ರಫೀಕರ ಸೈನಿಕ ಫ್ಯಾಕ್ಟರಿ


Team Udayavani, Feb 26, 2019, 12:30 AM IST

x-12.jpg

ಯುವಕರನ್ನು ಹುರಿಗೊಳಿಸಿ, ವೀರಯೋಧರನ್ನಾಗಿಸುವ ಮಹ್ಮದ್‌ ರಫೀಕ್‌ರ ತಾಲೀಮು ಕೇಂದ್ರ ಇದು. ಇತ್ತೀಚೆಗಷ್ಟೇ ಸೇನೆಯಲ್ಲಿ ಸೇವಾವಧಿ ಪೂರ್ಣಗೊಳಿಸಿ, ಊರಿಗೆ ಬಂದಿರುವ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿಯ ವಿನೋಬ ನಗರದ ರಫೀಕ್‌, ಸುಮ್ಮನೆ ಮನೆಯಲ್ಲಿ ಕುಳಿತವರೇ ಅಲ್ಲ. ತಮ್ಮ ಕಣ್ಮುಂದೆ ನೂರಾರು ಯುವಕರು ಓಡಾಡುವುದನ್ನು ಕಂಡು, ಅವರಲ್ಲಿನ ಅಪಾರ ಶಕ್ತಿಯನ್ನು ಮನಗಂಡು, ಆಸಕ್ತರಿಗೆ ಉಚಿತವಾಗಿ “ಸೈನಿಕ ನೇಮಕಾತಿಯ ತರಬೇತಿ’ ನೀಡುತ್ತಿದ್ದಾರೆ…

ಅಲ್ಲೆಲ್ಲೋ ಉದ್ದಕ್ಕೂ ಗಡಿರೇಖೆ ಹಬ್ಬಿಕೊಂಡಿದೆ. ಸಹಸ್ರಾರು ಸೈನಿಕರು ರಾತ್ರಿ ಹಗಲೆನ್ನದೆ ಅದನ್ನು ಕಾಯುತ್ತಾ, ಜೀವದ ಹಂಗು ತೊರೆದು, ದೇಶವನ್ನೇ ಪ್ರಾಣವೆಂದು ನಂಬಿಕೊಂಡು, ಅಲ್ಲಿ ಪಹರೆ ನಡೆಸುವ ದೃಶ್ಯಗಳನ್ನು ನಾವು ಪತ್ರಿಕೆಯ ಫೋಟೋಗಳಲ್ಲೋ, ಸಿನಿಮಾಗಳಲ್ಲೋ ನೋಡಿರುತ್ತೇವೆ. ಹೆಗಲ ಮೇಲೆ ಗನ್‌ ಹೊತ್ತುಕೊಂಡು, ಹಾಗೆ ಎದೆಯುಬ್ಬಿಸಿ ನಡೆಯುವ ಅವರನ್ನು ಕಂಡಾಗ, ನಾವೂ ಅವರಂತೆ ದೇಶ ಕಾಯೆಕು ಅನ್ನೋ ಆಸೆ ನಮ್ಮೊಳಗೂ ಹುಟ್ಟುತ್ತೆ. ಆದರೆ, ಆರ್ಮಿ ಸೇರೋದು ಅಷ್ಟು ಸುಲಭವೇ? ಆ ಹಾದಿ ಯಾವುದು?- ಅನ್ನೋದು ಮಾತ್ರ ಅನೇಕರಿಗೆ ಕಗ್ಗಂಟಿನ ಪ್ರಶ್ನೆ. ಎಷ್ಟೋ ಮಂದಿ ಆರ್ಮಿ ರ್ಯಾಲಿಗೆ ಹೋಗ್ತಾರೆ. ಅದರಲ್ಲಿ ಅನೇಕರು ಫಿಟೆ°ಸ್‌ನಲ್ಲಿ ನಪಾಸಾಗಿ, ಪೆಚ್ಚು ಮೋರೆ ಹಾಕ್ಕೊಂಡು ವಾಪಸು ಬರ್ತಾರೆ. ದೇಶ ಕಾಯಬೇಕು ಅನ್ನೋ ಆಸೆ ಮಾತ್ರ ಕಡೇವರೆಗೂ ಈಡೇರೋದೇ ಇಲ್ಲ.

