ಆ್ಯಂಟಿ ಮೈಕ್ರೋಬಿಯಲ್‌ ಪ್ರತಿರೋಧ


Team Udayavani, Dec 17, 2017, 6:00 AM IST

antimicrobial-resistance.jpg

ಯಾವುದೇ ಸೋಂಕಿನ ಹಿಂದೆ ಲಿಲ್‌- ಕ್ಯಾರೆನ್‌ ಅಥವಾ ಡಾಫೆ° ಅಥವಾ ನೀವೂ ಇರಬಹುದು!
ನನ್ನ ಹೆಸರು ಲಿಲ್‌ – ಕ್ಯಾರನ್‌; ನಾನು ನಾರ್ವೇಯ ಓರ್ವ ನಿವೃತ್ತ ಶಾಲಾ ಶಿಕ್ಷಕಿ, 66 ವರ್ಷ ವಯಸ್ಸಿನಾಕೆ. ಮೂವರು ಮಕ್ಕಳು ಮತ್ತು ಐವರು ಮೊಮ್ಮಕ್ಕಳು ನನಗಿದ್ದಾರೆ. ನನ್ನ ಪತಿ ಮರಣಿಸಿದ ಬಳಿಕ ನಾನು ಏಕಾಂಗಿಯಾಗಿ ವಾಸಿಸುತ್ತಿದ್ದೇನೆ, ಓದು, ಹೆಣಿಗೆ, ಹೊಲಿಗೆ, ಕವಿತೆಗಳನ್ನು ಬರೆಯುವುದು ಮತ್ತು ಪ್ರವಾಸಗಳಲ್ಲಿ ನನ್ನ ಸಮಯ ಕಳೆಯುತ್ತದೆ. ನಾನು ಹಲವಾರು ಬಾರಿ ಭಾರತಕ್ಕೆ ಬಂದಿದ್ದೆನಾದರೂ ಕೇರಳಕ್ಕೆ ಭೇಟಿ ನೀಡಿರಲಿಲ್ಲ. ಹೀಗಾಗಿ 2010ರಲ್ಲಿ ನಾನು ಕೇರಳ ಪ್ರವಾಸ ಹಾಕಿಕೊಂಡೆ ಮತ್ತು ಸ್ಥಳೀಯ ಕುಟುಂಬವೊಂದರ ಜತೆಗೆ ವಾಸ್ತವ್ಯಕ್ಕೆ ಅನುಕೂಲ ಕಲ್ಪಿಸಿಕೊಂಡೆ. ಆದರೆ ದುರದೃಷ್ಟ ಬಹಳ ಬೇಗನೆ ನನ್ನನ್ನು ಮುತ್ತಿಕೊಂಡಿತು. ನನ್ನ ಆತಿಥ್ಯ ವಹಿಸಿಕೊಂಡಿದ್ದ ವ್ಯಕ್ತಿ ನನ್ನನ್ನು ವಿಮಾನನಿಲ್ದಾಣದಿಂದ ಕರೆದೊಯ್ದರಾದರೂ, ನಾವು ನಗರ ಸೇರುವುದಕ್ಕೆ ಮುನ್ನ ಅವರ ಕಾರು ಲಾರಿಯೊಂದಕ್ಕೆ ಢಿಕ್ಕಿ ಹೊಡೆಯಿತು.
  
ನನ್ನ ಕಾಲು ತೀವ್ರವಾಗಿ ಜಖಂಗೊಂಡು ಮುರಿದಿತ್ತು, ಆ್ಯಂಬ್ಯುಲೆನ್ಸ್‌ನಲ್ಲಿ ಮಲಗಿ ನಾನು ಆಸ್ಪತ್ರೆ ತಲುಪಿದೆ. ಆಸ್ಪತ್ರೆ ಸೇರಿದ ಬಳಿಕ ಪ್ಲಾಸ್ಟಿಕ್‌ ಹಾಸಿಗೆಯ ಮೇಲೆ, ಸುತ್ತಲೂ ರೋಗಿಗಳು ಕಿಕ್ಕಿರಿದಿದ್ದ ಕೊಠಡಿಯಲ್ಲಿ ಎರಡು ದಿನಗಳನ್ನು ಕಳೆದೆ. ದಿನಕ್ಕೆ ಒಂದು ಬಾರಿ ಒಂದು ಬೋಗುಣಿ ನೀರನ್ನು ನನಗೆ ನೀಡುತ್ತಿದ್ದರು; ಆದರೆ ಕಾಲು ಮುರಿದಿತ್ತಾದ್ದರಿಂದ ಶೌಚಕ್ಕೆ ತೆರಳಲು ಅಥವಾ ಬಟ್ಟೆ ಬದಲಾಯಿಸಿಕೊಳ್ಳಲು ನನಗೆ ಸಾಧ್ಯವಿರಲಿಲ್ಲ. ಆದ್ದರಿಂದ ಸೆಖೆಯ ಕೊಠಡಿಯಲ್ಲಿ ನಾನು ಮಲಗಿಯೇ ಇದ್ದೆ.

