ಕಂಡಿದ್ದೀರಾ ಕೆಂಪು ಬೆಂಡೆ!


Team Udayavani, Aug 20, 2018, 6:00 AM IST

1.jpg

ಕೆಂಪು ಬೆಂಡೆ ಗಿಡದ ಎಲೆಗಳಲ್ಲಿರುವ ದಂಡು, ಕಾಂಡ ಎಲ್ಲವೂ ಕೆಂಪು ಮಿಶ್ರಿತವಾಗಿದೆ. ಗಿಡ ನಾಲ್ಕು ತಿಂಗಳಲ್ಲಿ  ನಾಲ್ಕು ಅಡಿ ಎತ್ತರವಾಗುತ್ತದೆ. ಅನಂತರ ಹೂ ಬಿಡುವುದು ನಿಧಾನವಾಗುತ್ತದೆ. ಆ ತನಕ ವಾರದಲ್ಲಿ ಎರಡು ಸಲ ಪ್ರತಿ ಗಿಡದಿಂದಲೂ ನಾಲ್ಕು ಕಾಯಿಗಳು ಕೊಯ್ಲಿಗೆ ಸಿಗುತ್ತವೆ. 

ಬೆಂಡೆಕಾಯಿಯಲ್ಲಿ ಹಲವು ಬಗೆಗಳಿವೆ. ಘಮಘಮ ಪರಿಮಳವಿರುವ ಕರಾವಳಿಯ ಅಪ್ಪಟ ತಳಿ ಹಾಲು ಬೆಂಡೆ, ಗಿಡದ ತುಂಬ ಬೆಳೆಯುವ ಹಸಿರು ಬೆಂಡೆ, ಬೆರಳಷ್ಟುದ್ದದ ಗೊಂಚಲು ಬೆಂಡೆ, ಪೊದೆಯಂತೆ ಕೊಂಬೆಗಳು ಅರಳುವ ಪೊದೆ ಬೆಂಡೆ- ಇವೆಲ್ಲದರ ಸಾಲಿನಲ್ಲಿ ಮಾರುಕಟ್ಟೆಗೆ ಪ್ರವೇಶಿಸುತ್ತಿದೆ ಕೆಂಪು ಬೆಂಡೆ. ತೆಳ್ಳಗಿನ ಹಸಿರಿನ ಲೇಪದ ನಡುವೆ ಕಣ್ಣಿಗೆ ರಾಚುವ ಕೆಂಪು ವರ್ಣ ಹೊಂದಿದ ಈ ತಳಿ ಅಮೆರಿಕದಿಂದ ನಮ್ಮಲ್ಲಿಗೆ ಕಾಲಿಟ್ಟಿದೆ. ತಾರಸಿ ಕೃಷಿಯ ನಿಪುಣ ಮಂಗಳೂರಿನ ಮರೊಳಿಯ ಲಾಲ್‌ಬಹುದ್ದೂರ್‌ ಶಾಸ್ತ್ರಿ ಬಡಾವಣೆಯಲ್ಲಿರುವ ಪಡ್ಡಂಬೈಲು ಕೃಷ್ಣಪ್ಪಗೌಡರು ತಮ್ಮ ಮನೆಯ ತಾರಸಿಯಲ್ಲಿ ಅದನ್ನು ಬೆಳೆಯುತ್ತಿದ್ದಾರೆ.

    ಗೋಣಿಚೀಲದಲ್ಲಿ ಸುಡುಮಣ್ಣು ಮತ್ತು ಒಣ ಸೆಗಣಿಯ ಹುಡಿ ತುಂಬಿಸಿ ಏಪ್ರಿಲ್‌ ತಿಂಗಳಿನಲ್ಲಿ ಗೌಡರು ಬಿತ್ತಿದ ಬೆಂಡೆಯ ಬೀಜ ಹುಟ್ಟಿ 45 ದಿನಗಳಲ್ಲಿ ಹೂ ಬಿಟ್ಟಿದೆ. 60 ದಿನಗಳಲ್ಲಿ ಕಾಯಿ ಕೊಡಲಾರಂಭಿಸಿದೆ. ಈ ತಳಿಗೆ ಹಾಲುಬೆಂಡೆಯ ಹಾಗೆ ಹಳದಿರೋಗ ಬಾಧಿಸಿಲ್ಲ. ಕೀಟದ ಆಕ್ರಮಣ ತಡೆಯಲು ಗೌಡರ ಬಳಿ ಅವರದೇ ಆದ ಅಸ್ತ್ರವಿದೆ.  ಬೇವಿನ ಕಷಾಯಕ್ಕೆ ಅರಶಿನದ ಹುಡಿ ಮತ್ತು ಕಾಳುಮೆಣಸಿನ ಚೂರ್ಣ ಬೆರೆಸಿ ಸಿದ್ಧಪಡಿಸಿದ ಅವರ ಔಷಧದ ಮುಂದೆ ಕೀಟಗಳ ಆಟ ನಡೆಯಲಿಲ್ಲ.

