ಸ್ಟಾರ್‌ ಹೋಟೆಲ್‌ ನಡುವೆ “ಸ್ಟಾರ್‌’ಗಳ ಹೋಟೆಲ್‌ ;ಚಂದ್ರು, ನಿಮ್ಮ ಮನೆ 

ಅಣ್ಣಾವ್ರ ಮನ ಗೆದ್ದ ನಾಟಿ ರುಚಿ

Team Udayavani, Jun 29, 2019, 3:02 PM IST

HOTEL4

ಆ ಕ್ರಸೆಂಟ್‌ ರಸ್ತೆಯಲ್ಲಿ ಸಾಲು ಸಾಲಾಗಿರೋದು, ಬರೀ ಸ್ಟಾರ್‌ ಹೋಟೆಲ್‌ಗ‌ಳು. “ದೊಡ್ಡವ್ರ ಬೀದಿ’ ಅಂತಲೇ ಅದನ್ನು ಕರೆ ಯು ವು ದುಂಟು. ಆ ಸ್ಟಾರ್‌ ಹೋಟೆಲ್‌ ಗಳ ನಡುವೆ ಕಣ್ಣಿಗೆ ಕಂಡೂ ಕಾಣದ ಹಾಗೆ, ಒಂದು ಪುಟ್ಟ ಹೋಟೆಲ್‌ ಇದೆ. ಬೆಳಗ್ಗೆ 11 ಗಂಟೆ ದಾಟಿತು ಎಂದರೆ, ಮಧ್ಯಾಹ್ನ 3ರ ತನಕ ಆ ಪುಟ್ಟ ಹೋಟೆಲ್‌ ಎದುರು ಜನಜಾತ್ರೆ. ಅದೇನು ಪರಿಮಳ ಅಂತೀರಿ… ರಸ್ತೆಯಲ್ಲಿ ಹಾಗೆ ಸುಮ್ಮನೆ ನಡೆದು ಹೋಗ್ತಿದ್ರೆ, ಒಮ್ಮೆ ಈ ಹೋಟೆಲ್‌ ಒಳಗೆ ಹೋಗಿ, ಏನಾದ್ರೂ ತಿಂದು ಬರೋಣ ಅನ್ನೋ ಆಸೆ ಹುಟ್ಟುತ್ತೆ.

ಚಿಕನ್‌, ಮಟನ್‌ ಖಾದ್ಯಗಳ ವಿಭಿನ್ನ ರುಚಿಯಿಂದಲೇ ಮನೆಮಾತಾದ ಹೋಟೆಲ್‌, “ಚಂದ್ರು, ನಿಮ್ಮ ಮನೆ’! ಇದರ ಮಾಲೀಕರು, ಶೇಷಾದ್ರಿಪುರಂನ ಚಂದ್ರಶೇಖರ್‌. 26 ವರ್ಷಗಳಿಂದ ಈ ಹೋಟೆಲ್‌ ನಡೆಸುತ್ತಾ, ಸ್ನೇಹಜೀವಿಯಾಗಿಯೂ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಂದಹಾಗೆ, ಚಂದ್ರು ಅವರು ಹೋಟೆಲ್‌ ಆರಂಭಿಸುವ ಮೊದಲು, ವರನಟ ಡಾ. ರಾಜಕುಮಾರ್‌ ಅವರಿಗೆ ಮೇಕಪ್‌ ಅಸಿಸ್ಟೆಂಟ್‌ ಆಗಿ ಕೆಲಸ ಮಾಡುತ್ತಿದ್ದರಂತೆ.

