ಸಲಿಂಗಕಾಮ ವಿಷಯದ ನಾಟಕ: ಒಂದು ಪ್ರೀತಿಯ ಕತೆ
Team Udayavani, Apr 21, 2018, 4:23 PM IST
ಸಲಿಂಗಕಾಮ ವಿಷಯದ ಕುರಿತು ಸಾರ್ವಜನಿಕವಾಗಿ ಮಾತಾಡುವುದೇ ನಿಷಿದ್ಧ ಎನ್ನುವಂಥ ಸ್ಥಿತಿ ಇದೆ. ಅಂಥದ್ದರಲ್ಲಿ ಅದೇ ಕಥಾವಸ್ತುವನ್ನಾಧರಿಸಿದ ನಾಟಕಗಳು ಕೂಡಾ ಅಪರೂಪ. ಅಂಥದ್ದರಲ್ಲಿ ಮಹಿಳೆಯರಲ್ಲಿನ ಸಲಿಂಗಕಾಮದ ಕುರಿತ “ಒಂದು ಪ್ರೀತಿಯ ಕತೆ’ ಎನ್ನುವ ಕನ್ನಡ ನಾಟಕವೊಂದು ತೆರೆ ಕಾಣುತ್ತಿದೆ. ಇದು ವಿಜಯ್ ತೆಂಡೂಲ್ಕರ್ ರಚಿಸಿದ ಮರಾಠಿ “ಮಿತ್ರಾಚಿ ಗೋಷ್ಟಾ’ ನಾಟಕದ ಕನ್ನಡ ಅವತರಣಿಕೆಯಾಗಿದೆ. ಈ ನಾಟಕವನ್ನು ವೆಂಕಟೇಶ್ ಪ್ರಸಾದ್ರವರು ನಿರ್ದೇಶಿಸಿದ್ದಾರೆ. ನಾಟಕದ ಕೇಂದ್ರಬಿಂದು ಪ್ರೀತಿ ಎನ್ನುವ ಕಾಲೇಜು ತರುಣಿ. ಈ ನಾಟಕದ ಮೂಲಕ ಹೋಮೋ ಸೆಕ್ಷುವಲ್ ಮಹಿಳೆಯ ಅಂತರಂಗವನ್ನು ಪ್ರೇಕ್ಷಕರ ಮುಂದೆ ತೆರೆದಿಡುವ ಪ್ರಯತ್ನ ನಡೆಸಲಾಗಿದೆ.
ಎಲ್ಲಿ?: ರಂಗಶಂಕರ, ಜೆ.ಪಿ.ನಗರ
ಯಾವಾಗ?: ಏಪ್ರಿಲ್ 26, ಸಂಜೆ 7.30