ಸರ್ಕಾರಿ ಶಾಲೆಗಳು ಏಕೆ ಮುಚ್ತವೆ ಗೊತ್ತಾ?


Team Udayavani, Jun 10, 2017, 12:50 PM IST

5888.jpg

ಶಿಕ್ಷಣ ಆಯೋಗದ ಐತಿಹಾಸಿಕ ಶಿಫಾರಸ್ಸು ಬಂದು 50 ವರ್ಷಗಳು (1966-2017)ಸಂದಿದೆ. ಆದರೆ, ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವ ವಿಚಾರ ಬಂದರೆ ಹಿಂಜರಿಕೆಯಾಗುತ್ತದೆ.  ಇಂದಿಗೂ ಶಿಕ್ಷಣದಲ್ಲಿ ವರ್ಗಬೇಧ, ಅಸಮಾನತೆ ಮತ್ತು ತಾರತಮ್ಯದ ವಿಷಯಗಳು ಪದೇ ಪದೇ ಚರ್ಚೆಗೆ ಬರುತ್ತಿವೆ. 

 ಶಿಫಾರಸ್ಸು ಬಂದು ಪ್ರಯೋಜನ ಏನು?
ವಿಪರ್ಯಾಸದ ಸಂಗತಿಯೆಂದರೆ, ಆಳುವ ವರ್ಗವಾಗಲಿ, ಆರ್ಥಿಕವಾಗಿ ಸಬಲವಾಗಿರುವ ಶ್ರೀಮಂತ ವರ್ಗವಾಗಲಿ ಮತ್ತು ಆಡಳಿತದ ಚುಕ್ಕಾಣಿ ಹಿಡಿದಿರುವ ಅಧಿಕಾರಿ ಶಾಹಿಯಾಗಲಿ ಶಿಕ್ಷಣ ಆಯೋಗದ ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯ ಮಹತ್ವ ಪೂರ್ಣ ಶಿಫಾರಸ್ಸನ್ನು ಅರ್ಥೈಸಿಕೊಳ್ಳುವ ಗೋಜಿಗೆ ಹೋಗಲಿಲ್ಲ. ಅರ್ಥೈಸಿಕೊಂಡ ಪಟ್ಟಭದ್ರ ಹಿತಾಸಕ್ತಿಯುಳ್ಳ ಅಧಿಕಾರಶಾಹಿ ಸಮಾನಶಾಲಾ ಶಿಕ್ಷಣ ವ್ಯವಸ್ಥೆಯ ಹಿಂದಿರುವ ಸಮಾನತೆಯ ತತ್ವವನ್ನು ತಿಳಿದು ಶ್ರೇಣಿಕೃತ ಮತ್ತು ವರ್ಗಾಧಾರಿತ ವ್ಯವಸ್ಥೆಯಲ್ಲಿ  ತಾವು ಅನುಭವಿಸುತ್ತಿರುವ  ಸವಲತ್ತುಗಳಿಗೆ ಧಕ್ಕೆಯಾಗಬಹುದಾದ ಶಿಫಾರಸ್ಸನ್ನು ಅನುಷ್ಠಾನಗೊಳ್ಳಲು ಬಿಡುವುದಿಲ್ಲವೆಂಬ ಸಂಕಲ್ಪ ತೊಟ್ಟಿತು. ಇನ್ನೊಂದೆಡೆ, ಅಧಿಕಾರಿ ಶಾಹಿಗಳ ಹಿಡಿತದಿಂದ ಹೊರಬಂದು ವಿದೇಶದ ಭವಿಷ್ಯದ ಬಗ್ಗೆ ತಮ್ಮ ಸ್ವಂತ ಅನುಭವದ ಹಿನ್ನೆಲೆಯಲ್ಲಿ ಸ್ವತಂತ್ರವಾಗಿ ಚಿಂತಿಸುವ ಪ್ರಯತ್ನವನ್ನು ಆಳುವ ವರ್ಗದ ರಾಜಕಾರಣಿಗಳು ಸಹ ಮಾಡಲಿಲ್ಲ. ಹೀಗಾಗಿ, ಆಯೋಗದ ಸಂಧಾನ ಬದ್ಧ ಆಶಯವಾದ ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯ ಪರಿಕಲ್ಪನೆಯ ಶಿಫಾರಸ್ಸು ಕನಸಾಗಿಯೇ ಉಳಿಯಿತು. ಇಂದು, ನಮ್ಮ ರಾಜ್ಯವೂ ಸೇರಿದಂತೆ ದೇಶದಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿ ಇದಕ್ಕೆ ಕೈಗನ್ನಡಿಯಾಗಿದೆ. 

