ಪ್ರಾಮಾಣಿಕತೆ ಮರೆಯಾಗದಿರಲಿ….


Team Udayavani, Dec 30, 2019, 3:56 AM IST

Udayavani Kannada Newspaper

ಆಧುನಿಕ ತಂತ್ರಜ್ಞಾನ ದೂರದಲ್ಲಿರುವವರನ್ನು ಹತ್ತಿರವಾಗಿಸಿದೆ ನಿಜ. ಆದರೆ ಮಾನಸಿಕವಾಗಿ ಗೋಡೆಯೊಂದನ್ನು ಗೊತ್ತಿಲ್ಲದಂತೆಯೇ ಅಡ್ಡ ಕಟ್ಟಿ ಬಿಟ್ಟಿದೆ ಎನ್ನುವುದು ಅಷ್ಟೇ ಸತ್ಯ. ಅದೊಂದು ಸಂಜೆ ನಾನು ಸ್ನೇಹಿತನೊಂದಿಗೆ ಪೇಟೆಯಲ್ಲಿ ಸುತ್ತಾಡುತ್ತಿದ್ದೆ, ಇದ್ದಕ್ಕಿದ್ದಂತೆ ಸುಮಾರು 35 ವರ್ಷದ ಅಪರಿಚಿತನೊಬ್ಬ “ಸರ್‌’ ಎಂದು ನಮ್ಮ ಬಳಿಗೆ ಬಂದ. ಏನು ಎನ್ನುವಂತೆ ಅವನತ್ತ ನೋಡಿದೆವು. “ಸರ್‌ ನಾನು ಬೀದರ್‌ನವನು. ಚಿಕಿತ್ಸೆಗೆಂದು ಅಮ್ಮನನ್ನು ಕರೆದುಕೊಂಡು ಬಂದಿದ್ದೆ. ಈಗ ಅಮ್ಮ ಇಲ್ಲೆಲ್ಲೊ ಕಳೆದು ಹೋಗಿದ್ದಾಳೆ. ನನ್ನ ಮೊಬೈಲ್‌ ಆಕೆ ಕೈಯಲ್ಲಿದೆ. ನಿಮ್ಮ ಫೋನ್‌ ಕೊಡಿ. ಕರೆ ಮಾಡಬೇಕು’ ಎಂದ.

ನಮಗೆ ನಂಬಿಕೆ ಬರಲಿಲ್ಲ. ಇಂತಹ ಸುಳ್ಳು ಹೇಳಿ ಮೊಬೈಲ್‌ ಅಪಹರಿಸಿದ ಬಗ್ಗೆ ಕೇಳಿದ್ದ ನಾವು ಇದೊಂದು ಗಿಮಿಕ್‌ ಅಂದುಕೊಂಡು ಅಲ್ಲಿಂದ ಹೊರಡಲು ಅನುವಾದೆವು. “ಯಾರೂ ನಂಬುತಾ ಇಲ್ಲ. 4-5 ಜನರಲ್ಲಿ ಕೇಳಿದರೂ ಸಹಾಯ ಮಾಡಲು ಮುಂದಾಗಿಲ್ಲ. ನಾನೇನೂ ನಿಮ್ಮ ಮೊಬೈಲ್‌ ಅಪರಿಸಿಕೊಂಡು ಹೋಗುವುದಿಲ್ಲ. ಬೇಕಾದರೆ ಅಮ್ಮನ ಜತೆ ನೀವೇ ಮಾತಾಡಿ. ಹೊಸ ಜಾಗ. ಆಕೆ ಟೆನ್‌ಷನ್‌ನಲ್ಲಿರಬಹುದು’ ಎಂದ. ಯಾಕೋ ಆತನ ಧ್ವನಿಯಲ್ಲಿ ಪ್ರಾಮಾಣಿಕತೆ ಇದೆ ಎನಿಸಿತು. ನಾನೇ ನಂಬರ್‌ ಡಯಲ್‌ ಮಾಡಿದೆ. ಆಕೆ ಬಸ್‌ ಸ್ಟಾಂಡ್‌ಲ್ಲಿ ಇರುವುದಾಗಿ ಹೇಳಿದರು. ಆತನನ್ನು ಅಲ್ಲಿಗೆ ಬಿಟ್ಟು ಬಂದೆವು.

ಇದು ಈಗಿನ ಸ್ಥಿತಿ. ಆತ ಸಹಾಯಹಸ್ತಕ್ಕಾಗಿ ತನ್ನ ಪ್ರಾಮಾಣಿಕತೆಯನ್ನೇ ಸಾಬೀತು ಪಡಿಸಬೇಕಾಯಿತು. ನಾವು ಆತನಿಗೆ ಕೊನೆಗೂ ಸಹಾಯ ಮಾಡಿದ್ದರೂ ಮೊದಲು ಅನುಮಾನಿಸಿದ್ದು ಸುಳ್ಳಲ್ಲ. ಇದು ನಮ್ಮ ಮನಸ್ಥಿತಿ. ನಾವು ಎಲ್ಲಿ ವಂಚನೆಯ ದಾಳವಾಗುತ್ತೇವೊ ಎನ್ನುವ ಸಂಶಯ. ಆದರೆ ಹಿರಿಯ ಜೀವಿಗಳು ಹಾಗಲ್ಲ. ಅವರು ಅಪರಿಚಿತರಲ್ಲೂ ತಮ್ಮ ಮೊಮ್ಮಗನೋ, ಮಗನೋ, ಬಂಧುವನ್ನೋ ಕಾಣುತ್ತಾರೆ. ಆದರೆ ನಾವು ಸಹಾಯಹಸ್ತ ಚಾಚಲು ಯೋಚಿಸುವ ಪರಿಸ್ಥಿತಿ ಬಂದಿದೆ. ಇದು ತಪ್ಪು ಎನ್ನುವಂತೆಯೂ ಇಲ್ಲ. ಯಾಕೆಂದರೆ ಮುಗ್ಧ ಜನರ ಸಹಾಯವನ್ನು ದುರು ಪಯೋಗ ಪಡಿಸಿಕೊಂಡ ಪರಿಣಾಮ ಸಹಜವಾಗಿ ಮನಸ್ಸಿನಲ್ಲಿ ಮುನ್ನೆಚ್ಚರಿಕೆ ಜಾಗೃತವಾಗಿರುತ್ತದೆ. ಪ್ರಾಮಾಣಿಕತೆಯನ್ನು ದುರುಪಯೋಗಿಸುವ ಪ್ರವೃತ್ತಿ ನಿಂತರೆ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ.

ಟಾಪ್ ನ್ಯೂಸ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.