ಮನೆಯು ಮನೆಯಲ್ಲ ಮನಮನಕೆ ಹಿಡಿವ ಕನ್ನಡಿ…


Team Udayavani, Oct 9, 2017, 2:14 PM IST

09-26.jpg

ಮನೆಯೊಳಗಿನ ಒಳ ಅಲಂಕೃತ ಸೂಕ್ಷ್ಮಗಳು ಮನಸ್ಸನ್ನು ಸಂವೇದಿಸುವಂತಿರಬೇಕು. ಬಣ್ಣಗಳ ಚಿತ್ತಾರಕ್ಕೆ  ಮಾನಸಿಕ ವಲಯದ ಮೇಲೆ ಪ್ರಭಾವ ನೀಡುವ ಸರಳ ಅನುಸಂಧಾನ ಪ್ರಾಪ್ತವಾಗಿರಲಿ.  ಭಾರತೀಯ ಪರಂಪರೆ ಎಲ್ಲಾ ವಿಚಾರಗಳಲ್ಲೂ ಅನುಭವ ಪೂರ್ಣ ಸಾದೃಶ್ಯ ಅಂತರ್ಗತ ರಸೋತ್ಪತ್ತಿಯ ಕುರಿತು ವ್ಯಾಖ್ಯಾನಿಸುತ್ತದೆ.

ಮನೆಯ ವ್ಯಾಖ್ಯೆಯನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಮನೆಯನ್ನು ಪರಿಣಾಮದ ದೃಷ್ಟಿಯಿಂದ ಉದಾಹರಿಸಬಹುದು. ಉಳಿಯಲೊಂದು ಮನೆ ಎಂಬುದು ಸರಿ. ಆದರೆ ಮನೆಯೊಳಗಿನ ಮನಸ್ಸುಗಳು ಅಧೈರ್ಯ, ಅನುಮಾನ, ಅಸ್ವಾಸ್ಥ್ಯಗಳೊಂದಿಗೆ ಕೂಡಿರಬಾರದು. ಮನೆಯೇ ಮೊದಲ ಪಾಠಶಾಲೆ ಎಂಬ ವಿಚಾರವನ್ನು ಇಲ್ಲೀಗ ವ್ಯಾಖ್ಯಾನಿಸಿ ನೋಡಬಹುದು. ಜನನಿ ತಾನೆ ಮೊದಲ
ಗುರು ಎಂಬ ಕವಿವಾಣಿ ಸರಿ. ಆದರೆ ಜನನಿಯೋರ್ವಳೇ ಅಲ್ಲ, ಉತ್ತಮ ಸಂಸ್ಕಾರಕ್ಕೆ ಮನೆಯ ಪ್ರತಿ ವ್ಯಕ್ತಿಯೂ ತನ್ನ ವೈಯುಕ್ತಿಕ ನೆಲೆಯಲ್ಲಿ ಶ್ರೇಷ್ಠವಾದ ಪಾಠವನ್ನು ಮನೆಯ ಸಹನಿವಾಸಿಗೆ ಕೊಡುತ್ತಲೇ ಇರುವುದು ಗಮನಾರ್ಹ ಅಂಶವಾಗಿದೆ. ಜೊತೆಗೆ ಮನೆಗೆ ಭೇಟಿ ಕೊಡುವ ಅತಿಥಿಗಳ ಗುಂಪು ಕೂಡಾ ಅನೇಕವನ್ನು ಅನುಭವಗಳ ನೆಲೆಯಲ್ಲಿ ಒದಗಿಸುತ್ತದೆ. ಈ ಗುಂಪು ತಾನೂ ಸುಕೃತಕ್ಕೆ ಸಂಬಂಧಿಸಿದ ದಿವ್ಯಗಳನ್ನು ಒಂದು ಮನೆಯೊಳಗಿಂದ ಅನುಭವದ ಕೊಡದಂತೆ ಹೊತ್ತೂಯ್ಯುತ್ತದೆ. 

