ಸೋರಿಕೆಯ ಕಥೆ


Team Udayavani, Feb 17, 2020, 5:46 AM IST

water

ವಯೋವೃದ್ಧನೊಬ್ಬ ಒಮ್ಮೆ ಸಮಯದ ಜತೆ ಜಗಳಕ್ಕೆ ಬಿದ್ದ. ಬದುಕಿನಲ್ಲಿ ಸಾಕಷ್ಟು ಸುಖ ದುಃಖ ನೋಡಿ ಬಂದವನು, ಮಾಗಿದ ಮನಸ್ಸಿನವನೂ ಆಗಿದ್ದ ಆ ವೃದ್ಧ. ಹಲವು ವರ್ಷ ಗಳಿಂದ ಸಮಯವನ್ನು ಹುಡುಕುತ್ತಿದ್ದ.

ಹೇಯ್‌, ಸಮಯ..ನಿನಗೇಕೆ ಅಷ್ಟೊಂದು ಧಾವಂತ? ಎಂದು ಪ್ರಶ್ನಿಸಿದ ವೃದ್ಧ. ಅದಕ್ಕೆ, ಸಮಯವು, “ನಾನೇನೂ ಓಡುತ್ತಿಲ್ಲ, ಅದು ನಿನ್ನ ಭ್ರಮೆ. ನೀನೇ ನನ್ನ ಹಿಂದೆ ಓಡಿ ಬರುತ್ತಿದ್ದೆ’ ಎಂದಿತು.ಇದನ್ನು ಕೇಳಿ ಮತ್ತೂ ಸಿಟ್ಟು ಬಂದಿತು ವೃದ್ಧನಿಗೆ. “ನೀನು ಸುಳ್ಳುಹೇಳುತ್ತಿದ್ದಿ. ಒಂದು ಕ್ಷಣವೂ ನನ್ನ ದೆಂದು ಉಳಿಸಿಕೊಳ್ಳಲಾಗುತ್ತಿಲ್ಲ. ಎಲ್ಲವನ್ನೂ ನೀನೇ ಕಿತ್ತುಕೊಳ್ಳು ತ್ತಿದ್ದೀಯಾ’ ಎಂದು ಗುಡುಗಿದ.

ಅದಕ್ಕೆ ಸಮಯವು, ಅದೂ ನಿನ್ನ ಭ್ರಮೆ. ನಾನೇನು ಕಿತ್ತುಕೊಳ್ಳುತ್ತಿಲ್ಲ. ನೀನೇ ಕಳೆದುಕೊಳ್ಳುತ್ತಿದ್ದೀಯಾ ಎಂದು ಹೇಳಿತು. ಯಾಕೋ ವೃದ್ಧನಿಗೆ ಸಂಶಯ ವ್ಯಕ್ತವಾಯಿತು. ವೃಥಾ ನಿನ್ನ ತಪ್ಪಿಗೆ ನನ್ನ ಮೇಲೆ ಆರೋಪ ಹೊರಿಸುತ್ತಿದ್ದೀ ಎಂದು ಹೇಳಿದ ವೃದ್ಧ. ಅದಕ್ಕೆ ಪ್ರತಿಯಾಗಿ ಸಮಯವು, ಹಾಗೇನೂ ಇಲ್ಲ. ನಾನು ಯಾರ ಮೇಲೂ ಆರೋಪಿಸುವುದಿಲ್ಲ, ನಾನು ತಟಸ್ಥ ಎಂದಿತು.

ವೃದ್ಧ ತನ್ನ ಬದುಕಿನ ಹಲವು ಪ್ರಸಂಗಗಳನ್ನು ಹೇಳಿ, ನೀನು ಹೇಳು. ಒಂದನ್ನೂ ಅನುಭವಿಸಲು ಬಿಡದೇ ಕಿತ್ತುಕೊಂಡವನು ನೀನೇ ತಾನೇ ಎಂದು ಆರೋಪಗಳ ಸುರಿಮಳೆಗರೆದ. ಆಗಲೂ ಸಮಯವು ತಾಳ್ಮೆಯಿಂದ, ಒಂದು ಕೆಲಸ ಮಾಡುವ. ಒಂದು ಬೊಗಸೆ ತುಂಬಾ ನೀರು ತೆಗೆದುಕೊಂಡು ಬಾ ಎಂದು ಸೂಚಿಸಿತು.

