ಆಚಾರ್ಯರ ಸಹಜ ಶೈಲಿಯ ಕಲಾಕೃತಿಗಳು 


Team Udayavani, Apr 20, 2018, 6:51 PM IST

5.jpg

ದೇವಾನುದೇವತೆಗಳನ್ನು, ಪೌರಾಣಿಕ ಕಥಾ ಚಿತ್ರಗಳನ್ನು ಮತ್ತು ಭಾವಚಿತ್ರಗಳನ್ನು ಸಹಜ ಶೈಲಿಗಳಲ್ಲಿ ರಚಿಸಿ ಕ್ಯಾಲೆಂಡರ್‌ ರೂಪದಲ್ಲಿ ಭಾರತೀಯರ ಮನೆಗಳ ಗೋಡೆಯಲ್ಲಿ ರಾರಾಜಿಸುವಂತೆ ಮಾಡಿದವರು ಕೇರಳದ ತಿರುವಾಂಕೂರು ರಾಜ ಮನೆತನದ ಕಲಾವಿದ ರಾಜಾ ರವಿವರ್ಮ. ಅನಂತರದ ದಿನಗಳಲ್ಲಿ ಗುಲ್ಬರ್ಗದ ಎಸ್‌. ಎಂ. ಪಂಡಿತ್‌, ಬಿ.ಕೆ.ಎಸ್‌. ವರ್ಮಾ ಮತ್ತು ಅನೇಕ ಕಲಾವಿದರು ಈ ಪ್ರಯತ್ನ ಮಾಡಿದ್ದಾರೆ. ಈಗ ಮನೆಯ ಗೋಡೆಗಳಿಂದಲೂ, ಮನದ ಗೋಡೆಗಳಿಂದಲೂ ಇಂತಹ ಚಿತ್ರಗಳು ಮರೆಯಾಗಿವೆ. 

ಬ್ರಿಟಿಷರ ಸಂಸ್ಕೃತಿಯ ಪ್ರಭಾವದಿಂದ ಈ ಸಹಜ ಶೈಲಿಯು ರವಿವರ್ಮನೊಂದಿಗೆ ನಮ್ಮಲ್ಲಿ ರೂಢಿಗೆ ಬಂತು. ಭಾರತೀಯ ಚಿತ್ರ ರಚನಾ ಪದ್ಧತಿ ಮತ್ತು ಶೈಲಿ ಇದಕ್ಕಿಂತ ಭಿನ್ನವಾದರೂ ಸಹಜ ಶೈಲಿಯೂ ನಮ್ಮವೇ ಆಗಿ ಹೋಗಿದೆ. ಇಂತಹ ಕಲಾಕೃತಿಗಳನ್ನು ಇಂದು ದೇವಾಲಯದ ಗೋಡೆಗಳಲ್ಲಿ ಮಾತ್ರ ಕಾಣಬಹುದಾದರೂ ಇವುಗಳು ಡಿಜಿಟಲ್‌ ತಂತ್ರಜ್ಞಾನದ ಪ್ರತಿಗಳು. ಈ ಶೈಲಿಯ ಕಲಾಕೃತಿಗಳ ಪ್ರದರ್ಶನಗಳು ಕಾಣಸಿಗುವುದು ವಿರಳ. ಸಹಜ ಶೈಲಿಗಳ ರಚನೆಗೆ ಖ್ಯಾತರಾದ ಉಡುಪಿಯ ಕಲಾವಿದ ದಾಮೋದರ. ಎಲ್‌. ಆಚಾರ್ಯ ಅವರು ಉಡುಪಿಯ ರಾಮಕೃಷ್ಣ ಹೋಟೆಲ್‌ನ ಸಂಕೀರ್ಣದಲ್ಲಿ “ಶರನ್‌ ಆರ್ಟ್‌ ಗ್ಯಾಲರಿ’ಯನ್ನು ಆರಂಭಿಸಿ ಪ್ರಥಮವಾಗಿ ತನ್ನ ಆಯ್ದ ಸಹಜ ಶೈಲಿಯ ಕಲಾಕೃತಿಗಳ ಜೊತೆಗೆ ಇತರ ಶೈಲಿಯ ಪ್ರದರ್ಶನವನ್ನು ಏರ್ಪಡಿಸಿದ್ದರು.