ಬದಲಾಗಿ ಆಳುವ ವರ್ಗ ಮತ್ತು ಅಧಿಕಾರ ಶಾಹಿ ಅಸಮಾನತೆಯನ್ನು ಹುಟ್ಟುಹಾಕುವ ಶೈಕ್ಷಣಿಕ ವ್ಯವಸ್ಥೆಯನ್ನು ಬೆಳೆಸುತ್ತಲೇ ಬಂದಿದ್ದಾರೆ. ಅದು ಇಂದು ಅಪಾಯದ ಅಂಚನ್ನು ತಲುಪಿದೆ. ಗಮನಿಸಬೇಕಾದ ಮತ್ತೂಂದು ಅಂಶವೆಂದರೆ, ಸ್ವಾತಂತ್ರ್ಯಾ ನಂತರ ಕಟ್ಟಿ ಬೆಳೆಸಿದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಜಾಗತೀಕರಣದ ಭಾಗವಾಗಿ ಖಾಸಗೀಕರಣದ  ಒಡೆತನಕ್ಕೆ ಒಪ್ಪಿಸುವ ಎಲ್ಲ ಪ್ರಯತ್ನಗಳು ನಡೆಯುತ್ತಲೇ ಇವೆ. ವ್ಯಾಪಾರೀಕರಣ, ಖಾಸಗೀಕರಣವೇ ದೇಶದ ಸಕಲ  ಸಮಸ್ಯೆಗಳಿಗೆ ಪರಿಹಾರವೆಂದು ನಂಬಿ ಆಡಳಿತ ನಡೆಸುತ್ತಿರುವ ಅಧಿಕಾರಶಾಹಿಯ ಮನಃಸ್ಥಿತಿ, ಸಾರ್ವಜನಿಕ ಶಿಕ್ಷಣವನ್ನು ಬಲವರ್ಧಿಸಲು ಅಗತ್ಯ ಇಚ್ಛಾಶಕ್ತಿ, ಹಣಕಾಸನ್ನು ಒದಗಿಸಲು ವಿಫ‌ಲವಾಗಿರುವ ಪ್ರಭುತ್ವಗಳು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಮೊದಲಿಗೆ ಶಿಥಿಲಗೊಳಿಸಿದೆ. ಇದರಿಂದ ಜನಸಾಮಾನ್ಯರು ಭರವಸೆ ಕಳೆದುಕೊಳ್ಳುವಂತೆ ಆಗಿ, ನಂತರ ಮಕ್ಕಳ ಕೊರತೆಯ ನೆಪವೊಡ್ಡಿ ಶಿಕ್ಷಣ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸಲು ಟೊಂಕಕಟ್ಟಿ ನಿಂತಿದ್ದಾರೆ. ಇಲ್ಲಿ ಮೂಲಭೂತ ಹಕ್ಕಿಗೂ ಬೆಲೆ ಇಲ್ಲದಂತಾಗಿದೆ. 