    ಕೆಂಪು ಬೆಂಡೆ ಗಿಡದ ಎಲೆಗಳಲ್ಲಿರುವ ದಂಡು, ಕಾಂಡ ಎಲ್ಲವೂ ಕೆಂಪು ಮಿಶ್ರಿತವಾಗಿದೆ. ಗಿಡ ನಾಲ್ಕು ತಿಂಗಳಲ್ಲಿ  ನಾಲ್ಕು ಅಡಿ ಎತ್ತರವಾಗುತ್ತದೆ ಎನ್ನುತ್ತಾರೆ ಗೌಡರು. ಅನಂತರ ಹೂ ಬಿಡುವುದು ನಿಧಾನವಾಗುತ್ತದೆ. ಆ ತನಕ ವಾರದಲ್ಲಿ ಎರಡು ಸಲ ಪ್ರತಿ ಗಿಡದಿಂದಲೂ ನಾಲ್ಕು ಕಾಯಿಗಳು ಕೊಯ್ಲಿಗೆ ಸಿಗುತ್ತವೆ. ಹದಿನೈದು ಕಾಯಿಗಳು ಒಂದು ಕಿ.ಲೋ ತೂಗುತ್ತವೆ. ಪೇಟೆಯಲ್ಲಿ ಕಿ.ಲೋಗೆ ನೂರು ರೂಪಾಯಿ ತನಕ ಬೆಲೆಯೂ ಇದೆ. ಕಾಯಿ ಅರ್ಧ ಅಡಿ ಉದ್ದವಿದ್ದು ದಪ್ಪವಾಗಿವೆ. ಬಣ್ಣ ಕೆಂಪಗಿದ್ದು ಗಮನ ಸೆಳೆಯುವುದು ಬಿಟ್ಟರೆ ಸಾವಯವದ ಘಮದಲ್ಲಿ ಬೆಳೆದ ಕಾರಣ ಬಹು ಮೃದುವಾಗಿ ಬೇಯುತ್ತದೆ. ಸಿಹಿಯಾಗಿದ್ದು ಪಲ್ಯ, ಸಾಂಬಾರು, ಮಜ್ಜಿಗೆ ಹುಳಿಗಳನ್ನು ತಯಾರಿಸಿದರೆ ಸ್ವಾದಿಷ್ಟವೂ ಆಗಿದೆ ಎನ್ನುತ್ತಾರೆ ಕೃಷ್ಣಪ್ಪರ ಹೆಂಡತಿ.

    ಕೃಷ್ಣಪ್ಪಗೌಡರ ಅಧ್ಯಯನದ ಪ್ರಕಾರ, ಕೆಂಪು ಬೆಂಡೆ ಪೋಷಕಾಂಶದ ಕಣಜವೂ ಹೌದು. ಕಾಬೋìಹೈಡ್ರೇಟ್ಸ್‌, ನಾರು, ಸಕ್ಕರೆ, ಕೊಬ್ಬು, ಪ್ರೋಟೀನು, ಕಬ್ಬಿಣ, ರಂಜಕ, ಮೆಗ್ನೇಷಿಯಂ, ಪೊಟ್ಯಾಷಿಯಂ, ಸತು, ಅಲೆಟಿಕ್‌ ಮತ್ತು ಅನೋಲಿಯಕ್‌ ಆಮ್ಲಗಳ ಜೊತೆಗೆ ಎ, ಬಿ1, 2, 3, 4, ಸಿ, ಇ, ಕೆ ಜೀವಸತ್ವಗಳು ಅದರಲ್ಲಿ ಅಡಕವಾಗಿವೆ ಎಂಬುದನ್ನು ಅವರು ವಿವರಿಸುತ್ತಾರೆ. ಒಣಗಿದ ಬೀಜದಲ್ಲಿ ಶೇ. 40ರಷ್ಟು ತೈಲಾಂಶವಿದೆ. ಕೆಂಪು ಬೆಂಡೆಯ ಎಲೆಗಳಿಂದ ಸಲಾಡ್‌ ಮಾಡುವುದೂ ಉಂಟಂತೆ. ಬೀಜವನ್ನು ಹುರಿದು ಹುಡಿ ಮಾಡಿ ಕಾಫಿಯಂತಹ ಪಾನೀಯ ತಯಾರಿಕೆಗೂ ಉಪಯೋಗಿಸುವ ಅಂಶವನ್ನೂ ಹೇಳುತ್ತಾರೆ. ಇದನ್ನು ದೊಡ್ಡ ಪ್ರಮಾಣದಲ್ಲಿ ರೈತರು ಸಾವಯವದಲ್ಲಿಯೇ ಬೆಳೆಯಬಹುದು, ಬೆಂಡೆಕಾಯಿಯ ಬಣ್ಣವೇ ಅದಕ್ಕೆ ಹೆಚ್ಚಿನ ಬೆಲೆ ತಂದುಕೊಡುತ್ತದೆ. ಪ್ರಾಯೋಗಿಕವಾಗಿಯೂ ಮನೆಯ ತಾರಸಿ ಮೇಲೆ ಬೆಳೆಯಲು ಮುಂದಾಗಬಹುದು ಎನ್ನುವ ಆಶಯ ಅವರದು. 

ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.