ಏನೋ ಕೇಳ್ಬೇಕು, ಆದ್ರೆ ಭಯ…


Team Udayavani, May 7, 2019, 7:53 PM IST

eno

ನಿನ್ನ ಕುಡಿ ಹುಬ್ಬು, ವಾರೆಗಣ್ಣಿನ ನೋಟ, ಕಿರುನಗೆಯನ್ನು ನೆನಪಿಸಿಕೊಂಡರೂ ನನ್ನ ಮನಸ್ಸು ಹಕ್ಕಿಯಂತೆ ಹಾರುತ್ತದೆ. ನಿನ್ನ ಕಾಲ್ಗೆಜ್ಜೆಯ ನಾದ, ನನ್ನೆದೆಯ ತುಂಬಾ ಮಾರ್ದನಿಸುವಾಗ ಹೃದಯದಲ್ಲೇನೋ ಅರಿಯದ ಚಟುವಟಿಕೆ.

ಕಂಡ ಕಂಡ ಹುಡುಗಿಯರನ್ನೆಲ್ಲಾ ಅಕ್ಕ ತಂಗಿಯರೆಂದು ಕರೆಯುತ್ತಿದ್ದ ನನ್ನ ಬಾಯಿಗೆ ಬೀಗ ಬಿದ್ದಿದ್ದು ನಿನ್ನನ್ನು ನೋಡಿದಾಗಲೇ. ನಿನ್ನ ಮಾರುದ್ದದ ಜಡೆಯೇ ನನ್ನ ಹೃದಯವನ್ನು ಕಟ್ಟಿ ಹಾಕಿತ್ತು. ಹೇಗಾದರೂ ಮಾಡಿ ನಿನ್ನ ಸ್ನೇಹ ಸಂಪಾದಿಸಬೇಕು ಅಂದುಕೊಂಡವನಿಗೆ ನೆನಪಾಗಿದ್ದು ಫೇಸ್‌ಬುಕ್‌.

ಅಂದು ರಾತ್ರಿ ದಿಂಬಿಗೆ ತಲೆ ಕೊಟ್ಟು ಫೇಸ್‌ಬುಕ್‌ನಲ್ಲಿ ನಿನ್ನ ಹೆಸರನ್ನು ಟೈಪ್‌
ಮಾಡುವಾಗ ಬೆರಳ ತುದಿಯೂ ಪುಳಕಗೊಂಡಿತ್ತು. ನಿನ್ನ ಫೋಟೊಗಳನ್ನು ನೋಡುತ್ತಾ, ಬೆಳಗಾಗಿದ್ದೇ ತಿಳಿಯಲಿಲ್ಲ. ಅಂತೂ, ಪ್ರೇಮ ಜಾಗರಣೆಯ ಕೊನೆಯ ಹಂತವಾಗಿ, ಮೆಸೆಂಜರ್‌ ಮೂಲಕ ಸಂದೇಶವೊಂದನ್ನು ನಿನಗೆ ಕಳುಹಿಸಿ ನಿಟ್ಟುಸಿರುಬಿಟ್ಟೆ. ಅಚ್ಚರಿ ಎಂಬಂತೆ, ಕೆಲವೇ ಕ್ಷಣಗಳಲ್ಲಿ ನೀನು ಪ್ರತಿಕ್ರಿಯೆ ನೀಡಿಬಿಟ್ಟೆ! ಆಗ ನಾನು ಕುಣಿದು ಕುಪ್ಪಳಿಸುವುದೊಂದೇ ಬಾಕಿ.

ಸಂದೇಶದಿಂದ ಶುರುವಾದ ಪರಿಚಯ, ಪ್ರೀತಿಯ ಮೊಳಕೆಯೊಂದನ್ನು ನನ್ನ
ಮನಸಲಿ ಚಿಗುರೊಡೆಸಿದೆ. ಪ್ರಪೋಸ್‌ ಮಾಡುವ ಆಸೆಯಿದ್ದರೂ, ಅದಕ್ಕೆ ನಿನ್ನ
ಪ್ರತಿಕ್ರಿಯೆ ಹೇಗಿರಬಹುದೆಂಬ ಆತಂಕ ಕಾಡುತ್ತಿದೆ. ನಿತ್ಯ ನೀನು ಎದುರಾದಾಗ ಉಸಿರು ಕಟ್ಟಿದಂತಾಗುತ್ತದೆ. ಹೇಳಿಬಿಡು ನೀ ಒಮ್ಮೆ ನಿನ್ನ ಮನದ ಒಳಗುಟ್ಟು. ಏನೆಂದು ಕರೆಯಲಿ ನಾ ನಿನ್ನ? ಪ್ರೇಯಸಿ ಎನ್ನಲೇ ಅಥವಾ ಗೆಳತಿ ಎನ್ನಲೇ? ಏನನ್ನಲಿ ಹೇಳಿಬಿಡು ಹುಡುಗಿ…

– ಪ್ರವೀಣ್‌ಕುಮಾರ್‌ ಸಲಗನಹಳ್ಳಿ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.