ಕಿರೀಟ ಕಾಯುವ ಕಾಗೆಗಳು!

ಕೊಹಿನೂರು ಮಣಿಯ ಕಟ್ಟಡದ ಹೊರಗೆ...

Team Udayavani, Jan 4, 2020, 7:12 AM IST

kirita

ಇಂಗ್ಲಿಷರ ಪ್ರಕಾರ, ಈ ಕಾಗೆಗಳು ಟವರ್‌ ಆಫ್ ಲಂಡನ್‌ನಲ್ಲಿರುವ ರಾಣಿಯಕಿರೀಟ ಮತ್ತು ಲಂಡನ್‌ ಟವರ್‌ ಅನ್ನು ಕಾವಲು ಮಾಡುತ್ತವಂತೆ. ನಮ್ಮ ಕೊಹಿನೂರ್‌ ಮಣಿ ಇರುವುದೂ ಇದೇ ಟವರ್‌ನ ಒಳಗಿನ ಮ್ಯೂಸಿಯಂನಲ್ಲಿ…

The Ravens
If the Ravens leave the tower
The Kingdom will fall…- ಎನ್ನುವ ನಂಬಿಕೆ ಬ್ರಿಟಿಷ್‌ ರಾಜಮನೆತನದಲ್ಲಿ ಬಹಳ ಹಿಂದಿನಿಂದಲೂ ಪ್ರಸಿದ್ಧಿ.

ಅದು ಟವರ್‌ ಆಫ್ ಲಂಡನ್‌. ಥೇಮ್ಸ್‌ ನದಿಯ ದಡದಲ್ಲಿರುವ, ಶತಮಾನಗಳ ಕತೆ ಹೇಳುವ, ಮೂರು ಅಂತಸ್ತಿನ ಅತ್ಯಂತ ಎತ್ತರದ ಕಟ್ಟಡ. ನಮ್ಮ ಕೊಹಿನೂರು ವಜ್ರದ ಮಣಿಯನ್ನು ಬ್ರಿಟಿಷರು ಹೊತ್ತೂಯ್ದು ಇಟ್ಟಿರುವುದು ಟವರ್‌ನ ಒಳಗಿನ ಮ್ಯೂಸಿಯಂನಲ್ಲಿ. ಟವರ್‌ನ ಸುತ್ತಲೂ ಸರ್ಪಗಾವಲಿದೆ. ಮ್ಯೂಸಿಯಂ ಒಳಗಿರುವ ವಜ್ರಾಭರಣಗಳ ಚಿತ್ರ ತೆಗೆಯುವುದು ನಿಷಿದ್ಧ.

ಈ ಕಟ್ಟಡದ ಸುತ್ತ ನನ್ನ ಕಣ್ಣಿಗೆ ಬಿದ್ದಿದ್ದು, 7 ಕಾಗೆಗಳು! ಇವುಗಳನ್ನು ಟವರ್‌ ಆಫ್ ಲಂಡನ್‌ನ ದಕ್ಷಿಣ ಭಾಗದ ಲಾನ್‌ನಲ್ಲಿ ರಾಜ ಮನೆತನದವರು ಸಾಕಿಕೊಂಡಿದ್ದಾರೆ. ಈ ಕಾಗೆಗಳು ಟವರ್‌ ಆಫ್ ಲಂಡನ್‌ನಲ್ಲೇ ಇರಬೇಕು; ಆ ಜಾಗ ಬಿಟ್ಟು ಬೇರೆಡೆಗೆ ಯಾವುದೇ ಕಾರಣಕ್ಕೂ ಅವು ಹೋಗುವಂತಿಲ್ಲ. ಹಾಗೂ ಹೋದರೆ, ಟವರ್‌ ಆಫ್ ಲಂಡನ್‌ ಕುಸಿದು ಬೀಳುತ್ತೆ, ರಾಜ ಮನೆತನಕ್ಕೆ ಸಮಸ್ಯೆ ಆಗುತ್ತೆ! ಇಂಗ್ಲೆಂಡ್‌ ದೇಶವೂ ಬೀದಿಗೆ ಬರುತ್ತೆ!- ಇದು ಬ್ರಿಟಿಷರೊಳಗೆ ಮನೆಮಾಡಿರುವಂಥ (ಮೂಢ) ನಂಬಿಕೆ!

ರಾಣಿ ಕಿರೀಟಕ್ಕೆ ಕಾವಲು:
ಇಂಗ್ಲಿಷರ ಪ್ರಕಾರ, ಈ ಕಾಗೆಗಳು ಟವರ್‌ ಆಫ್ ಲಂಡನ್‌ನಲ್ಲಿರುವ ಕಿರೀಟ ಮತ್ತು ಲಂಡನ್‌ ಟವರ್‌ ಅನ್ನು ಕಾವಲು ಮಾಡುತ್ತವಂತೆ. ಇಲ್ಲಿ ಕಾಗೆಗಳನ್ನು ನೋಡಿಕೊಳ್ಳಲೆಂದೇ, Raven master ಅನ್ನು ನೇಮಿಸಿದ್ದಾರೆ. ಈ ಕಾಗೆಗಳು ಬಹಳ ಚುರುಕು, ವಿಶೇಷ ಕೌಶಲ, ಬುದ್ಧಿವಂತಿಕೆ ಹೊಂದಿವೆ ಎನ್ನುವುದು ಇಲ್ಲಿನವರ ಮಾತು. ಆಟ ಆಡುವ, ಮಿಮಿಕ್‌ ಮಾಡುವ ಕಲೆಯನ್ನೂ ಹೊಂದಿವೆಯಂತೆ.

