ಮಳೆಗಾಲ; ಹಳೆ ಮನೆಗೂ ಬೇಕು ಆರೈಕೆ


Team Udayavani, Jun 9, 2018, 3:47 PM IST

9-june-15.jpg

ಮಳೆಗಾಲವೆಂದರೆ ಮನೆಗಳಿಗೂ ಆರೈಕೆಯ ಕಾಲ. ಸಿಡಿಲು, ಮಿಂಚು ಸಹಿತ ಗಾಳಿ, ಮಳೆಗೆ ಮನೆಯ ಛಾವಣಿ, ಗೋಡೆ ,
ವಿದ್ಯುತ್‌ ವ್ಯವಸ್ಥೆಗಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಇದನ್ನು ಎದುರಿಸಲು ಮನೆಯನ್ನು ಸಾಕಷ್ಟು ಮೊದಲೇ
ಸಿದ್ಧಪಡಿಸಿರಬೇಕು. ಆಧುನಿಕ ಮನೆಗಳಿಗೆ ಇದು ಎಷ್ಟು ಮುಖ್ಯವೋ ಹಳೆ ಮನೆಗಳಿಗೂ ಅಷ್ಟೇ ಅಗತ್ಯ. 

ರಣ ಬಿಸಿಲಿನ ಬೇಗೆಯಿಂದ ಕಂಗೆಟ್ಟವರಿಗೆ ಈಗಾಗಲೇ ಮಳೆರಾಯ ತನ್ನ ಕೃಪೆ ತೋರಿಸಿಯಾಗಿದೆ. ಮಳೆಗಾಲದಲ್ಲಿ ಮನೆಯ ನಿರ್ವಹಣೆ ಬಲು ಕಠಿನ. ಅದಕ್ಕೆ ಎಷ್ಟು ಪೂರ್ವ ಸಿದ್ದತೆ ಮಾಡಿಕೊಂಡರೂ ಸಾಲದು. ಹಳೆ ಕಾಲದ ಹೆಂಚಿನ ಮನೆಯಿದ್ದರಂತೂ ಸಮಸ್ಯೆ ತೀರಾ ಗಂಭೀರ. ಮಳೆಗಾಲಕ್ಕೆ ಪೂರ್ವದಲ್ಲೇ ಎಲ್ಲ ಸಿದ್ದತೆ ಮಾಡಿಕೊಂಡಿರಬೇಕು. ಇಲ್ಲವಾದಲ್ಲಿ ಮನೆಯ ವಾತಾವರಣ ನರಕವಾಗಿ ಬಿಡುತ್ತದೆ.

ಪೂರ್ವ ಸಿದ್ಧತೆ
ಹೆಂಚಿನ ಮನೆ ಎನ್ನುವುದು ಮರ ಮಟ್ಟುಗಳಿಂದಲೇ ಕೂಡಿರುವುದು ಹೆಚ್ಚು. ಇದಕ್ಕೆ ಪ್ರಮುಖವಾಗಿ ಬೇಕಾಗಿರುವುದು ನಿರ್ವಹಣೆ. ನಿರ್ವಹಣೆ ಇಲ್ಲವಾದಲ್ಲಿ ಮನೆಯ ಸೌಂದರ್ಯ ಕೂಡ ಹಾಳಾಗುತ್ತದೆ. ಬಾಳಿಕೆ ಕೂಡ ಕಡಿಮೆಯಾಗುತ್ತದೆ.

ಒಡೆದ ಹೆಂಚು ಬದಲಾಯಿಸಿ
ಹಳೆಯ ಹೆಂಚಿನ ಮನೆಗಳಲ್ಲಿ ಪ್ರಮುಖವಾಗಿ ಮಾಡಬೇಕಾದ ಕಾರ್ಯವೆಂದರೆ ಒಡೆದ ಹೆಂಚುಗಳನ್ನು ಬದಲಾಯಿಸುವುದು. ಇಲ್ಲವಾದಲ್ಲಿ ಮಳೆಗಾಲದಲ್ಲಿ ನೀರು ಸೋರಿಕೆ ಆರಂಭಗೊಳ್ಳುತ್ತದೆ. ಇದರಿಂದ ನೀರು ಹೀರಿ ಗೋಡೆಗಳು ದುರ್ಬಲಗೊಂಡು ಕುಸಿಯುವ ಅಪಾಯವಿರುತ್ತದೆ. ಅಲ್ಲದೆ ಮರಮಟ್ಟುಗಳಿಗೆ ಗೆದ್ದಲು ಹಿಡಿಯುವ ಅಪಾಯವಿರುತ್ತದೆ.

