ಕೋಪ ನಿಯಂತ್ರಣದಲ್ಲಿರಲಿ


Team Udayavani, Dec 30, 2019, 4:47 AM IST

bg-44

ಕೋಪ ಎಂಬುದು ನೈಸರ್ಗಿಕವಾದುದು. ಆದರೆ ಇಂತಹ ಕೋಪಗಳಿಂದ ನಮ್ಮ ವ್ಯಕ್ತಿತ್ವಗಳು ಕೆಡದಂತೆ ಜಾಗ್ರತೆ ವಹಿಸಿಕೊಳ್ಳುವುದು ಅಗತ್ಯ. ಕೆಲವು ಅನಿವಾರ್ಯ ಸಂದರ್ಭಗಳಲ್ಲಿ ಪರಿಸ್ಥಿತಿ ನಮ್ಮನ್ನು ಕೆಟ್ಟ ರೀತಿಯಲ್ಲಿ ಪ್ರತಿಕ್ರಿಯಿಸುವಂತೆ ಮಾಡುವಂತೆ, ಅಸಹಜವಾದ ಸಂಗತಿಗಳು ನಡೆದಾಗ ಅಥವಾ ಅಂತಹ ಸನ್ನಿವೇಶಗಳಿಂದ ನಮಗೆ ಹಾನಿಯಾದಾಗ ಕೋಪಗಳು ಬರುವುದು ಸಾಮಾನ್ಯ. ಆದರೆ ಅವುಗಳನ್ನು ನಾವು ವ್ಯಕ್ತಪಡಿಸುವಾಗ ಬೇರೊಬ್ಬರಿಗೆ ಹಾನಿಯಾಗದಂತೆ ನೋಡಿಕೊಳ್ಳುವುದು ಉತ್ತಮ. ಕೋಪ ನಿಗ್ರಹವಾದರೆ ಬದುಕಿಗೊಂದು ಅರ್ಥ ಕಂಡುಕೊಳ್ಳಬಹುದು.

ಕೋಪಗಳನ್ನು ನಿಯಂತ್ರಿಸುವುದು ಹೇಗೆ?
ನೀವು ತುಂಬಾ ಕೋಪಗೊಳ್ಳುವವರಾಗಿದ್ದಾರೆ ನಿಮ್ಮ ಕೋಪಕ್ಕೆ ಕಾರಣವಾಗುವ ವಿಷಯಗಳ ಕುರಿತು ಆತ್ಮಾವಲೋಕನ ನಡೆಸಿಕೊಳ್ಳಿ. ಇದಕ್ಕೆ ಕುಟುಂಬ ಸದಸ್ಯರ, ಗೆಳೆಯರ ಸಹಾಯ ಪಡೆದುಕೊಳ್ಳಿ.

– ನಿಮ್ಮಲ್ಲಿ ಕೋಪ ಆರಂಭವಾಗುತ್ತಿರುವ ಅರಿವಾದೊಡನೆ ದೀರ್ಘ‌ವಾಗಿ ಶ್ವಾಸ ಎಳೆದುಕೊಳ್ಳುತ್ತಲೂ ಹೊರಗೆ ಬಿಡುತ್ತಲೂ ಇರಿ. ಅದನ್ನು ಹೀಗೆ ಪುನರಾವರ್ತಿಸುತ್ತಾ ಇರಿ. ನಿಮ್ಮ ಆಕ್ರೋಶ ಕಡಿಮೆಯಾಗಲಿದೆ.

– ಕೋಪದಿಂದ ಶಾರೀರಿಕ ಬದಲಾವಣೆಯಾಗುವ ಭಾಗಗಳನ್ನು ತಡೆಯಿರಿ. ಉದಾಹರಣೆಗೆ ನಿಮ್ಮ ಕೈಗಳು ಬಳಕೆಯಾಗದಂತೆ ನೋಡಿಕೊಳ್ಳಿ. ತಲೆನೋವಾದರೆ ಹಣೆಗೆ ಮಸಾಜ್‌ ಮಾಡಿರಿ. ವ್ಯಾಯಾಮ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿರಿ.