ಆದರೆ, ಇಲ್ಲೊಂದು ಫ್ಯಾಕ್ಟರಿ ಇದೆ. ಆರ್ಮಿ ಫ್ಯಾಕ್ಟರಿ! ಇಲ್ಲಿ ಪಳಗಿಬಿಟ್ಟರೆ, ಸೇನೆಯ ದಾರಿ ಸಲೀಸು. ಹಾnಂ, ಫ್ಯಾಕ್ಟರಿ ಅಂದ್ರೆ ವಸ್ತುಗಳನ್ನು ತಯಾರಿಸುವ ಕಾರ್ಖಾನೆ ಅಲ್ಲ; ಯುವಕರನ್ನು ಹುರಿಗೊಳಿಸಿ, ವೀರಯೋಧರನ್ನಾಗಿಸುವ ಮಹ್ಮದ್‌ ರಫೀಕ್‌ರ ತಾಲೀಮು ಕೇಂದ್ರ ಇದು. ಇತ್ತೀಚೆಗಷ್ಟೇ ಸೇನೆಯಲ್ಲಿ ಸೇವಾವಧಿ ಪೂರ್ಣಗೊಳಿಸಿ, ಊರಿಗೆ ಬಂದಿರುವ ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿಯ ವಿನೋಬನಗರದ ರಫೀಕ್‌, ಸುಮ್ಮನೆ ಮನೆಯಲ್ಲಿ ಕುಳಿತವರೇ ಅಲ್ಲ. ತಮ್ಮ ಕಣ್ಮುಂದೆ ನೂರಾರು ಯುವಕರು ಓಡಾಡುವುದನ್ನು ಕಂಡು, ಅವರಲ್ಲಿನ ಅಪಾರ ಶಕ್ತಿಯನ್ನು ಮನಗಂಡು, ಆಸಕ್ತರಿಗೆ ಉಚಿತವಾಗಿ “ಸೈನಿಕ ನೇಮಕಾತಿಯ ತರಬೇತಿ’ ನೀಡುತ್ತಿದ್ದಾರೆ. ಪ್ರಸ್ತುತ ಇವರ ಗರಡಿಯಲ್ಲಿ ಪಳಗುತ್ತಿರುವ ಯುವಕರ ಸಂಖ್ಯೆ 20.

ಅನುಭವ ಧಾರೆಯೆರೆಯುವ ರಫೀಕ್‌
ಸೈನ್ಯಕ್ಕೆ ಸೇರೋದು ಅಷ್ಟು ಸುಲಭದ ಮಾತಲ್ಲ. ಪೊಲೀಸ್‌, ಅರಣ್ಯ ಇಲಾಖೆಗಳ ನೇಮಕಾತಿಗಿಂತಲೂ ಇದು ಕಠಿಣ. ಒಂದುವೇಳೆ ಆರ್ಮಿ ನೇಮಕಾತಿ ರ್ಯಾಲಿಯಲ್ಲಿ ಆಯ್ಕೆಯಾದರೆ, ನಂತರ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸ್‌ ಆಗುವುದು ಅಷ್ಟೇ ಕಷ್ಟ. ಓಟದಲ್ಲಿ ಯಶಸ್ವಿಯಾಗಿ, ಇತರೆ ಫಿಟೆ°ಸ್‌ನಲ್ಲಿ ನಪಾಸಾಗುವವರೂ ಸಾಕಷ್ಟು ಮಂದಿ. ಇವೆಲ್ಲ ವೈಫ‌ಲ್ಯಗಳನ್ನು ಮೀರಿ, ಸೈನಿಕನ ಯೂನಿಫಾರಂ ಧರಿಸುವ ಗುಟ್ಟನ್ನು ಹೇಳಿಕೊಡುತ್ತಾರೆ ರಫೀಕ್‌. ಪಂಜಾಬ್‌, ಜಮ್ಮು- ಕಾಶ್ಮೀರ, ಹರ್ಯಾಣ, ರಾಜಸ್ಥಾನದಂಥ ಕಠಿಣ ಪರಿಸ್ಥಿತಿ ಇರುವ ಗಡಿಗಳನ್ನು ಕಾದ ಅನುಭವವಿರುವ ಇವರಿಗೆ, ದೇಶಪ್ರೇಮವೇ ಉಸಿರು.

