ವಜ್ರದ ಕಲ್ಲುಗಳು!


Team Udayavani, Jan 25, 2018, 3:24 PM IST

9999.jpg

ಒಂದು ಊರಿನಲ್ಲಿ ಗುಂಡ ಎಂಬ ಹುಡುಗನಿದ್ದ. ಆತನಿಗೆ ತಂದೆ ತಾಯಿ ಯಾರು ಇರಲಿಲ್ಲ. ಆತ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ. ಅವನು ಬಡವನಾಗಿದ್ದ ನಿಜ. ಆದರೆ ಅವನಲ್ಲಿ ಮಹತ್ವಾಕಾಂಕ್ಷೆ ತುಂಬಾ ಇತ್ತು. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು. ಅರ್ಥಪೂರ್ಣವಾಗಿ ಬದುಕಬೇಕು, ಎಂಬೆಲ್ಲಾ ಕನಸುಗಳು ಆತನಿಗಿದ್ದವು. ಅದಕ್ಕೆ ಹಣದ ಅವಶ್ಯಕತೆ ಇದೆ ಎಂಬ ಸತ್ಯ ಅವನಿಗೆ ತಿಳಿದಿತ್ತು. ಹೀಗಾಗಿಯೇ ತನ್ನೆಲ್ಲಾ ಆಸೆ, ಆಕಾಂಕ್ಷೆಗಳನ್ನು ಅದುಮಿಟ್ಟುಕೊಂಡು ತನ್ನ ಹಣೆಯಲ್ಲಿ ಭಗವಂತ ಏನು ಬರೆದಿದ್ದಾನೋ ಹಾಗೇ ಆಗಲಿ ಎಂದು ಅವನ ಮೇಲೆ ಭಾರ ಹಾಕಿ ಬದುಕುತ್ತಿದ್ದ. 

ಒಂದು ದಿನ ಗುಂಡ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದಾಗ ನದಿ ದಂಡೆಯಲ್ಲಿ ಹೊಳೆಯುತ್ತಿದ್ದ ಐದಾರು ಕಲ್ಲುಗಳು ಸಿಕ್ಕವು. ನೀರಿನ ಹರಿವಿಗೆ ಸಿಕ್ಕು ಅದೆಲ್ಲಿಂದಲೋ ಬಂದು ಅಲ್ಲಿ ಸೇರಿದ್ದವು. ಅವುಗಳು ಸಾಮಾನ್ಯ ಕಲ್ಲಾಗಿರಲು ಸಾಧ್ಯವೇ ಇಲ್ಲ ಎನ್ನುವುದು ಅವನಿಗೆ ಗೊತ್ತಾಗಿಹೋಯಿತು. ಇಂಥ ಕಲ್ಲುಗಳಿಗೇ, ಹೊಳಪು ಕೊಟ್ಟು ವಜ್ರಗಳನ್ನು ತಯಾರಿಸುತ್ತಾರೆ ಎನ್ನುವುದು ಅವನಿಗೆ ತಿಳಿದಿತ್ತು. ತನ್ನೆಲ್ಲಾ ಕನಸುಗಳನ್ನು ಪೂರೈಸಿಕೋ ಎಂದೇ ದೇವರು ಈ ಕಲ್ಲುಗಳನ್ನು ತನಗೆ ನೀಡಿದ್ದಾನೆ ಎಂದು ಗುಂಡ ತಿಳಿದ. ಅವನು ಭಗವಂತನನ್ನು ಕೃತಜ್ಞತೆಯಿಂದ ಸ್ಮರಿಸಿದ. 

ಆ ಕಲ್ಲುಗಳನ್ನು ಜೇಬಿನಲ್ಲಿಟ್ಟುಕೊಂಡು ಸಂತಸದಿಂದ ಭವಿಷ್ಯದ ಕುರಿತು ಯೋಚಿಸುತ್ತಾ ನಡೆದು ಹೋಗುತ್ತಿದ್ದ. ದಾರಿಯಲ್ಲಿ ಆರ್ತನಾದವೊಂದು ಕೇಳಿಸಿತು. ಜಿಂಕೆಯೊಂದು ಬೇಡನ ಬಳಿ ಸಿಕ್ಕಿಬಿದ್ದಿತ್ತು. ತನ್ನ ಸಾವು ಖಚಿತವೆಂದು ತಿಳಿದ ಜಿಂಕೆ ಸಹಾಯಕ್ಕಾಗಿ ಕೂಗಿಕೊಳ್ಳತೊಡಗಿತ್ತು. ಗುಂಡ, ಕೂಗು ಕೇಳಿಬಂದ ಸ್ಥಳವನ್ನು ತಲುಪಿದ. ಗುಂಡನನ್ನು ಕಂಡ ಜಿಂಕೆ ಅವನ ಕಣ್ಣಲ್ಲಿ ಅನುಕಂಪವನ್ನು ಗ್ರಹಿಸಿತು. ಅದಕ್ಕೇ ಅದು ಗುಂಡನಲ್ಲಿ ತನ್ನನ್ನು ಬಿಡಿಸುವಂತೆ ಕೇಳಿಕೊಂಡಿತು. 

