರುಗಳು ಭಾರೀ ಜನಭಿಪ್ರಾಯವನ್ನು ಗಳಿಸಿದ್ದವು. ಭಾರತದಲ್ಲಿ ಕುಸಿದು ಹೋಗಿರುವ ಅಟೋಮೊಬೈಲ್‌ ವಲಯವನ್ನು ಮೆಲೆತ್ತುವ ಲಕ್ಷಣಗಳು ಈ ಎಕ್ಸ್‌ಪೋದಲ್ಲಿ ಕಂಡುಬಂದಿದೆ. ಗ್ರಾಹಕರ ಮನಸ್ಥಿತಿಯನ್ನು ಅರಿತುಕೊಂಡು ಅವರ ಆಸೆಯನ್ನು ಈಡೇರಿಸುವಂತಹ ಬೈಕ್‌ ಮತ್ತು ಕಾರುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಮಾರುತಿ ಸುಜುಕಿ ನಿರ್ಮಾಣದ ವಿಟಾರಾ ಬ್ರೆಝಾ ಫೇಸ್ಲಿಫ್ಟ್, ಟಾಟಾ, ಚೀನದ ಪ್ರಮುಖ ಕಾರುಗಳಿಗೆ ಇದು ವೇದಿಕೆಯಾಗಿತ್ತು.

2020ರ ಆಟೋ ಎಕ್ಸ್‌ಪೋದಲ್ಲಿ ಫೇಸ್ಲಿಫ್ಟ್ ಕಾರುಗಳ ಜತೆಗೆ ಹೊಸ ಕಾರು ಮಾದರಿಗಳು ಸಹ ಪ್ರದರ್ಶನಗೊಂಡಿವೆ. ವಿಟಾರಾ ಬ್ರೆಝಾ ಫೇಸ್ಲಿಫ್ಟ್, ಕಿಯಾ ಕಾರ್ನಿವಾಲ್‌, ಮಹೀಂದ್ರಾ ಥಾರ್‌ ಸೇರಿದಂತೆ ಟಾಟಾ ನಿರ್ಮಾಣದ ಮೂರು ಹೊಸ ಕಾರುಗಳಿದ್ದವು. ಹಾಗೆಯೇ ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಕಾರು ಮಾರಾಟವನ್ನು ಆರಂಭಿಸುತ್ತಿರುವ ಚೀನಿ ಕಾರು ಉತ್ಪಾದನ ಸಂಸ್ಥೆ ಗ್ರೇಟ್‌ ವಾಲ್‌ ಮೋಟಾರ್ಸ್‌ ಸಹ ವಿವಿಧ ಮಾದರಿಯ ಕಾರು ಆವೃತ್ತಿಗಳನ್ನು ಪ್ರದರ್ಶನಗೊಳಿಸಿದೆ. ಕೆಲವು ಈ ವರ್ಷ ರಸ್ತೆಗಿಳಿಯದಿದ್ದರೆ, ಕೆಲವು ಮುಂದಿನ ವರ್ಷ ಮಾರುಕಟ್ಟೆಗೆ ಬರಲಿವೆ.

ಹೊಸ ಬೈಕ್‌ ಮತ್ತು ಸ್ಕೂಟರ್‌ಗಳು
ಈ ಬಾರಿಯ ಎಕ್ಸ್‌ಪೋ ಅತಿ ಹೆಚ್ಚು ಎಲೆಕ್ಟ್ರಿಕ್‌ ವಾಹನಗಳ ಪ್ರದರ್ಶನಕ್ಕೆ ಸಾಕ್ಷಿಯಾಗಿವೆ. ಬೈಕ್‌ ಮತ್ತು ಸ್ಕೂಟರ್‌ ಮಾದರಿಗಳು ಹೆಚ್ಚಿನ ಮಟ್ಟದಲ್ಲಿ ಎಲೆಕ್ಟ್ರಿಕ್‌ ಆವೃತ್ತಿಗಳು ಪ್ರದರ್ಶನ ಕಂಡಿವೆ. ಜತೆಗೆ ಏಪ್ರಿಲಿಯಾ ಮತ್ತು ವೆಸ್ಪಾ 160 ಸಿಸಿ ಸ್ಕೂಟರ್‌ ಮಾದರಿಗಳು ಸಹ ಜನರನ್ನು ಆಕರ್ಷಿಸಿತ್ತು. ಹಲವು ದ್ವಿಚಕ್ರವಾಹನಗಳಲ್ಲೂ ಎಲೆಕ್ಟ್ರಿಕ್‌ ಮಾದರಿ ಗಮನ ಸೆಳೆದಿದ್ದವು.