ಅಂದಹಾಗೆ, ಈ ತರಬೇತಿ ಕೇಂದ್ರ ಇರೋದು ವಿನೋಬ ನಗರದ ಮಿರಾಕೋರನಹಳ್ಳಿಯಲ್ಲಿ. ಆರಂಭದಲ್ಲಿ ಇವರ ಕಲಿಕಾ ಕೇಂದ್ರಕ್ಕೆ ಸೂಕ್ತ ಸ್ಥಳವೇ ಇದ್ದಿರಲಿಲ್ಲ. ಇದನ್ನು ನೋಡಿ, ಸ್ಥಳೀಯ ನಿವಾಸಿ ಸೋಗಿ ಆಲೇಶಪ್ಪ ಎನ್ನುವವರು ತಮ್ಮ ನಿವೇಶನದಲ್ಲಿ ತರಬೇತಿಗೆ ಅವಕಾಶ ಕಲ್ಪಿಸಿದ್ದಾರೆ. “ವಾರದಲ್ಲಿ ಆರು ದಿನ ಮಿರಾಕೋರನಹಳ್ಳಿಯಲ್ಲಿಯೇ ತರಬೇತಿ ಕೊಡುತ್ತೇವೆ. ಭಾನುವಾರ ಮಾತ್ರ ಹಡಗಲಿ ತಾಲೂಕು ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡಿಸುತ್ತೇವೆ’ ಅಂತಾರೆ ರಫೀಕ್‌. ಅಲ್ಲಿ ರನ್ನಿಂಗ್‌ ರೇಸ್‌ ಸೇರಿದಂತೆ, ನಿಗದಿತ ಅವಧಿಯ ದೈಹಿಕ ಸಾಮರ್ಥ್ಯದ ಪರೀಕ್ಷೆ ನಡೆಸುತ್ತಾರಂತೆ.

ಗಡಿ ತೋರಿಸಿದ ಇತಿಹಾಸ ಮೇಷ್ಟ್ರು!
ರಫೀಕ್‌ ಸೈನ್ಯ ಸೇರಿದ ಕತೆಯೂ ಅಷ್ಟೇ ರೋಚಕ. ಇದಕ್ಕೆ ಕಾರಣ ಇತಿಹಾಸ ಮೇಷ್ಟ್ರು ಎನ್ನುತ್ತಾರವರು. ಭಾರತದ ಮೇಲೆ ಬ್ರಿಟಿಷರ ದಾಳಿಯ ಕತೆ ಕೇಳುತ್ತಾ, ಹಿರೋಶಿಮಾ- ನಾಗಾಸಾಕಿ ಮೇಲೆ ಅಮೆರಿಕ ಬಾಂಬ್‌ ಎಸೆದ ಪಾಠವನ್ನು ಕಣ್ಮುಂದೆ ಚಿತ್ರಿಸಿಕೊಳ್ಳುತ್ತಾ, ತಮ್ಮೊಳಗೊಬ್ಬ ಸೈನಿಕ ಹುಟ್ಟಿಕೊಂಡಿದ್ದು ಸ್ವತಃ ರಫೀಕರಿಗೇ ಗೊತ್ತಾಗಲಿಲ್ಲ. ಅಷ್ಟು ದಿನ, ಮುಂದೆ ಬೇರಾವುದೋ ಕೆಲಸ ಮಾಡಿದರಾಯಿತು ಅಂದುಕೊಂಡು ಶಾಲೆಗೆ ಬರುತ್ತಿದ್ದ ಹುಡುಗನಿಗೆ, ಒಮ್ಮೆ ಮೇಷ್ಟ್ರು  “ಮುಂದೇನಾಗ್ತಿàಯ?’ ಅಂತ ಕೇಳಿದಾಗ, “ಸೈನಿಕ’ ಎಂದಿದ್ದರಂತೆ. ತಾಯಿ, ರಾಟಿ ಮೆಹಬೂಬಿಯ ಕನಸೂ ಅದೇ ಆಗಿತ್ತು. ಕೊನೆಗೂ ಸೈನಿಕನ ಯೂನಿಫಾರಂ ತೊಟ್ಟು, ಕಾಶ್ಮೀರದ ಹಾದಿ ಹಿಡಿದಿದ್ದರು, ರಫೀಕ್‌. ತಮ್ಮಂತೆಯೇ ಊರಿನ ಯುವಕರೂ ಶಿಸ್ತಿನ ಸಿಪಾಯಿಗಳಾಗಲಿ ಎನ್ನುವ ಕನಸಿಟ್ಟುಕೊಂಡು ರಫೀಕ್‌, ಅವರನ್ನೆಲ್ಲ ಸೈನ್ಯಕ್ಕೆ ಸೇರಿಸಲು ಹುರಿದುಂಬಿಸುತ್ತಿದ್ದಾರೆ.