ಉದಾಹರಣೆಗೆ, ಶಿಕ್ಷಣ ಹಕ್ಕು ಕಾಯಿದೆ ಅನ್ವಯ ಆರರಿಂದ ಹದಿನಾಲ್ಕು ವರ್ಷದೊಳಗಿನ ಪ್ರತಿಯೊಂದು ಮಗುವು ತನ್ನ ಹತ್ತಿರದ ಶಾಲೆಯಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯಲು ಮೂಲಭೂತ ಹಕ್ಕನ್ನು ಹೊಂದಿದೆ.  ಇದೇ ಸಂದರ್ಭದಲ್ಲಿ ಮಗು ಪ್ರಾಥಮಿಕ ಶಿಕ್ಷಣ ಪಡೆಯಲು ಮತ್ತು ಪೂರ್ಣಗೊಳಿಸಲು ಅಡ್ಡಿಯುಂಟು ಮಾಡಬಹುದಾದ ಯಾವುದೇ ಬಗೆಯ ಶುಲ್ಕ ಅಥವಾ ಖರ್ಚುಗಳನ್ನು  ಮಗು ಸಂದಾಯಮಾಡಬೇಕಿಲ್ಲ. ಈ ಹಕ್ಕನ್ನು ಸಾಕಾರಗೊಳಿಸಲು, ಸರ್ಕಾರ ಮಗುನ ನೆರೆಹೊರೆಯಲ್ಲಿ ಶಾಲೆಯನ್ನು ಕಲ್ಪಿಸಬೇಕಿದೆ. ಆದರೆ, ಶಾಲೆಯನ್ನು ಒದಗಿಸಬೇಕಾದ ಸರ್ಕಾರ, ಇರುವ ಶಾಲೆಗಳನ್ನು ಮುಚ್ಚುತ್ತಿದೆ. ಉದಾಹರಣೆಗೆ, ಶಿಕ್ಷಣ ಹಕ್ಕು ಕಾಯಿದೆ ಪ್ರಾರಂಭವಾದ 2010-11ನೇ ಸಾಲಿನಲ್ಲಿ ಕ್ರಮವಾಗಿ 23,109  ಕಿರಿಯ  ಮತ್ತು 22,568 ರಿಯ ಪ್ರಾಥಮಿಕ ಶಾಲೆಗಳಿದ್ದವು. 2015-16 ನೇ ಸಾಲಿನಲ್ಲಿ ಇವುಗಳ ಸಂಖ್ಯೆ 21,654 ಮತ್ತು 22,447 ಕ್ಕೆ ಇಳಿದಿದೆ. ಅಂದರೆ, ಶಿಕ್ಷಣ ಮೂಲಭೂತ ಹಕ್ಕಾಗಿ ಜಾರಿಯಾದ ನಂತರ  ಸರ್ಕಾರ 1,455 ಕಿರಿಯ ಹಾಗು 121 ಹಿರಿಯ ಸರ್ಕಾರಿ ಪ್ರಾಥಮಿಕ ಕನ್ನಡ ಶಾಲೆಗಳನ್ನು ಮುಚ್ಚಿದೆ. ಇದೇ ಅವಧಿಯಲ್ಲಿ, ಖಾಸಗಿ ಅನುದಾನರಹಿತ ಕಿರಿಯ ಮತ್ತು ರಿಯ ಪ್ರಾಥಮಿಕ ಶಾಲೆಗಳ ಸಂಖ್ಯೆ  2,761 ರಿಂದ 4,082 ಹಾಗೂ 7,491 ರಿಂದ  8,809ಕ್ಕೆ ಏರಿದೆ.  ಕಳೆದ 7 ವರ್ಷಗಳಲ್ಲಿ 1,576 ಸರ್ಕಾರಿ ಶಾಲೆಗಳು ಮುಚ್ಚಿದ್ದರೆ 2,639 ಖಾಸಗಿ ಅನುದಾನ ರಹಿತ ಶಾಲೆಗಳು ಪ್ರಾರಂಭವಾಗಿವೆ. ಇದು ಸರ್ಕಾರ ಮಕ್ಕಳ ಮೂಲಭೂತ ಹಕ್ಕನ್ನು ಗೌರವಿಸುತ್ತಿರುವ ರೀತಿ. 

ಆರ್‌ಟಿಇ ಕಾಯಿದೆ ನೆರೆಹೊರೆಯ ಶಾಲೆಯಲ್ಲಿ ಮಕ್ಕಳಿಗೆ ಮೂಲಭೂತ ಹಕ್ಕು ಎಂದು ಸಾರಿ ಸಾರಿ ಹೇಳಿದರೂ  ಮಕ್ಕಳ ಪಾಲಿಗೆ ಅದು ಇನ್ನೂ ಗಗನ ಕುಸುಮ. ಶಾಲೆ ಪ್ರಾರಂಭವಾಗುವುದಕ್ಕಿಂತ 6-7 ತಿಂಗಳು ಮುಂಚೆಯೇ ತಮ್ಮ ವ್ಯಾಪಾರ ವಹಿವಾಟನ್ನು ಪ್ರಾರಂಭಿಸುವ ಖಾಸಗಿ ಅನುದಾನ ರಹಿತ ಶಾಲೆಗಳು ಇಂದಿಗೂ ಲಂಗು-ಲಗಾಮಿಲ್ಲದೆ ಶಿಕ್ಷಣದ ವ್ಯಾಪಾರವನ್ನು ಮುಂದುವರಿಸಿವೆ. ಶಿಕ್ಷಣದ ಖಾಸಗೀಕರಣ ಅವ್ಯಾಹತವಾಗಿ ಸಾಗಿದೆ. ಉದಾಹರಣೆಗೆ-ಮಕ್ಕಳಿಗೆ ನೆರೆಹೊರೆಯ ಶಾಲೆಯಲ್ಲಿ ಶಿಕ್ಷಣದ ಹಕ್ಕು ಇದ್ದಾಗ್ಯೂ, ಇಂದಿಗೂ ಬೆಂಗಳೂರು ಮತ್ತು ಇತರೆ ನಗರಗಳಲ್ಲಿ ಮಕ್ಕಳು ತಮ್ಮ ನೆರೆಹೊರೆಯಿಂದ ಕನಿಷ್ಠ 10 ರಿಂದ 25 ಕಿ.ಮೀವರೆಗೆ ಖಾಸಗಿ ಶಾಲಾ ವಾಹನಗಳಲ್ಲಿ ಪ್ರಯಾಣಿಸುವುದು ಸರ್ವೇ ಸಾಮಾನ್ಯವಾಗಿದೆ. ಹೀಗಾಗಿ, ಮಕ್ಕಳಿಗೆ ಶಿಕ್ಷಣದ ಮೂಲಭೂತ ಹಕ್ಕು ನೆರೆಹೊರೆಯ ಶಾಲೆಯಲ್ಲಿದೆಯೆಂದು ಕಾನೂನು ಹೇಳಿದರೂ ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಇರಾದೆ ಕಾಣುತ್ತಿಲ್ಲ. 

