ಈ ಗಣಪನ ನೋಡಲು ದೊಡ್ಡವರೇ ಬರು”ತಾರೆ’!
Team Udayavani, Sep 15, 2018, 12:47 PM IST
ಆ ಗಣಪ ಎಷ್ಟು ಹೈಟ್ ಇದ್ದಾನೆ? ಅಲ್ಲಿ ಇವತ್ತು ಯಾವ ಸ್ಟಾರ್ ಹಾಡು ಹೇಳ್ಳೋಕೆ ಬರ್ತಾರೆ? ಗಣಪನ ವಿಸರ್ಜನೆಗೆ ಎಷ್ಟು ಜನ ಸೇರಿದ್ರಂತೆ?- ಚೌತಿಯ ವೇಳೆ ಬೀದಿಯಲ್ಲಿ ವಿರಾಜಮಾನನಾಗಿ ಕುಳಿತ ಗಣಪನ ಬಗ್ಗೆ ಸಾಮಾನ್ಯವಾಗಿ ನಡೆಯುವ ಚರ್ಚೆ ಇದು. ಬೆಂಗಳೂರಿನಲ್ಲೂ ಇಂಥ ಚರ್ಚೆಗಳು ಸಹಜವಾಗಿ ಕೇಳಿಬರುತ್ತದೆ. ಆದರೆ, ಮಹಾನಗರದ ಜನ ಹೆಚ್ಚು ಚರ್ಚಿಸೋದು ಮಾತ್ರ ಬಸವನಗುಡಿಯ ಗಣೇಶೋತ್ಸವದ ಬಗ್ಗೆ.
ಯಾಕೆ ಗೊತ್ತಾ? ಇಲ್ಲಿನ ಎಪಿಎಸ್ ಕಾಲೇಜಿನ ಮೈದಾನದಲ್ಲಿ ಸ್ಥಾಪಿನಾಗುವ ಗಣಪ ಪ್ರತಿಸಲವೂ ಜೋರು ಸದ್ದು ಮಾಡ್ತಾನೆ! ದೊಡ್ಡ ತಾರೆಗಳು ಇವನೆದುರು ನಿಂತು ಕಾರ್ಯಕ್ರಮಗಳನ್ನು ನಡೆಸಿಕೊಡ್ತಾರೆ. ಅದೇ ರೀತಿ ಈ ಬಾರಿಯೂ ಸ್ಟಾರ್ಗಳ ದೊಡ್ಡ ದಂಡು ಈತನನ್ನು ನೋಡಲು ಬರುತ್ತಿದೆ. ಇಲ್ಲಿನ ಪ್ರೇಕ್ಷಕರನ್ನು ರಂಜಿಸಲು ಆಗಮಿಸುತ್ತಿದ್ದಾರೆ.
ಸೆಪ್ಟೆಂಬರ್ 15ರ ಭಾನುವಾರ ರಾಗರಂಜಿನಿ ಸಂಗೀತ ಕಾರ್ಯಕ್ರಮ ಮೊದಲ ದಿನದ ಹೈಲೈಟ್. 18ರಂದು ವಿವಿಧ ಕಲಾವಿದರಿಂದ ಹಾಸ್ಯ ಸಂಜೆ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಲಿದೆ. 19ರಂದು ಎಸ್.ಪಿ. ಬಾಲಸುಬ್ರಹ್ಮಣ್ಯರ ಹಾಡುಗಾರಿಕೆಯಿಂದ ವೇದಿಕೆ ಕಳೆಗಟ್ಟಲಿದೆ. 21ರಂದು ಬಾಲಿವುಡ್ನ ಹಿರಿಯ ತಾರೆ ರಿಷಿಕಪೂರ್ ಅವರು ಗಾಯಕ ವಿಜಯ ಪ್ರಕಾಶ್ ಜೊತೆ ಸಂವಾದದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 22ರಂದು ಹಸ್ಮಿತಾ ಗಣೇಶ್ರಿಂದ ಭರತನಾಟ್ಯವಿದ್ದು, ಇದರ ಬಳಿಕ ಸುಪ್ರಸಿದ್ಧ ಗಾಯಕಿ ಶ್ರೇಯಾ ಘೋಶಲ್ರಿಂದ ಗಾನಸುಧೆ ಹರಿಯಲಿದೆ. 23ರಂದು ಮತ್ತೆ ಗಾಯಕ ವಿಜಯ್ ಪ್ರಕಾಶ್ ಆಗಮಿಸಲಿದ್ದು, “ಮ್ಯೂಸಿಕಲ್ ನೈಟ್’ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಎಲ್ಲಿ?: ಎಪಿಎಸ್ ಕಾಲೇಜು, ಎನ್. ಆರ್. ಕಾಲೋನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್