ಸೈನ್ಯದಲ್ಲಿ ನಾನು ಅನುಭವಿಸಿದ ಎಲ್ಲವನ್ನೂ ಈ ಹುಡುಗರಿಗೆ ಹೇಳಿಕೊಡುತ್ತಿದ್ದೇನೆ. ಡಾಕ್ಟರೋ, ವೈದ್ಯರೋ ಆಗುವ ಈಗಿನವರ ಕನಸುಗಳ ಮಧ್ಯೆ ಅವರೊಳಗೆ ದೇಶಪ್ರೇಮದ ಬೀಜ ಬಿತ್ತಿ, ಸೈನಿಕರನ್ನಾಗಿ ರೂಪಿಸುವ ಹೊಣೆ ನನ್ನದು.
ಮಹ್ಮದ್‌ ರಫೀಕ್‌, ಮಾಜಿ ಸೈನಿಕ

ಕಳೆದ ವರ್ಷ ಮಂಡ್ಯದಲ್ಲಿ ನಡೆದ ಆರ್ಮಿ ನೇಮಕಾತಿ ರ್ಯಾಲಿಯಲ್ಲಿ ಓಟದಲ್ಲಿ ಫೇಲ್‌ ಆಗಿದ್ದೆ. ಕೇವಲ 5-6 ಸೆಕೆಂಡ್‌ಗಳಲ್ಲಿ ಹಿಂದೆ ಬಿದ್ದೆ. ಕಳೆದ 6 ತಿಂಗಳಿಂದ ರಫೀಕ್‌ ಸರ್‌, ನನ್ನನ್ನು ಸುಧಾರಿಸುತ್ತಿದ್ದಾರೆ. ಈಗ ನನ್ನ ಓಟ ವೇಗ ಪಡೆದಿದೆ.
ಬಸವರಾಜ್‌ ಬಾರಿಕರ, ಅಭ್ಯರ್ಥಿ

ರಫೀಕ್‌ ಅವರು, ನೇಮಕಾತಿ ರ್ಯಾಲಿಯಲ್ಲಿನ ದೈಹಿಕ ಸಾಮರ್ಥ್ಯದ ಬಗ್ಗೆ ತರಬೇತಿ ನೀಡಿದರೆ, ನಾನು ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ಇಲ್ಲಿ ಹೇಳಿಕೊಡುತ್ತೇನೆ. ಇಂಗ್ಲಿಷ್‌ ವ್ಯಾಕರಣವೂ ಸೇರಿದಂತೆ, ಸ್ಪರ್ಧಾತ್ಮಕ ಪರೀಕ್ಷೆಗೆ ಯುವಕರನ್ನು ಸಿದ್ಧಗೊಳಿಸುತ್ತಿದ್ದೇನೆ.
ಪ್ರಕಾಶ್‌, ಸ್ಪರ್ಧಾತ್ಮಕ ಪರೀಕ್ಷೆ ತರಬೇತುದಾರ

ವೆಂಕೋಬಿ ಸಂಗನಕಲ್ಲು

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.