ಕೋಳಿ ಮರಿಯ ಹುಡುಕಾಟ


Team Udayavani, Jul 4, 2019, 5:00 AM IST

7

ಒಂದಾನೊಂದು ಕಾಲದಲ್ಲಿ ಒಂದು ಸುಂದರ ಊರಿತ್ತು. ಆ ಊರಿನ ನದಿಯ ದಡದ ಮೇಲೆ ಚಿಕ್ಕ ಗುಡಿಸಲಿತ್ತು. ಅದರ ಒಳಗೆ ಒಂದು ಕೋಳಿ ವಾಸ ಮಾಡುತ್ತಿತ್ತು. ಒಂದು ಸಲ ಅದು 12 ಮೊಟ್ಟೆ ಇಟ್ಟಿತು. ಅದರಲ್ಲಿ 10 ಮೊಟ್ಟೆ ಮಾತ್ರ ಮರಿಗಳಾಯಿತು. ಉಳಿದ ಎರಡು ಮೊಟ್ಟೆ ಹಾಗೆ ಉಳಿಯಿತು. ತಾಯಿ ಕೋಳಿ, ಅದನ್ನು ಗುಡಿಸಲಲ್ಲಿ ಬಿಟ್ಟು, ಉಳಿದ ಮರಿಗಳನ್ನು ಕರೆದು ಕೊಂಡು ಆಹಾರ ಹುಡುಕಲು ಹೊರಟಿತು. ಅಷ್ಟರಲ್ಲಿ ಉಳಿದುಕೊಂಡಿದ್ದ ಎರಡರಲ್ಲಿ ಒಂದು ಮೊಟ್ಟೆಯಿಂದ ಮರಿ ಹೊಡೆದು ಹೊರ ಬಂದಿತ್ತು. ಸುತ್ತ ತನ್ನ ತಾಯಿಯನ್ನು ಹುಡುಕುತ್ತಾ, ಯಾರೂ ಕಾಣಿಸದೇ ಇದ್ದುದರಿಂದ ಪುಟ್ಟ ಕೋಳಿ ಮರಿ ದುಃಖಗೊಂಡಿತ್ತು. ತನ್ನ ತಾಯಿ ಯಾರು? ಎಲ್ಲಿ ಇರುವಳು? ತಿಳಿದುಕೊಳ್ಳ ಬೇಕೆಂದು ಪುಟ್ಟ ಪುಟ್ಟ ಹೆಜ್ಜೆ ಹಾಕಿಹೊರಟಿತು. ಆಗ ದಾರಿಯಲ್ಲಿ ಒಂದು ಹಸುವನ್ನು ನೋಡಿ ಇವಳೇ ನನ್ನ ಅಮ್ಮ ಎಂದು ಕೊಂಡ ಆನಂದಿಸಿತ್ತು. ಆಗ ಹಸು ಕೋಳಿ ಮರಿಯ ಹತ್ತಿರ ಬಂದು ಏನು ಬೇಕು, ಏಕೆ ಹಾಗೆ ನೋಡುತ್ತಿರುವೆ? ಅಂದಾಗ, ಕೋಳಿ ಮರಿ ನನ್ನ ಅಮ್ಮ ನೀನೇನಾ? ಎಂದು ಕೇಳಿತು. ತನ್ನ ಅಮಾಯಕತ್ವವನ್ನು ಹಸು ನೋಡಿ ನಾನು ದೊಡ್ಡ ದೇಹದ ಹಸು, ನಿಮ್ಮ ಅಮ್ಮ ನನಗಿಂತ ಪುಟ್ಟದಾಗಿರುತ್ತಾಳೆ ಅಂದಿತು. ಆಗ ಮರಿ ದುಃಖದಿಂದ ಹೊರಟಿತು. ಹೋಗುವ ದಾರಿಯಲ್ಲಿ ಕಾಗೆ ಮರಿಯನ್ನು ನೋಡಿ ಈಕೆ ನನ್ನಮ್ಮ ಇರಬಹುದೇ? ಎಂದು ಊಹಿಸಿ, ಕಾಗೆಗೇ, ” ನಿನಗೆ 2 ಕಾಲು, ರೆಕ್ಕೆ ಇದೆ ನನ್ನಮ್ಮ ನೀನೇನಾ?’ಎಂದಿತು. ಕಾಗೇ, ‘ನಾನು ನಿನ್ನ ಹಾಗೆ ಇರಬಹುದು ಅಷ್ಟೇ, ಆದರೆ, ನನ್ನಷ್ಟು ಎತ್ತರ ನಿಮ್ಮ ಅಮ್ಮ ಹಾರುವುದಿಲ್ಲ ’ಎಂದು ಹೇಳಿತು. ಇದನ್ನು ಕೇಳಿ ಕೋಳಿಗೆ ಮರಿ ನಿರಾಸೆಯಾಯಿತ್ತು. ಕೋಳಿ ಮರಿ ಮುಂದಕ್ಕೆ ಸಾಗಿತು. ಆಗ ಹತ್ತಿರದ ನದಿಯ ದಂಡೆಯಲ್ಲಿ ಬಾತು ಕೋಳಿಗಳು ಕಂಡವು. ಕೋಳಿ ಮರಿ, “ಅಮ್ಮ, ಅಮ್ಮ ‘ಹತ್ತಿರ ಓಡಿಹೋದಾಗ ಬಾತು ಕೋಳಿ, “ನಾನು ನಿನ್ನ ಅಮ್ಮ ಅಲ್ಲ ’ಎಂದಾಗ ದುಃಖ ಇನ್ನೂ ಹೆಚ್ಚಾಯಿತು. ಹಾಗೇ ಕೊನೆಯ ನದಿ ದಂಡೆಯ ಹತ್ತಿರ ಹೋಯಿತು. ಅಲ್ಲಿ ಕೋಳಿಯ ಧ್ವನಿಯನ್ನು ಕೇಳಿ, ಓಡಿ ಹೋಯಿತು. ತನ್ನ ಹಾಗೇ ಇರುವ ತನ್ನ ತಾಯಿಯನ್ನು ನೋಡಿ ಸಂತೋಷದಿಂದ ಅಮ್ಮ ಎಂದಾಗ ತಾಯಿ ಆನಂದದಿಂದ ತನ್ನ ಮರಿಯನ್ನು ಅಪ್ಪಿಕೊಂಡಿತು. ಕೊನೆಗೂ ತಾಯಿ ಬಳಿ ಸೇರಿದ ಕೋಳಿ ಮರಿ, ಸಂತೋಷದಿಂದ ಕುಣಿದಾಡಿತು.

ಯು. ಎಚ್‌. ಎಂ. ಗಾಯತ್ರಿ

ಟಾಪ್ ನ್ಯೂಸ್

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.