ಮಕ್ಕಳ ದಾಖಲಾತಿಯನ್ನು ನೋಡುವುದಾದರೆ- 2010-11 ನೇ  ಶೈಕ್ಷಣಿಕ ಅವಧಿಯಲ್ಲಿ, (ಸರ್ಕಾರಿ ಶಾಲೆಗಳಲ್ಲಿ)  1 ರಿಂದ 10ನೇ ತರಗತಿಯಲ್ಲಿನ ಮಕ್ಕಳ ದಾಖಲಾತಿ ಸಂಖ್ಯೆ 54.54 ಲಕ್ಷ. ಇದು 2015-16 ನೇ ಸಾಲಿನಲ್ಲಿ  ಮತ್ತು 47.46 ಲಕ್ಷಕ್ಕೆ ಇಳಿದಿದೆ. ಇದೇ ಅವಧಿಯಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಮಕ್ಕಳ ದಾಖಲಾತಿ 28.76 ಲಕ್ಷದಿಂದ 36.51 ಲಕ್ಷಕ್ಕೆ ಏರಿದೆ.  ಏನು ಇದರ 
ಅರ್ಥ?

ಶಿಕ್ಷಕರ ಲಭ್ಯತೆ ವಿಚಾರಕ್ಕೆ ಬಂದರೆ, 2010-11ರ  ಎಲಿಮೆಂಟರಿ ಶಾಲೆಗಳಲ್ಲಿ ಒಟ್ಟು ಮುಂಜೂರಾದ ಮತ್ತು ಕಾರ್ಯನಿರ್ವಸುತ್ತಿದ್ದ ಶಿಕ್ಷಕರ ಸಂಖ್ಯೆ 2,02,483  ಮತ್ತು 1,89,451.  ಇದು 2015-16 ನೇ ಸಾಲಿನಲ್ಲಿ ಕ್ರಮವಾಗಿ 2,03,658 ಮತ್ತು 1,66,083.  ಅಂದರೆ, 2015-16 ನೇ ಸಾಲಿನಲ್ಲಿ ಎಲಿಮೆಂಟರಿ  ಶಾಲೆಗಳಲ್ಲಿ ಮುಂಜೂರಾದ ಹುದ್ದೆಗಳ ಪೈಕಿ ಖಾಲಿ ಇರುವ ಶಿಕ್ಷಕರ ಹುದ್ದೆಗಳ ಸಂಖ್ಯೆ 37,575.  ಇದನ್ನು ಗಮನಿಸಿದರೆ, ಸರ್ಕಾರಿ ಶಾಲೆಗಳು ಗುಣಾತ್ಮಕ ಶಿಕ್ಷಣ ನೀಡಲು ಅಸಾಧ್ಯವಾಗದಿರುವುದು ಏಕೆ, ಸರ್ಕಾರಿ ಶಾಲೆಗಳು ಶೋಚನೀಯ ಸ್ಥಿತಿ ತಲುಪಲು ನಿಜವಾದ ಕಾರಣವೇನೆಂಬುದು ತಿಳಿಯುತ್ತದೆ.  

