ಸ್ಮಾರಕ ಆಗಿದೆ ಗಾಂಧೀಜಿ ತಂಗಿದ್ದ ಕೊಠಡಿ


Team Udayavani, Oct 6, 2018, 9:50 AM IST

400.jpg

 ಹರಿಜರನೋದ್ದಾರಕ್ಕಾಗಿ ಹಣ ಸಂಗ್ರಹಿಸಲು ಗಾಂಧೀಜಿ ಅಂದು ಬಳ್ಳಾರಿ ಜಿಲ್ಲಾ ಸಂಚಾರ ಕೈಕೊಂಡಿದ್ದರು. ಈ ಸಂದರ್ಭದಲ್ಲಿ ಹರಪನಹಳ್ಳಿ ಮಾರ್ಗವಾಗಿ ದಾವಣಗೆರೆಗೆ ಪ್ರಯಾಣಿಸುವಾಗ- ಗಂಗಾಧರರಾವ್‌ ದೇಶಪಾಂಡೆ, ಠಕ್ಕರ ಬಾಪ ಅವರೊಂದಿಗೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜ್‌ ಕಟ್ಟಡದ ಕೊಠಡಿಯೊಂದರಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದರು.  ಅಂದಿನಿಂದ ಇಂದಿನವರೆಗೂ ಈ ಕೋಣೆಗೆ, ಯಾರೂ ಪಾದರಕ್ಷೆ ಧರಿಸಿ ಪ್ರವೇಶಿಸುವುದಿಲ್ಲ. 
ಈಗ ಎಂ.ಪಿ. ಪ್ರಕಾಶ್‌ ಅವರ ಪುತ್ರ ಮಾಜಿ ಶಾಸಕ ಎಂ.ಪಿ. ರವೀಂದ್ರ ಅವರ ಮುಂದಾಳತ್ವದಲ್ಲಿ ಅದು ಗಾಂಧೀಜಿಯ ನೆನಪಿನ ಸ್ಮಾರಕವಾಗಿದೆ. 

ಮಹಾತ್ಮ ಗಾಂಧೀಜಿ ತಂಗಿದ್ದ ಕೊಠಡಿಯನ್ನು ಸಂಪೂರ್ಣವಾಗಿ ದುರಸ್ತಿಪಡಿಸಿ, ಅಲ್ಲಿ ಗಾಂಧೀಜಿ ಪ್ರತಿಮೆ ಸೇರಿದಂತೆ ಅವರ ಜೀವನಾಧಾರಿತ ಕಲಾಕೃತಿಗಳನ್ನು ನಿರ್ಮಿಸಲಾಗಿದೆ. ಈ ಮೂಲಕ ಗಾಂಧೀಜಿಯವರ ಜೀವನ ಚರಿತ್ರೆ ಪರಿಚಯಿಸುವ ಪ್ರಯತ್ನ ಮಾಡಲಾಗಿದೆ. ಗಾಂಧೀಜಿ ಸ್ಮಾರಕದಲ್ಲಿ ನಿರ್ಮಾಣವಾಗಿರುವ ಒಟ್ಟು 9 ಕಲಾಕೃತಿಗಳನ್ನು ದೇವರ ಮೂರ್ತಿ ಕೆತ್ತನೆಗೆ ಬಳಸಲಾಗುವ ಕೃಷ್ಣಶೀಲೆಗಳಿಂದ ನಿರ್ಮಿಸಲಾಗಿದೆ. ಒಟ್ಟು 2ಟನ್‌ ಕೃಷ್ಣ ಶಿಲೆಯ ಕಲ್ಲುಗಳನ್ನು ಮೈಸೂರಿನಿಂದ ತರಲಾಗಿದೆ. ದೇಶದಲ್ಲಿಯೇ ಬರೀ ಕೃಷ್ಣಶಿಲೆ ಕಲ್ಲುಗಳಿಂದಲೇ ಗಾಂಧೀಜಿಯ ಸ್ಮಾರಕ ನಿರ್ಮಿಸಿರುವ ಸ್ಥಳ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಬೆಂಗಳೂರಿನ ಶಿಲ್ಪಾ ಕಲಾವಿದೆ ಎಂ.ಸಂಜೀತಾ ತಂಡ 10 ತಿಂಗಳ ಕಾಲ ನಿರಂತರವಾಗಿ ಇಲ್ಲಿ ಕೆಲಸ ಮಾಡಿದೆ.   

ಸ್ಮಾರಕದಲ್ಲಿ ಏನೇನಿದೆ? 

