ಸೋಲು ಶಾಶ್ವತವಲ್ಲ


Team Udayavani, Sep 30, 2019, 5:43 AM IST

Life,-dream

ಜೀವನದಲ್ಲಿ ಸೋಲು ಗೆಲುವು ಎಲ್ಲರ ಬದುಕಿನಲ್ಲಿ ಇದ್ದದ್ದೇ. ಕೆಲವರು ಸೋಲುತ್ತಾರೆ ಇನ್ನೂ ಕೆಲವರು ಗೆಲ್ಲುತ್ತಾರೆ. ಆದರೆ ಸತತ ಸೋಲು ಕಂಡ ಅನಂತರವೂ ಗೆಲ್ಲುವುದಿದೆಯಲ್ಲಾ ಅದು ಸಾಮಾನ್ಯ ಸಂಗತಿಯಲ್ಲ.

ಹೆಚ್ಚಿನವರು ಒಂದು ಸೋಲು ಕಂಡ ಅನಂತರ ಮತ್ತೆ ಆ ಗುರಿಯ ಕಡೆ ಕಣ್ಣೆತ್ತಿ ಸಹ ನೋಡುವುದಿಲ್ಲ. ಗೆಲುವು ಹೇಗೆ ಶಾಶ್ವತವಲ್ಲವೋ ಹಾಗೆ ಸೋಲು ಕೂಡ ಶಾಶ್ವತವಲ್ಲ ಎನ್ನುವುದು ಹೆಚ್ಚಿನವರು ಗಣನೆಗೆ ತೆಗೆದುಕೊಳ್ಳದ ವಿಷಯವಾಗಿದೆ. ಈ ಸೋಲಿನಿಂದ ಮತ್ತೆ ಏಳುವುದು ಹೇಗೆ… ಏನು ಮಾಡಬೇಕು ಎನ್ನುವ ಪ್ರಯತ್ನಕ್ಕೆ ನಮ್ಮ ಸುತ್ತಮುತ್ತಲೇ ಅನೇಕ ಉದಾಹರಣೆಗಳಿವೆ ಆದರೆ ನಾವು ಅದನ್ನು ತಿಳಿಯುವ ಗೋಜಿಗೆ ಹೋಗದೆ ನಾವು ನಮ್ಮ ಕನಸುಗಳನ್ನು ಬಲಿ ಕೊಡಲು ಸಿದ್ಧರಾಗಿರುತ್ತೇವೆ.
ನೀವು ಗಮನಿಸರಬಹುದು. ಇಸ್ರೋದ ಮೊನ್ನೆ ಮೊನ್ನೆಯ ಘಟನೆ ಅದೆಷ್ಟು ಸ್ಫೂರ್ತಿದಾಯಕವಾಗಿತ್ತು. ಅದೆಷ್ಟು ವರುಷಗಳ ಕನಸು, ಪರಿಶ್ರಮಗಳು ಒಟ್ಟು ಸೇರಿ ವಿಶ್ವದೆದುರು ಅದೇನನ್ನೋ ಸಾಧಿಸಲು ಪಣತೊಟ್ಟಂತೆ ಕಾದು ಕುಳಿತಿತ್ತು. ಇನ್ನೊಂದು ಕಡೆ ತಮ್ಮ ಸಾಧನೆಯನ್ನು ಅಭಿನಂದಿಸಲು ದೇಶವೇ ರಾತ್ರಿ 2 ಗಂಟೆಯ ವೇಳೆಯಲ್ಲಿ ಒಟ್ಟಿಗೆ ಇದ್ದಿತು. ತನ್ನ ಕನಸು ನನಸಾಗುವ ಸುಸಂದರ್ಭಕ್ಕೆ ನಿರೀಕ್ಷಿತ ಗುರಿ ತಲುಪುವ ಕೊನೆ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡ ಆ ಕ್ಷಣ ಇಡೀ ಇಸ್ರೋದ ಕುಟುಂಬ ಯಾವ ರೀತಿ ತನ್ನ ಪರಿಸ್ಥಿತಿಯನ್ನು ಎದುರಿಸಿರಬೇಡ.

