ಯಕ್ಷ ಶಾಸ್ತ್ರಜ್ಞನಿಗೆ ಕೀರಿಕ್ಕಾಡು ಪ್ರಶಸ್ತಿ


Team Udayavani, May 3, 2019, 6:00 AM IST

Yas

ಕಾಸರಗೋಡಿನ ದೇಲಂಪಾಡಿಯಲ್ಲಿ ಆರೇಳು ದಶಕಗಳ ಹಿಂದೆಯೇ ಯಕ್ಷಗಾನವನ್ನು ಜೀವಂತವಾಗಿರಿಸಲು ಹೆಣಗಿದವರು ದಿ| ಕೀರಿಕ್ಕಾಡು ಮಾಸ್ಟರ್‌ ವಿಷ್ಣು ಭಟ್ಟರು . ಅವರು 1944ರಲ್ಲಿ ಹುಟ್ಟುಹಾಕಿದ ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ ಅವರ ಹೆಸರಿನಲ್ಲಿ ವರ್ಷವೂ ಕೊಡುವ ಕೀರಿಕ್ಕಾಡು ಪ್ರಶಸ್ತಿ ಈ ಬಾರಿ ಯಕ್ಷಗಾನದ ಖ್ಯಾತ ಹಿಮ್ಮೇಳ ವಾದಕ ಗುರು ಗೋಪಾಲಕೃಷ್ಣ ಕುರುಪರಿಗೆ ಸಲ್ಲಲಿದೆ.

ಗೋಪಾಲಕೃಷ್ಣ ಕುರುಪರು ನಿಡುಗಾಲ ಯಕ್ಷಗಾನ ಮೇಳಗಳಲ್ಲಿ ಹಿಮ್ಮೇಳ ವಾದಕರಾಗಿ ದುಡಿದ ಅನುಭವ ಸಂಪನ್ನ. ಹಿರಿಯ ಕಿರಿಯ ಬಲಿಪ ನಾರಾಯಣ ಭಾಗವತರ ಕರಾರುವಾಕ್ಕಾದ ಹಾಡಿಗೆ ಇಡಿಪೆಟ್ಟುಗಳ ನಿಖರ ನುಡಿತ. ದಿ| ಅಗರಿ ಶ್ರೀನಿವಾಸ ಭಾಗವತರ ಹಾಡಿನ ಲಾಲಿತ್ಯವನ್ನು ಪೋಷಿಸುವ ಕುರುಪರ ಲಯವಿನ್ಯಾಸದ ಸೊಗಸು ಈಗ ಚರಿತ್ರೆ. ಧರ್ಮಸ್ಥಳ, ಕೂಡ್ಲು, ಕುಂಡಾವು, ಸುರತ್ಕಲ್ಲು, ಬಳ್ಳಂಬೆಟ್ಟು, ಪೊಳಲಿ, ಕುಂಬ್ಳೆ ಮುಂತಾದ ಮೇಳಗಳಲ್ಲಿ ನಾಲ್ಕು ದಶಕಗಳಿಗೂ ಮಿಕ್ಕಿ ಹಿಮ್ಮೇಳವಾದಕರಾಗಿ ದುಡಿದ ಅನುಭವ ಅವರದು. ತೆಂಕು ತಿಟ್ಟಿನ ಪ್ರಾಥಮಿಕ ಯಕ್ಷಗಾನ ಪಾಠಗಳು, ತೆಂಕುತಿಟ್ಟು ಯಕ್ಷಗಾನ ಮದ್ದಳೆ ವಾದನದ ಕ್ರಮ, ತೆಂಕುತಿಟ್ಟು ಯಕ್ಷಗಾನ ಚೆಂಡೆವಾದನದ ಕ್ರಮ ಮತ್ತು ತಿತ್ತಿತ್ತೆç ಯಕ್ಷಗಾನ ತಾಳ ಸಂಬಂಧಿ ಅಧ್ಯಯನ ಹೀಗೆ ನಾಲ್ಕು ಶಾಸ್ತ್ರೀಯ ಕೃತಿಗಳನ್ನು ರಚಿಸಿದ್ದಾರೆ. ಯಕ್ಷಗಾನ ಕಮ್ಮಟಗಳಲ್ಲಿ ಅವರೊಬ್ಬ ಅಸಾಧಾರಣ ಸಂಪನ್ಮೂಲ ವ್ಯಕ್ತಿ.ಅವರ ವಾದನದಲ್ಲಿ ಬೆರಗು ಹುಟ್ಟಿಸುವ ಚಮತ್ಕಾರಗಳಿಲ್ಲ. ಮಾತಿನಲ್ಲಿ ಎಷ್ಟೇ ನಯವಿದ್ದರೂ, ಕಲೆಯಲ್ಲಿ ನಿಷ್ಠರತೆ. ಲಯ ಶುದ್ಧಿ, ವಾದನದ ಸ್ಪಷ್ಟತೆ, ಪೆಟ್ಟುಗಳ ಏರಿಳಿತ, ಪ್ರಸಂಗಜ್ಞಾನ, ರಂಗನಡೆ ಎಲ್ಲವೂ ತಿಳಿದ ಅವರೊಬ್ಬ ಪ್ರಬುದ್ಧ ಮದ್ದಳೆಗಾರ. ನಾಟ್ಯದ ಹೆಜ್ಜೆಗಳನ್ನೂ ಬಲ್ಲ ಅವರು ವೇಷಧಾರಿ ತಪ್ಪಿದರೆ ತಿದ್ದಿ ಹೇಳುವ ಸಾಮರ್ಥ್ಯವುಳ್ಳವರು.

ತಾಳಗಳ ಸಾಲಿನಲ್ಲಿ ಎಲ್ಲೂ ಹೆಸರಿರದ ತಿತ್ತಿತ್ತೈ, ತೆಂಕುತಿಟ್ಟಿನಲ್ಲಿ ಬಹಳ ಅಪರೂಪದಲ್ಲಿ ಹಳೆಯ ಭಾಗವತರು ಹಾಡುತ್ತಿದ್ದ ಚೌತಾಳ ಪ್ರಯೋಗದಲ್ಲೇ ಇಲ್ಲದ ಸಪ್ತತಾಳಗಳಲ್ಲಿ ಒಂದಾದ ಧ್ರುವ ತಾಳ ಇವುಗಳಿಗೆಲ್ಲ ಗೌರವಯುತ ಸ್ಥಾನ ದೊರೆಯಬೇಕೆಂದು ಹೆಣಗಿದವರು ಅವರು. ಅವುಗಳಿಗೆ ಭಿಡ್ತಿಗೆ, ಮುಕ್ತಾಯಗಳನ್ನು ರಚಿಸಿ, ಪದ್ಯದ ಅಕ್ಷರಗಳು ತಾಳಕ್ಕೆ ಹೊಂದುವ ರೀತಿಯನ್ನು ಅಧ್ಯಯನ ನಡೆಸಿ ಅದು ಹೀಗೆಯೇ ಎಂದು ಖಚಿತವಾಗಿ ನಿರೂಪಿಸಬಲ್ಲರು. ಕೆಲವು ಕಮ್ಮಟಗಳಲ್ಲಿ ಇದನ್ನು ಮಾಡಿ ತೋರಿಸಿದ್ದಾರೆ. ಭಾಗವತರಿಗೆ, ಮದ್ದಳೆವಾದಕರಿಗೆ ದಾರಿ ತೋರಿದ್ದಾರೆ.

-ವೆಂಕಟರಾಮ ಭಟ್ಟ ಸುಳ್ಯ

ಟಾಪ್ ನ್ಯೂಸ್

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.