ಕಾಫಿ ವಿತ್‌ ಸಿರಿಧಾನ್ಯ


Team Udayavani, Jun 1, 2019, 3:07 AM IST

coffee

ಸಾವಯವ ಹಾಗೂ ಸಿರಿಧಾನ್ಯಗಳನ್ನು ಅಡುಗೆಯಲ್ಲಿ ಬಳಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡುತ್ತಿದೆ. ಇವುಗಳ ಮಾರುಕಟ್ಟೆ ವ್ಯಾಪ್ತಿ ಹೆಚ್ಚುತ್ತಿದೆ. ಈ ದಿನ ಗಲ್ಲಿಗಳಲ್ಲೂ ಸಾವಯವ ಅಂಗಡಿ ಮಳಿಗೆಗಳನ್ನು ಕಾಣಬಹುದು. ಅನೇಕ ಹೋಟೆಲುಗಳೂ ಸಾವಯವ ಆಹಾರ ಪದಾರ್ಥಗಳನ್ನು ಬಳಸಿ ಖಾದ್ಯಗಳನ್ನು ತಯಾರಿಸಲು ಶುರುಮಾಡಿವೆ.

ಪೂರ್ತಿ ಸಾವಯವ ಆಹಾರ ಪದಾರ್ಥ ಮತ್ತು ಸಿರಿಧಾನ್ಯಗಳನ್ನು ಮಾತ್ರವೆ ಬಳಸುವ ಕೆಫೆ ಒಂದು ನಗರದಲ್ಲಿ ಶುರುವಾಗಿದೆ. ಅದುವೇ ಜಯನಗರದಲ್ಲಿರುವ “ಫ‌ಲದ ಪ್ಯೂರ್‌ ಶ್ಯೂರ್‌’ ಕೆಫೆ. ಕೆಪೆಗೆ ಅಂಟಿಕೊಂಡಂತೆ ಸಾವಯವ ಪದಾರ್ಥಗಳನ್ನು ಮಾರುವ ಅಂಗಡಿಯೂ ಇದೆ.

ಶುದ್ಧ ಸಸ್ಯಾಹಾರಿ: ಇದು ಶುದ್ಧ ಸಸ್ಯಾಹಾರಿ ಕೆಫೆಯಾಗಿದ್ದು ಇಲ್ಲಿನ ಮೆನು ಪಟ್ಟಿಯಲ್ಲಿರುವ ಬೀಟ್‌ರೂಟ್‌, ತೆಂಗಿನ ತುರಿಗಳನ್ನು ಹಾಕಿ ಮಾಡಿದ ಉಪ್ಪಿಟ್ಟು, ಪೀನಟ್‌ ಬಟರ್‌ ಮತ್ತು ಜೆಲ್ಲಿ ಸ್ಯಾಂಡ್‌ವಿಚ್‌, ಸಾವಯವ ಬೆಲ್ಲ, ದೇಶಿ ತುಪ್ಪ ಬಳಸಿ ತಯಾರಿಸಿದ ಟೋಸ್ಟೆಡ್‌ ಬಗುಟಿ, ಕಲ್ಲಂಗಡಿ, ಟೊಮೆಟೋ ಜ್ಯೂಸ್‌, ಕ್ಯಾರೆಟ್‌, ಬೀಟ್‌ರೂಟ್‌, ಕಿತ್ತಳೆ ಜ್ಯೂಸ್‌, ಲೆಮನ್‌ ಟೀ, ಮಸಾಲಾ ಚಾಯ್‌, ತೆಂಗಿನ ಎಣ್ಣೆ, ದೇಶಿ ತುಪ್ಪ ಬಳಸಿ ತಯಾರಿಸಿದ ಬಗೆ ಬಗೆಯ ಸೂಪ್‌ ಮತ್ತು ಸಲಾಡ್‌ಗಳು ನಾಲಗೆಗೆ ಮಾತ್ರವಲ್ಲದೆ, ದೇಹಕ್ಕೂ ಆರೋಗ್ಯಕರ.

ಸಾವಯವ ಪಿಜ್ಜಾ ಮತ್ತು ಬರ್ಗರ್‌: ಪಿಜ್ಜಾ ಮತ್ತು ಬರ್ಗರ್‌ ಕುರುಕಲು ತಿಂಡಿ ವಿಭಾಗಕ್ಕೆ ಸೇರಿಕೊಳ್ಳುತ್ತದೆ. ಅವು ಅನಾರೋಗ್ಯಕರ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಆದರೆ ಇಲ್ಲಿ ಸಿಗುವ ಪಿಜ್ಜಾ ಮತ್ತು ಬರ್ಗರ್‌ಗಳು ಆರೋಗ್ಯಕರ ಎಂದೆನಿಸಿಕೊಳ್ಳುತ್ತವೆ. ಏಕೆಂದರೆ ಅವನ್ನು ಸಾವಯವ ಆಹಾರ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ.

