ನಗುವ ಅಮ್ಮನ ನೆನೆದು…


Team Udayavani, Feb 22, 2020, 6:08 AM IST

naguva-amma

ಕನ್ನಡ, ಹಿಂದಿ ಚಿತ್ರಭೂಮಿಕೆಗಳಲ್ಲಿ ನಟಿಸಿದ್ದ, ಹಿರಿಯ ಅಭಿನೇತ್ರಿ ಕಿಶೋರಿ ಬಲ್ಲಾಳ್‌ ಇತ್ತೀಚೆಗಷ್ಟೇ ಇಹವನ್ನು ಅಗಲಿದರು. ಆಪ್ತ ಬಳಗದಲ್ಲಿ ಅವರು ಬಿತ್ತಿದ ನೆನಪುಗಳು ನೂರಾರು…

ಸದಾ ನಗು ಮೊಗದ ಅಮ್ಮ, ಕಿಶೋರಿ ಬಲ್ಲಾಳ್‌. ನಾವು ಯಾವಾಗಲೂ ಅವರಿಗೆ, “ನಿಮಗೆ ದುಃಖದ ದೃಶ್ಯ ನಟಿಸಲು ಕೊಟ್ಟರೂ ನಗ್ತಾ ನಗ್ತಾನೆ ಅಳಿಸ್ತಿರಿ’ ಎಂದು ಕಿಚಾಯಿಸುತ್ತಿದ್ದೆವು. ಅದಕ್ಕೆ ಅವರು, “ಮತ್ತೆ ನಾನು, ಶಾರೂಖ್‌ ಖಾನ್‌ನನ್ನೇ ಅಳಿಸಿದೋಳಲ್ವೇ?’ ಅನ್ನೋರು. ನಮ್ಮ ಸ್ಪಂದನ ನಾಟಕ ತಂಡ ಮುಂಬೈಗೆ ಹೋದಾಗ, ನಾನು ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದೆ.

ಅಗಿನ್ನೂ ಅವರದು ನಡು ವಯಸ್ಸು. ಆ ನಾಟಕೋತ್ಸವದಲ್ಲಿ ಅವರು ಪತಿ ಬಲ್ಲಾಳರ ಜತೆ ಓಡಾಡುವಾಗ ಸಡಗರ ಮನೆಮಾಡಿತ್ತು. ನಂತರದಲ್ಲಿ ಬಲ್ಲಾಳ್‌ ದಂಪತಿ, ಬೆಂಗಳೂರಿಗೆ ಬಂದು ನೆಲೆಸಿದರು. “ಪ್ರೇಮ ರಾಗ ಹಾಡು ಗೆಳತಿ’ ಚಿತ್ರದಲ್ಲಿ ನನ್ನ ತಂದೆ , ತಾಯಿಯ ಪಾತ್ರದಲ್ಲಿ ಅವರಿಬ್ಬರು ನಟಿಸಿದ್ದರು. ನನ್ನದು ಅದರಲ್ಲಿ ಮೂಕನ ಪಾತ್ರ. ನನಗಿಂತ ಕಿಶೋರಿ ಬಲ್ಲಾಳರೇ ಪಾತ್ರದಲ್ಲಿ ಲೀನವಾಗಿ ಬಹಳ ದುಃಖೀತರಾಗಿದ್ದನ್ನು ಕಂಡಿದ್ದೆ.

250ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದ್ದ ರಾಜೇಂದ್ರ ಕಾರಂತನ ನಮ್ಮ ನಾಟಕ “ನಮ್ಮ ನಿಮ್ಮೊಳಗೊಬ್ಬ’. ಈ ಟಿವಿಗಾಗಿ ಟಿಲಿಫಿಲ್ಮ್ನಂತೆ ಚಿತ್ರಿಸಲು ಸಿದ್ಧತೆ ನಡೆಸಿದ್ದಾಗ, ಕುಂದಾಪುರದ ಭಾಷೆಯ ಲಾಲಿತ್ಯವನ್ನು ಬಲ್ಲಂತ ಕಲಾವಿದೆ ಬೇಕಿತ್ತು. ಮುಂಚೆ ರಂಗನಟಿ ಶಾಂತತುಪ್ಪರವರು ಆ ಪಾತ್ರವನ್ನು ಮಾಡುತ್ತಿದ್ದರು. ಆದರೆ, ಆ ವೇಳೆಗೆ ಶಾಂತಾತುಪ್ಪಾ ತೀರಿಕೊಂಡಿದ್ದರು. ಬೇರೆ ಯಾರು ಎಂದು ಯೋಚಿಸುತ್ತಿದ್ದಾಗ ಹೊಳೆದದ್ದು ಕಿಶೋರಿ ಬಲ್ಲಾಳ್‌.

ಕೋರಮಂಗಲದ ಅವರ ಮನೆಗೆ ಹೋಗಿ, ಕೇಳಿಕೊಂಡಿದ್ದಕ್ಕೆ ನಮ್ಮ ನಾಟಕದ ಬಗ್ಗೆ ಕೇಳಿ ತಿಳಿದಿದ್ದ ಅವರು, ಬಹಳ ಖುಷಿಯಿಂದ ಒಪ್ಪಿಕೊಂಡಿದ್ದರು. ಹೈದರಾಬಾದ್‌ನಲ್ಲಿ 10 ದಿನಗಳ ಶೂಟಿಂಗು. ಅಷ್ಟೂ ದಿವಸ ಮಳೆಯ ಸನ್ನಿವೇಶದಲ್ಲಿ ನಟಿಸಬೇಕಿತ್ತು. ಅಷ್ಟು ಹಿರಿಯರಾದರೂ, ಮಕ್ಕಳಂತೆ ನಮ್ಮೊಡನೆ ಬೆರೆತು, ವಿಸ್ಮಯ ಮೂಡಿಸಿದ್ದರು.

ವಾರಕ್ಕೊಮ್ಮೆ ಅವರ ಫೋನು ಬರುತ್ತಲೇ ಇತ್ತು… “ಹೇಗಿದ್ದೀಯಾ? ಆರಾಮ?’ ಎಂದು. ಅವರ ಮನೆಗೆ ಹೋದರಂತೂ, ಭರ್ಜರಿ ಅತಿಥಿ ಸತ್ಕಾರ. ನಮ್ಮೆಲ್ಲರ ಪ್ರೀತಿಯ ಅಮ್ಮ, ಈಗ ಕಾಣಿಸುತ್ತಿಲ್ಲ. ನೆನಪಿನ ಕಲಾಕೃತಿಯಾಗಿ ನಮ್ಮ ಮನದೊಳಗೆ ನಿಂತಿದ್ದಾರೆ.

* ನಾಗೇಂದ್ರ ಶಾನ್‌

ಟಾಪ್ ನ್ಯೂಸ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.