– ಕೋಪ ಆರಂಭವಾಗುವ ಸಂದರ್ಭ ಒಂದು ಎರಡು ಹೀಗೆ ನೂರರವರೆಗೆ ಮತ್ತು ನೂರರಿಂದ ಒಂದರವರೆಗೆ ಎಣಿಸುತ್ತಾ ಇರಿ. ಕಡಿಮೆಯಾಗದೇ ಇದ್ದರೆ ಪುನರಾವರ್ತಿಸಿ.

– ಆರೋಗ್ಯಕರ ರೀತಿಯಿಂದ ಕೋಪವನ್ನು ಪ್ರಕಟಿಸಲು ಬೇರೆ ಮಾರ್ಗವನ್ನು ನೋಡಿಕೊಳ್ಳಿ. ವಾದ್ಯ ಸಂಗೀತವನ್ನು ಆಸ್ವಾದಿಸಬಹುದು. ಚಿತ್ರ ರಚನೆ ಮಾಡಬಹುದು. ಕೆಲವರು ಇಂತಹ ಸಂದರ್ಭದಲ್ಲಿ ಪತ್ರ ಬರೆಯುವುದೂ ಇದೆ. ಇವು ಅವರನ್ನು ಶಾಂತರನ್ನಾಗಿಸುತ್ತದೆ.

– ಕೋಪದಿಂದಾಗುವ ಗುಣ ದೋಷಗಳ ಒಂದು ಪಟ್ಟಿ ತಯಾರಿಸಿ. ಕೋಪ ಇಳಿದ ಸಂದರ್ಭದಲ್ಲಿ ಅದನ್ನು ಓದುತ್ತಾ ಇರಿ. ಇದು ನಿಮ್ಮ ಕೋಪವನ್ನು ಕಡಿಮೆ ಮಾಡಲಿದೆ.

– ಹಾಸ್ಯ ಎಲ್ಲ ರೀತಿಯ ಮನೋರೋಗಕ್ಕೆ ಒಳ್ಳೆಯ ಅಸ್ತ್ರ. ಈ ಮನೋಭಾವವನ್ನು ರೂಢಿಸಿಕೊಳ್ಳಿ. ಹಾಸ್ಯಬರಹ, ಕಾರ್ಟೂನ್‌ಗಳನ್ನು ಆಸ್ವಾ‌ದಿಸಿ. ನೀವು ತುಂಬಾ ಇಷ್ಟ ಪಡುವ ಹಾಸ್ಯಗಳಿಗೆ ಕಿವಿಯಾಗಲು ಪ್ರಯತ್ನಿಸಿ.

– ಕೋಪ ಪ್ರಕಟನೆಗೆ ಸಾಧ್ಯತೆ ಇಲ್ಲದಂತಾಗಲು ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಇವು ನಿಮ್ಮ ಮನಸ್ಸನ್ನು ಬೇರೆ ಕಡೆಗೆ ಕರೆದೊಯ್ಯುತ್ತದೆ. ಜೋರಾಗಿ ಹಾಡುವುದು, ಶಟ್ಲ, ವಾಲಿಬಾಲ್‌, ಬಾಸ್ಕೆಟ್‌ ಬಾಲ್‌, ಟೆನಿಸ್‌ ಮುಂತಾದ ಆಟಗಳನ್ನು ಆಡುವುದು, ಈಜುವುದು ಇವೆಲ್ಲಾ ಕೋಪದ ವ್ಯಾಪ್ತಿಯನ್ನು ತೀವ್ರತೆಯನ್ನು ಕಡಿಮೆಗೊಳಿಸುತ್ತದೆ.

– ಕೌನ್ಸೆಲರ್‌, ಸೈಕೋಲಜಿಸ್ಟ್‌, ಯೋಗ ಶಿಕ್ಷಕರು ಮೊದಲಾದ ಪ್ರೊಫೆಶನಲ್‌ಗ‌ಳ ಸಹಾಯದೊಂದಿಗೆ ಕೋಪ ನಿಯಂತ್ರಣ ಮಾಡಿಕೊಳ್ಳಲು ಸಾಧ್ಯ. ತಜ್ಞರ ಸಹಾಯದಿಂದ ರಿಲ್ಯಾಕ್ಸೇಶನ್‌ ಥೆರಪಿ ಅಭ್ಯಾಸ ಮಾಡಿಕೊಳ್ಳಿ.

- ಕಾರ್ತಿಕ್‌ ಅಮೈ

ಟಾಪ್ ನ್ಯೂಸ್

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.