ಎಲ್ಲರಿಗೂ ತಿಳಿದಂತೆ ಈಶಾನ್ಯ ದಿಕ್ಕಿನಿಂದಲೇ ಮನೆಯ ಅಡಿಗಲ್ಲನ್ನು ಇಡುವ ಶುಭಕಾರ್ಯ ನೆರವೇರಬೇಕಾದುದು ಮುಖ್ಯವೆಂಬುದು ಸರಿ. ಈ ಶುಭ ವಿಚಾರವನ್ನು ಪೂರ್ಣಗೊಳಿಸುವ ವ್ಯಕ್ತಿ ಈ ಅಡಿಗಲ್ಲನ್ನು ಇಡುವ ಕ್ರಿಯೆ ಪೂರ್ವವನ್ನು ದಿಟ್ಟಿಸಿಕೊಂಡು ಪೂರೈಸಲ್ಪಡಬೇಕು. ನವರತ್ನಗಳನ್ನು, ಅಡಿಗಲ್ಲನ್ನು ಜೋಡಿಸುವ ಸಂದರ್ಭದಲ್ಲಿ ಭೂವಲಯದಲ್ಲಿ ಇರಿಸಬೇಕು. ಶಕ್ತಾನುಸಾರವಾಗಿ
ನವರತ್ನಗಳ ಬೆಲೆ ಇರಲಿ. ಅನಾವಶ್ಯಕವಾದ ದುಂದು ವೆಚ್ಚಗಳನ್ನು ಈ ಕುರಿತು ಮಾಡಬೇಡಿ. ನವರತ್ನಗಳ ಶೋಭೆ ಮಣ್ಣ ತಳಹದಿಯಿಂದ ಉಕ್ಕುವ ಸ್ಪಂದನಗಳಿಂದಾಗಿ ಮನೆಯ ನಿವಾಸಿ ಅತಿಥಿ ಪ್ರತಿ ಜೀವಿಗೂ ಸಕಾರಾತ್ಮಕವಾದ ಮನೋಬಲವನ್ನು ಅವರವರಿಗೆ ತಕ್ಕಂತೆ ಮಾಡಿಸುತ್ತದೆ. ಈ ನವರತ್ನಗಳು ಕೆಂಪು, ಹಳದಿ, ನೀಲಿ, ಕೇಸರ ಗೋಮೇಧ, ನಭ ಗರ್ಭ ಬಣ್ಣಗಳು ತಂತಮ್ಮ
ದಿವ್ಯತೆಯನ್ನು ಜಿನುಗಿಸುತ್ತದೆ. ಮನಸ್ಸಿನ ತರಂಗಗಳ ಹದಪೂರ್ಣ ಸುತ್ತಾಟ ಪ್ರವಾಹಗಳೆಲ್ಲ ಒಂದು ಹದವನ್ನು ಭರಿಸಿಕೊಳ್ಳುತ್ತದೆ. ಹೀಗಾಗಿ ಮನೆಯಲ್ಲಿನ ಮನಮನಕ್ಕೆ ಮನೆ ದರ್ಪಣ ಹಿಡಿದು ಪ್ರತಿಯೋರ್ವನನ್ನೂ ಪ್ರತಿಫ‌ಲಿಸುತ್ತಲೇ ಇರುತ್ತದೆ.