    ಗಾಂಧೀಜಿ ಅವರ ಜೀವನದ 8 ಮುಖ್ಯ ಘಟನೆಗಳನ್ನು ಆಧರಿಸಿ ರಚಿಸಿದ ಕಲಾಕೃತಿಗಳೂ ಇಲ್ಲಿವೆ.  ಕೊಠಡಿಯ ಮಧ್ಯ ಭಾಗದಲ್ಲಿ, ವಿಶ್ರಾಂತಿ ಭಂಗಿಯಲ್ಲಿರುವ ಗಾಂಧೀಜಿ ಪ್ರತಿಮೆ 5 ಅಡಿ ಎತ್ತರವಿದ್ದು, 1.50 ಟನ್‌ ತೂಕವಿದೆ. ಖ್ಯಾತ ಬರಹಗಾರ ರವೀಂದ್ರನಾಥ ಟ್ಯಾಗೋರ್‌ ಜೊತೆ ಕೂತು ಚರ್ಚೆ ನಡೆಸುತ್ತಿರುವ,  ಬಾಲಕನ ಜೊತೆ ಗಾಂಧೀಜಿ ಕೋಲು ಹಿಡಿದು ಸಾಗುತ್ತಿರುವುದು, ಗಾಂಧೀಜಿ ನಮನ ಸಲ್ಲಿಸುತ್ತಿರುವುದು, ಉಪ್ಪಿನ ಸತ್ಯಾಗ್ರಹ ಹೋರಾಟ ಮನೋಹಕ ದೃಶ್ಯ, ಹೋರಾಟಗಾರರಾದ ಅಬಾ, ಮನು ಜೊತೆ ಸಾಗುತ್ತಿರುವ ಗಾಂಧೀಜಿ, ಸರ್ದಾರ್‌ ವಲ್ಲಬಾಯಿ ಪಾಟೀಲ್‌ ಮತ್ತು ಜವಾಹರಲಾಲ್‌ ನೆಹರು ಅವರೊಂದಿಗೆ ಚರ್ಚೆಯಲ್ಲಿ ತೊಡಗಿರುವುದು, ಕಸ್ತೂರಿ ಬಾ ಅವರ ಜೊತೆ ಚರಕ ಹಿಡಿದು ನೂಲು ತೆಗೆಯುತ್ತಿರುವುದು… ಹೀಗೆ ವೈವಿಧ್ಯಮಯವಾದ ಆಕೃತಿಗಳನ್ನು ಕೆತ್ತಿ ನಿಲ್ಲಿಸಲಾಗಿದೆ. 

ಗಾಂಧೀಜಿ ಹರಪನಹಳ್ಳಿಗೆ ಆಗಮಿಸಿದಾಗ, ಸ್ಥಳೀಯ ಮುಖಂಡರಾದ ಇಜಾರಿ ವಸುಪಾಲಪ್ಪ, ಇಜಂತಕರ ಶಂಕ್ರಪ್ಪ, ನೆಲ್ಲು ಕುದರಿ ಗುರುಬಸಪ್ಪ ಅವರು ಬೆಳ್ಳಿ ನಾಣ್ಯಗಳನ್ನು ಬೆಳ್ಳಿ ತಟ್ಟೆಯಲ್ಲಿಟ್ಟು ಗಾಂಧೀಜಿ ಅವರಿಗೆ ಅರ್ಪಿಸಿದ್ದರು. ಆಗ ಗಾಂಧೀಜಿ, ತಟ್ಟೆ ಸಹಿತ ಹರಾಜು ಹಾಕಿ,  ತಾವೇ ಹಣ ಕೊಟ್ಟು, ತಮ್ಮ ತಟ್ಟೆಗಳನ್ನು ಪಡೆದುಕೊಂಡರು. 1958ರಲ್ಲಿ ಆಚಾರ್ಯ ವಿನೋಭಾಬಾವೆಯವರು ಹರಪನಹಳ್ಳಿಯ ಪಾದಯಾತ್ರೆಯಲ್ಲಿ ಭಾಗವಹಿಸಿ, ಗಾಂಧೀಜಿ ತಂಗಿದ್ದ ಈ ಕೋಣೆಯಲ್ಲಿಯೇ ವಿಶ್ರಾಂತಿ ಪಡೆದಿದ್ದರು. ಇಂಥ ವಿಶಿಷ್ಟ ಹಿನ್ನೆಲೆಯ ಕೊಠಡಿ ಇದೀಗ ಸ್ಮಾರಕವಾಗಿ ಬದಲಾಗಿದೆ. 

ಟಾಪ್ ನ್ಯೂಸ್

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.