ಆಯಿತೆಂದು ವೃದ್ಧ ಹತ್ತಿರದಲ್ಲೇ ಇದ್ದ ಕೊಳದಿಂದ ಒಂದು ಬೊಗಸೆ ನೀರನ್ನು ತೆಗೆದುಕೊಂಡು ಬಂದ. ಹತ್ತು ಹೆಜ್ಜೆ ಇಟ್ಟು ಸಮಯದ ಬಳಿ ಬರುವಲ್ಲಿ ಬೊಗಸೆ ಪೂರ್ತಿ ಇದ್ದ ನೀರು ಅರ್ಧದಷ್ಟು ಖಾಲಿಯಾಗಿತ್ತು. ಸಮಯವು ಇದನ್ನು ಕಂಡು, ನಿನಗೆ ನಾನು ಹೇಳಿದ್ದು ಒಂದು ಬೊಗಸೆ ತುಂಬಾ ನೀರು ತಾ ಎಂದಿದ್ದೆ. ಆದರೆ ನೀನು ಅರ್ಧ ತಂದಿದ್ದೆ ಎಂದಿತು. ಅದಕ್ಕೆ ವೃದ್ಧ, “ಇಲ್ಲ. ನಾನು ತರುವಾಗ ತುಂಬಾ ಇತ್ತು. ಈಗ ಅರ್ಧ ಆಗಿರಬಹುದು’ ಎಂದ. ಸಮಯವು, “ಅದು ಸರಿ. ನೀನು ಹೋಗಿ ಆ ಆರ್ಧ ಬೊಗಸೆಯನ್ನು ತಾ’ ಎಂದಿತು. ಅದಕ್ಕೆ ವೃದ್ಧ, “ಅದು ಹೇಗೆ ಸಾಧ್ಯ? ಅದು ಭೂಮಿಯಲ್ಲಿ ಇಂಗಿದೆ’ ಎಂದ. ಅದಕ್ಕೆ ಸಮಯವು, ನನ್ನದೇನು ತಪ್ಪಿದೆ. ನೀನು ಬರುವಾಗ ಯಾಕೆ ಅದು ಗಮನಿಸಲಿಲ್ಲ ಎಂದು ಪ್ರಶ್ನಿಸಿತು. ಆ ವೃದ್ಧ, ಸೋರಿ ಹೋಗುವುದಕ್ಕೆ ನನ್ನಿಂದೇನು ಮಾಡಲು ಸಾಧ್ಯ ಎಂದು ಕೇಳಿದ. ಅದಕ್ಕೆ ಸಮಯವು, “ನೀನು ಸೋರುವ ಸಾಧ್ಯತೆ ಗೊತ್ತಿದ್ದೂ ಸೋರದಂತೆ ಉಪಾಯ ಹುಡುಕಿ, ಸಮರ್ಥವಾಗಿ ನಿರ್ವಹಿಸಿದ್ದರೆ ಸೋರಿಕೆಯನ್ನು ತಡೆಯಬಹುದಿತ್ತಲ್ಲವೇ?’ ಎಂದು ಕೇಳಿತು. ವೃದ್ಧನಿಗೆ ಏನೂ ಹೇಳಲಾಗಲಿಲ್ಲ, ಸುಮ್ಮನೆ ತಲೆ ತಗ್ಗಿಸಿದ.

ನಾವೂ ಹಾಗೆಯೇ, ಸಮಯ ಸೋರಿಕೆಯನ್ನು° ಕಂಡೂ ಸುಮ್ಮನಿರುತ್ತೇವೆ. ಅದನ್ನು ತಡೆಗಟ್ಟಲು ಪ್ರಯತ್ನಿಸಬೇಕು.

-ಟೈಮ್‌ ಸ್ವಾಮಿ

ಟಾಪ್ ನ್ಯೂಸ್

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.