ಅದೊಂದು ಟರ್ನಿಂಗ್‌ ಪಾಯಿಂಟ್‌
ಚಂದ್ರು ಅವರ ತಾಯಿ, ಮನೆಯಲ್ಲಿ ರುಚಿಯಾಗಿ ಅಡುಗೆ ಮಾಡುತ್ತಿದ್ದರಂತೆ. ಮೇಕಪ್‌ ಮಾಡುತ್ತಿದ್ದರಲ್ಲ; ಅದೇ ಸಲುಗೆಯಲ್ಲಿ ಆಗೊಮ್ಮೆ ಈಗೊಮ್ಮೆ ತಮ್ಮ ಮನೆಯ ಊಟದ ರುಚಿಯನ್ನು ಅಣ್ಣಾವ್ರಿಗೆ ತೋರಿಸುವ ಅವಕಾಶ ಇವರಿಗೆ ಒದಗಿಬಂದಿತ್ತು. ಆ ರುಚಿ ಅಣ್ಣಾವ್ರ ಮನಸ್ಸನ್ನೂ ಗೆದ್ದಿತ್ತು. ಅದೇ ರುಚಿ ಜನರನ್ನೂ ತಲುಪಲಿ ಎಂಬ ರಾಜ್‌ಕುಮಾರ್‌ ಅವರ ಸಲಹೆ ಮೇರೆಗೆ ಈ ಹೋಟೆಲ್‌ ಹುಟ್ಟಿಕೊಂಡಿತಂತೆ. “ಅಮ್ಮನಿಂದ ಅಡುಗೆ ಕಲೆಯನ್ನು ಕಲಿತುಕೊಂಡೆ. ಅದೇ ರುಚಿಯನ್ನೇ ಗ್ರಾಹಕರಿಗೆ ಹಂಚುತ್ತೇನೆ’ ಎನ್ನುತ್ತಾರೆ ಚಂದ್ರು. ಈ ಹೋಟೆಲ್‌ನಲ್ಲಿ ಅವರ ಪತ್ನಿ ಹಾಗೂ ಮೂವರು ಕೆಲಸಗಾರರು ಸೇರಿ ಒಟ್ಟು ಐವರು ಕೆಲಸ ಮಾಡುತ್ತಿದ್ದಾರೆ.

ಇಲ್ಲಿನ ಟೇಸ್ಟೇ, ಸೂಪರ್‌ ಹಿಟ್‌
“ಚಂದ್ರು, ನಿಮ್ಮ ಮನೆ’ ಹೋಟೆಲ್‌ನ ಊಟಕ್ಕೂ ಮನೆಯ ಊಟಕ್ಕೂ ಜಾಸ್ತಿ ವ್ಯತ್ಯಾಸವೇನೂ ಇಲ್ಲ. ಅದರಲ್ಲೂ ಚಿಕನ್‌, ಮಟನ್‌ನ ವೆರೈಟಿಗಳ ರುಚಿ ಇಲ್ಲಿ ಸೂಪರ್‌ ಹಿಟ್‌ ಆಗಿದೆ. ನಾಟಿಕೋಳಿ ಊಟ, ಪೆಪ್ಪರ್‌ ಚಿಕನ್‌, ಮಟನ್‌ ಚಾಪ್ಸ್‌, ಕೈಮಾ ಸಾರು, ಚಿಕನ್‌ ಬಿರಿಯಾನಿ ಸೇರಿದಂತೆ 19 ವಿವಿಧ ಐಟಂಗಳನ್ನು ಇಲ್ಲಿ ಬಹಳ ರುಚಿಕಟ್ಟಾಗಿ ತಯಾರಿಸಲಾಗುತ್ತದೆ. ಮುದ್ದೆಯೂಟವೂ ಇಲ್ಲಿದೆ.