ಕೊನೆಗೊಮ್ಮೆ ನಾನು ಖಾಸಗಿ ಕೊಠಡಿಗೆ ವರ್ಗಾಯಿಸಲ್ಪಟ್ಟೆ ಮತ್ತು ಪೃಷ್ಠ ಬದಲಾವಣೆ ಶಸ್ತ್ರಕ್ರಿಯೆಯನ್ನು ನನಗೆ ನಡೆಸಲಾಯಿತು. ಭಾರತದಲ್ಲಿ ರೋಗಿಯನ್ನು ಅವರ ಕುಟುಂಬವೇ ನೋಡಿಕೊಳ್ಳಬೇಕು; ಹೀಗಾಗಿ ವೈದ್ಯರು ಅಥವಾ ದಾದಿಯರ ಗಮನ ನನ್ನತ್ತ ಹೆಚ್ಚೇನೂ ಇರಲಿಲ್ಲ. ನನ್ನ ಆತಿಥ್ಯ ವಹಿಸಿಕೊಂಡಿದ್ದವರ ಜತೆಯನ್ನು ಬಿಟ್ಟರೆ ಅವು ತೀವ್ರ ಏಕಾಂಗಿತನದ ದಿನಗಳು; ಕೊನೆಗೂ ನನಗೆ ಮನೆಗೆ ತೆರಳಲು ಅನುಮತಿ ಸಿಕ್ಕಿತು. 

ನಾರ್ವೇಗೆ ಮರಳಿದ ಬಳಿಕ ನಾನು ಮತ್ತೆ ನೇರವಾಗಿ ಆಸ್ಪತ್ರೆಗೆ ದಾಖಲಾಗಬೇಕಾಯಿತು. ವಿಶೇಷ ಕೊಠಡಿಯಲ್ಲಿ ನನ್ನನ್ನು ಪ್ರತ್ಯೇಕವಾಗಿ ಇರಿಸಿದ್ದರು ಮತ್ತು ನನ್ನನ್ನು ನೋಡಲು ಬರುವವರ ರಕ್ಷಕ ಬಟ್ಟೆಬರೆ ಧರಿಸಿಯೇ ಬರುತ್ತಿದ್ದರು. ನನ್ನ ಮೂತ್ರದಲ್ಲಿ ಆ್ಯಂಟಿಬಯಾಟಿಕ್‌ ಪ್ರತಿರೋಧ ಶಕ್ತಿ ಹೊಂದಿದ್ದ ಬ್ಯಾಕ್ಟೀರಿಯಾ ಒಂದನ್ನು ವೈದ್ಯರು ಪತ್ತೆ ಮಾಡಿದ್ದರು; ಭಾರತದಲ್ಲಿ ನಡೆಸಲಾದ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ನನಗೆ ಯೂರಿನರಿ ಕ್ಯಾಥೆಟರ್‌ ಅಳವಡಿಸಿದ್ದ ಸಂದರ್ಭದಲ್ಲಿ ಈ ರೋಗ ಪ್ರತಿರೋಧಕ ಶಕ್ತಿಯುಳ್ಳ ಬ್ಯಾಕ್ಟೀರಿಯಾ ನನ್ನಲ್ಲಿ ಬೆಳವಣಿಗೆ ಕಂಡಿತ್ತು. ನನಗೆ ಸೋಂಕಿನ ಯಾವ ಲಕ್ಷಣಗಳು ಅನುಭವಕ್ಕೆ ಬಾರದಿದ್ದರೂ ಅದು ಬಹಳ ಕಠಿನ ದಿನಗಳಾಗಿದ್ದವು.