ಜಿಂಕೆಯ ನೋವು ಕಂಡು ಮರುಗಿದ ಗುಂಡ ಅದನ್ನು ಬಿಟ್ಟುಬಿಡುವಂತೆ ಬೇಡನನ್ನು ವಿನಂತಿಸಿಕೊಂಡ. ಆದರೆ ಬೇಡ ಅದಕ್ಕೊಪ್ಪಲಿಲ್ಲ. ಜಿಂಕೆಯನ್ನು ಸಂತೆಯಲ್ಲಿ ಮಾರಾಟ ಮಾಡುವುದಾಗಿ ಹೇಳಿದ. ಜಿಂಕೆಗೆ ಸಹಾಯ ಮಾಡಲೇಬೇಕೆಂದಿದ್ದರೆ ಸಾವಿರ ವರಹವನ್ನು ಕೊಟ್ಟು ಬಿಡಿಸಿಕೋ ಎನ್ನುತ್ತಾನೆ. “ನನ್ನ ಬಳಿ ಅಷ್ಟೊಂದು ದೊಡ್ಡ ಮೊತ್ತವಿಲ್ಲ’ ಎಂದಾಗ ಬೇಡ ಅಲ್ಲಿ ನಿಲ್ಲದೆ ಹೊರಟುಬಿಡುತ್ತಾನೆ. ಆಗ ಗುಂಡನಿಗೆ ತನ್ನ ಬಳಿ ಅಮೂಲ್ಯವಾದ ಕಲ್ಲುಗಳು ಇರುವುದು ನೆನಪಾಗುತ್ತದೆ. 

ಹಿಂದೆಮುಂದೆ ಯೋಚಿಸದೆ ಅವುಗಳನ್ನೇ ಬೇಡನಿಗೆ ನೀಡಿ ಜಿಂಕೆಯನ್ನು ಬಿಡಿಸಿಕೊಳ್ಳುತ್ತಾನೆ. ತನ್ನ ಕನಸು, ಭವಿಷ್ಯವನ್ನು ಒತ್ತೆಯಿಟ್ಟು ತನ್ನನ್ನು ಪಾರು ಮಾಡಿದ ಗುಂಡನನ್ನು ಜಿಂಕೆ ಮನಸಾರೆ ಕೃತಜ್ಞತೆ ಸಲ್ಲಿಸುತ್ತದೆ. ಗುಂಡ ತನ್ನ ಬದುಕನ್ನು ರೂಪಿಸಿಕೊಳ್ಳುವ ಏಕೈಕ ಅವಕಾಶವನ್ನು ಕೈಚೆಲ್ಲಿಕೊಂಡದ್ದಕ್ಕಿಂತ ಹೆಚ್ಚಾಗಿ, ತನ್ನಿಂದ ಒಂದು ಜೀವ ಉಳಿಯಿತಲ್ಲಾ ಎಂದು ಸಂತಸಪಡುತ್ತಾನೆ. 

ಜಿಂಕೆ ತನ್ನ ಜೀವವನ್ನು ಕಾಪಾಡಿದ್ದಕ್ಕೆ ಕೃತಜ್ಞತೆಯ ರೂಪದಲ್ಲಿ ತನ್ನ ಗೂಡಿನಲ್ಲಿದ್ದ ಒಂದು ಥೈಲಿಯನ್ನು ನೀಡಿತು. ಆ ಥೈಲಿಯಲ್ಲಿ ನದಿದಂಡೆಯಲ್ಲಿ ಸಿಕ್ಕಂಥದ್ದೇ ಹದಿನೈದಿಪ್ಪತ್ತು ಕಲ್ಲುಗಳಿದ್ದವು! ಗುಂಡ ಅದನ್ನು ತನ್ನ ಜತೆಯಲ್ಲಿ ತೆಗೆದುಕೊಂಡು ಹೋಗಿ, ಮುಂದಿನ ದಿನವನ್ನು ಸುಖವಾಗಿ ಆನಂದದಿಂದ ಕಳೆಯುತ್ತಾನೆ.

– ಪುರುಷೋತ್ತಮ್‌ ವೆಂಕಿ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.