ಇನ್ನು ಮೂಲಭೂತ ಸೌಕರ್ಯಗಳನ್ನು ಅದರಲ್ಲೂ ವಿಶೇಷವಾಗಿ ಕಲಿಕೆಗೆ ಅಗತ್ಯವಾದ ಕಲಿಕಾ ಕೋಣೆಗಳ ಸ್ಥಿತಿಯನ್ನು ನೋಡುವುದಾದರೆ 2010-11ರಲ್ಲಿ ರಾಜ್ಯದ ಎಲಿಮೆಂಟರಿ  ಶಾಲೆಗಳಲ್ಲಿ ಒಟ್ಟು ಕೊಠಡಿಗಳು  1,98,415. ಅವುಗಳಲ್ಲಿ ಕಲಿಕೆಗೆ ಬಳಸಬಹುದಾದ ಕೊಠಡಿಗಳು 1,35,000. ಅಂದರೆ ಸರಿಸುಮಾರು 63,415 ಕೊಠಡಿಗಳು ಕಲಿಕೆಗೆ ಪೂರಕವಾಗಿಲ್ಲ. 2015-16 ರಲ್ಲಿ ಎಲಿಮೆಂಟರಿ  ಶಾಲೆಗಳಲ್ಲಿ ಲಭ್ಯವಿದ್ದ ಒಟ್ಟು ಕೊಠಡಿಗಳು 2,12,037.  ಅವುಗಳಲ್ಲಿ ಕಲಿಕೆಗೆ ಬಳಸಬಹುದಾದ ಕೊಠಡಿಗಳು 1,46,020. ಸರಿಸುಮಾರು 66,017 ಕೊಠಡಿಗಳು ಕಲಿಕೆಗೆ ಪೂರಕವಾಗಿಲ್ಲ. ಒಟ್ಟಾರೆ, ಕಲಿಕೆ ಯೋಗ್ಯವಲ್ಲದ ಕೊಠಡಿಗಳ ಸಂಖ್ಯೆ 63415 ರಿಂದ 66017 ಹೆಚ್ಚಿದೆ. ಪರಿಸ್ಥಿತಿ  ಹೀಗಿದ್ದಲ್ಲಿ ಸರ್ಕಾರಿ ಶಾಲೆ ಉಳಿದು-ಬೆಳೆಯುವ ಬಗೆಯಾದರು ಹೇಗೆ ಎಂಬ ಪ್ರಶ್ನೆ ಎಲ್ಲಾ ಪ್ರಜಾnವಂತ ನಾಗರಿಕರನ್ನು ಕಾಡುತ್ತಿದೆ. 

ಒಟ್ಟಾರೆ, ಸಂವಿಧಾನದ ನಾಲ್ಕನೇ ಭಾಗದ ನಿರ್ದೇಶಕ ತತ್ವಗಳಲ್ಲಿದ್ದ ಶಿಕ್ಷಣದ ಅವಕಾಶವನ್ನು  ಸಂಧಾನದ ಮೂರನೇ ಭಾಗದಲ್ಲಿ ಮೂಲಭೂತ ಹಕ್ಕಾಗಿ ಸೇರಿದರೂ ಪ್ರಭುತ್ವಗಳಿಗೆ ಅದು ಇನ್ನೂ ಮೂಲಭೂತವೆನಿಸದಿರುವುದು ದುರದೃಷ್ಟಕರ.

ಏನು ಮಾಡಬೇಕು?
1.    ಈ ಶೈಕ್ಷಣಿಕ ವರ್ಷದಿಂದಲೇ  ರಾಜ್ಯದ ಎಲ್ಲಾ  ಕಿರಿಯ-ಹಿರಿಯ  ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ-ಪ್ರಾಥಮಿಕ ತರಗತಿಗಳನ್ನು  ಆರಂಭಿಸುವ ಅಧಿಕೃತ ಅಧಿಸೂಚನೆ ಹೊರಡಿಸುವುದು.  ಪ್ರಾರಂಭಿಕವಾಗಿ ಪೂರ್ವ ಪ್ರಾಥಮಿಕ ತರಗತಿಗಳಿಗೆ ಕಲಿಕಾ ಬೋಧನಾ ಉಪಕರಣಗಳಿಗಾಗಿ ಪ್ರತಿ ಶಾಲೆಗೆ ಕನಿಷ್ಠ 10 ಸಾವಿರ ಹಣವನ್ನು  ತಕ್ಷಣ ಒದಗಿಸುವುದು. 