ಪುಟ್ಟ ಜಾಗ… ಆದರೆ, ಹೌಸ್‌ಫ‌ುಲ್‌!
ನೀವು ನಂಬಿ¤àರೋ, ಇಲ್ಲವೋ… ಈ ಹೋಟೆಲ್‌ ಇರೋದೇ 10*10 ವಿಸ್ತೀರ್ಣದಲ್ಲಿ. ಆದರೆ, ಈ ಹೋಟೆಲಿಗೆ ಒಂದು ದಿನಕ್ಕೆ 250ರಿಂದ 300 ಜನ ಊಟ ಮಾಡಲು ಬರುತ್ತಾರೆ! ಇಲ್ಲಿನ ಊಟದ ಬೆಲೆಯೂ ಅಷ್ಟೇ. 100 ರಿಂದ 140 ರೂ. ವರೆಗೆ ಹೊಟ್ಟೆ ತುಂಬಿ ಹೋಗುವ ಟೇಸ್ಟಿ ಊಟ. ನಾನ್‌ವೆಜ್‌ ಅಂದಮೇಲೆ 100 ರುಪಾಯಿ, ಕಡಿಮೆ ಮೊತ್ತವೆಂದೇ ಹೇಳಬಹುದು. ಹಾಗಾಗಿ, ಬಡವ, ಬಲ್ಲಿದರೆಲ್ಲಾ ಈ ಹೋಟೆಲಿಗೆ ನಾಮುಂದು-ತಾಮುಂದು ಎಂಬಂತೆ ಬರುತ್ತಾರೆ.
ಈ ಹೋಟೆಲಿಗೆ ಪ್ರತಿ ಸೋಮವಾರ ರಜೆ. ಉಳಿದ ದಿನಗಳಲ್ಲಿ 11 ರಿಂದ 3ರ ವರೆಗೂ ಇಲ್ಲಿ ರುಚಿಕರವಾದ ಮಾಂಸಾಹಾರಿ ಊಟ ಲಭ್ಯ. ನೀವೇನಾದರೂ, ಕ್ರಸೆಂಟ್‌ ರಸ್ತೆಯತ್ತ ಸವಾರಿ ಹೊರಟರೆ, ಇಲ್ಲಿ ಊಟ ಮಾಡೋದನ್ನು ಮರೆಯಬೇಡಿ.

ಅಣ್ಣಾವ್ರಿಂದ ರಜನಿ ವರೆಗೆ…
ಪುಟ್ಟ ಹೋಟೆಲ್‌ ಆದರೂ, ಸ್ಟಾರ್‌ಗಳ ನೆಚ್ಚಿನ ಹೋಟೆಲ್‌ ಇದು. ಡಾ. ರಾಜ್‌ಕುಮಾರ್‌ ಮಾತ್ರವೇ ಅಲ್ಲ. ರಜನೀಕಾಂತ್‌ ಕೂಡ ಚಂದ್ರು ಅವರ ಹೋಟೆಲ್‌ನ ದೊಡ್ಡ ಅಭಿಮಾನಿ. ರೆಬೆಲ್‌ ಸ್ಟಾರ್‌ ಅಂಬರೀಶ್‌ ಕೈಯಲ್ಲಿ “ಟೇಸ್‌ ಮಸ್ತಾಗೈತೆ ಕಣ್ಲಾ’ ಎಂದು ಶಹಬ್ಟಾಶ್‌ ಗಿಟ್ಟಿಸಿಕೊಂಡಿದ್ದಾರೆ, ಚಂದ್ರು. ಶ್ರೀಮುರಳಿಯಂಥ ಯುವನಟರನ್ನೂ ಇದು ಆಕರ್ಷಿಸಿದೆ.

ನನಗೆ ಜನರ ಹಸಿವನ್ನು ನೀಗಿಸುವ ಅವಕಾಶ ಸಿಕ್ಕಿದೆ. ಗ್ರಾಹಕರ ಹಾರೈಕೆಯಿಂದ ಈ ಹೋಟೆಲ್‌ ತುಂಬಾ ಚೆನ್ನಾಗಿ ನಡೆಯುತ್ತಿದೆ. ಅವರ ಆಶೀರ್ವಾದ ಇರುವವರೆಗೂ ನನ್ನ ಕಾರ್ಯ ಮುಂದುವರಿಯುತ್ತದೆ.
– ಚಂದ್ರಶೇಖರ್‌, ಮಾಲೀಕ

ನಾನು ಸುಮಾರು 9 ವರ್ಷಗಳಿಂದ ಇಲ್ಲಿಗೆ ಬರುತ್ತಿದ್ದೇನೆ. ಇಲ್ಲಿನ ಊಟ ನನಗಂತೂ ತುಂಬಾ ಹಿಡಿಸಿದೆ. ನಾಟಿಕೋಳಿ ಸಾರಂತೂ ಮಸ್ತ್.
– ರಮೇಶ್‌, ಗ್ರಾಹಕ

ಉಮೇಶ್‌ ರೈತನಗರ

ಟಾಪ್ ನ್ಯೂಸ್

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.