ಸುಮಾರು ಇಪ್ಪತ್ತಕ್ಕೂ ಹೆಚ್ಚು ಕಲಾಕೃತಿಗಳಿದ್ದಿದ್ದು, ಅದರಲ್ಲಿ ಸಂಗೀತ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಖ್ಯಾತರಾದವರ ಭಾವಚಿತ್ರಗಳು ಭಾವಾಭಿವ್ಯಕ್ತಿಯೊಂದಿಗೆ ಜೀವಂತಿಕೆ ತುಂಬಿಕೊಂಡಿದ್ದವು. ಯಕ್ಷಗಾನ , ಕಥಕ್ಕಳಿ , ಭರತನಾಟ್ಯ , ಭೂತಕೋಲ , ಮಣಿಪುರಿ ನೃತ್ಯ , ಹುಲಿಯ ಗಾಂಭೀರ್ಯ ಮುಂತಾದ ಕೃತಿಗಳಲ್ಲಿನ ನೆರಳು- ಬೆಳಕು,ಸೂಕ್ಷ್ಮ ವಿಷಯ ಮತ್ತು ವರ್ಣ ಛಾಯೆಗಳು ಛಾಯಾಚಿತ್ರಗಳಷ್ಟೇ ಸ್ಪುಟವಾಗಿ ಮೂಡಿ ಬಂದಿತ್ತು. ಸೂಕ್ಷ್ಮ ಕಲೆಯಾದ ಮಿನಿಯೇಚರ್‌ ಚಿತ್ರಗಳನ್ನು ರಚಿಸುವಲ್ಲಿಯೂ ಹಿಡಿತವನ್ನು ಹೊಂದಿರುವ ಆಚಾರ್ಯರು ಈ ಕೃತಿಗಳಲ್ಲಿ ಕೃಷ್ಣನ ಬಾಲ್ಯ ಲೀಲೆಗಳನ್ನು ಅನಾವರಣಗೊಳಿಸಿದ್ದರು. ಅರೆ ಅಮೂರ್ತ ಶೈಲಿಯ ತಾಯಿ ಮಮತೆ, ರಾಧೆಯ ವಿರಹ, ನಾಗಾರಾಧನೆ, ಮೀನುಗಾರ ಮಹಿಳೆಯರು ಮುಂತಾದುವುಗಳಲ್ಲಿ ಆಚಾರ್ಯರ ಸೃಜನಶೀಲತೆ ಎದ್ದು ಕಾಣುತ್ತಿತ್ತು. ಪ್ರೋ ತಂತ್ರದಲ್ಲಿ ಮೂಡಿಬಂದ ವರ್ಣ ಜಲಪಾತ ಕೃತಿಯಲ್ಲಿನ ಇವರ ಜಾಣ್ಮೆ ಮೆಚ್ಚುವಂತಹುದು. ಉತ್ತಮ ಚೌಕಟ್ಟು ಹೊಂದಿದ ಹಾಗೂ ತೈಲ ವರ್ಣ, ಆಕ್ರಲಿಕ್‌ ಮತ್ತು ಜಲವರ್ಣ ಮಾಧ್ಯಮದ ಈ ಕೃತಿಗಳು ಆಚಾರ್ಯರಲ್ಲಿರುವ ಅಪಾರ ತಾಳ್ಮೆ, ನೆರಳು- ಬೆಳಕಿನ ಸಂಯೋಜನೆಯ ಜೊತೆಗೆ ಸಹಜತೆಗೆ ಹೊಂದಿಕೆಯಾಗುವ ವರ್ಣಗಳ ಮಿಶ್ರಣದಲ್ಲಿ ಅವರಿಗಿರುವ ಹಿಡಿತವನ್ನು ಎತ್ತಿ ತೋರಿಸುತ್ತಿತ್ತು. ಎರಡು ದಿನ ಕಲಾಪ್ರೇಮಿಗಳನ್ನೂ, ಜನಸಾಮಾನ್ಯರನ್ನೂ ಸೆಳೆಯುವಲ್ಲಿ ಈ ಕಲಾಪ್ರದರ್ಶನ ಯಶಸ್ವಿಯಾಯಿತು.

ಕೆ. ದಿನಮಣಿ ಶಾಸ್ತ್ರಿ

ಟಾಪ್ ನ್ಯೂಸ್

Delhi police Station: ಪೊಲೀಸ್‌ ಠಾಣೆ ಬಾತ್‌ ರೂಂ ಕಿಟಕಿ ಹಾರಿ ಕೊಲೆ ಆರೋಪಿ ಪರಾರಿ!

Delhi police Station: ಪೊಲೀಸ್‌ ಠಾಣೆ ಬಾತ್‌ ರೂಂ ಕಿಟಕಿ ಹಾರಿ ಕೊಲೆ ಆರೋಪಿ ಪರಾರಿ!