ಗೆದ್ದಲು ಹುಳುಗಳ ನಿರ್ವಹಣೆ
ಪ್ರತಿ ಎರಡು ವರ್ಷಕ್ಕೊಮ್ಮೆಯಾದರೂ ಮನೆಯ ಗೆದ್ದಲು ಹುಳುಗಳನ್ನು ನಿರ್ವಹಣೆ ಮಾಡಬೇಕು. ಇಲ್ಲವಾದಲ್ಲಿ ಮರಮಟ್ಟುಗಳು ಗೆದ್ದಲು ಹಿಡಿದು ನಿರ್ವಹಣೆ ದುಬಾರಿಯಾದಿತು. ಗೆದ್ದಲು ಹುಳುಗಳ ನಿರ್ವಹಣೆಗೆ ವೆಸ್ಟ್‌ ಆಯಿಲ್‌, ಮಾರುಕಟ್ಟೆಯಲ್ಲಿ ಸಿಗುವು ಗೆದ್ದಲು ನಿಯಂತ್ರಣ ಕೀಟ ನಾಶಕಗಳನ್ನು ಬಳಸಬಹುದು. ಗೇರು ಎಣ್ಣೆ ಅಥವಾ ಪಾಲೀಶ್‌ ಬಳಸುವುದರಿಂದ ಮರಗಳ ಸೌಂದರ್ಯ ಕೂಡ ಹೆಚ್ಚಾಗುತ್ತದೆ. ಕಡಿಮೆ ಖರ್ಚಿನಲ್ಲಿ ಇದರ ನಿರ್ವಹಣೆ ಸಾಧ್ಯ.

ವಿದ್ಯುತ್‌ ಅಪಾಯ; ಜಾಗ್ರತೆ ವಹಿಸಿ
ಮಳೆಗಾಲದ ಸಂದರ್ಭ ವಿದ್ಯುತ್‌ ಸಂಬಂಧಿತ ದೋಷಗಳ ಕುರಿತು ಜಾಗ್ರತೆ ವಹಿಸಬೇಕಾಗುತ್ತದೆ. ನಿಮ್ಮ ಮನೆಯ ಸುತ್ತಮುತ್ತಲಿನ ವಿದ್ಯುತ್‌ ತಂತಿಗಳು ದುರ್ಬಲಗೊಂಡಿರುವುದು ಅಥವಾ ಮರದ ಗೆಲ್ಲುಗಳು ತಾಗುತ್ತಿರುವುದು ಕಂಡುಬಂದಲ್ಲಿ ವಿದ್ಯುತ್‌ ಪ್ರಸರಣಾ ನಿಗಮಕ್ಕೆ ದೂರು ನೀಡಿ ದುರಸ್ತಿಪಡಿಸಿಕೊಳ್ಳಿ. ಇಲ್ಲವಾದಲ್ಲಿ ಇದರಿಂದ ಶಾರ್ಟ್‌ಸರ್ಕ್ನೂಟ್‌ ಉಂಟಾಗಿ ನಿಮ್ಮ ಮನೆಯ ಉಪಕರಣಗಳು ಹಾಳಾಗುವ ಸಾಧ್ಯತೆಗಳಿವೆ. ಮನೆಯ ವಿದ್ಯುತ್‌ ತಂತಿಗಳ ಕುರಿತು ಜಾಗೃತಿ ವಹಿಸಿ.

ಅರ್ಥಿಂಗ್‌
ನಿಮ್ಮ ಮನೆಯ ಅರ್ಥಿಂಗ್‌ ವ್ಯವಸ್ಥೆಯನ್ನು ಸರಿಯಾಗಿದೆಯೇ ಎಂದು ಮಳೆಗಾಲದ ಪೂರ್ವದಲ್ಲೇ ಪರೀಕ್ಷಿಸಿಕೊಳ್ಳಿ ಸಿಡಿಲು ಸಂದರ್ಭ ನಿಮ್ಮ ಮನೆಯ ವಿದ್ಯುತ್‌ ಉಪಕರಣಗಳು ಹಾಳಾಗದಂತೆ ನೋಡಿಕೊಳ್ಳುವುದಲ್ಲದೆ, ನಿಮ್ಮ ಮನೆಯ ವಸ್ತುಗಳಲ್ಲಿ ವಿದ್ಯುತ್‌ ಸೋರಿಕೆಯಿಂದ ಶಾಕ್‌ ತಗುಲುವುದನ್ನು ತಡೆಗಟ್ಟುತ್ತದೆ. ಸಾರ್ವಕಾಲಿಕವಾಗಿ ಅರ್ಥಿಂಗ್‌ ವ್ಯವಸ್ಥೆ ಎನ್ನುವುದು ಮನೆಯ ರಕ್ಷಾ ಕವಚವೆನ್ನಬಹುದು. ಪ್ರತಿ ಮಳೆಗಾಲದ ಪೂರ್ವದಲ್ಲಿ ಅರ್ಥಿಂಗ್‌ ವ್ಯವಸ್ಥೆಗೆ ಇಲೆಕ್ಟ್ರೀಷಿಯನ್‌ ಸಲಹೆಯಂತೆ ಉಪ್ಪು ಮತ್ತು ಇದ್ದಿಲು ಹಾಕುವುದು ಸೂಕ್ತ. 

 ಹರೀಶ್‌ ಕಿರಣ್‌ ತುಂಗಾ, ಸಾಸ್ತಾನ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.