ಬಂದ ಪ್ರವಾಸಿಗರಾರೂ ಇವುಗಳಿಗೆ ಆಹಾರ ಹಾಕುವುದು, ಅವುಗಳನ್ನೇ ನೋಡುತ್ತಾ, ಮಾತಿಗಿಳಿಯುವುದು ಮಾಡಬಾರದು ಅಂತಾರೆ ಇಲ್ಲಿನ ಸಿಬ್ಬಂದಿ. ಕಾಗೆಗಳಿಗೆ ಕೋಪ ನೆತ್ತಿಗೇರಿ, ದಾಳಿ ಮಾಡಬಹುದು ಎಂಬ ಕಾರಣಕ್ಕೆ ಅವರು ಹೀಗೆ ಎಚ್ಚರಿಸುತ್ತಾರೆ. ಅಷ್ಟೂ ಕಾಗೆಗಳು, ರೆವೆನ್ಸ್‌ ಮಾಸ್ಟರ್‌ನ ಸೂಚನೆಯನ್ನು ಶ್ರದ್ಧೆಯಿಂದ ಪಾಲಿಸುತ್ತವೆ.

ರೆಕ್ಕೆಗಳಿಗೆ ಕತ್ತರಿ ಹಾಕ್ತಾರೆ…: ನಮ್ಮ ಭಾರತದ ಕಾಗೆಗಳಿಗಿಂತ ಇವು ದಷ್ಟಪುಷ್ಟ. ದಿನಕ್ಕೆ ಎರಡು ಹೊತ್ತು ಇಲಿ, ಮಾಂಸದ ಚೂರು ಹಾಗೂ ರಕ್ತದಲ್ಲಿ ಅದ್ದಿರುವ ಬಿಸ್ಕೇಟ್‌ನ ಆತಿಥ್ಯ ಸಿಗುತ್ತದೆ. ಇವು ಜಾಸ್ತಿ ದೂರ ಹಾರಿ ಹೋಗದಂತೆ ಮಾಸ್ಟರ್‌ ಆಗಾಗ್ಗೆ ರೆಕ್ಕೆಗಳ ಕೆಲವು ಭಾಗವನ್ನು ಕತ್ತರಿಸುತ್ತಾನೆ. ಇಂಗ್ಲೆಂಡಿಗರ ನಂಬಿಕೆಗೆ ಪೂರಕವಾಗಿ, ಇವು ಹೊರ ಹೋಗುವುದು ಕೂಡ ಕಡಿಮೆ. ಇಲ್ಲಿ ಇವುಗಳಿಗೆ ಚೆಂದದ ಗೂಡುಗಳೂ ಇವೆ.

ಟವರ್‌ ಆಫ್ ಲಂಡನ್‌ ಜಾಗದ ಸುತ್ತಮುತ್ತ ಕೂಗುತ್ತಾ, ಕಟ್ಟಡದಿಂದ ಕಟ್ಟಡಕ್ಕೆ ಹಾರಾಡುತ್ತಾ ಇರುತ್ತವೆ. ಇದನ್ನು ನೋಡಿದಾಗ ನನಗೆ ಅನ್ನಿಸಿದ್ದು, ನಂಬಿಕೆ- ಮೂಢನಂಬಿಕೆಗಳಿಂದ ಯಾವ ದೇಶವೂ ಹೊರತಾಗಿಲ್ಲ ಎನ್ನುವುದು. ನಮ್ಮ ಕೊಹಿನೂರು ಮಣಿಯನ್ನು ಅಷ್ಟು ದೂರ ಹೊತ್ತೂಯ್ದು, ಕಾಗೆಗಳ ಕಾವಲಿನೊಳಗೆ ಕೂರಿಸಿದ್ದಾರಲ್ಲ ಎಂಬ ಬೇಸರ ಆಗಿದ್ದೂ ಸುಳ್ಳಲ್ಲ.

ಕಾಗೆಗಳಿಗೆ ಹೆಸರುಂಟು ಮಾರ್ರೆ…: ಜ್ಯುಬಿಲಿ, ಹ್ಯಾರಿಸ್‌, ಗ್ರಿಪ್ಪಿ, ರಾಕಿ, ಎರಿನ್‌, ಪಾಪಿ ಮತ್ತು ಮೆರ್ಲಿನಾ- ಎಂಬ ಹೆಸರಿನ 7 ಕಾಗೆಗಳು ಇವು. ಇವುಗಳಿಗೆ ಪುಟ್ಟ ಮರಿಗಳೂ ಇವೆಯಂತೆ.

ಟಾಪ್ ನ್ಯೂಸ್

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ

Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.