1-qweqwqwe

Kerala ಕರಾವಳಿಯಲ್ಲಿ 6 ಮೀನುಗಾರರ ಸಹಿತ ಇರಾನ್ ಹಡಗು ಕೋಸ್ಟ್ ಗಾರ್ಡ್ ವಶಕ್ಕೆ

Bantwala; ಬಾವಿಗೆ ಬಿದ್ದ ನಾಯಿಯನ್ನು ರಕ್ಷಿಸಿದ ಅಗ್ನಿಶಾಮಕ ತಂಡ

Bantwala; ಬಾವಿಗೆ ಬಿದ್ದ ನಾಯಿಯನ್ನು ರಕ್ಷಿಸಿದ ಅಗ್ನಿಶಾಮಕ ತಂಡ

foeticide

Mandya: ಮತ್ತೆ ಹೆಣ್ಣುಭ್ರೂಣ ಹತ್ಯೆ ಜಾಲ ಪತ್ತೆ; ನಾಲ್ವರ ಬಂಧನ

Kanniyakumari: ಮದುವೆಗೆಂದು ಆಗಮಿಸಿ ಸಮುದ್ರ ಪಾಲಾದ ಐವರು ವೈದ್ಯಕೀಯ ವಿದ್ಯಾರ್ಥಿಗಳು

Kanniyakumari: ಮದುವೆಗೆಂದು ಆಗಮಿಸಿ ಸಮುದ್ರ ಪಾಲಾದ ಐವರು ವೈದ್ಯಕೀಯ ವಿದ್ಯಾರ್ಥಿಗಳು

1-qweewqe

Prajwal Case; ತಮ್ಮ ಹೆಸರು ಬಳಸದಂತೆ ಕೋರ್ಟ್ ತಡೆ ತಂದ ಎಚ್ ಡಿಡಿ, ಎಚ್ ಡಿಕೆ

ಕೊರಗಜ್ಜ, ಕಲ್ಲುರ್ಟಿ ದೈವಗಳಿಗೆ ‘ಫಸ್ಟ್ ಲುಕ್’ ತೋರಿಸಿ ಅನುಮತಿ ಪಡೆದ ‘ಕೊರಗಜ್ಜ’ ಚಿತ್ರತಂಡ

ಕೊರಗಜ್ಜ, ಕಲ್ಲುರ್ಟಿ ದೈವಗಳಿಗೆ ‘ಫಸ್ಟ್ ಲುಕ್’ ತೋರಿಸಿ ಅನುಮತಿ ಪಡೆದ ‘ಕೊರಗಜ್ಜ’ ಚಿತ್ರತಂಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

Delhi police Station: ಪೊಲೀಸ್‌ ಠಾಣೆ ಬಾತ್‌ ರೂಂ ಕಿಟಕಿ ಹಾರಿ ಕೊಲೆ ಆರೋಪಿ ಪರಾರಿ!

Delhi police Station: ಪೊಲೀಸ್‌ ಠಾಣೆ ಬಾತ್‌ ರೂಂ ಕಿಟಕಿ ಹಾರಿ ಕೊಲೆ ಆರೋಪಿ ಪರಾರಿ!

1-qweqwqwe

Kerala ಕರಾವಳಿಯಲ್ಲಿ 6 ಮೀನುಗಾರರ ಸಹಿತ ಇರಾನ್ ಹಡಗು ಕೋಸ್ಟ್ ಗಾರ್ಡ್ ವಶಕ್ಕೆ

Bantwala; ಬಾವಿಗೆ ಬಿದ್ದ ನಾಯಿಯನ್ನು ರಕ್ಷಿಸಿದ ಅಗ್ನಿಶಾಮಕ ತಂಡ

Bantwala; ಬಾವಿಗೆ ಬಿದ್ದ ನಾಯಿಯನ್ನು ರಕ್ಷಿಸಿದ ಅಗ್ನಿಶಾಮಕ ತಂಡ

ಬಿಜೆಪಿ ಸೇರಿದಾಕ್ಷಣ ಶುದ್ಧರಾಗಲು ಆ ಪಕ್ಷ ವಾಷಿಂಗ್‌ ಮಶೀನಾ: ರಮಾನಾಥ ರೈ

ಬಿಜೆಪಿ ಸೇರಿದಾಕ್ಷಣ ಶುದ್ಧರಾಗಲು ಆ ಪಕ್ಷ ವಾಷಿಂಗ್‌ ಮಶೀನಾ: ರಮಾನಾಥ ರೈ

foeticide

Mandya: ಮತ್ತೆ ಹೆಣ್ಣುಭ್ರೂಣ ಹತ್ಯೆ ಜಾಲ ಪತ್ತೆ; ನಾಲ್ವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.