ಕಾನ್ಸೆಫ್ಟ್ ಕಾರುಗಳು
ವಿನೂತನ ವಿನ್ಯಾಸದ ಪರಿಕಲ್ಪನೆ ವಾಹನಗಳು ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ಒಂದು ವಾಹನ ನಿರ್ಮಾಣಕ್ಕೂ ಮುನ್ನ ಪರಿಕಲ್ಪನೆಯ (ಕಾನ್ಸೆಫ್ಟ್) ಆಧಾರದ ಮೇಲೆ ನಿರ್ಮಾಣ ಮಾಡುವುದು ವಾಡಿಕೆ. ಇದರಿಂದ ಭವಿಷ್ಯ ವಾಹನ ಮಾದರಿಗಳನ್ನು ಜಗತ್ತಿಗೆ ಪರಿಚಯಿಸುವುದಕ್ಕೂ ಮುನ್ನ ಗ್ರಾಹಕರ ಕುತೂಹಲ ತಿಳಿಯಲು ಇದು ಪ್ರಮುಖ ವೇದಿಕೆಯಾಗಿತ್ತು. ಇದೀಗ ಟಾಟಾ ಆಲೊóಜ್‌ ಎಲೆಕ್ಟ್ರಿಕ್‌, ಮಹೀಂದ್ರಾ ಫ‌ನ್ಸ$rರ್‌ ಸೇರಿದಂತೆ ಹಲವು ಪರಿಕಲ್ಪನೆ ವಾಹನಗಳು ಈ ಬಾರಿಯ ಆಟೋ ಎಕ್ಸ್‌ಪೋದಲ್ಲಿ ಭಾಗವಹಿಸಿದ್ದವು.

30 ಕಂಪೆನಿಗಳು
ಈ ಬಾರಿಯ ಆಟೋ ಎಕೊÕ$³àದಲ್ಲಿ ಭಾರತ ಸೇರಿದಂತೆ ವಿಶ್ವದ ಪ್ರತಿಷ್ಠಿತ 30 ಆಟೋಮೊಬೈಲ್‌ ಕಂಪನಿಗಳು ಪಾಲ್ಗೊಂಡಿವೆ. 70 ವಾಹನಗಳು ಅನಾವರಣಗೊಂಡಿದೆ.

ಗ್ರೀನ್‌ ಎಕ್ಸ್‌ಪೋ
ಈ ಬಾರಿಯ ಅಟೋ ಎಕ್ಸ್‌ಪೋದಲ್ಲಿ ಇಂಧನ ಕಾರುಗಳಿಗಿಂತ ಎಲೆಕ್ಟ್ರಿಕ್‌ ಕಾರುಗಳ ಭರಾಟೆ ಜೋರಿತ್ತು. ಜಗತ್ತಿನ ಪ್ರಸಿದ್ಧ ಕಾರು ತಯಾರಕ ಸಂಸ್ಥೆಗಳು ತಮ್ಮ ಮುಂದಿನ ಎಲೆಕ್ಟ್ರಿಕ್‌ ಕಾರುಗಳನ್ನು ಪರಿಚಯಿಸಿದ್ದವು. ಇಲ್ಲಿ ಮುಂದಿನ ದಿನಗಳಲ್ಲಿ ಭಾರತಕ್ಕೆ ಬರಲಿರುವ ಕೆಲವು ಎಲೆಕ್ಟ್ರಿಕ್‌ ಕಾರುಗಳ ಪರಿಚಯವನ್ನು ಇಲ್ಲಿ ನೀಡಲಾಗಿದೆ.

ಟಾಟಾ ಸಫಾರಿ ಸಿಯೆರಾ
ಟಾಟಾ ಸಫಾರಿ ಸಿಯೆರಾ ಕಾರು ಪ್ರದರ್ಶನದಲ್ಲಿ ಜಾಗಪಡೆದಿತ್ತು. ಇದು ಹಳೆಯ ಕಾರನ್ನು ನೆನಪಿಸುವಂತಹ ಡಿಸೈನ್‌ ಹೊಂದಿತ್ತು, ಮಾತ್ರವಲ್ಲದೇ ವಾಹನದ ವಿನ್ಯಾಸ ಮತ್ತು ಗ್ರೌಂಡ್‌ ಕ್ಲಿಯರೆನ್ಸ್‌ ಚೆನ್ನಾಗಿದೆ.