2.    ಪೂರ್ವ -ಪ್ರಾಥಮಿಕ ತರಗತಿಗಳಿಂದಲೇ ಆಂಗ್ಲ ಭಾಷೆಯನ್ನು ಒಂದು ಭಾಷೆಯನ್ನಾಗಿ ವೈಜಾnನಿಕವಾಗಿ ಮತ್ತು ಶಿಸ್ತುಬದ್ಧವಾಗಿ ಪ್ರಭುತ್ವದ ಮಟ್ಟಕ್ಕೆ ಕಲಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು. ಇದಕ್ಕೆ ಪೂರಕವಾಗುವಂತೆ ಪ್ರತಿಯೊಂದು ಸರ್ಕಾರಿ ಶಾಲೆಗೂ ಸಮರ್ಥರಾದ ಇಂಗ್ಲಿಷ್‌ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು.

3.    ಶಾಲಾ ಹಂತದಲ್ಲಿ ಅಭಿವೃದ್ಧಿ, ನಿರ್ವಹಣೆಯ ಹೊಣೆ ಹೊತ್ತಿರುವ ಎಸ್‌ಡಿಎಮ್‌ಸಿಗಳು ಶೈಕ್ಷಣಿಕ ವರ್ಷದಿಂದಲೇ ಕನಿಷ್ಟ ಮೂಲಭೂತ ಸೌಕರ್ಯಗಳನ್ನು ಖಾತರಿಗೊಳಿಸಬೇಕು. ಕಲಿಕೆಗೆ ಪೂರಕವಾದ ವಾತಾವರಣವನ್ನು ಕಟ್ಟಿಕೊಡಲು ಅನುವಾಗುವಂತೆ  ಪ್ರತಿ ಕಿರಿಯ ಪ್ರಾಥಮಿಕ ಶಾಲೆಗೆ ಕನಿಷ್ಠ ವಾರ್ಷಿಕ ರೂ.50 ಸಾವಿರ ಮತ್ತು ಹಿರಿಯ ಪ್ರಾಥಮಿಕ ಶಾಲೆಗೆ ವಾರ್ಷಿಕ ಒಂದು ಲಕ್ಷ ರೂಗಳನ್ನು  ಶಾಲಾ ಅನುದಾನಕ್ಕೆ ನೀಡುವುದು.   

4.    ಈಗಿರುವ ಶಿಕ್ಷಕ -ಮಕ್ಕಳ ಅನುಪಾತವನ್ನು ಸಡಿಲಿಸಿ, ಕನಿಷ್ಠ ಕಿರಿಯ -ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಶಿಕ್ಷಕ-ಮಕ್ಕಳ ಅನುಪಾತಕ್ಕೆ ನಿಗದಿತ ಸಂಖ್ಯೆ ತಲುಪವರೆಗೆ (ಮಕ್ಕಳ ಸಂಖ್ಯೆ ಎಷ್ಟೇ ಇದ್ದರೂ )ಕನಿಷ್ಠ ವಿಷಯಕೊಬ್ಬ$ಶಿಕ್ಷಕರನ್ನು ನೇಮಿಸಲಿ. ಕಿರಿಯ 
ಪ್ರಾಥಮಿಕ ಶಾಲೆಗಳಲ್ಲಿ 100 ಮಕ್ಕಳು ದಾಟಿದ ನಂತರ 1:20ರ ಅನ್ವಯ ಶಿಕ್ಷಕ -ಮಕ್ಕಳ ಅನುಪಾತದಲ್ಲಿ , ಹಿರಿಯ ಪ್ರಾಥುಕ ಶಾಲೆಗಳಲ್ಲಿ 140 ಮಕ್ಕಳು ದಾಟಿದ ನಂತರ 1:25ರ ಅನ್ವಯ ಶಿಕ್ಷಕ -ಮಕ್ಕಳ ಅನುಪಾತದಲ್ಲಿ, ಪೌಢ ಶಾಲೆಯಲ್ಲಿ 90 ಮಕ್ಕಳು ದಾಟಿದ ನಂತರ 1:30ರ ಅನ್ವಯ ಶಿಕ್ಷಕ -ಮಕ್ಕಳ ಅನುಪಾತದಲ್ಲಿ ಶಿಕ್ಷಕರನ್ನು ಒದಗಿಸಬೇಕು. 

ಡಾ. ನಿರಂಜನಾರಾಧ್ಯ . ಪಿ.

ಟಾಪ್ ನ್ಯೂಸ್

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.