ಮನೆಯೊಳಗಿನ ಒಳ ಅಲಂಕೃತ ಸೂಕ್ಷ್ಮಗಳು ಮನಸ್ಸನ್ನು ಸಂವೇದಿಸುವಂತಿರಬೇಕು. ಬಣ್ಣಗಳ ಚಿತ್ತಾರಕ್ಕೆ ಮಾನಸಿಕ ವಲಯದ ಮೇಲೆ ಪ್ರಭಾವ ನೀಡುವ ಸರಳ ಅನುಸಂಧಾನ ಪ್ರಾಪ್ತವಾಗಿರಲಿ. ಭಾರತೀಯ ಪರಂಪರೆ ಎಲ್ಲಾ ವಿಚಾರಗಳಲ್ಲೂ ಅನುಭವ ಪೂರ್ಣ ಸಾದೃಶ್ಯ ಅಂತರ್ಗತ ರಸೋತ್ಪತ್ತಿಯ ಕುರಿತು ವ್ಯಾಖ್ಯಾನಿಸುತ್ತದೆ. ಮಂತ್ರಗಳ ಪಠಣವೇ ಒಂದು ತೆರನಾದ ಶಬ್ದಾತೀತ ಅನುಭವವನ್ನು ನಮ್ಮೊಳಗೆ ದ್ರವಿಸುತ್ತದೆ.  ಮಂತ್ರಗಳೊಳಗಿನ ಅರ್ಥ ಇಷ್ಟೇನೇ ಎಂಬುದು ಅನೇಕರು ಮೂಗು ಮುರಿಯುವ ಕ್ರಿಯೆ
ಮಾಡಿಕೊಳ್ಳುತ್ತಾರೆ. ಆದರೆ ಲಯಬದ್ಧ ಅಕ್ಷರದ ಹರಿದಾಟಗಳು ಒಂದು ಅನೂಹ್ಯ ಪರಿಣಾಮವನ್ನು ಮನದ ಅಂಗಳದ ಭಾವ ಶುದ್ದಿ ಮೇಲೆ ಹಿತ ಒದಗಿಸುತ್ತವೆ. ಈ ಸ್ಪರ್ಶದ ಅನುಭವ ಜನ್ಯವಾಗಿ ಒಂದು ಮಿಡಿತದ ರಿಂಗಣ ದಿಗಣಗಳೇ ರಸೋತ್ಪತ್ತಿ ಎಂದು ಕರೆಯಲ್ಪಡುತ್ತದೆ. ಈ ನೆಲೆಯಲ್ಲಿಯೇ ಯೋಚಿಸಿ ಮನೆಯ ಒಳಾಂಗಣದ ಸರಳ ಸುಸಜ್ಜಿತ ಅಂಶಗಳು ಸಾಂದ್ರಗೊಳ್ಳುವಂತಿರಲಿ. 
ಈ ಸಾಂದ್ರತೆಯಿಂದಾಗಿ ಸಾಂಖ್ಯ ಯೋಗ, ನ್ಯಾಯ ವೈವೇಷಿಕ ಮೀಮಾಂಸಾ ವೇದಾಂತ ಎಂಬ ಷಡªರ್ಶನಗಳು
ಪ್ರಾಪ್ತಗೊಳ್ಳುತ್ತವೆ. ಪಂಡಿತನಿಂದ ಪಾಮರನವರೆಗೂ ಅವರವರ ಬುದ್ಧಿ ಶಕ್ತಿಯ ಮೇಲಿಂದ ಮನೆಯೊಳಗಿನ ಬಣ್ಣ ಚಿತ್ರ ಅಲಂಕೃತ ಚಿತ್ರಗಳು ಈ ಷಡರ್ಶನವನ್ನು ನೀಡುತ್ತಿರುತ್ತದೆ. ಗುರು ಬ್ರಹ್ಮಾ, ಗುರು ವಿಷ್ಣು , ಗುರುರ್‌ ದೇವೋ ಮಹೇಶ್ವರಃ ಗುರುರ್‌ ಸಾûಾತ್‌ ಪರಬ್ರಹ್ಮ ತಸೆ ಶ್ರೀ ಗುರವೇ ನಮಃ ಎಂಬ ಮಂತ್ರವನ್ನ ಗಮನಿಸಿ. ಲಯ ಹಾಗೂ ಸ್ವರಬದ್ಧವಾಗಿ ಈ ಮಂತ್ರ ಪಠಿಸಿದಾಗ ಮನಸ್ಸಿನ ಕಿರಿಕಿರಿಗಳಲ್ಲ ಒಂದೇ ಕ್ಷಣದಲ್ಲಿ ನಾಶವಾಗಿ ಹೊಸ ಚೇತನ ಒದಗುತ್ತದೆ. ಪಂಡಿತನು ಊಹಿಸುವ ಗುರುವಿನ ಎತ್ತರ ಬೇರೆ. ಪಾಮರನ ಅಳತೆಯೇ ಬೇರೆ. ಆದರೆ ಪರಿಣಾಮ ಅಗಾಧ. ಹೀಗೆ ಮನೆ ಕೇವಲ ಮನೆಯಲ್ಲ ಮನವ ಮೀಟುವ ವೀಣಾಮಣಿ.

ಮೊ: 8147824707

ಅನಂತಶಾಸ್ತ್ರಿ

ಟಾಪ್ ನ್ಯೂಸ್

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.