ಇಸ್ರೋದ ಅಧ್ಯಕ್ಷರು ಗದ್ಗದಿತ ಧ್ವನಿಯಲ್ಲಿ ತಲೆ ತಗ್ಗಿಸಿ ಮಾತನಾಡಿದಾಗ ಅಲ್ಲಿ ರಾತ್ರಿ ಹಗಲೆನ್ನದೆ ಕೆಲಸ ನಿರ್ವಹಿಸಿದ ವಿಜ್ಞಾನಿಗಳು ಎಷ್ಟು ಕುಗ್ಗಿರಬೇಡ. ಎಲ್ಲ ಹಂತದ ಪ್ರಯತ್ನದಲ್ಲೂ ಗೆದ್ದು ತನ್ನ ಕೊನೆಯ ಕ್ಷಣದಲ್ಲಿ ಗೆಲುವಿನ ಗುರಿಯ ಬಿಂದುವನ್ನು ಮುಟ್ಟಲಾಗಲಿಲ್ಲ ಎಂದಾಗ ಅಲ್ಲಿನ ಪ್ರತಿಯೊಬ್ಬರ ಮಾನಸಿಕತೆಯನ್ನು ಅರಿಯುವುದು ಕಷ್ಟ ಸಾಧ್ಯ.

ಆ ಸಂದರ್ಭದಲ್ಲಿ ದೇಶದ ಪ್ರಧಾನಿ ಮುಂದೆ ಬಂದು ಇದು ಸೋಲಲ್ಲ ಎಂದು ಬೆನ್ನು ತಟ್ಟಿ ಭರವಸೆಯ ಅಪ್ಪುಗೆಯ ಕೊಟ್ಟಾಗ, ಇಡೀ ದೇಶಕ್ಕೆ ದೇಶವೇ ನಿಂತು ನಿಮ್ಮದು ಸೋಲಲ್ಲ ಎಂದು ಒಂದೇ ಕಂಠದಲ್ಲಿ ಹೇಳಿಸಿಕೊಂಡದ್ದು ಇದೆಯಲ್ಲಾ  ಅದು ನಿಜಕ್ಕೂ ಸೋಲಿನ ಅಂಚಿನಲ್ಲಿರುವ ಪ್ರತಿಯೊಬ್ಬರಿಗೂ ಮತ್ತೂಮ್ಮೆ ಎಡವಿ ಬಿದ್ದ ನೆಲದಿಂದ ಕೊಸರಿ ನಿಲ್ಲುವಂಥ ಅದಮ್ಯ ಆತ್ಮಶಕ್ತಿಯನ್ನು ತುಂಬಬಲ್ಲದು.

ಹೀಗೆ ಪ್ರತಿಯೊಬ್ಬರಿಗೂ ತಾನೂ ಸೋತಾಗ, ತನ್ನ ಪ್ರಾಮಾಣಿಕ ಪ್ರಯತ್ನಕ್ಕೆ ಗೆಲುವು ಸಿಗದಾಗ ತನ್ನ ಹೆಗಲಿಗೆ ಹೆಗಲು ಕೊಟ್ಟು ತನ್ನ ಆತ್ಮವಿಶ್ವಾಸವನ್ನು ಹೆಚ್ಚಿಸುವಂಥ ಧನಾತ್ಮಕ ವಾತಾವರಣ ನಿರ್ಮಿಸಿದ್ದೇ ಆದಲ್ಲಿ ಗೆಲುವಿನ ಗುರಿ ಹೆಚ್ಚೇನು ದೂರವಿಲ್ಲವೆಂದು ನಮಗೆ ಅನಿಸಿಬಿಡಬಹುದು.

 - ವಿಶ್ವಾಸ್‌ ಅಡ್ಯಾರ್‌

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.