ವಿಡಬ್ಲ್ಯು ಐಡಿ ಕ್ರೋಝ್
ಮತ್ತೂಂದು ಎಲೆಕ್ಟ್ರಿಕ್‌ ಕಾರು ವೋಕ್ಸ್‌ವೇಗನ್‌ ಸಂಸ್ಥೆಯ ವಿಡಬ್ಲ್ಯು ಐಡಿ ಕ್ರೋಝ್. ಇದರ ಬ್ಯಾಟರಿಯನ್ನು 30 ನಿಮಿಷದಲ್ಲಿ ಸುಮಾರು ಶೇ. 80ರಷ್ಟು ಚಾರ್ಜ್‌ ಮಾಡಬಹುದಾಗಿದೆ. ಮಾತ್ರವಲ್ಲದೇ ಇದರ ಗರಿಷ್ಠ ವೇಗ 180 ಕಿ.ಮೀ./ಗಂಟೆ.

ರೆನಾಲ್ಟ್ ಝೆಡ್‌ಒಇ
ಇದು ಯುರೋಪಿನಲ್ಲಿ ಅತೀ ಹೆಚ್ಚು ಮಾರಾಟವಾಗುವ ಕಾರು. 2012ರ ಜಿನೆವಾ ಮೋಟಾರ್‌ ಶೋನಲ್ಲಿ ಬಿಡುಗಡೆಯಾದ ಈ ಕಾರು ದಿಲ್ಲಿ ಎಕ್ಸ್‌ಪೋದಲ್ಲಿ ಪ್ರಮುಖ ಆಕರ್ಷಣೆಯಾಗಿತ್ತು. 2012 ಬಿಡುಗಡೆಯಾಗ ಕಾರಾದರೂ ಇಂದು ಇದನ್ನು ಆಧುನಿಕವಾಗಿ ಸಿದ್ಧಪಡಿಸಲಾಗಿದೆ. ಇದರಲ್ಲಿ ಅಟೋ ಪಾರ್ಕಿಂಗ್‌ ಬ್ರೇಕ್‌ ಸಿಸ್ಟಂ ಅನ್ನು ಅಳವಡಿಸಲಾಗಿದೆ.

ಕಿಯಾ ನಿರೋ
ಕಿಯಾ ಸಂಸ್ಥೆಯ ನಿರೋ ಕಾರು ಎಲೆಕ್ಟ್ರಿಕ್‌ ಕಾರುಗಳತ್ತ ಹೆಚ್ಚು ಗಮನಹರಿಸುತ್ತಿದೆ. ಇದರಲ್ಲಿ ಲಿಕ್ವಿಡ್‌ ಕೂಲ್ಡ್‌ 64 ಕಿ.ವ್ಯಾ. ಲಿಥಿಯಂ ಐಯಾನ್‌ ಪಾಲಿಮಾರ್‌ ಬ್ಯಾಟರಿ ಹೊಂದಿದೆ. ಜತೆಗೆ ಉತ್ತಮ ಕ್ಯಾಬಿನ್‌ ಸ್ಟೇಸ್‌ ಒಳಗೊಂಡಿದೆ. ಒಮ್ಮೆ ಚಾರ್ಜ್‌ ಮಾಡಿದರೆ 450 ಕಿ.ಮೀ. ಚಲಿಸಬಹುದಾಗಿದೆ.

ಹೈಮಾ ಇವಿ 1
ಚೀನದ ಹೈಮಾ ಗ್ರೂಪ್‌ನ ಇವಿ 1 ಮಾದರಿ ವಾಹನ ಎಕ್ಸ್‌ಪೋದಲ್ಲಿ ಹೆಚ್ಚು ಗಮನ ಸೆಳೆದ ವಾಹನಗಳ ಪೈಕಿ ಒಂದು. ಇದು ಎರಡು ಮಾದಿ ವಾಹನಗಳನ್ನು ಪರಿಚಯಿಸಲಿದೆ. ಒಂದು ಒಮ್ಮೆ ಚಾರ್ಜ್‌ ಮಾಡಿದರೆ 200 ಕಿ.ಮೀ. ಮೈಲೇಜ್‌ ಹಾಗೂ 300 ಕಿ.ಮೀ. ಮೈಲೇಜ್‌ ನೀಡಲಿದೆ.

ಟಾಪ್ ನ್ಯೂಸ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.