ಅಸ್ತಂಗತರಾದ ಹಾಸ್ಯಗಾರ ಚಂದ್ರ ಶೆಟ್ಟಿ
Team Udayavani, May 17, 2019, 5:50 AM IST
ಬಡಗುತಿಟ್ಟು ಬಯಲಾಟ ರಂಗಭೂಮಿಯ ಅಗ್ರಮಾನ್ಯ ಹಾಸ್ಯಗಾರ, ಕಮಲಶಿಲೆ ಒಂದನೇ ಮೇಳದ ಪ್ರಧಾನ ಹಾಸ್ಯಗಾರ ಬೆದ್ರಳ್ಳಿ ಚಂದ್ರ ಶೆಟ್ಟಿ 54ನೇ ವಯಸ್ಸಿನಲ್ಲಿ ಯಕ್ಷಗಾನರಂಗವನ್ನಗಲಿ ಹೋಗಿದ್ದಾರೆ.
ಸುಮಾರು 4 ದಶಕಗಳ ಕಾಲ ಬಡಗುತಿಟ್ಟಿನ ಬಯಲಾಟ ರಂಗಸ್ಥಳವನ್ನು ಹಾಸ್ಯ ಪಾತ್ರಗಳಿಂದ ಎತ್ತರಕ್ಕೇರಿಸಿದ ಅವರು ಎಳವೆಯಲ್ಲಿಯೇ ಯಕ್ಷಗಾನವನ್ನು ವೃತ್ತಿಯಾಗಿ ಪರಿಗಣಿಸಿದವರು.ಪಾತ್ರನಿಷ್ಠರಾಗಿ ಗರಿಷ್ಟ ಮಟ್ಟದ ಹಾಸ್ಯರಸವನ್ನು ಬಿಂಬಿಸುವ ಅನುಭವಿ ಕಲಾವಿದರಾದ ಅವರು 16ರ ಹರೆಯದಲ್ಲಿ ಕಲಾಲೋಕ ಪ್ರವೇಶಿಸಿದರು.ಇವರ ತಂದೆ ಹವ್ಯಾಸಿ ಕಲಾವಿದರಾಗಿದ್ದು ಕಲೆಯ ನಂಟುತನ ಆ ಮೂಲಕ ಅವರಿಗೆ ಪ್ರಾಪ್ತವಾಗಿತ್ತು.ಮಾರಣಕಟ್ಟೆ ಮೇಳದಲ್ಲಿದ್ದ ಆಗಿನ ಹಿರಿಯ ಹಾಸ್ಯಗಾರ ದರ್ಲ್ಯಾಣಿ ನಾಗಯ್ಯ ಶೆಟ್ಟರಿಂದ ಯಕ್ಷಗಾನ ಶಿಕ್ಷಣ ಪಡೆದ ಅವರು ವೃತ್ತಿ ಮೇಳದಲ್ಲಿ ಸುಯೋಗ್ಯ ವಿದೂಷಕರಾಗಿ ಬಹುಬೇಗ ಗುರುತಿಸಿಕೊಂಡರು.ಸೌಕೂರು ಮೇಳದಲ್ಲಿ ಗೆಜ್ಜೆ ಕಟ್ಟಿದ ಅವರು ಬಳಿಕ ಕಳುವಾಡಿ, ಅಮೃತೇಶ್ವರಿ, ಮಡಾಮಕ್ಕಿ, ಕಮಲಶಿಲೆ, ಸಿಗಂದೂರು ಮತ್ತಿತರ ಮೇಳಗಳಲ್ಲಿ ಸುಮಾರು 38 ವರ್ಷಗಳ ಕಾಲ ಕಲಾಸೇವೆ ಮಾಡಿದ್ದರು.ಹಾಸ್ಯ ಭೂಮಿಕೆಗೊಪ್ಪುವ ಆಳಂಗ ವೇಷ, ಭಾಷೆ, ನೃತ್ಯ, ಆಂಗಿಕಾಭಿನಯ, ರಂಗನೆಡೆಯನ್ನು ಹೊಂದಿದ ಅವರು ಬಯಲಾಟದ ಪೌರಾಣಿಕ ಪ್ರಸಂಗಗಳ ಹಾಸ್ಯಕ್ಕೆ ಗರಿಷ್ಟ ಮಟ್ಟದ ನ್ಯಾಯ ಒದಗಿಸಿದ್ದರು.ಹಾಗಾಗಿ ಅವರ ಬೇಡರ ಕಣ್ಣಪ್ಪದ ಮಾಣಿ, ಭೀಷ್ಮ ವಿಜಯ, ದಕ್ಷಯಜ್ಞ ಮುಂತಾದ ಪ್ರಸಂಗಗಳ ಬ್ರಾಹ್ಮಣ, ಕನಕಾಂಗಿ ಕಲ್ಯಾಣದ ರಕ್ಕಸದೂತ ಬಲರಾಮ ದೂತ,ಬಾಹುಕ,ಕಂದರ, ಚಂದಗೋಪ, ಚಂದ್ರಾವಳಿ ವಿಲಾಸ ಮತ್ತು ಚಿತ್ರಾಕ್ಷಿ ಕಲ್ಯಾಣ ಅಜ್ಜಿ, ಮೂಖಾಸುರ,ಕಪ್ಪದ ದೂತ,ಕಮಲಭೂಪ ದೂತ ಮುಂತಾದ ಪಾತ್ರಗಳು ಅಪಾರ ಜನಮನ್ನಣೆ ಪಡೆದಿವೆ. ಶೆಟ್ಟರು ಅನೇಕ ಶಿಷ್ಯರನ್ನು ಸೃಷ್ಟಿಸಿದ್ದರೂ ಬಯಲಾಟ ಮೇಳಗಳಲ್ಲೇ ಸೇವೆ ಸಲ್ಲಿಸಿದ್ದರಿಂದ ಅವರ ಪ್ರತಿಭೆ, ಕೀರ್ತಿ ಎಲ್ಲವೂ ಎಲೆಯ ಮರೆಯಾಗಿಯೇ ಉಳಿಯಿತು ಎನ್ನುವುದು ನಿಷ್ಟುರವಾದ ಸತ್ಯ.
ಚಂದ್ರ ಶೆಟ್ಟಿಯವರ ಇನ್ನೊಂದು ಪ್ರತಿಭೆ ಯಕ್ಷಗಾನ ಪ್ರಸಂಗ ರಚನೆ. ಅನೇಕ ಮೌಲ್ಯಯುತ ಆಧುನಿಕ ಪ್ರಸಂಗಗಳನ್ನು ರಚಿಸಿದ ಕೀರ್ತಿ ಅವರಿಗೆ ಸಂದಿದೆ. ದೈವ ಸಂಕಲ್ಪ, ಸೌಮ್ಯಸುಗಂಧಿ, ಜ್ಯೋತಿ ಚಂದ್ರಮ,ನಾಗದರ್ಶನ,ಸೌಮ್ಯಶ್ರೀ ಮುಂತಾದ ಅವರ ಪ್ರಸಂಗಗಳು ಅನೇಕ ಮೇಳಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿದ್ದವು.
ಪ್ರೊ| ಎಸ್.ವಿ.ಉದಯ ಕುಮಾರ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