ಮನೆ ಹಳೆಯದಾದಂತೆ ದುರಸ್ತಿ ಅನಿವಾರ್ಯ !


Team Udayavani, Jul 21, 2018, 4:07 PM IST

21-july-15.jpg

ಮನೆ ಅಂದಮೇಲೆ ಒಂದಷ್ಟು ರಿಪೇರಿ ಕೆಲಸಗಳು ಪ್ರತಿ ವರ್ಷ ಇದ್ದೇ ಇರುತ್ತವೆ. ಹೊಸ ಮನೆ ಕಟ್ಟಿಸಿದಾಗ ಸುಮಾರು 8- 10 ವರ್ಷಗಳವರೆಗೆ ಯಾವುದೇ ತಾಪತ್ರಯಗಳಿರುವುದಿಲ್ಲ. ಅನಂತರ ಒಂದೊಂದೇ ಸಮಸ್ಯೆಗಳು ಎದುರಾಗುತ್ತವೆ. ಅದಕ್ಕೆ ನಾವು ಮೊದಲೇ ಸಿದ್ಧತೆ ಮಾಡಿಕೊಳ್ಳುವುದು ಬಹು ಮುಖ್ಯ.

ಮನೆ ಕಟ್ಟುವ ಮೊದಲೇ ರಿಪೇರಿಗೆ ಅನುಕೂಲಕರವಾಗುವಂತೆ ಸಾಕಷ್ಟು ಮುಂಜಾಗ್ರತೆ ವಹಿಸುವುದು ಉತ್ತಮ. ಇತ್ತೀಚಿನ ಟ್ರೆಂಡ್‌ ಅಂದರೆ ಮನೆ ಒಳಗಿನ ವೈರಿಂಗ್‌, ಪ್ಲಂಬಿಂಗ್‌ ಎಲ್ಲವೂ ಮುಚ್ಚಿದಂತಿರಬೇಕು. ಯಾವುದೂ ತೆರೆದಿರಬಾರದು. ಆದರೆ ರಿಪೇರಿಯ ದೃಷ್ಟಿಯಿಂದ ಮನೆಯ ವಿನ್ಯಾಸ ಮಾಡುವಾಗಲೇ ಮುಂಜಾಗರೂಕತೆ ವಹಿಸಿ, ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳುವುದು ಉತ್ತಮ.

ವಿದ್ಯುತ್‌ ವಯರಿಂಗ್‌
ವಿದ್ಯುತ್‌ ವಾಹಕಗಳನ್ನು ಸಾಮಾನ್ಯವಾಗಿ ಒಂದೆರಡು ತಿರುವುಗಳಲ್ಲಿ ಸುಲಭದಲ್ಲಿ ಎಳೆದು ಹಾಕಬಹುದು. ಇದಕ್ಕಿಂತ ಹೆಚ್ಚಿನ ಬೆಂಡುಗಳು ಬಂದರೆ, ವೈರ್‌ ಗಳನ್ನು ಎಳೆಯಲು ಕಷ್ಟವಾಗುತ್ತದೆ. ಆದುದರಿಂದ ಪ್ರತಿ ಎರಡು ಮೂರು ಬೆಂಡಿಗೆ ಒಂದರಂತೆ ಜಂಕ್ಷನ್‌ ಬಾಕ್ಸ್‌ ಗಳನ್ನು ನೀಡಬೇಕು. ಮಹಡಿಯಿಂದ ಮಹಡಿಗೆ, ಒಳಗಿನಿಂದ ಹೊರಗೆ ಹೋಗುವ ಸ್ಥಳದಲ್ಲೂ ಇದನ್ನು ಅಳವಡಿಸಿದರೆ ಪರಿಶೀಲನೆ ಮಾಡಲು ಸುಲಭವಾಗುತ್ತದೆ. ವಿದ್ಯುತ್‌ ವಾಹಕಗಳಲ್ಲಿ ಹೆಚ್ಚಿನ ವೋಲ್ಟೇಜ್‌ ಬಂದು ವೈರುಗಳು ಸುಡಬಹುದು. ಆಗ ಪೈಪುಗಳು ತೀರ ಉದ್ದವಾಗಿದ್ದರೆ ಹಳೆಯ ವಯರ್‌ಗಳನ್ನು ತೆಗೆದು ಹೊಸದು ಹಾಕುವುದು ಕಷ್ಟ.

