ಸಂಸಾರದಲ್ಲಿ ಸರಿಗಮ 1391ನೇ ಪ್ರದರ್ಶನ
Team Udayavani, Mar 25, 2017, 3:40 PM IST
ನಟ, ನಿರ್ದೇಶಕ, ರಂಗಕರ್ಮಿ ಸರಿಗಮ ವಿಜಿಯವರ ನೇತೃತ್ವದಲ್ಲಿ ಆರಂಭಗೊಂಡ ಹವ್ಯಾಸಿ ರಂಗತಂಡ “ಯಶಸ್ವಿ’, ಯುಗಾದಿ ಪ್ರಯುಕ್ತ ಜನಪ್ರಿಯ ಹಾಸ್ಯ ನಾಟಕ “ಸಂಸಾರದಲ್ಲಿಸರಿಗಮ’ ಪ್ರದರ್ಶನವನ್ನು ಮಾರ್ಚ್ 29ರಂದು ಆಯೋಜಿಸಿದೆ. ಹವ್ಯಾಸಿ ರಂಗಭೂಮಿ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ “ಯಶಸ್ವಿ’ ರಂಗತಂಡದ ಈ ನಾಟಕ 1391ನೇ ಪ್ರದರ್ಶನ ಕಾಣುತ್ತಿರುವುದು ವಿಶೇಷ. ರಾಜ್ಯಪ್ರಶಸ್ತಿ ವಿಜೇತ ಸರಿಗಮ ವಿಜಿ ಮತ್ತು ಕಿರುತರೆ- ಸಿನಿಮಾ ಕಲಾವಿದೆ ಶ್ರೀದೇವಿ ನಾಟಕದಲ್ಲಿ ಅಭಿನಯಿಸುತ್ತಿದ್ದಾರೆ. ಕರ್ನಾಟಕದಲ್ಲಿ ಮಾತ್ರವಲ್ಲದೆ ಹೊರರಾಜ್ಯಗಳಲ್ಲೂ, ಹೊರದೇಶಗಳಲ್ಲೂ ಹೆಸರು ಮಾಡಿರುವ “ಸಂಸಾರದಲ್ಲಿಸರಿಗಮ’ ನಾಟಕ ಕಳೆದ ಮೂರು ದಶಕಗಳಿಂದಲೂ ಪ್ರದರ್ಶನ ಕಾಣುತ್ತಿದ್ದು 2,000 ಪ್ರದರ್ಶನದ ದಾಖಲೆಯತ್ತ ಸಾಗಿದೆ.
ಇದೀಗ ನಡೆಯುತ್ತಿರುವ ಪ್ರದರ್ಶನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಲಿದ್ದಾರೆ. ಕಲಾವಿದೆ, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀಯವರೂ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ನಟ ವಿಜಯ್ ರಾಘವೇಂದ್ರ, ನೆನಪಿರಲಿ ಪ್ರೇಂ ಮತ್ತು ನಟಿ ಮೇಘನಾ ರಾಜ್ ಅವರೂ ನಾಟಕವನ್ನು ವೀಕ್ಷಿಸಲಿದ್ದಾರೆ.
ಎಲ್ಲಿ?: ರವೀಂದ್ರ ಕಲಾಕ್ಷೇತ್ರ
ಯಾವಾಗ?: ಮಾರ್ಚ್ 29, ಸಂಜೆ 6.15
ಪ್ರವೇಶ: ಉಚಿತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್ಗೆ ಭಾರಿ ಡಿಮ್ಯಾಂಡ್
Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ
Tragedy: ತನ್ನ ಅಪಾರ್ಟ್ಮೆಂಟ್ನಲ್ಲೇ ನೇಣಿಗೆ ಶರಣಾದ ಭೋಜ್ಪುರಿ ನಟಿ… ಕಾರಣ ನಿಗೂಢ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