ನನ್ನ ಕುಟುಂಬದಲ್ಲಿ ಮಗುವೊಂದು ಜನಿಸಿತ್ತು; ನನ್ನನ್ನು ನೋಡಲು ಬಂದರೆ ಅದಕ್ಕೆ ಸೋಂಕು ತಗುಲಬಹುದೋ ಎಂಬ ಭೀತಿ ಅವರನ್ನು ಕಾಡುತ್ತಿತ್ತು. ಕುಟುಂಬದಲ್ಲಿ ನಡೆದ ಮದುವೆಗಳು ಮತ್ತು ಪುಣ್ಯಸ್ನಾನಗಳನ್ನೂ ನಾನು ತಪ್ಪಿಸಿಕೊಳ್ಳಬೇಕಾಯಿತು. ಆ ಸಮಯದಲ್ಲಿ ಅನುಭವಿಸಿದ ಏಕಾಂಗಿತನ ಬಹಳ ದೊಡ್ಡ ಏಟು ಕೊಟ್ಟಿತು, ತೀವ್ರ ಹತಾಶೆ, ಏಕಾಕಿತನವನ್ನು ನಾನು ಅನುಭವಿಸಿದೆ. ಶಸ್ತ್ರಚಿಕಿತ್ಸೆಯ ಗಾಯ ಇನ್ನೂ ವಾಸಿಯಾಗಿಲ್ಲವಾದ್ದರಿಂದ ಅದು ಮತ್ತೆ ಸೋಂಕಿಗೀಡಾಗಬಹುದು ಎಂಬ ಭೀತಿಯನ್ನೂ ಅನುಭವಿಸಿದೆ. ನಾನು ಬದುಕುತ್ತೇನೆಯೇ ಇಲ್ಲವೇ ಎಂಬ ಅನಿಶ್ಚಿತತೆಯನ್ನೂ ನಾನು ಅನುಭವಿಸಿದೆ. ಅದೃಷ್ಟವಶಾತ್‌ ನಾನು ಈಗ ಪೂರ್ತಿಯಾಗಿ ಗುಣಮುಖಳಾಗಿದ್ದೇನೆ ಮತ್ತು ಸೋಂಕಿನಿಂದ ಮುಕ್ತಿ ಹೊಂದಿದ್ದೇನೆ; ಆದರೆ ಒಮ್ಮೊಮ್ಮೆ ಶೀತವಾಗುವುದು ಅಥವಾ ಅದಕ್ಕಿಂತ ಕೆಟ್ಟದಾದ ಯಾವುದಾದರೂ ಅನಾರೋಗ್ಯ ಸಂಭವಿಸುವ ಬಗ್ಗೆ ಭೀತಳಾಗಿದ್ದೆ. ಆಸ್ಪತ್ರೆವಾಸದಿಂದಾಗಿ ನನಗೆ ಕಠಿನ ನೈರ್ಮಲ್ಯ ಕ್ರಮಗಳು ಹಾಗೂ ಸೋಂಕು ನಿವಾರಕ ಕೈತೊಳೆಯುವ ಕ್ರಮಗಳ ಮಹತ್ವದ ಅರಿವಾಯಿತು ಮತ್ತು ಹೋಮ್‌ ಕ್ಲೀನರ್‌ಗಳನ್ನು ಉಪಯೋಗಿಸಿ ಮನೆಯನ್ನು ಕ್ರಿಮಿಕೀಟ ಮುಕ್ತವನ್ನಾಗಿ ಇರಿಸುವುದು ಎಷ್ಟು ಮುಖ್ಯ ಎಂಬುದು ಮನವರಿಕೆಯಾಯಿತು. ಅದೊಂದು ಅತಿ ಕೆಟ್ಟ ಅನುಭವವಾಗಿದ್ದರೂ ನನ್ನ ಪ್ರವಾಸದ ಹವ್ಯಾಸದಿಂದ ಅದು ನನ್ನನ್ನು ದೂರ ಸರಿಸಲಿಲ್ಲ; ಈಗಾಗಲೇ ನನ್ನ ಮುಂದಿನ ಕೇರಳ ಪ್ರವಾಸದ ಯೋಜನೆ ಹಾಕಿಕೊಂಡಿದ್ದೇನೆ. 

ಈ ಬಾರಿ ಆಸ್ಪತ್ರೆಯಲ್ಲ; ಕೇರಳವನ್ನು ನೋಡುವ ಭರವಸೆ ನನಗಿದೆ. (ಮೂಲ: https://antibiotic.ecdc.europa.eu/

– ಮುಂದಿನ  ವಾರಕ್ಕೆ  

– ಡಾ| ವಂದನಾ ಕೆ. ಇ.
ಪ್ರೊಫೆಸರ್‌ ಆಫ್ ಮೈಕ್ರೊಬಯಾಲಜಿ
ಡಾ| ಟಿ.ಎಂ.ಎ.ಪೈ ಆ್ಯಂಟಿ ಮೈಕ್ರೋಬಿಯಲ್‌ ಸ್ಟೀವರ್ಡ್‌ಶಿಪ್‌ ದತ್ತಿಪೀಠ, ಕಸ್ತೂರ್ಬಾ ವೈದ್ಯಕೀಯ ಕಾಲೇಜು, ಮಣಿಪಾಲ ವಿಶ್ವವಿದ್ಯಾನಿಲಯ, ಮಣಿಪಾಲ.