ಕೇಬಲ್‌ ದುರಸ್ತಿ
ರಸ್ತೆ ಬದಿಯ ಕಂಬದಿಂದ ಮನೆಗೆ ಸಂಪರ್ಕ ಕಲ್ಪಿಸುವ ಅಂಡರ್‌ ಗ್ರೌಂಡ್‌ ಕೇಬಲ್‌ ಅಳವಡಿಸುವಾಗ ನಾಲ್ಕು ಇಲ್ಲವೇ ಆರು ಇಂಚಿನ ಸ್ಯಾನಿಟರಿ ಪೈಪ್‌ಗಳನ್ನು ಬಳಸುವ ಪ್ಲಾಸ್ಟಿಕ್‌ ಇಲ್ಲವೇ ಸುಟ್ಟ ಜೇಡಿ ಮಣ್ಣಿನ ಕೊಳವೆಗಳಲ್ಲಿ ಹಾದುಹೋಗುವಂತೆ ಮಾಡಬೇಕು. ಇದರಿಂದ ಮುಂದೆ ಹೆಚ್ಚು ತೊಂದರೆಯಾಗುವುದಿಲ್ಲ.

ವಿದ್ಯುತ್‌ ಕಂಬ ಮನೆಯ ಎದುರು ಬದಿಗಿದ್ದರೆ ಗುಂಡಿ ಮಾಡಿ ಕೊಳವೆ ಮೂಲಕ ಹಾಕಬಹುದು. ಪಾದಚಾರಿ ಮಾರ್ಗದಲ್ಲಿ ಕೇಬಲ್‌ ಒಂದಷ್ಟು ದೂರ ಹಾದುಹೋಗಿದ್ದರೆ, ಅಲ್ಲೂ ಕೂಡ ಸೂಕ್ತ ರೀತಿಯಲ್ಲಿ ಪೈಪ್‌ ಅಳವಡಿಸಿದ್ದರೆ, ಮುಂದೆ ರಿಪೇರಿ ಮಾಡಲು ಅನುಕೂಲಕರ. ಬೆಂಡ್‌, ತಿರುವುಗಳಿದ್ದಾಗ ಇನ್‌ ಸ್ಪೆ ಕ್ಷನ್‌ ಚೇಂಬರ್‌ ಹಾಕಲು ಮರೆಯದಿರಿ. ಯಾವುದೇ ಪೈಪ್‌ ಇಲ್ಲವೇ ಕೇಬಲ್‌ ಅಳವಡಿಸುವ ಮೊದಲು ಅದರ ರಕ್ಷಣೆಯ ಬಗ್ಗೆಯೂ ಕಾಳಜಿ ವಹಿಸಬೇಕು.