ಇವುಗಳಷ್ಟೇ ಅಲ್ಲದೆ ಸಿರಿಧಾನ್ಯಗಳಿಂದ ತಯಾರಾದ ಫ‌ುಲ್‌ ಮೀಲ್ಸ್‌ ಇಲ್ಲಿ ಲಭ್ಯ. ಕುಲ್ಚಾ, ಸಿರಿಧಾನ್ಯದ ಬಿರಿಯಾನಿ ರೈಸ್‌, ರೈತಾ, ಸಬ್ಜಿ, ದಾಲ್‌, ಸಲಾಡ್‌, ಸಿರಿಧಾನ್ಯದ ಖೀರ್‌, ನಿಪ್ಪಟ್‌- ಇವಿಷ್ಟನ್ನು ಫ‌ುಲ್‌ ಮೀಲ್ಸ್‌ ಒಳಗೊಂಡಿದೆ.

ಹಲಸು ಸೊಗಸು: ವಿಟಮಿನ್‌ ಮತ್ತು ಪ್ರೋಟೀನ್‌ ಪೋಷಕಾಂಶಯುಕ್ತ ಹಲಸಿನ ಹಣ್ಣಿನಿಂದ ತಯಾರಿಸಿದ ಖೀಮಾ, ಟಿಕ್ಕಿ, ಬರ್ಗರ್‌ನ ರುಚಿ ನೋಡಬಹುದು. ಹಲಸಿನಹಣ್ಣನ್ನು ಬೇಯಿಸಿ “ರೆಡಿ ಟು ಈಟ್‌’ ಮಾದರಿಯಲ್ಲೂ ಸವಿಯುವ ಅವಕಾಶ ಇಲ್ಲಿದೆ. ರೈತರಿಂದ ನೇರವಾಗಿ ಹಲಸಿನ ಹಣ್ಣನ್ನು ಖರೀದಿಸಿ ಸಂಸ್ಕರಣೆಗೊಳಪಡಿಸಿ ತಂರ ವಿಶೇಷ ರೆಸಿಪಿ ಬಳಸಿ ತಯಾರಾಗುವ ವಿವಿಧ ಹಲಸಿನ ಖಾದ್ಯಗಳು ವಿದೇಶಗಳಿಗೂ ರಫ್ತಾಗುತ್ತವೆ.

ಬುಲೆಟ್‌ ಪ್ರೂಫ್ ಕಾಫಿ: ಖಾಲಿ ಹೊಟ್ಟೆಯಲ್ಲಿ ಕುಡಿಯಲ್ಪಡುವ ಎನರ್ಜಿ ಡ್ರಿಂಕ್‌ ಬುಲೆಟ್‌ ಪ್ರೂಫ್ ಕಾಫಿ ಇಲ್ಲಿ ಸಿಗುತ್ತದೆ. ಈಚೆಗೆ ಜನಪ್ರಿಯತೆ ಪಡೆಯುತ್ತಿರುವ ಈ ಪೇಯ ದೇಹ ನಿತ್ರಾಣಗೊಂಡಿದ್ದರೆ, ಕೂಡಲೆ ಶಕ್ತಿ ತುಂಬುತ್ತದೆ.

ಅಲ್ಲದೆ, ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕ್ಯಾಲೋರಿಗಳನ್ನು ಖರ್ಚು ಮಾಡಿ ಫಿಟ್‌ನೆಸ್‌ ಕಾಪಾಡಲು ಸಹಕರಿಸುತ್ತದೆ ಎನ್ನುವುದು ಇದನ್ನು ಬಳಸುವವರ ಅಭಿಪ್ರಾಯ. ಬುಲೆಟ್‌ ಪ್ರೂಫ್ ಕಾಫಿ ಅಗತ್ಯ ಪೋಷಕಾಂಶಗಳನ್ನು ಹೊಂದಿರುವುದರಿಂದ ಅನೇಕರು ಉಪಾಹಾರಕ್ಕೆ ಬದಲಿ ಆಹಾರವಾಗಿಯೂ ಸೇವಿಸುತ್ತಾರೆ.

ಎಲ್ಲಿ?: ಫ‌ಲದ ಪ್ಯೂರ್‌ಶ್ಯೂರ್‌ ಕೆಫೆ, ನಂ.43 ಶಾಪೂರ್‌ ಆರ್ಕೆàಡ್‌, 27ನೇ ಕ್ರಾಸ್‌, 7ನೇ ಮುಖ್ಯರಸ್ತೆ, ಜಯನಗರ 4ನೇ ಹಂತ.

ಸಂಪರ್ಕ: 9900039403

ಟಾಪ್ ನ್ಯೂಸ್

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.