ಟಾಪ್ ನ್ಯೂಸ್

MLC Election: ನೈಋತ್ಯ ಕ್ಷೇತ್ರದಲ್ಲಿ ಗೆಲುವು ನಿಶ್ಚಿತ: ಕೋಟ

MLC Election: ನೈಋತ್ಯ ಕ್ಷೇತ್ರದಲ್ಲಿ ಗೆಲುವು ನಿಶ್ಚಿತ: ಕೋಟ

Kambala ಕ್ಷೇತ್ರದವರಿಗೆ ಉಚಿತ ವಿಮೆ ಸೌಲಭ್ಯ

Kambala ಕ್ಷೇತ್ರದವರಿಗೆ ಉಚಿತ ವಿಮೆ ಸೌಲಭ್ಯ

Madhu Bangarappa ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಗೆಲುವು

Madhu Bangarappa ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಗೆಲುವು

Belthangady ಕಾಂಗ್ರೆಸ್‌ನಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಆತಂಕದಲ್ಲಿ: ಕೋಟ

Belthangady ಕಾಂಗ್ರೆಸ್‌ನಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಆತಂಕದಲ್ಲಿ: ಕೋಟ

Belthangady ವಿದ್ಯುತ್‌ ತಂತಿ ಮೇಲೆ ಬಿದ್ದ ಮರ; ವ್ಯಕ್ತಿಗೆ ಗಾಯ

Belthangady ವಿದ್ಯುತ್‌ ತಂತಿ ಮೇಲೆ ಬಿದ್ದ ಮರ; ವ್ಯಕ್ತಿಗೆ ಗಾಯ

Shirva ಮರಳು ಅಕ್ರಮ ಸಾಗಾಟ: ಟಿಪ್ಪರ್‌ ವಶ

Shirva ಮರಳು ಅಕ್ರಮ ಸಾಗಾಟ: ಟಿಪ್ಪರ್‌ ವಶ

1-wewewe

Mangaluru CCB  ಕಾರ್ಯಾಚರಣೆ: ಅಕ್ರಮ ಪಿಸ್ತೂಲ್ ಹೊಂದಿದ್ದ ಇಬ್ಬರ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-pregnant

Pregnant: ಗರ್ಭಾವಸ್ಥೆ – ಬಾಣಂತನದ ಅವಧಿಯ ಮಾನಸಿಕ ಆರೋಗ್ಯ

8-Borderline-Personality-Disorder

Borderline Personality Disorder: ಬಾರ್ಡರ್‌ಲೈನ್‌ ಪರ್ಸನಾಲಿಟಿ ಡಿಸಾರ್ಡರ್‌

7-kmc-ramdas-pai-block

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಲೋಕಾರ್ಪಣೆಗೊಂಡಿದೆ ನೂತನ ಡಾ|ರಾಮದಾಸ್‌ ಎಂ.ಪೈ ಬ್ಲಾಕ್‌

6-

Pregnancy: ಗರ್ಭಧಾರಣೆಯ ಭಾವನಾತ್ಮಕ ಅಂಶಗಳು

5-

Neuromodulation therapy : ಮಾನಸಿಕ ಕಾಯಿಲೆಗಳಿಗೆ ನ್ಯೂರೋಮಾಡ್ಯುಲೇಷನ್‌ ಚಿಕಿತ್ಸೆ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

MLC Election: ನೈಋತ್ಯ ಕ್ಷೇತ್ರದಲ್ಲಿ ಗೆಲುವು ನಿಶ್ಚಿತ: ಕೋಟ

MLC Election: ನೈಋತ್ಯ ಕ್ಷೇತ್ರದಲ್ಲಿ ಗೆಲುವು ನಿಶ್ಚಿತ: ಕೋಟ

Kambala ಕ್ಷೇತ್ರದವರಿಗೆ ಉಚಿತ ವಿಮೆ ಸೌಲಭ್ಯ

Kambala ಕ್ಷೇತ್ರದವರಿಗೆ ಉಚಿತ ವಿಮೆ ಸೌಲಭ್ಯ

Madhu Bangarappa ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಗೆಲುವು

Madhu Bangarappa ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಗೆಲುವು

ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌; ಅಧಿಕಾರಿಗಳ ಸಭೆ ಪರಿಹಾರ ಕಾಣದೇ ಮುಂದಕ್ಕೆ

ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌; ಅಧಿಕಾರಿಗಳ ಸಭೆ ಪರಿಹಾರ ಕಾಣದೇ ಮುಂದಕ್ಕೆ

Belthangady ಕಾಂಗ್ರೆಸ್‌ನಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಆತಂಕದಲ್ಲಿ: ಕೋಟ

Belthangady ಕಾಂಗ್ರೆಸ್‌ನಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಆತಂಕದಲ್ಲಿ: ಕೋಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.