ಪೈಪ್‌, ಕೊಳವೆ ಪರಿಶೀಲನೆ
ಪ್ರತಿ ಹತ್ತು ಹದಿನೈದು ಅಡಿಗಳಿಗೊಂದು ಇನ್‌ ಸ್ಪೆಕ್ಷನ್‌ ಛೇಂಬರ್‌ ಹಾಕುವುದು ಉತ್ತಮ. ಹಾಗೆಯೇ, ಪ್ರತಿ ತಿರುವಿನಲ್ಲೂ ಒಂದು ಪರಿಶೀಲನಾ ಕಿಂಡಿಯನ್ನು ಕೊಡಲು ಮರೆಯಬಾರದು. ಪ್ರತಿ ಬೆಂಡ್‌ ಹಾಗೂ ಪ್ರತಿ ಹತ್ತು ಹನ್ನೆರಡು ಅಡಿಗಳಿಗೆ ಒಂದರಂತೆ ಡೋರ್‌ ಎಂದು ಕರೆಯಲ್ಪಡುವ ಮುಚ್ಚಳಗಳನ್ನು ಅಳವಡಿಸಬೇಕು. ಮನೆಯೊಳಗಿನಿಂದ ಹೊರಗೆ ಬರುವ ಕಡೆ, ಅಡ್ಡ ಹರಿದು ಕೆಳಗೆ ಇಳಿಯುವ ಕಡೆ ಕಡ್ಡಾಯವಾಗಿ ಈ ಡೋರ್‌ ಗಳು ಇರ ಬೇಕು. ಹೀಗೆ ಮಾಡುವುದರಿಂದ ಹಂತಹಂತವಾಗಿ ರಿಪೇರಿ ಮಾಡಲು ಅನುಕೂಲಕರ.

ಮನೆಗೆ ಬರುವ ನೀರನ್ನು ಎಷ್ಟೇ ಪರಿಷ್ಕರಿಸಿದರೂ ಒಂದಷ್ಟು ಮಣ್ಣು, ಮತ್ತೂಂದು ಉಳಿದು ಬಿಡುತ್ತದೆ. ಜತೆಗೆ ದೇಹಕ್ಕೆ ಪೂರಕವಾದ ಕೆಲವು ರಾಸಾಯನಿಕಗಳೂ ಮಳೆಯ ನೀರಿನ ಜತೆ ನೆಲದಲ್ಲಿ ಹರಿದು ನದಿ, ಬಾವಿಗೆ ಸೇರ್ಪಡೆಯಾಗುತ್ತದೆ. ಇದೆಲ್ಲ ಕೆಲವೊಮ್ಮೆ ಪೈಪ್‌ ಗಳ ಒಳಗೆ ಕಟ್ಟಿಕೊಂಡು ನಿಧಾನವಾಗಿ ಅವುಗಳ ಸಾಮರ್ಥ್ಯವನ್ನು ಕುಗ್ಗಿಸುತ್ತವೆ. ಆದ್ದ ರಿಂದ ಈ ಎಲ್ಲವನ್ನೂ ಆಗಾಗ ನಿರ್ವಹಣೆ ಮಾಡಿ, ರಿಪೇರಿ ಮಾಡುವ ರೀತಿಯಲ್ಲಿ ಅಳವಡಿಸಿಕೊಂಡರೆ ತೊಂದರೆ ಬಂದಾಗ ನಿವಾರಿಸಿಕೊಳ್ಳುವುದು ಸುಲಭ. 

ಮನೆ ಕಟ್ಟಿದ ಮೇಲೆ ನಿರ್ವಹಣೆ ಪದೇ ಪದೇ ಬೇಡದಿದ್ದರೂ, ತೊಂದರೆ ಕೊಟ್ಟಾಗ ಸುಲಭದಲ್ಲಿ ರಿಪೇರಿ ಆಗುವಂತೆ ವ್ಯವಸ್ಥೆ
ಮೊದಲೇ ಮಾಡಿಕೊಂಡಿದ್ದರೇ ಒಳ್ಳೆಯದು. ಇಲ್ಲದಿದ್ದರೆ, ಮನೆಯನ್ನು ಒಡದೇ ರಿಪೇರಿ ಮಾಡುವ ಪರಿಸ್ಥಿತಿಯೂ ಎದುರಾಗಬಹುದು. ಅದಕ್ಕಾಗಿ ಪೂರ್ವಾಲೋಚನೆ ಮಾಡಿಕೊಂಡು ಮುಂದುವರಿಯುವುದು ಉತ್ತಮ.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.